ಕನ್ನಡಪ್ರಭ ವಾರ್ತೆ ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ. 2011ರ ಜನಗಣತಿ ಆಧರಿಸಿ ಪ್ರಸ್ತುತ ರಾಜ್ಯದಲ್ಲಿ 1.16 ಕೋಟಿ ಪರಿಶಿಷ್ಟ ಜಾತಿ ಸಮುದಾಯದವರು ಇರಬಹುದೆಂದು ಆಯೋಗ ಅಂದಾಜಿಸಿ ಸಮೀಕ್ಷೆ ಆರಂಭಿಸಿದೆ. ಈವರೆಗೆ ಬಹುತೇಕ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗಿಯಾಗಿಲ್ಲ. ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಆನ್ ಲೈನ್ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದ್ದು, ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಘೋಷಣೆ ಮಾಡಿಕೊಂಡಿವೆ. ಈ ನಡುವೆ ವಿಶೇಷ ಶಿಬಿರಗಳ ಮೂಲಕ ಗಣತಿ ನಡೆಯು ತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಟ್ಟೆ ಇರುವ ಕಡೆ ಇಬ್ಬರನ್ನು ನಿಯೋಜಿಸಿ ಗಣತಿ ಕಾರ್ಯ ನಡೆಸಲಾಗುತ್ತಿದೆ.

11:43 PM (IST) Jun 02
ಇಸ್ರೋ ಭರ್ಜರಿ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕುರಿತು ಇಸ್ರೋ ಇದೀಗ ಉಚಿತ ಆನ್ಲೈನ್ ಕೋರ್ಸ್ ಆರಂಭಿಸುತ್ತಿದೆ.
11:23 PM (IST) Jun 02
ಪೆಹಲ್ಗಾಂನಲ್ಲಿ ಉಗ್ರರ ದಾಳಿಗೆ 26 ಅಮಾಯಕರು ಮೃತಪಟ್ಟ ಘಟನೆ ನೋವು ಮಾಸುತ್ತಿಲ್ಲ. ಇದರ ನಡುವೆ ಉಗ್ರರ ಈ ದಾಳಿಯಿಂದ ಭಾರತೀಯರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಇದೀಗ ಬೃಹತ್ ಬುಲೆಟ್ ಬೈಕ್ ರ್ಯಾಲಿ ಸಾಗುತ್ತಿದೆ. ಇದು ಕೇರಳದಿಂದ ಕೇರಳದ ಕಾಲಡಿಯಿಂದ ಕಾಶ್ಮೀರದ ವರೆಗೆ ಚಲೋ ಎಲ್ಒಸಿ ಬುಲೆಟ್ ಬೈಕ್ ರ್ಯಾಲಿ.
10:41 PM (IST) Jun 02
ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಇದರ ನಡುವೆ ಸಾವು ವರದಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇಂದು ಒಂದೇ ದಿನ 22 ವರ್ಷದ ಯುವತಿ, 25 ವರ್ಷದ ಯುವಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
09:53 PM (IST) Jun 02
ಆರ್ಸಿಬಿ ಟ್ರೋಫಿ ಗೆಲ್ಲಲು ಅಭಿಮಾನಿಗಳ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಮಹತ್ವದ ಘೋಷಣೆ ಹೊರಬಿದ್ದಿದೆ. ಆರ್ಸಿಬಿ ಪ್ರಶಸ್ತಿ ಗೆದ್ದರೆ ಜಿಲ್ಲೆಯ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಹೋಳಿಗೆ ಊಟ ವಿತರಿಸಲಾಗುತ್ತದೆ.
08:50 PM (IST) Jun 02
08:46 PM (IST) Jun 02
ನಿಮಗೆ ಗೊತ್ತಾ ನಟಿ ಸಾರಾ ಆಲಿ ಖಾನ್ ಯಾವ ನಟರ ಜೊತೆಗೆ ನಟಿಸಿದ್ದಾರೋ ಅ ನಟರಿಗೆ ಶೀಘ್ರದಲ್ಲೇ ಮದ್ವೇ ಆಗುತ್ತೆ ಅಂತೆ, ಹಾಗಂತ ಸ್ವತಃ ಸಾರಾ ಆಲಿ ಖಾನ್ ಹೇಳಿದ್ದಾರೆ.
08:40 PM (IST) Jun 02
ಭಾರತ ಅತೀ ಹೆಚ್ಚು ಮಹಿಳಾ ಪೈಲೆಟ್ ಹೊಂದಿದ ದೇಶವಾಗಿದೆ. ಪೈಲೆಟ್ ಪೈಕಿ ಶೇಕಡಾ 15ರಷ್ಟು ಮಹಿಳಾ ಪೈಲೆಟ್ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ವಿಮಾನಯಾನ ಸಚಿವ ಮಾತನಾಡಿದ್ದಾರೆ.
08:28 PM (IST) Jun 02
ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರಿನ 153 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸ್ಥಳೀಯ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
07:53 PM (IST) Jun 02
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಹೇಳಿ ಶಾಕ್ ಕೊಟ್ಟಿದ್ದಾರೆ. ಇದೀಗ ಐಪಿಎಲ್ ಟೂರ್ನಿಗೂ ನಿವೃತ್ತಿ ಹೇಳುತ್ತಾರಾ? ಐಪಿಎಲ್ ಚೇರ್ಮನ್ ವಿರಾಟ್ ಕೊಹ್ಲಿಗೆ ಮಾಡಿದ ವಿಶೇಷ ಮನವಿ ಈ ಆತಂಕ ಹೆಚ್ಚಿಸಿದೆ. ಈ ಮನವಿ, ಕೊಹ್ಲಿ ನಿವೃತ್ತಿ ಸುಳಿವು ನೀಡುತ್ತಿದೆಯಾ?
07:49 PM (IST) Jun 02
07:28 PM (IST) Jun 02
ಬೆಂಗಳೂರಿನ ಎಸ್ಬಿಐ ಲಾಕರ್ ಒಂದರಲ್ಲಿ ಇಟ್ಟಿದ್ದ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆಗಿದ್ದೇನು?
07:19 PM (IST) Jun 02
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ ಡಿಎಲ್) ವತಿಯಿಂದ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು/ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು.
06:37 PM (IST) Jun 02
ಆರ್ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಅಹಮ್ಮದಾಬಾದ್ನಲ್ಲಿ ಉತ್ತಮ ಮಳೆಯಾಗುತ್ತಿದೆ. ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?
05:44 PM (IST) Jun 02
ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ 10 ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಮೈತ್ರಿ ಲೆಕ್ಕಾಚಾರ ಆರಂಭಿಸಿವೆ. ಡಿಎಂಕೆ ಮೈತ್ರಿಕೂಟದಲ್ಲಿ ಹಲವು ಪಕ್ಷಗಳಿದ್ದರೆ, ಎಐಎಡಿಎಂಕೆ ಮಹಾಮೈತ್ರಿ ರಚಿಸಲು ಯತ್ನಿಸುತ್ತಿದೆ. ಡಿಎಂಡಿಕೆ ತನ್ನ ಮೈತ್ರಿ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
05:41 PM (IST) Jun 02
ವಿಳಾಸ ಬದಲಾವಣೆ, ತಪ್ಪಾಗಿರುವ ಸ್ಪೆಲ್ಲಿಂಗ್ ಸರಿಪಡಿಸುವುದು ಸೇರಿದಂತೆ ಯಾವುದೇ ಆಧಾರ್ ಅಪ್ಡೇಟ್ ಇನ್ನು ಫ್ರೀಯಾಗಿ ಸಿಗಲ್ಲ. ಜೂನ್ 14ರ ಬಳಿಕ ಪ್ರತಿ ಆಧಾರ್ ಅಪ್ಡೇಟ್ಗೆ ಶುಲ್ಕ ವಿಧಿಸಲಾಗುತ್ತದೆ. ಎಷ್ಟು ಪಾವತಿ ಮಾಡಬೇಕು. ಜೂನ್ 14ರ ಮೊದಲು ಉಚಿತವಾಗಿ ಮಾಡಬಹುದಾ?
05:34 PM (IST) Jun 02
ನಟ ಶಿವಕಾರ್ತಿಕೇಯನ್ ತಮ್ಮ ಕಿರಿಯ ಮಗ ಪವನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
05:19 PM (IST) Jun 02
ಲೇಡಿ ಎಲ್ಜಿನ್ ಹಡಗು ಮುಳುಗಿದ 164 ವರ್ಷಗಳ ನಂತರ, ಹಡಗಿನಲ್ಲಿದ್ದ ಬ್ರಿಟಿಷ್ ಪತ್ರಕರ್ತ ಹರ್ಬರ್ಟ್ ಇಂಗ್ರಾಮ್ ಅವರ ಚಿನ್ನದ ಪಾಕೆಟ್ ಗಡಿಯಾರ ಅವರ ಊರಿಗೆ ವಾಪಸ್ ಬಂದಿದೆ. 1860 ರಲ್ಲಿ ಮಿಚಿಗನ್ ಸರೋವರದಲ್ಲಿ ಸಂಭವಿಸಿದ ದುರಂತದಲ್ಲಿ ಹಡಗು ಮುಳುಗಿತ್ತು, ಸ್ಕೂಬಾ ಡೈವರ್ಗಳು ಗಡಿಯಾರ ಕಂಡುಹಿಡಿದರು.
05:14 PM (IST) Jun 02
2025ರ ಜೂನ್ನಲ್ಲಿ ಒಟ್ಟು 12 ಬ್ಯಾಂಕ್ ರಜಾದಿನಗಳಿವೆ. ರಜಾದಿನಗಳ ಪಟ್ಟಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಣಕಾಸು ವ್ಯವಹಾರಗಳಿಗೆ ಮೊದಲು ರಜಾ ಪಟ್ಟಿ ಪರಿಶೀಲಿಸಿ
05:08 PM (IST) Jun 02
ಸೌದಿ ಅರೇಬಿಯಾದಲ್ಲಿ ದೇಶದ ವಾಸ್ತವ್ಯ ಮತ್ತು ಉದ್ಯೋಗ ಕಾನೂನುಗಳನ್ನು ಉಲ್ಲಂಘಿಸಿದವರನ್ನು ಮತ್ತು ಗಡಿ ಭದ್ರತಾ ನಿಯಮಗಳನ್ನು ಮುರಿದವರನ್ನು ಬಂಧಿಸಲಾಗಿದೆ.
05:00 PM (IST) Jun 02
ಭಾರತದಲ್ಲಿ ಲಿಡಿಯರ್ ಮಿನಿ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಬೆಲೆ ಕೇವಲ 1 ಲಕ್ಷ ರೂಪಾಯಿ. ಬಿಡುಗಡೆ ವೇಳೆ 30 ರಿಂದ 40 ಸಾವಿರ ರೂ ಹೆಚ್ಚಾಗಬಹುದು. ಆದರೆ 192 ಕಿಲೋಮೀಟರ್ ಮೈಲೇಜ್ ನೀಡಲಿದೆ.
04:26 PM (IST) Jun 02
04:16 PM (IST) Jun 02
04:16 PM (IST) Jun 02
03:55 PM (IST) Jun 02
ಕಳೆದ ವರ್ಷ ತಮಿಳಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಚಿತ್ರ 'ಲಬ್ಬರ್ ಪಂದು'. ಈ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ ಎಂಬ ವದಂತಿ ಹಾಗೂ ಅದರಲ್ಲಿ ನಟಿಸಲಿರುವ ನಟರ ಬಗ್ಗೆ ಮಾಹಿತಿಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ.
03:55 PM (IST) Jun 02
ಐಪಿಎಲ್ನಲ್ಲಿ ಪಂಜಾಬ್-ಮುಂಬೈ ಪಂದ್ಯದ ವೇಳೆ ಮುಖ ಮರೆಸಿಕೊಂಡು ಆರ್ಸಿಬಿ ಟೋಪಿ ಹಾಕಿಕೊಂಡು ಕುಳಿತಿದ್ದ ವ್ಯಕ್ತಿ ಕೊಹ್ಲಿಯೋ ಅಥವಾ ಆರ್ಸಿಬಿ ಗೂಢಚಾರನೋ ಎಂಬ ಚರ್ಚೆ ನಡೆಯುತ್ತಿದೆ. ಪಂಜಾಬ್ ತಂತ್ರಗಳನ್ನು ತಿಳಿದುಕೊಳ್ಳಲು ಬಂದ ಗೂಢಚಾರ ಇವನು ಎಂದು ಕೆಲವು ಅಭಿಮಾನಿಗಳು ಹೇಳಿದ್ದಾರೆ
03:54 PM (IST) Jun 02
ಅಂಬಾನಿ, ಗೌತಮ್ ಸಿಂಘಾನಿಯಾ, ಅದಾನಿ ಸೇರಿದಂತೆ ಹಲವು ಉದ್ಯಮಿಗಳಲ್ಲಿ ಐಷಾರಾಮಿ ಕಾರುಗಳಿವೆ. ತಮ್ಮಿಷ್ಟದ ನಂಬರ್ ಹರಾಜಿನ ಮೂಲಕ ಖರೀದಿಸಿದ್ದಾರೆ. ಆದರೆ ಭಾರತದ ಅತೀ ದುಬಾರಿ ಕಾರು ರಿಜಿಸ್ಟ್ರೇಶನ್ ನಂಬರ್ ಹೊಂದಿದ ಮಾಲೀಕ ಇವರಲ್ಲ. ಯಾರ ಬಳಿ ಇದೆ ದುಬಾರಿ ನಂಬರ್ ಪ್ಲೇಟ್?
03:51 PM (IST) Jun 02
03:49 PM (IST) Jun 02
ಅದು 1940ರ ಸಮಯ 10 ವರ್ಷದ ಕೃಷ್ಣ ಗುಜರಾತ್ನ ಭಾವನಗರದಿಂದ ಬ್ರೆಜಿಲ್ಗೆ ಪ್ರಯಾಣ ಬೆಳೆಸಿದ್ದ, ಹಾಗೂ ಅಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಯಾವುದೋ ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ, ಇದು ಗುಜರಾತ್ನ ಗಿರ್ ಎತ್ತೊಂದರ ಕತೆ.
03:44 PM (IST) Jun 02
ನಟ ಧನುಷ್ ನಟಿಸಿರುವ 'ಕುಬೇರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರ ಭಾಷಣ ಸಂಚಲನ ಮೂಡಿಸಿದೆ.
03:24 PM (IST) Jun 02
03:06 PM (IST) Jun 02
02:39 PM (IST) Jun 02
ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
01:12 PM (IST) Jun 02
01:09 PM (IST) Jun 02
ಕಪ್ಪೆಗಳ ಕುತೂಹಲದ ಲೋಕದಲ್ಲೊಂದು ಇಂಡಿಯನ್ ಬುಲ್ಫ್ರಾಗ್. ಮುಂಗಾರು ಮಳೆಯಲ್ಲಿ ಸಂತಾನೋತ್ಪತ್ತಿ ಮಾಡುವ ಸಮಯದಲ್ಲಿನ ಕಲರ್ಫುಲ್ ಲೋಕದ ವಿಡಿಯೋ ಇಲ್ಲಿದೆ...
12:52 PM (IST) Jun 02
ಈಶಾನ್ಯ ಭಾರತದಲ್ಲಿ ಮಳೆಯಿಂದಾಗಿ ಭಯಾನಕ ಪ್ರವಾಹ ಉಂಟಾಗಿದ್ದು, ಮನೆಗಳು ಕೊಚ್ಚಿ ಹೋಗಿವೆ.
12:25 PM (IST) Jun 02
19 ವರ್ಷದ ಭಾರತದ ಯುವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿದ್ದಾರೆ. ಈ ಸೋಲಿನಿಂದ ಕಾರ್ಲ್ಸನ್ ಬೋರ್ಡ್ಗೆ ಪಂಚ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್ಗೆ ಒಳಗಾಗಿದ್ದಾರೆ.
12:25 PM (IST) Jun 02
'ನಾಯಗನ್' ಎಂಬ ಸಾರ್ವಕಾಲಿಕ ಕ್ಲಾಸಿಕ್ ಚಿತ್ರವನ್ನು ನೀಡಿದ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ, ಸುಮಾರು ಮೂರೂವರೆ ದಶಕಗಳ ನಂತರ ಮತ್ತೆ ಒಂದಾಗಿರುವುದು ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರವು ಕೇವಲ ಒಂದು ಮನರಂಜನಾತ್ಮಕ ಚಿತ್ರವಾಗಿರದೇ
12:17 PM (IST) Jun 02
ಮುಂದುವರಿದ ಹೋರಾಟ ಮತ್ತು ನಿಂತುಹೋದ ಮಾತುಕತೆಗಳ ನಡುವೆ ಇಸ್ತಾನ್ಬುಲ್ನಲ್ಲಿ ಹೊಸ ಶಾಂತಿ ಮಾತುಕತೆಗಳು ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ರಷ್ಯಾ 162 ಉಕ್ರೇನಿಯನ್ ಡ್ರೋನ್ಗಳನ್ನು ತಡೆದಿದೆ ಎಂದು ಹೇಳಿಕೊಂಡಿದೆ.
12:11 PM (IST) Jun 02
ಮದುವೆಗಾಗಿ ಪಟ್ಟಣ, ನಗರ ಪ್ರದೇಶದ ಛತ್ರಗಳಿಗೆ ಎಡತಾಕುವವರ ನಡುವೆ ಜಮೀನಿನಲ್ಲೇ ಅದ್ಧೂರಿಯಾಗಿ ಮದುವೆ ಮಾಡುವುದು ಹೇಗೆ ಎಂದು ಈ ರೈತ ತೋರಿಸಿದ್ದಾರೆ.
11:42 AM (IST) Jun 02
ರಾಜಕೀಯ ಮತ್ತು ಭದ್ರತಾ ಕಾರಣಗಳಿಗಾಗಿ ಏರ್ ಇಂಡಿಯಾ ತನ್ನ ಬೋಯಿಂಗ್ 777 ವಿಮಾನಗಳ ನಿರ್ವಹಣೆಗಾಗಿ ಟರ್ಕಿಶ್ ಟೆಕ್ನಿಕ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತಿದೆ. ಏರ್ ಇಂಡಿಯಾ ತನ್ನ ವಿಮಾನಗಳನ್ನು ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಅಮೆರಿಕದಲ್ಲಿರುವ MRO ಕೇಂದ್ರಗಳಿಗೆ ಕಳುಹಿಸುತ್ತದೆ.