LIVE NOW
Published : Jun 24, 2026, 07:01 AM ISTUpdated : Jun 24, 2026, 10:38 PM IST

Karnataka News Live: ರಾಜ್ಯದ ಜನರಿಗೆ ಬಂಪರ್ ನ್ಯೂಸ್ , ಹೊಸ ಇಲಾಖೆ ಪ್ರಜಾಸೇವೆ ಅಸ್ತಿತ್ವಕ್ಕೆ

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮುಂಗಾರು ಕೊರತೆ ಹಿನ್ನೆಲೆಯಲ್ಲೇ ಕಾವೇರಿ ಜಲ ಸಂಘರ್ಷ ಆರಂಭವಾಗುವ ಆತಂಕ ಎದುರಾಗಿದೆ.

ದೆಹಲಿಯಲ್ಲಿ ಮಂಗಳವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಸಭೆ ನಡೆಯಲಿದ್ದು, ಸಿಡಬ್ಲ್ಯುಎಂಎ ಮುಖ್ಯಸ್ಥ ಎಸ್‌.ಕೆ.ಹಲ್ದಾರ್‌ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ಸಭೆಯಲ್ಲಿ ಕಾವೇರಿ ಜಲನಿಗಮದ ಎಂಡಿ ಭಾಗಿಯಾಗಲಿದ್ದಾರೆ. ಮುಂಗಾರು ಮುನ್ಸೂಚನೆ, ಮಳೆಯ ಪ್ರಮಾಣ, ಕರ್ನಾಟಕ ಮತ್ತು ತಮಿಳುನಾಡಿನ ಡ್ಯಾಂಗಳಲ್ಲಿ ಪ್ರಸ್ತುತ ಇರುವ ನೀರಿನ ಪ್ರಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ತಮಿಳುನಾಡು ಮತ್ತೆ ಕಾವೇರಿ ನದಿ ನೀರಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ. ಜೂನ್‌ ತಿಂಗಳಲ್ಲಿ ಒಟ್ಟಾರೆ 9.19 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಬೇಕಿದ್ದು, ಜೂನ್‌ 18ರ ತನಕ 2 ಟಿಎಂಸಿ ನೀರು ಬಿಡುಗಡೆಯಾಗಿದೆ.

10:38 PM (IST) Jun 24

ರಾಜ್ಯದ ಜನರಿಗೆ ಬಂಪರ್ ನ್ಯೂಸ್ , ಹೊಸ ಇಲಾಖೆ ಪ್ರಜಾಸೇವೆ ಅಸ್ತಿತ್ವಕ್ಕೆ

ಕರ್ನಾಟಕ ಸರ್ಕಾರವು ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು 'ಪ್ರಜಾಸೇವಾ ಇಲಾಖೆ'ಯನ್ನು ಹೊಸದಾಗಿ ಸ್ಥಾಪಿಸಿದೆ. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದೆ.

Read Full Story

09:18 PM (IST) Jun 24

ಹಣ ಪಡೆದು ಸೇವೆ ನೀಡದ Airtel; ಕನೆಕ್ಷನ್ ಸಿಗದೆ ಬೇಸತ್ತ ಗ್ರಾಹಕ; ಸಿಇಒ ಮಟ್ಟಕ್ಕೆ ದೂರು ನೀಡಿದ್ರೂ ಸಿಗಲಿಲ್ಲ ಪರಿಹಾರ!

ಏರ್‌ಟೆಲ್‌ನ ವೈಫೈ + ಟಿವಿ ಪ್ಲಾನ್‌ಗೆ ಹಣ ಪಾವತಿಸಿದ ಗ್ರಾಹಕರೊಬ್ಬರಿಗೆ ಕೇವಲ ವೈಫೈ ನೀಡಿ, ಐಪಿಟಿವಿ ಸೇವೆ ನೀಡದೆ ಸತಾಯಿಸಲಾಗುತ್ತಿದೆ. ಕಂಪನಿಯ ವಿವಿಧ ವಿಭಾಗಗಳ ನಡುವಿನ ಹೊಂದಾಣಿಕೆ ಕೊರತೆ, ಸುಳ್ಳು ಭರವಸೆಗಳಿಂದ ಬೇಸತ್ತ ಗ್ರಾಹಕರು ತಮ್ಮ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾರೆ.
Read Full Story

08:59 PM (IST) Jun 24

TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!

ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್‌ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ. 

Read Full Story

08:36 PM (IST) Jun 24

ಪ್ರೀತಿಯ ಹೆಸರಿನಲ್ಲಿ ಮೋಸ... ಅಪ್ರಾಪ್ತೆಯ ಬದುಕು ದುರಂತ ಅಂತ್ಯ - ಕರಾವಳಿಯನ್ನು ಬೆಚ್ಚಿಬೀಳಿಸಿದ ಡೆತ್ ನೋಟ್ ರಹಸ್ಯ

Love Cheating Allegation: ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಪ್ರಾಪ್ತೆಯ ಡೆತ್ ನೋಟ್‌ನಲ್ಲಿ ಬಹಿರಂಗವಾದ ಆರೋಪಗಳೇನು? ಕರಾವಳಿಯನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Read Full Story

07:10 PM (IST) Jun 24

Tungabhadra Dam - ನವಲಿ ಸಮತೋಲನ ಜಲಾಶಯಕ್ಕೆ ಹಸಿರು ನಿಶಾನೆ ಸಿಗುತ್ತಾ? ರೈತರಲ್ಲಿ ಹೆಚ್ಚಿದ ನಿರೀಕ್ಷೆ

Navali Balancing Reservoir: ಕೊಪ್ಪಳ ಜಿಲ್ಲೆಯ ನವಲಿ ಬಳಿ 32 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳ ಸರ್ಕಾರಗಳ ಮುಂದೆ ಪ್ರಸ್ತಾವನೆ ಇದೆ. ತುಂಗಭದ್ರಾ ಜಲಾಶಯದ 33 ಸ್ಪಿಲ್‌ವೇ ಗೇಟ್ ಉದ್ಘಾಟನೆಗೆ ಆಗಮಿಸುವ..

Read Full Story

06:56 PM (IST) Jun 24

Hansika Motwani - ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ 'ಬಿಂದಾಸ್' ಬೆಡಗಿ ಮಾಡಿದ ಪೋಸ್ಟ್ ಏನು?

Hansika Motwani: ನಟಿ ಹನ್ಸಿಕಾ ಮೋಟ್ವಾನಿ ಕುಟುಂಬ ಸಮೇತ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಬಿಳಿ ಬಣ್ಣದ ಟ್ರೆಡಿಷನಲ್ ಉಡುಪಿನಲ್ಲಿ ಕಾಣಿಸಿಕೊಂಡ ಹನ್ಸಿಕಾ, ‘ತಿರುಪತಿಯ ಬೆಳಗು’..

Read Full Story

06:42 PM (IST) Jun 24

2 ದಿನ ಸರ್ಕಾರಿ ಆನ್‌ಲೈನ್ ಸೇವೆಬಂದ್; ರೈತರಿಗೆ ಪಹಣಿ, ಮಕ್ಕಳಿಗೆ ಆದಾಯ-ಜಾತಿ, ಮಹಿಳೆಯರಿಗೆ ಗೃಹಲಕ್ಷ್ಮೀ ಸಿಗೋದಿಲ್ಲ!

ರಾಜ್ಯ ಡಾಟಾ ಸೆಂಟರ್‌ನಲ್ಲಿ ಮೂಲಸೌಕರ್ಯ ನವೀಕರಣ ಮತ್ತು ಭದ್ರತಾ ಸುಧಾರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಸರ್ಕಾರದ ವಿವಿಧ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಜಾತಿ, ಆದಾಯ ಪ್ರಮಾಣಪತ್ರ, ಗ್ಯಾರಂಟಿ ಯೋಜನೆಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

Read Full Story

06:39 PM (IST) Jun 24

Political News - 'ಘಜ್ನಿ ಮತ್ತು ಮೋದಿ-ಅಮಿತ್ ಶಾ ನಡುವೆ ಏನು ವ್ಯತ್ಯಾಸ? ಬಿ.ಕೆ.ಹರಿಪ್ರಸಾದ್ ಪ್ರಶ್ನೆ

Karnataka Politics: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ, ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Read Full Story

06:37 PM (IST) Jun 24

ಫುಟ್‌ಪಾತ್ ಜನರ ಆಸ್ತಿ, ಆದ್ರೆ ಒತ್ತುವರಿ ಸಹಿಸಲ್ಲ - ಜುಲೈ 1ರ ಗಡುವು ನೀಡಿ ಸಚಿವ ಕೃಷ್ಣಭೈರೇಗೌಡ ಖಡಕ್ ಎಚ್ಚರಿಕೆ!

ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಪ್ರಕಟಿಸಿದೆ. ಫುಟ್‌ಪಾತ್ ಒತ್ತುವರಿ ತೆರವಿಗೆ ಜುಲೈ 1ರ ಗಡುವು ನೀಡಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಗೂ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು. ಜೊತೆಗೆ, ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.
Read Full Story

05:44 PM (IST) Jun 24

1 ಸೂಪರ್‌ ಬೈಕ್‌ ಖರೀದಿ ಮಾಡೋವಷ್ಟು ಹಣವನ್ನು ಕೂತಲ್ಲೇ ದುಡಿಯುತ್ತಿರುವ Kannada Actress Jyoti Rai

Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್‌ ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

05:35 PM (IST) Jun 24

Reels ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಬಿಗ್ ಬಾಸ್ ಜೋಡಿ? - ತನಿಖೆಯತ್ತ ಎಲ್ಲರ ಚಿತ್ತ!

Cinema Hungama: ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಿಗಲಿ ವಿರುದ್ಧ ನವಿಲುಗರಿ ಬಳಕೆ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

Read Full Story

05:21 PM (IST) Jun 24

Sreeleela - ಸೈಡಿಗ್ ಹೋಗು ಶ್ರೀಲೀಲಾ - ಕನ್ನಡ ನಟಿಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ?

Sreeleela: ಯೋಗ ದಿನದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದ ವೇಳೆ ನಡೆದ ಫೋಟೋ ಸೆಷನ್ ವಿವಾದಕ್ಕೆ ಕಾರಣವಾಗಿದೆ. ಅಮೃತಾ ಫಡ್ನವಿಸ್ ಶ್ರೀಲೀಲಾರನ್ನು ಪಕ್ಕಕ್ಕೆ ಕಳುಹಿಸಿದ ವಿಡಿಯೋ ವೈರಲ್ ಆಗಿದೆ.

Read Full Story

04:56 PM (IST) Jun 24

Darshan Bail Plea - ದರ್ಶನ್ ಕೇಸ್‌ನಲ್ಲಿ ಏಕಾಏಕಿ ವಕೀಲರ ಬದಲಾವಣೆ - ಇದರ ಹಿಂದೆ ಏನಿದೆ?

Darshan ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿಗೆ ವಿಧಿಸಿದ್ದ ಒಂದು ವರ್ಷದ ಗಡುವು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದೇ ವೇಳೆ ಹಿರಿಯ ವಕೀಲ ಹಶ್ಮತ್ ಪಾಷಾ ದರ್ಶನ್ ಪರ ವಕಾಲತ್ತು ವಹಿಸಿದ್ದಾರೆ.

Read Full Story

04:38 PM (IST) Jun 24

OTT, ಸ್ಯಾಟಲೈಟ್ ಬಾಗಿಲು ಮುಚ್ಚಿದಾಗ ಕನ್ನಡಕ್ಕೆ ನೆರವಾದ ಎವಿಆರ್‌ ಸಿನಿ ಮ್ಯಾಕ್ಸ್‌ - ಕ್ರಿಕೆಟ್ ಲೈವ್ ಕೂಡ ಲಭ್ಯ

ಕನ್ನಡ ಚಿತ್ರರಂಗಕ್ಕೆ ಹೊಸ OTT ವೇದಿಕೆಯಾಗಿ AVR Cine Max ಆರಂಭವಾಗಿದೆ. 750ಕ್ಕೂ ಹೆಚ್ಚು ಸಿನಿಮಾಗಳು, ವೆಬ್ ಸೀರೀಸ್, ರಿಯಾಲಿಟಿ ಶೋ, ಕ್ರೀಡೆ ಹಾಗೂ ಲೈವ್ ಕಾರ್ಯಕ್ರಮಗಳೊಂದಿಗೆ ಕನ್ನಡಿಗರಿಗಾಗಿ ವಿಶೇಷ ಮನರಂಜನಾ ವೇದಿಕೆ ಲಭ್ಯವಾಗಿದೆ. 

Read Full Story

04:24 PM (IST) Jun 24

ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ

ಆಂಧ್ರಪ್ರದೇಶದ ಶೇಷಾಚಲಂ ಅರಣ್ಯದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯನಗರ ಸಾಮ್ರಾಜ್ಯದ ಕಾಲದ ಅಪರೂಪದ ಶಾಸನಗಳನ್ನು ಪತ್ತೆಹಚ್ಚಿದೆ. 16ನೇ ಶತಮಾನದ ಸದಾಶಿವ ದೇವರಾಯನ ಆಳ್ವಿಕೆಗೆ ಸೇರಿದ ಈ ತ್ರಿಭಾಷಾ ಶಾಸನಗಳು, ದೇವಾಲಯಕ್ಕೆ ನೀಡಿದ ಭೂದಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡುತ್ತವೆ.
Read Full Story

04:21 PM (IST) Jun 24

Dhruva Sarja - ಅಂಕಲ್‌ ನಿಮ್ಮ ಚಿತ್ರದಲ್ಲಿ ನನಗೊಂದು ಚಾನ್ಸ್‌ ಕೊಡಿ - ಆ ನಟನಿಗೆ ಮನವಿ ಮಾಡಿದ ಆಕ್ಷನ್ ಪ್ರಿನ್ಸ್!

Dhruva Sarja, ಸುಂದರ್ ರಾಜ್ ಅವರ ಬಳಿ ಸಿನಿಮಾದಲ್ಲಿ ಒಂದು ಪಾತ್ರ ನೀಡುವಂತೆ ಮನವಿ ಮಾಡಿದರು. 250ನೇ ಚಿತ್ರಕ್ಕೆ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿ ಕುಟುಂಬದೊಂದಿಗೆ ಸಿನಿಮಾ ನೋಡುವುದಾಗಿ ಹೇಳಿದರು.

Read Full Story

03:45 PM (IST) Jun 24

ಆಹಾರದ ತಟ್ಟೆಯಲ್ಲೂ ರಾಜಕೀಯ, ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ?; NCERT 6ನೇ ಕ್ಲಾಸ್‌ ಕನ್ನಡ ಬುಕ್‌ ವಿರುದ್ಧ ಆಕ್ರೋಶ!

NCERT 6ನೇ ತರಗತಿಯ 'ಕೃಷ್ಣ' ಹೆಸರಿನ ಕನ್ನಡ ಪಠ್ಯಪುಸ್ತಕವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವು ಧಾರ್ಮಿಕ ಕಥೆಗಳನ್ನು ಹೇರುತ್ತಿದೆ, ಕರ್ನಾಟಕದ ಪ್ರಾದೇಶಿಕ ವೈವಿಧ್ಯತೆಯನ್ನು ಕಡೆಗಣಿಸಿದೆ ಮತ್ತು ಸಮತೋಲಿತ ಆಹಾರದ ಹೆಸರಿನಲ್ಲಿ ಸಸ್ಯಾಹಾರವನ್ನು ಮಾತ್ರ ಬಿಂಬಿಸುತ್ತಿದೆ ಎಂದು ಆರೋಪಿಸಲಾಗಿದೆ.

Read Full Story

02:44 PM (IST) Jun 24

ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!

ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.
Read Full Story

01:12 PM (IST) Jun 24

ಬೆಂಗಳೂರು ತ್ರಿವಳಿ ಕೊಲೆಗಾತಿ ಪಾಂಡಿಚೇರಿಯಲ್ಲಿ ಬಂಧನ, ತಾಯಿ ನನ್ನ ನೆಮ್ಮದಿ ಕೆಡಿಸಿದ್ದಳು ಅದಕ್ಕೆ ಕೊಂದೆ ಎಂದ ಹಂತಕಿ!

ಬೆಂಗಳೂರಿನ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ಬಂಧಿಸಲಾಗಿದೆ. ತಾಯಿಯ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ, ಆಕೆಯ ತಂದೆಯ ಮರಣಪೂರ್ವ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಿಯಕರ ಕೆನತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Read Full Story

12:38 PM (IST) Jun 24

ಗೊತ್ತಿಲ್ಲದೇ ದೊಡ್ಡ ತಪ್ಪು ಮಾಡಿಬಿಟ್ಟೆ, ಈಗ ಅರಿವಾಗ್ತಿದೆ- ನೀವು ನನ್ನ ಹಾಗೆ ಮಾಡಬೇಡಿ - ನಿವೇದಿತಾ ಗೌಡ ಕ್ಷಮೆ

ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ಅವರು 'ನವಿಲೇ ನವಿಲೇ' ಹಾಡಿಗೆ ನವಿಲಿನ ಗರಿ ಬಳಸಿ ನೃತ್ಯ ಮಾಡಿದ್ದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಕಾನೂನಿನ ಅರಿವಿಲ್ಲದೆ ಈ ತಪ್ಪು ನಡೆದಿದ್ದು, ಇಬ್ಬರೂ  ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

Read Full Story

12:26 PM (IST) Jun 24

ಹೀರೋಯಿನ್ ಬರದೇ ನೀನ್ಯಾಕೆ ಬಂದೆ! ಡೈರೆಕ್ಟರ್‌ ಸಿಂಪಲ್ ಸುನಿಗೆ ಕ್ಲಾಸ್ ತಗೊಂಡ ಅಜ್ಜಿ!

'ಮೋಡ ಕವಿದ ವಾತಾವರಣ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಿರ್ದೇಶಕರು ಸ್ವಾರಸ್ಯಕರ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಅಜ್ಜಿಯೊಬ್ಬರು, ಅವರು ಅಲ್ಲಿ ಇಲ್ಲದಿದ್ದಕ್ಕೆ ಸುನಿ ಅವರಿಗೆ ಹೇಗೆ ಕ್ಲಾಸ್ ತೆಗೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ.

Read Full Story

12:26 PM (IST) Jun 24

GBA Elections ಆಯೋಗ ಸಿದ್ದತೆ - ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಆರಂಭ, ಯಾವಾಗ? ಎಲ್ಲಿ?

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಸಿದ್ಧತೆಗಳು ತೀವ್ರಗೊಂಡಿವೆ. ಜೂನ್ 25 ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದ್ದು, ಆಗಸ್ಟ್ 31ರೊಳಗೆ ಚುನಾವಣೆ ಮುಗಿಸಲು ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ.
Read Full Story

12:00 PM (IST) Jun 24

CSMT ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಆರಾಮದಾಯಕ ಸುದ್ದಿ

ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್‌ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.
Read Full Story

10:46 AM (IST) Jun 24

CPI ದ್ವೇಷಕ್ಕೆ 40-50 ಜನರ ವಿರುದ್ದ ಸುಳ್ಳು ರೇ*ಪ್ ಕೇಸ್..! ಪೊಲೀಸ್ ಅಧಿಕಾರಿಯ ಮೇಲೆ ಗಂಭೀರ ಆರೋಪ

ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವೈಯಕ್ತಿಕ ದ್ವೇಷದಿಂದ ಸುಮಾರು 50 ಜನರ ಮೇಲೆ ಸುಳ್ಳು ಅ*ತ್ಯಾ*ಚಾ*ರ ಮತ್ತು ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ್ದಾರೆ ಎಂದು ಹೊನ್ನೆಮರದಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್‌ಕೌಂಟರ್‌ ಮಾಡಿ ಅಥವಾ ಇಚ್ಛಾಮರಣಕ್ಕೆ ಅನುಮತಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Read Full Story

10:36 AM (IST) Jun 24

ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಸಂಗ್ರಹ; ತಿಂಗಳಿಗೆ 13.50 ಕೋಟಿ ರೂಪಾಯಿ ಬಟವಾಡೆ

ತಾಲೂಕಿನಲ್ಲಿ ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪಟ್ಟಣದ ಸಮೀಪ ನೂತನವಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಅವರು ಹಾಲು ಉತ್ಪಾದಕರಿಗೆ ವಿಮೆ, ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದರು.

Read Full Story

10:25 AM (IST) Jun 24

ವಿದ್ಯಾರ್ಥಿನಿ ನೀಟ್‌ ತಪ್ಪಲು ಟ್ರಾಫಿಕ್‌ ಕಾರಣವಲ್ಲ; ಬಿಜೆಪಿ ಆರೋಪಕ್ಕೆ ಸಿಸಿಟಿವಿ ಸಾಕ್ಶ್ಯ ನೀಡಿದ ಪ್ರಿಯಾಂಕ್ ಖರ್ಗೆ!

ಕಾಂಗ್ರೆಸ್ ಸಮಾವೇಶದಿಂದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿದ್ಯಾರ್ಥಿಯೇ ಮನೆಯಿಂದ ತಡವಾಗಿ ಬದರೆ ಇದರಲ್ಲಿ ಸರ್ಕಾರದ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Read Full Story

10:23 AM (IST) Jun 24

ನಿವೇದಿತಾ ಜೊತೆ ನವಿಲು ಗರಿ ಡ್ಯಾನ್ಸ್ ವಿವಾದ - ಡ್ಯಾನ್ಸರ್ ಕಿಶನ್ ಮೊದಲ ಪ್ರತಿಕ್ರಿಯೆ

ನವಿಲು ಗರಿ ಇದ್ದ ಉಡುಪು ಧರಿಸಿ ರೀಲ್ಸ್ ಮಾಡಿದ್ದಕ್ಕಾಗಿ ನಟ ಕಿಶನ್ ಮತ್ತು ನಿವೇದಿತಾ ಗೌಡ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿದೆ. ಈ ಬಗ್ಗೆ ನಟ ಕಿಶನ್ ಕ್ಷಮೆಯಾಚಿಸಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುವುದಾಗಿ ತಿಳಿಸಿದೆ.
Read Full Story

10:16 AM (IST) Jun 24

ಪ್ರತಿಷ್ಠಿತ ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ - 22 ಹುದ್ದೆಗಳಿಗೆ ನೇಮಕಾತಿ, 1ಲಕ್ಷಕ್ಕೂ ಅಧಿಕ ವೇತನ!

ಭಾರತ ಸರ್ಕಾರದ ಪವನ್ ಹನ್ಸ್ ಲಿಮಿಟೆಡ್, ಜೂನಿಯರ್ ಎಂಜಿನಿಯರ್ ಮತ್ತು ಅಸಿಸ್ಟೆಂಟ್ ಸೇರಿದಂತೆ 22 ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯೊಂದಿಗೆ ಜುಲೈ 10, 2026 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಕೇಂದ್ರ ಸರ್ಕಾರಿ ಉದ್ಯೋಗಾವಕಾಶವನ್ನು ಪಡೆಯಬಹುದು.
Read Full Story

09:05 AM (IST) Jun 24

ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ - ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪೀಠ ಸ್ಥಾಪನೆಯಾಗುವವರೆಗೂ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರು ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸುವಂತೆಯೂ ಅವರು ಕೋರಿದ್ದಾರೆ.
Read Full Story

08:58 AM (IST) Jun 24

ED Raid - ಸಚಿವ ಜಾರಕಿಹೊಳಿ ಬಾಮೈದ ಮಂಜುನಾಥ್‌ಗೆ ಇಡಿ ಶಾಕ್ - ಏಕಕಾಲದಲ್ಲಿ 6 ಕಡೆ ದಾಳಿ

ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

Read Full Story

08:49 AM (IST) Jun 24

Liquor Mafia - ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್

ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!

 

Read Full Story

08:37 AM (IST) Jun 24

ಕೈಗಾ ಹೋರಾಟಕ್ಕೆ ಜಯ - 7 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಎನ್‌ಪಿಸಿ ಅಧಿಕಾರಿಗಳ ಒಪ್ಪಿಗೆ

ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಿದ ನಿರಾಶ್ರಿತರ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಸ್ಥಳೀಯರಿಗೆ ಉದ್ಯೋಗ, ರಸ್ತೆ ನಿರ್ಮಾಣ, ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಎನ್‌ಪಿಸಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
Read Full Story

08:06 AM (IST) Jun 24

ಬದುಕು ಸಿಹಿ ಮಾಡುವ ಕಹಿ ಬೇವಿನ ಹಣ್ಣು ಆಯುವ ಕಾಯಕ; ದಿನಕ್ಕೆ ಎಷ್ಟು ಸಿಗುತ್ತೆ ಹಣ?

ಬೇವಿನ ಹಣ್ಣಿನ ಸುಗ್ಗಿ ಆರಂಭವಾಗಿದ್ದು, ಗ್ರಾಮೀಣ ಭಾಗದ ಮಹಿಳೆಯರು ಇದನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಉಪ ಆದಾಯ ಗಳಿಸುತ್ತಿದ್ದಾರೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಬೇವಿನ ಬೀಜಗಳು ಸಾವಯವ ಕೃಷಿಯಲ್ಲಿ ಕೀಟನಾಶಕವಾಗಿ ಮತ್ತು ಗೊಬ್ಬರವಾಗಿ ಬಳಕೆಯಾಗುತ್ತಿದ್ದು, ಇತ್ತೀಚೆಗೆ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.
Read Full Story

07:52 AM (IST) Jun 24

Basavaraj Patil Marum victory - ಮಹಾರಾಷ್ಟ್ರ ವಿಧಾನಪರಿಷತ್‌ಗೆ ಕಲಬುರಗಿಯ ಕನ್ನಡಿಗ ಆಯ್ಕೆ

ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್ ಅವರು ಧಾರಾಶಿವ-ಲಾತೂರ-ಬೀಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರರಾದ ಇವರ ಗೆಲುವನ್ನು ಆಳಂದದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
Read Full Story

07:49 AM (IST) Jun 24

ಪುತ್ತೂರಿನ ಕೂಲಿ ಕಾರ್ಮಿಕ ಪುರಂದರ್‌ಗೆ ಅದೃಷ್ಟ ತಂದು ಕೊಟ್ಟ ದೇಸಿ ನಾಯಿ ‘ಚಿನ್ನು’

ಪುತ್ತೂರಿನಲ್ಲಿ ಕಾಣೆಯಾಗಿದ್ದ 'ಚಿನ್ನು' ಎಂಬ ದೇಸಿ ನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಕೂಲಿ ಕಾರ್ಮಿಕ ಪುರಂದರ ಅವರಿಗೆ, ಶ್ವಾನಪ್ರೇಮಿ ಮಾಲೀಕ ಗಣೇಶ್ ಭಟ್ ಕೇರ ಅವರು 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಯ ಹುಡುಕಾಟಕ್ಕಾಗಿ ಮಾಲೀಕರು ಬಹುಮಾನ ಘೋಷಿಸಿದ್ದರು.

Read Full Story

07:35 AM (IST) Jun 24

Monsoon - ಬರಿದಾಗುತ್ತಿದೆ ಕೃಷ್ಣೆಯ ಒಡಲು - ಮಹಾರಾಷ್ಟ್ರದಿಂದ ಬಿಡುಗಡೆ ಆಗಿಲ್ಲ ಯಾಕೆ ನೀರು?

ಮಹಾರಾಷ್ಟ್ರದಲ್ಲಿ ತೀವ್ರ ನೀರಿನ ಅಭಾವದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಕಷ್ಟಕರವಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಆದರೆ, ಬೆಳಗಾವಿ ನಗರಕ್ಕೆ ಜುಲೈ ಅಂತ್ಯದವರೆಗೆ ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.
Read Full Story

More Trending News