ಬೆಂಗಳೂರು (ಜು.23): ರಾಜ್ಯಾದ್ಯಂತ ಕೇಂದ್ರದ ಆರ್ಡಿಎಸ್ಎಸ್ (RDSS) ಅಡಿ ಎಲ್ಲಾ ವಿದ್ಯುತ್ ಸಂಪರ್ಕಗಳಿಗೂ ಸ್ಮಾರ್ಟ್ ಮೀಟರ್ (smart meters) ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಕೇಂದ್ರದ ಸಬ್ಸಿಡಿ (power subsidy) ಪಡೆದುಕೊಳ್ಳಲು ಬಾಕಿ ಇರುವ 15 ಸಾವಿರ ಕೋಟಿ ಹಣವನ್ನು ಸರ್ಕಾರ ಕಟ್ಟಬೇಕಿದೆ. ಈ ಹಣ ಹೊಂದಿಸಲು ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಹೇರಿಕೆಗೆ ಸಲಹೆ ಬಂದಿದೆ. ಪರ್ಯಾಯ ಮಾರ್ಗ ಶೋಧಿಸುವಂತೆ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದು, ಭಾರೀ ಸಸ್ಪೆನ್ಸ್ಗೆ ಕಾರಣವಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
12:12 AM (IST) Jul 24
DCM DK Shivakumar And Temple Visiting: ಡಿಸಿಎಂ ಡಿಕೆ ಶಿವಕುಮಾರ್ ದೇವಾಲಯಕ್ಕೆ ಖಾಸಗಿ ಭೇಟಿ ನೀಡಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಸಹ ಸಿಎಂ ಆಗುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ.
11:53 PM (IST) Jul 23
09:37 PM (IST) Jul 23
Ekka Movie Box Office Collection: ಕನ್ನಡ ಚಿತ್ರರಂಗದಲ್ಲಿ ಚೇತರಿಕೆ ಕಾಣದೇ ಇರುವ ಸಮಯದಲ್ಲಿ 'ಎಕ್ಕ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುತ್ತು ಎಂಬಾತನ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು.
09:17 PM (IST) Jul 23
ಬೆಂಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಸೈಬರ್ ವಂಚನೆ ಕಾಣಿಸಿಕೊಂಡಿದ್ದು, ಇಬ್ಬರು ಬಾಲ್ಯ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ 58 ಸಾವಿರ ರೂಪಾಯಿ ಸುಲಿಗೆ ಮಾಡಲಾಗಿದೆ.
08:50 PM (IST) Jul 23
Udupi Rain Alert Update: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲಾಡಳಿತವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಗಳಿವೆ.
08:39 PM (IST) Jul 23
08:17 PM (IST) Jul 23
07:19 PM (IST) Jul 23
06:59 PM (IST) Jul 23
06:46 PM (IST) Jul 23
ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹಾಜರಾಗಲು ತೆರಳಿದ್ದ ವೇಳೆ, ರಾಜಿ ಮಾಡಿಕೊಳ್ಳೋಣವೆಂದು ಕರೆದಾಗ ಈ ಘಟನೆ ನಡೆದಿದೆ.
06:35 PM (IST) Jul 23
Bengaluru Mysuru Travel IRCTC Package: ಐಆರ್ಸಿಟಿಸಿ ಬೆಂಗಳೂರು ಮತ್ತು ಮೈಸೂರಿಗೆ 2 ರಾತ್ರಿ 3 ದಿನಗಳ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್ನಲ್ಲಿ ಎಸಿ ಕಾರು, ಹೋಟೆಲ್ ವಸತಿ, ಊಟ ಮತ್ತು ಪ್ರಯಾಣ ವಿಮೆ ಸೇರಿವೆ. ಹಾಗಾಗಿ ಪ್ರಯಾಣಿಕರು ಈ ವಿಶೇಷ ಟೂರ್ ಪ್ಯಾಕೇಜ್ನ್ನು ಆನಂದಿಸಬಹುದು.
06:17 PM (IST) Jul 23
06:12 PM (IST) Jul 23
06:08 PM (IST) Jul 23
ಮಿಂತ್ರಾ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಬಂಧಿತ ಕಂಪನಿಗಳ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ₹1654 ಕೋಟಿ ದೂರು ದಾಖಲಾಗಿದೆ. ಹೋಲ್ಸೇಲ್ ವ್ಯಾಪಾರದ ನೆಪದಲ್ಲಿ ಮಲ್ಟಿ ಬ್ರಾಂಡ್ ಚಿಲ್ಲರೆ ವ್ಯಾಪಾರ ನಡೆಸಿ ಎಫ್ಡಿಐ ನಿಯಮ ಉಲ್ಲಂಘನೆ ಆರೋಪ.
06:07 PM (IST) Jul 23
Puttagowri Maduve Serial Popularity: ಪುಟ್ಟಗೌರಿ ಮದುವೆ ಧಾರಾವಾಹಿ ಮತ್ತೆ ನೋಡಲು ಅಜ್ಜಿಯೊಬ್ಬರು ತಮ್ಮ ಕಿಚನ್ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. 5 ವರ್ಷದ ಹಿಂದಿನ ಪುಟ್ಟಗೌರಿ ನೋಡುವ ಆಸೆಗಾಗಿ ಅಜ್ಜಿ ಹೇಳಿಕೊಟ್ಟ ಸೀಕ್ರೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
05:44 PM (IST) Jul 23
OLX ಸೇರಿದಂತೆ ಯಾವುದೇ ಆನ್ಲೈನ್ ಪ್ಲ್ಯಾಟ್ಫಾರ್ಮ್ನಲ್ಲಿ ವಸ್ತು ಸೇಲ್ ಮಾಡಲು ಇಟ್ಟರೆ ಎಚ್ಚರ ಎಚ್ಚರ... ನಿಮಗೂ ಇದೇ ಗತಿ ಆಗ್ಬೋದು. ಇವರ ಅನುಭವ ಕೇಳಿ...
05:39 PM (IST) Jul 23
೪೦ ಲಕ್ಷ ರೂ.ಗಿಂತ ಅಧಿಕ ವ್ಯವಹಾರದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ವಿಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ, ತೆರಿಗೆ ವಸೂಲಿ ಮಾಡುವುದಿಲ್ಲ ಮತ್ತು ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
05:26 PM (IST) Jul 23
05:08 PM (IST) Jul 23
61 ವರ್ಷ ಪ್ರಾಯದ ಹನುಮ ಭಕ್ತರೊಬ್ಬರು ಜೋಳ ತುಂಬಿದ್ದ 102 ಕೇಜಿ ತೂಕದ ಮೂಟೆಯನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬೆನ್ನ ಮೇಲೆಮೂಟೆ ಹೊತ್ತು ಅವರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನು ಏರಿ ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
04:53 PM (IST) Jul 23
70-80ರ ದಶಕದಲ್ಲಿ ಕಿಚ್ಚು ಹೊತ್ತಿಸಿದ್ದ ಅನಂತ್ನಾಗ್-ಲಕ್ಷ್ಮಿ ಜೋಡಿ 40 ವರ್ಷಗಳ ಬಳಿಕ ಜೊತೆಯಾಗಿ ನಟಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾವುದೀ ಚಿತ್ರ? ಡಿಟೇಲ್ಸ್ ಇಲ್ಲಿದೆ...
04:52 PM (IST) Jul 23
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದಲ್ಲಿ ವಿಜಯೇಂದ್ರರನ್ನು ಮತ್ತೆ ಆಯ್ಕೆ ಮಾಡಿದರೆ ಹೊಸ ಪಕ್ಷ ಕಟ್ಟುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
04:50 PM (IST) Jul 23
Nelamangala Tumkur Highway: ನೆಲಮಂಗಲ ಮತ್ತು ತುಮಕೂರು ನಡುವಿನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದೆ. ಇದರಿಂದ ಪ್ರಯಾಣದ ಅವಧಿ ಇಳಿಕೆಯಾಗಲಿದೆ
04:35 PM (IST) Jul 23
ತಮ್ಮ ಮಗಳು, ಮೊಮ್ಮಕ್ಕಳ ವಯಸ್ಸಿನಾಕೆಯನ್ನು ಮದುವೆಯಾಗುವ ಅಜ್ಜಂದಿರೇನೂ ಕಮ್ಮಿಯಿಲ್ಲ. ದಿನನಿತ್ಯವೂ ಇಂಥ ಘಟನೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಅದಕ್ಕೆ ಟ್ವಿಸ್ಟ್ ಇದೆ.ಏನಿದು?
04:34 PM (IST) Jul 23
04:12 PM (IST) Jul 23
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ಕೇರಳ ಸರ್ಕಾರ ಮಧ್ಯಪ್ರವೇಶಿಸುತ್ತಿದೆ. ಇಂತಹ ನಗರ ನಕ್ಸಲರು ಭಾಗವಹಿಸುವಿಕೆಯಿಂದ ಎಸ್ಐಟಿ ತನಿಖೆಗೆ ತೊಂದರೆಯಾಗಲಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
03:55 PM (IST) Jul 23
ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಹಲವು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಸಂಪತ್ತು ಪತ್ತೆಯಾಗಿದೆ. ಮೈಸೂರು, ಬೀದರ್, ತುಮಕೂರು, ಕಲಬುರ್ಗಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
03:00 PM (IST) Jul 23
ಪತ್ನಿ ದಾಖಲಿಸಿದ ಕ್ರಿಮಿನಲ್ ಪ್ರಕರಣಗಳಿಂದಾಗಿ ಪತಿ 109 ದಿನಗಳು ಮತ್ತು ಅವರ ತಂದೆ 103 ದಿನಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
02:31 PM (IST) Jul 23
ಹಿಂದುಳಿದ ವರ್ಗಗಳ ಆಯೋಗದ ಪ್ರಸ್ತಾವನೆಯಂತೆ ರಾಜ್ಯದ 7 ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ. ಜಾತಿ ತಾರತಮ್ಯ ನಿವಾರಣೆ ಈ ಗಣತಿಯ ಪ್ರಮುಖ ಉದ್ದೇಶವಾಗಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಈ ಸಮೀಕ್ಷೆ ನಡೆಯಲಿದ್ದು, ಅಕ್ಟೋಬರ್ಗೆ ವರದಿ ಸಲ್ಲಿಸಬೇಕಿದೆ.
01:58 PM (IST) Jul 23
ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಈ ಸಾಮೂಹಿಕ ವ್ಯವಹಾರಗಳ ವಲಸೆಯು ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದ ಕೈಗಾರಿಕಾ ವಾತಾವರಣದ ಕರಾಳ ಚಿತ್ರಣವನ್ನು ಚಿತ್ರಿಸುತ್ತದೆ ಎಂದು ಆರೋಪಿಸಿದ್ದಾರೆ.
01:11 PM (IST) Jul 23
ಪ್ರಜಾಪ್ರಭುತ್ವ ಇಲ್ಲ ಎಂದು ಈಗ ಉಪರಾಷ್ಟ್ರಪತಿಗಳಿಗೆ ಅರ್ಥವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
01:10 PM (IST) Jul 23
ಅಲಿ ಫಜಲ್ ಎಂಬುವವರನ್ನು ಮದುವೆಯಾಗಿರೋ ನಟಿ ರಿಚಾ ಚಡ್ಡಾಗೆ ಈಗ ಗನ್ ಬೇಕಂತೆ. ಅದಕ್ಕೆ ಕಾರಣ ಮಗು ಭಾರತದಲ್ಲಿ ಹುಟ್ಟಿರೋದಕ್ಕಂತೆ. ಅದಕ್ಕೇ ಪಾಕಿಸ್ತಾನಕ್ಕೆ ಕಳಿಸಲು ರೆಡಿಯಾಗಿದ್ದಾರೆ ಫ್ಯಾನ್ಸ್.
12:55 PM (IST) Jul 23
ಮೋದಿ ಅವರ ಸಂಪುಟದಲ್ಲಿ, ಶ್ರಾವಣ ಮಾಸದಲ್ಲೂ ಸಹ ಪ್ರತಿದಿನ 3 ಕಿಲೋ ಮಟನ್ ಸೇವಿಸುವ ಬಿಹಾರದ ಮೂವರು ಸಚಿವರಿದ್ದಾರೆ, ಆದರೆ ತೋರಿಕೆಗಾಗಿ ಅವರು ಸನಾತನದ ಬಗ್ಗೆ ದೀರ್ಘ ಉಪನ್ಯಾಸಗಳನ್ನು ನೀಡುತ್ತಾರೆ ಎಂದು ಆರ್ಜೆಡಿ ನಾಯಕ ಟೀಕಿಸಿದ್ದಾರೆ.
12:39 PM (IST) Jul 23
ನಮ್ಮ ಬಳಿ ಇನ್ನೂ 1.94 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ದಾಸ್ತಾನಿದೆ. ಹಾಗಾಗಿ ರೈತರು ಆತಂಕ ಪಡುವುದು ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
12:14 PM (IST) Jul 23
ಪುಟ್ಟ ಪಟ್ಟಣಗಳ ಅಥವಾ ಗ್ರಾಮೀಣ ಭಾಗಗಳ ಅನೇಕ ಮಂದಿ ಯುವಕರು ಸಾಲ ತೆಗೆದುಕೊಂಡು, ಅದನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿದ್ದಾಗಿ ಅನೇಕ ವರದಿಗಳು ಹೇಳುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ.
12:12 PM (IST) Jul 23
‘ಸಯ್ಯಾರ’- ತೀವ್ರ ಪ್ರೇಮಕಥೆಯುಳ್ಳ ಈ ಬಾಲಿವುಡ್ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ದಾಖಲೆಯ 105.75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
11:58 AM (IST) Jul 23
ರಾಯಚೂರಿನಲ್ಲಿ ನದಿಗೆ ಬಿದ್ದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆಯ ಹಿಂದೆ ತಾತಪ್ಪ ಮಾಡಿದ ಭಾರೀ ಯಡವಟ್ಟು ಈಗ ಬಹಿರಂಗವಾಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂಬ ಆರೋಪ ಕೇಳಿಬಂದಿದೆ.
11:57 AM (IST) Jul 23
ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದು ಸ್ವತಃ ಡಯಾಬಿಟೀಸ್ ಬಾಧಿತರೊಬ್ಬರು ಯೋಚಿಸಿದಾಗ ಹುಟ್ಟಿದ ಉದ್ಯಮವೇ ಸ್ವಾದ್ ನಂದಿನಿ ಹೆಸರಿನ ಖಡಕ್ ರೊಟ್ಟಿಗಳು.
11:52 AM (IST) Jul 23
ಜೂನ್ 2025ರ (UPI Transaction) ವರದಿಯಂತೆ, UPI ವಹಿವಾಟಿನಲ್ಲಿ ಮಹಾರಾಷ್ಟ್ರ (Maharashtra) ಮುಂಚೂಣಿಯಲ್ಲಿದ್ದು, ಕರ್ನಾಟಕ ಮತ್ತು ಉತ್ತರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಕೂಡ ಗಣನೀಯ ಪ್ರಮಾಣದ ವಹಿವಾಟು ದಾಖಲಿಸಿವೆ.
11:23 AM (IST) Jul 23
12 ನಿರ್ಣಯಗಳನ್ನು ಒಂದೊಂದಾಗಿ ಓದಿದ ರಂಭಾಪುರಿ ಜಗದ್ಗುರುಗಳು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಗಳು, ಸಮಾಜದ ನಾಯಕರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಮಾಡಬೇಕು ಎಂದು ತಿಳಿಸಿದರು.
11:05 AM (IST) Jul 23
Adani Group FII Stake Trim ಜೂನ್ 2025 ರ ತ್ರೈಮಾಸಿಕದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐಗಳು) ಹಲವಾರು ಅದಾನಿ ಗ್ರೂಪ್ ಕಂಪನಿಗಳಲ್ಲಿ ತಮ್ಮ ಹೂಡಿಕೆಗಳನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ.