Published : Oct 20, 2025, 06:53 AM ISTUpdated : Oct 20, 2025, 11:05 PM IST

Karnataka News Live: ರಾಯಚೂರಿನಲ್ಲಿ ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ

ಸಾರಾಂಶ

ರಾಮನಗರ:  ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ ಯುವಕ ಆಕೆಯ ಬಳಿ ₹25 ಲಕ್ಷ ಹಣ, 6 ದುಬಾರಿ ಮೊಬೈಲ್ ಹಾಗೂ 137 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಪ್ರಕರಣ ಚನ್ನಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಯುವತಿಗೆ, ಅಪ್ಪಗೆರೆ ಸಿದ್ದಾರ್ಥ ನಗರದ ಕೃಷ್ಣ ಮೂರ್ತಿ ಎಂಬ ವ್ಯಕ್ತಿ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಾಗಿದ್ದು, ಈತನ ಜೊತೆಗೆ ಯುವಕನ ತಾಯಿ ಸಿದ್ದಮ್ಮ ಮತ್ತು ಅಣ್ಣ ಮನೋಜ್ ಎಂಬುವರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೃಷ್ಣಮೂರ್ತಿ ಮತ್ತು ನಾನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಈತ ನನ್ನಿಂದ ನಗದು ಹಾಗೂ ಆನ್‌ಲೈನ್ ಮೂಲಕ ₹25 ಲಕ್ಷ ಹಣವನ್ನು ಪಡೆದುಕೊಂಡಿದ್ದ. ಇದಲ್ಲದೆ 2019ರಿಂದ 6 ದುಬಾರಿ ಮೊಬೈಲ್‌ಗಳನ್ನು ದುಬಾರಿ ಸ್ಮಾರ್ಟ್‌ ವಾಚ್‌ಗಳನ್ನು ತೆಗೆಸಿಕೊಂಡಿದ್ದು, ನನ್ನ ಬಳಿ ಇದ್ದ 137 ಗ್ರಾಂ ಚಿನ್ನಾಭರಣಪಡೆದುಕೊಂಡಿದ್ದಾನೆ. ಈತನಿಗೆ ಬೇರೊಬ್ಬ ಯುವತಿಯ ಜೊತೆಗೆ ಸಂಬಂಧವಿದ್ದು ಇದನ್ನು ಮುಚ್ಚಿಟ್ಟು ವಂಚಿಸಿದ್ದಾನೆ. ಹಣ ನೀಡುವಂತೆ ಕೇಳಿದಾಗ ಧಮಕಿ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

11:05 PM (IST) Oct 20

ರಾಯಚೂರಿನಲ್ಲಿ ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ

ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ, ರಾಯಚೂರು ಸೀತಾ ನಗರದ ಬಳಿ ಈ ಅಫಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.  

Read Full Story

11:01 PM (IST) Oct 20

ಮನೆಯಲ್ಲಿ ಮಲಗಿದ್ದ ಮೈದುನನ ಖಾಸಗಿ ಅಂಗವನ್ನು ಕತ್ತರಿಸಿ ಪರಾರಿಯಾದ ಅತ್ತಿಗೆ; ವಿಚಿತ್ರವಾಗಿದೆ ಕಾರಣ!

ತನ್ನ ತಂಗಿಯನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಮೈದುನನ ಮೇಲೆ ಅತ್ತಿಗೆ ಸೇಡು ತೀರಿಸಿಕೊಂಡಿದ್ದಾಳೆ. ಕುಟುಂಬದ ವಿರೋಧಕ್ಕೆ ಮಣಿದು ಪ್ರೀತಿ ಮುರಿದುಕೊಂಡಿದ್ದಕ್ಕೆ ಕೋಪಗೊಂಡ ಆಕೆ, ರಾತ್ರಿ ವೇಳೆ ಮೈದುನನ ಖಾಸಗಿ ಅಂಗವನ್ನೇ ಕತ್ತರಿಸಿ ಪರಾರಿಯಾಗಿದ್ದಾಳೆ.

Read Full Story

10:05 PM (IST) Oct 20

ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಮಚ್ಚು-ಲಾಂಗು ಹಿಡಿದು ಇಡೀ ಏರಿಯಾಗೆ ಬೆದರಿಸಿದ ಅನ್ಯಕೋಮಿನ ಪುಂಡರು!

ಬೆಂಗಳೂರಿನ ಹೆಣ್ಣೂರಿನಲ್ಲಿ ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಶುರುವಾದ ಸಣ್ಣ ಜಗಳವು, ಐವರ ಗುಂಪೊಂದು ಮಚ್ಚು-ಲಾಂಗುಗಳಿಂದ ಬಡಾವಣೆಯ ನಿವಾಸಿಗಳಿಗೆ ಪ್ರಾಣ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಉಲ್ಬಣಗೊಂಡಿದೆ. ಈ ದಾಂಧಲೆಯಿಂದ ಬೆಚ್ಚಿಬಿದ್ದ ಸ್ಥಳೀಯರು, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story

09:54 PM (IST) Oct 20

ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ

ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ, ಇಬ್ಬರನ್ನು ಆಸ್ಪತ್ರೆ ದಾಖಳಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇದುವರೆಗೆ ನಾಲ್ವರು ಪಟಾಕಿಯಿಂದ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

Read Full Story

08:59 PM (IST) Oct 20

ಸಿರಿಗೆರೆ-ಸಾಣೇಹಳ್ಳಿ ಮಠದ ನಾಲ್ಕು ವರ್ಷಗಳ ವೈಮನಸ್ಸು, ವಿವಾದಕ್ಕೆ ತೆರೆ ಬೀಳುವ ಸೂಚನೆ, ಭಕ್ತರಲ್ಲಿ ಸಂತಸ

ಕಳೆದ ನಾಲ್ಕು ವರ್ಷಗಳಿಂದ ಸಿರಿಗೆರೆಯ ತರಳಬಾಳು ಬೃಹನ್ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠದ ಸ್ವಾಮೀಜಿಗಳ ನಡುವೆ ಇದ್ದ ವೈಮನಸ್ಸು ಶಮನಗೊಳ್ಳುವ ಲಕ್ಷಣಗಳು ಕಾಣಿಸಿವೆ. ಸಾಣೇಹಳ್ಳಿ ಶ್ರೀಗಳ ಭೇಟಿಯ ಯತ್ನಕ್ಕೆ ಪ್ರತಿಯಾಗಿ, ಮಾತುಕತೆಗೆ ಸಿದ್ಧವೆಂದು ತರಳಬಾಳು ಮಠವು ಪತ್ರದ ಮೂಲಕ ತಿಳಿಸಿದೆ.

Read Full Story

08:32 PM (IST) Oct 20

ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?

ನಿಧಿಯನ್ನು ಪ್ರೀತಿಸುತ್ತಿದ್ದ ಕರ್ಣ, ಅನಿವಾರ್ಯವಾಗಿ ಅಕ್ಕ ನಿತ್ಯಾಳನ್ನು ಮದುವೆಯಾಗಿದ್ದಾನೆ. ಈ ಮದುವೆಯ ಹಿಂದಿನ ಸತ್ಯ ಯಾರಿಗೂ ತಿಳಿದಿಲ್ಲ. ಇದೀಗ ಸಪ್ತಪದಿ ತುಳಿಯುವ ವೇಳೆ ನಿತ್ಯಾ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಕರ್ಣನಿಗೆ ತಿಳಿದುಬಂದಿದೆ.
Read Full Story

08:19 PM (IST) Oct 20

ದೀಪಾವಳಿಯ ಸಮಯದಲ್ಲಿ ಬಾನಲ್ಲಿ ಗೋಚರಿಸಲಿದೆ ಮೂರು ಧೂಮಕೇತುಗಳು, ಬರಿಗಣ್ಣಿಂದ ಎಲ್ಲರೂ ನೋಡಬಹುದು

ಈ ದೀಪಾವಳಿ ಹಬ್ಬದಂದು 'ಲೆಮೆನ್', 'ಸ್ವಾನ್' ಹಾಗೂ 'ಅಟ್ಲಸ್' ಎಂಬ ಮೂರು ಧೂಮಕೇತುಗಳು ಬಾನಂಗಳದಲ್ಲಿ ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ಲೆಮೆನ್ ಧೂಮಕೇತು ಬರಿಗಣ್ಣಿಗೆ ಗೋಚರಿಸಲಿದ್ದು, ಅಟ್ಲಸ್ ಧೂಮಕೇತು ನಮ್ಮ ಸೌರವ್ಯೂಹದ ಹೊರಗಿನಿಂದ ಬಂದಿರುವುದು ವಿಶೇಷವಾಗಿದೆ. 

Read Full Story

08:11 PM (IST) Oct 20

ಪರಪ್ಪನ ಅಗ್ರಹಾರದಲ್ಲಿ ನಟಿ ಪವಿತ್ರಾ ಗೌಡ ಕಣ್ಣೀರು - ಮಗಳೊಂದಿಗೆ ದೀಪಾವಳಿ ಹಬ್ಬ ಮಾಡಲಾಗದೇ ಸಂಕಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ, ಹಬ್ಬದ ಸಮಯದಲ್ಲಿ ಮಗಳು ಮತ್ತು ಕುಟುಂಬವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ, ಅವರು ಮೌನಕ್ಕೆ ಶರಣಾಗಿದ್ದು, ನಿದ್ರೆಯಿಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದಾರೆ.
Read Full Story

08:09 PM (IST) Oct 20

ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು

ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು, ಈ ಎರಡು ವಿಡಿಯೋದಲ್ಲಿ ಯಾವುದು ಬೆಂಗಳೂರು, ಯಾವುದು ದೆಹಲಿ? ಮಹಿಳೆ ಪೋಸ್ಟ್‌ಗೆ ನೆಟ್ಟಿಗರು ವಾಸ್ತವ ತಿಳಿಸಿದ್ದೇಕೆ?

Read Full Story

07:54 PM (IST) Oct 20

ಅ. 31 ರಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿಯ ಉತ್ಸವ, ಪದ್ಧತಿಯಂತೆ ತಮಿಳುನಾಡು ಸರ್ಕಾರದ ಗೌರವ

ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದಶಕಗಳ ನಂತರ ಅಪರೂಪದ ನಕ್ಷತ್ರ ಸಂಯೋಗದಿಂದಾಗಿ, ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ಅ. 31 ರಂದು ಒಂದೇ ದಿನ ನಡೆಯಲಿದೆ. ಈ ವಿಶೇಷ ದಿನದಂದು ಸ್ವಾಮಿಗೆ ಮೈಸೂರು ಅರಸರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುವುದು.

Read Full Story

07:13 PM (IST) Oct 20

ಎಷ್ಟೇ ಖರ್ಚಾದ್ರೂ ಸರಿ ಪುತ್ತೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತಿನಿ - ಸಿಎಂ ಸಿದ್ದರಾಮಯ್ಯ ಶಪಥ

ಪುತ್ತೂರಿನಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸುವುದಾಗಿ ಘೋಷಿಸಿದರು. ಸಮಾಜದಲ್ಲಿ ಸಮಾನತೆ, ಕೋಮು ಸೌಹಾರ್ದತೆ ಕಾಪಾಡುವ ಅಗತ್ಯವನ್ನು ಒತ್ತಿಹೇಳಿದರು.

Read Full Story

07:12 PM (IST) Oct 20

ಡಿವೋರ್ಸ್​ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್​ - ಕಾಂತಾರ ನಟನ ಓಪನ್​ ಮಾತು ಕೇಳಿ

'ಕಾಂತಾರ' ಖ್ಯಾತಿಯ ನಟ ಗುಲ್ಶನ್ ದೇವಯ್ಯಾ ಅವರು ತಮ್ಮ ಗ್ರೀಕ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ, ಬೇರ್ಪಟ್ಟ ಮೂರು ವರ್ಷಗಳ ನಂತರ, ತಮ್ಮ ಪ್ರೀತಿಯನ್ನು ಅರಿತುಕೊಂಡು ಮತ್ತೆ ಒಂದಾಗಿದ್ದಾರೆ. ಈ ಲೇಖನವು ಅವರ ಆಸಕ್ತಿದಾಯಕ ಪ್ರೇಮಕಥೆ ಮತ್ತು ಆರೋಗ್ಯದ ರಹಸ್ಯವನ್ನು ವಿವರಿಸುತ್ತದೆ.
Read Full Story

06:49 PM (IST) Oct 20

Bigg Boss - ರಿಷಾ ಎಂಟ್ರಿ ಕೊಟ್ಟ ತಕ್ಷಣ ಕಾವ್ಯಾಳ ಮರೆತೇ ಬಿಡೋದಾ ಗಿಲ್ಲಿ? ಬೇಕಿತ್ತಾ ಇದೆಲ್ಲಾ? ಏನಾಯ್ತು ನೋಡಿ

ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರದ್ದು ಕ್ಲೋಸ್ ಫ್ರೆಂಡ್​ಷಿಪ್ ಆಗಿತ್ತು. ಆದರೆ ರಿಷಾ ಗೌಡ ಎಂಟ್ರಿಯ ನಂತರ ಗಿಲ್ಲಿಯ ಗಮನ ಬೇರೆಡೆ ಹರಿದಿದ್ದು, ಇದಕ್ಕೆ ಶಿಕ್ಷೆಯಾಗಿ ಮನೆಯವರೆಲ್ಲಾ ಸೇರಿ ಕಾವ್ಯಾ ಕೈಯಿಂದ ಗಿಲ್ಲಿಗೆ ರಾಖಿ ಕಟ್ಟಿಸಿದ್ದಾರೆ.
Read Full Story

06:47 PM (IST) Oct 20

ಆರ್‌ಎಸ್‌ಎಸ್‌ಗೆ ಕ್ಷಮೆ ಕೇಳಿದ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್; ಅಸಲಿಯತ್ತು ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ!

ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ಗೆ ಕ್ಷಮೆ ಕೋರಿದ್ದಾರೆ ಎಂದು ಬಿಂಬಿಸುವ ನಕಲಿ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಸಂಘಪರಿವಾರದ ಕುತಂತ್ರ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

Read Full Story

06:26 PM (IST) Oct 20

ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಪುತ್ತೂರಿನ ಕಾರ್ಯಕ್ರಮದಲ್ಲಿ ಭಾರೀ ಕಾಲ್ತುಳಿತ, 11 ಮಂದಿ ಆಸ್ಪತ್ರೆಗೆ ದಾಖಲು!

ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಆಯೋಜಿಸಿದ್ದ 'ಅಶೋಕ ಜನಮನ' ಕಾರ್ಯಕ್ರಮದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಸಾಮರ್ಥ್ಯ ಮೀರಿ ಜನ ಸೇರಿದ್ದರಿಂದ ಉಂಟಾದ ಈ ಅವಘಡದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

06:18 PM (IST) Oct 20

ದೈವವನ್ನು ವಿಶ್ವಕ್ಕೇ ರಿಷಬ್ ಶೆಟ್ಟಿ ಪರಿಚಯಿಸಿಕೊಟ್ಟರೋ? ದೈವ ನಟ-ನಿರ್ದೇಶಕನನ್ನು ಜಗತ್ತಿಗೆ ತೋರಿಸಿತಾ?

'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಎರಡೂ ಆಂಗಲ್‌ಗಳಲ್ಲಿ ಶುರುವಾಗಿರೋ ಈ ಡಿಬೇಟ್ ಮುಂದೆ ಎಲ್ಲಿಗೆ ಹೋಗಿ ತಲುಪತ್ತೋ ಏನೋ!

Read Full Story

06:02 PM (IST) Oct 20

ರೈಲಿನಲ್ಲಿ ಪೆಹ್ಲಾ ಪೆಹ್ಲಾ ಪ್ಯಾರ್ - ವೀಡಿಯೋ ಭಾರಿ ವೈರಲ್

Delhi Metro viral video ದೆಹಲಿ ಮೆಟ್ರೋ ಪುಟ್ಟ ಮಕ್ಕಳ ನೃತ್ಯದಿಂದ ಸುದ್ದಿಯಾಗಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೂವರು ಪುಟ್ಟ ಮಕ್ಕಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲಿನೊಳಗೆ ಮಾಡಿದ ನೃತ್ಯ ಅನೇಕರ ಮನಸೆಳೆದಿದೆ.

Read Full Story

05:25 PM (IST) Oct 20

ಮಗು ಬೇಕಂದ್ರೆ ಮೈದುನನ ಜತೆ ಮಲಗು! ಅತ್ತೆ, ಮಾವ, ಗಂಡನ ಮನೆಯವರ ಕಿರುಕುಳಕ್ಕೆ ಉಪನ್ಯಾಸಕಿ ಸಾವಿಗೆ ಶರಣು!

ದೊಡ್ಡಬಳ್ಳಾಪುರದಲ್ಲಿ, ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಉಪನ್ಯಾಸಕಿ ಪುಷ್ಪಾ ಎಂಬುವವರು ಡ್ಯಾಂಗೆ ಹಾರಿ ಆತ್ಮ8ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ, ಅವರು ತಮ್ಮ ನೋವು ಮತ್ತು ಅನ್ಯಾಯವನ್ನು ವಿವರಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.

Read Full Story

05:15 PM (IST) Oct 20

ಬಿಹಾರ ಚುನಾವಣಾ ಅಖಾಡ ರಂಗೇರಿಸಿದ ಸದಾ ಮಾಸ್ಕ್‌ ಕಪ್ಪು ಬಟ್ಟೆ ಮಾತ್ರ ಧರಿಸುವ UK ರಿಟರ್ನ್‌ಡ್ ಚೆಲುವೆ ಯಾರೀಕೆ

ಬಿಹಾರ ಚುನಾವಣಾ ಆಖಾಡ ಸಾಕಷ್ಟು ರಂಗೇರುತ್ತಿದೆ. ಹೊಸ ಹೊಸ ಮುಖಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು ಪುಷ್ಪಂ ಪ್ರಿಯಾ ಚೌಧರಿ ಅವರ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

05:14 PM (IST) Oct 20

Bigg Boss Kannada ಮನೆಗೆ ಲವರ್ ಬಾಯ್ ಎಂಟ್ರಿ - ರಾಶಿಕಾಗೆ ಗುಲಾಬಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್!

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ 'ಲವರ್ ಬಾಯ್' ಖ್ಯಾತಿಯ ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಟಾಸ್ಕ್‌ನಲ್ಲೇ ರಾಶಿಕಾಗೆ ಗುಲಾಬಿ ನೀಡಿ ಗಮನ ಸೆಳೆದ ಇವರ ಜೊತೆಗೆ, ಮ್ಯೂಟೆಂಟ್ ರಘು ಮತ್ತು ರಿಷಾ ಗೌಡ ಕೂಡ ಮನೆ ಪ್ರವೇಶಿಸಿದ್ದು, ಆಟದ ದಿಕ್ಕು ಬದಲಾಗುವ ನಿರೀಕ್ಷೆಯಿದೆ.
Read Full Story

04:31 PM (IST) Oct 20

ಕೊಪ್ಪಳ ಮರಳು ದಂಧೆ, ಸಿಎಂ ಆರ್ಥಿಕ ಸಲಹೆಗಾರ vs ಅಧಿಕಾರಿ, ಇಬ್ಬರ ನಡುವೆ ಲೆಟರ್ ವಾರ್, ಬಯಲಾಯ್ತು ಸೀಕ್ರೆಟ್!

ಕೊಪ್ಪಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿವಾದ ತಾರಕಕ್ಕೇರಿದ್ದು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಧಿಕಾರಿಗಳ ವರ್ಗದಿಂದ ವೈರಲ್ ಆದ ಪತ್ರವೊಂದು ರಾಯರೆಡ್ಡಿಯವರ ವಿರುದ್ಧವೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Read Full Story

04:31 PM (IST) Oct 20

ಜಾತಿ ಸಮೀಕ್ಷೆ ವಿರೋಧಿಸಿದ ಬಿಜೆಪಿ ನಾಯಕರ ತವರಲ್ಲೇ ಶೇ.91ರಷ್ಟು ಪ್ರಗತಿ; ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಮೀಕ್ಷೆಯನ್ನು ವಿರೋಧಿಸಿದ ಬಿಜೆಪಿ ನಾಯಕರ ಕ್ಷೇತ್ರವಾದ ಶಿಕಾರಿಪುರದಲ್ಲೇ ಶೇ. 91ರಷ್ಟು ಗಣತಿ ಪೂರ್ಣಗೊಂಡಿರುವುದು ಗಮನಾರ್ಹ ಎಂದಿದ್ದಾರೆ. 

Read Full Story

04:26 PM (IST) Oct 20

ಧ್ವನಿಯ ಮೂಲಕವೇ ಟಿವಿ ವೀಕ್ಷಕರ ಮೋಡಿ ಮಾಡುವ ಚೇತನ್​ ಸೊಲಗಿ! ಪ್ರೊಮೋಗಳಿಗೆ ಸ್ವೀಟ್​ ದನಿ ಇವರದ್ದೇ

ಜೀ ಕನ್ನಡ ವಾಹಿನಿಯ ಬಹುತೇಕ ಎಲ್ಲಾ ಧಾರಾವಾಹಿಗಳ ಪ್ರೊಮೋಗಳಿಗೆ ಧ್ವನಿ ನೀಡುವವರು ವಾಯ್ಸ್ ಓವರ್ ಆರ್ಟಿಸ್ಟ್ ಚೇತನ್ ಸೊಲಗಿ. ಕಳೆದ ಏಳು ವರ್ಷಗಳಿಂದ ಈ ಕಾರ್ಯ ಮಾಡುತ್ತಿರುವ ಅವರ ವೃತ್ತಿ ಪಯಣ, ಹಿನ್ನೆಲೆ ಮತ್ತು ಅನುಭವಗಳ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

03:33 PM (IST) Oct 20

Bigg Bossಗೆ ಎಂಟ್ರಿ ಆಗ್ತಿದ್ದಂಗೇ ಧಮಾಲ್ ಧಿಮಿಲ್ ಧೂಳೆಬ್ಬಿಸಿದ ರಿಷಾ - ಮಾತು ಬೆಂಕಿ, ಫೋಟೋಗಳು ಪುಡಿಪುಡಿ- ಯಾರೀಕೆ?

ಬಿಗ್ ಬಾಸ್ ಮನೆಗೆ ನಟಿ ರಿಷಾ ಗೌಡ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದಾರೆ. ಕ್ರೀಡಾಪಟು ಆಗುವ ಕನಸು ಕಂಡಿದ್ದ ಇವರು, ಗಾಯದ ಕಾರಣ ನಟನಾ ಲೋಕಕ್ಕೆ ಬಂದರು. ಮನೆಗೆ ಕಾಲಿಟ್ಟ ಮೊದಲ ದಿನವೇ ಇತರ ಸ್ಪರ್ಧಿಗಳ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
Read Full Story

03:32 PM (IST) Oct 20

ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ರಿಷಬ್ ಶೆಟ್ಟಿ; ಕಾಂತಾರ ಸಕ್ಸಸ್ ನೆತ್ತಿಗೇರಿಲ್ಲ ಎಂದ ನೆಟ್ಟಿಗರು!

'ಕಾಂತಾರ 1' ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

03:15 PM (IST) Oct 20

5000 ಕೊಡ್ತಿನಿ ಬಾ ಎಂದು ಹಿಂದಿಂದೆ ಬಂದು ಕಿರುಕುಳ ನೀಡಿದವನ ಬೆನ್ನು ಹುಡಿ ಮಾಡಿದ ನರ್ಸ್‌

ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ 5000 ರೂಪಾಯಿ ಕೊಡ್ತಿನಿ ಬಾ ಎಂದು ಕರೆದ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ನರ್ಸ್ ಮಂಗಳಾರತಿ ಮಾಡಿದಂತಹ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

Read Full Story

03:06 PM (IST) Oct 20

ಉಳ್ಳಾಲದಲ್ಲಿ ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರ, ಕಿರುಚಾಡದಂತೆ ಬಾಯಿಗೆ ತಲೆದಿಂಬು ಇಟ್ಟ ಪಾಪಿ!

ದಕ್ಷಿಣ ಕನ್ನಡದ ಉಳ್ಳಾಲ ಕುಂಪಲದಲ್ಲಿ, ತಂದೆಯೇ ತನ್ನ ಮಗಳ ಮೇಲೆ 10 ವರ್ಷಗಳಿಂದ ಅತ್ಯಾ*ಚಾರ ಎಸಗುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮಾನಸಿಕವಾಗಿ ಕುಗ್ಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಕೌನ್ಸಿಲಿಂಗ್ ವೇಳೆ ಈ ಅಮಾನವೀಯ ಕೃತ್ಯ ಬಯಲಾಗಿದೆ.

Read Full Story

03:06 PM (IST) Oct 20

ಒಂದೇ ಮಳೆಗೆ ಕೋಡಿ ಬಿದ್ದ ವಿವಿ ಸಾಗರ, ಮಾದಾಪುರ ಕೆರೆ, ರೈತರ ದೀಪಾವಳಿ ಸಂಭ್ರಮ ಡಬಲ್

ಒಂದೇ ಮಳೆಗೆ ಕೋಡಿ ಬಿದ್ದ ವಿವಿ ಸಾಗರ, ಮಾದಾಪುರ ಕೆರೆ, ರೈತರ ದೀಪಾವಳಿ ಸಂಭ್ರಮ ಡಬಲ್,  ವಿವಿ ಸಾಗರ ಡ್ಯಾಂ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದರೆ, ಇತ್ತ ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಕಡೂರು ತಾಲೂಕು ಇದೀಗ ನಳನಳಿಸುತ್ತಿದೆ.

 

Read Full Story

02:54 PM (IST) Oct 20

ಮದರಸಾ ನಡೆಸಲು 4 ಎಕರೆ ಆಸ್ತಿ ಕಿತ್ತುಕೊಂಡಿದೆ ಎಂದು ಕಿರಿಕ್; ಆಸ್ತಿ ಕೇಳಿದವನ ವಿರುದ್ಧ 10 ಕೇಸ್

ಬೆಂಗಳೂರಿನ ಥಣಿಸಂದ್ರದಲ್ಲಿರುವ ಮದರಸಾದ 4 ಎಕರೆ ಆಸ್ತಿ ವಿವಾದ ಮತ್ತೆ ಬೀದಿ ಜಗಳಕ್ಕೆ ಕಾರಣವಾಗಿದೆ. ಮಶಿಯಾ ಮಹ್ಮದ್ ಎಂಬಾತ ಮಹಿಳಾ ಸಂಘಟನೆಯನ್ನು ಕಳುಹಿಸಿ ಗಲಾಟೆ ಮಾಡಿಸಿದ್ದು, 15 ವರ್ಷಗಳಿಂದ ನ್ಯಾಯಾಲಯದಲ್ಲಿರುವ ಈ ಪ್ರಕರಣವು ಆಗಾಗ ಗಲಭೆಗೆ ತಿರುಗುತ್ತಿದೆ.

Read Full Story

02:46 PM (IST) Oct 20

Bigg Boss ಜಾನ್ವಿ ಮಿದುಳು ಇರೋದು ಆ ಸ್ಪರ್ಧಿ ಕೈಯಲ್ಲಿ! ಸುದೀಪ್​ ಎದುರು ಅಶ್ವಿನಿ ಭಾರಿ ಆರೋಪ- ನಕ್ಕೂ ನಕ್ಕೂ ಸುಸ್ತಾದ ಕಿಚ್ಚ

ಬಿಗ್​ಬಾಸ್​ ಮಿಡ್​ ಸೀಸನ್​ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಕಳೆದ ವಾರ ರಕ್ಷಿತಾ ಶೆಟ್ಟಿ, ಜಾನ್ವಿ ಮತ್ತು ಅಶ್ವಿನಿ ಗೌಡ ನಡುವೆ ನಡೆದ ವೈಯಕ್ತಿಕ ನಿಂದನೆಯ ಜಗಳ ತಾರಕಕ್ಕೇರಿದ್ದು, ಇದಕ್ಕಾಗಿ ನಟ ಸುದೀಪ್ ಅವರಿಂದ ಸ್ಪರ್ಧಿಗಳು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Read Full Story

02:43 PM (IST) Oct 20

BBK 12 - ಕಾಲು ಮುಗಿತೀನಿ ಅಂದ್ರು ಬಿಡಲಿಲ್ಲ - ಗಿಲ್ಲಿ ನಟನಿಗೆ ಶಾಕ್ ಕೊಟ್ಟ ಸ್ಪರ್ಧಿಗಳು

Bigg Boss Kannada Gilli Nata: ಬಿಗ್‌ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳಾಗುತ್ತಾರೆ ಎಂದು ನಿರೀಕ್ಷಿಸಿದ್ದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದರೊಂದಿಗೆ, ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶಿಸಿದ್ದಾರೆ.

Read Full Story

01:58 PM (IST) Oct 20

Amruthadhaare ಭೂಮಿಕಾಗೆ ಉಪ್ಪಿ ಕಡೆಯಿಂದ ಸಿಕ್ಕಿತು ಗ್ರೀನ್​ ಸಿಗ್ನಲ್! ದಶಕಗಳ ಕನಸು ನನಸು- ಕುಣಿದಾಡಿದ ನಟಿ

'ಅಮೃತಧಾರೆ' ಖ್ಯಾತಿಯ ನಟಿ ಛಾಯಾ ಸಿಂಗ್ ಅವರಿಗೆ ಉಪೇಂದ್ರ ನಿರ್ದೇಶನದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವ ಬಹುದೊಡ್ಡ ಕನಸಿದೆ. ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಉಪೇಂದ್ರ ಅವರ ಬಳಿ ಈ ಬೇಡಿಕೆ ಇಟ್ಟಿದ್ದು, ಅವರ ಕನಸನ್ನು ಈಡೇರಿಸುವುದಾಗಿ ಉಪ್ಪಿ ಭರವಸೆ ನೀಡಿದ್ದಾರೆ.
Read Full Story

01:58 PM (IST) Oct 20

ಆ ಒಂದು ಹಾಡಿನಿಂದ ರೋಜಾರನ್ನು ಸಿನಿಮಾದಿಂದ ತೆಗೆದುಹಾಕಿದ ಚಿರಂಜೀವಿ.. ಆ ಇಂಡಸ್ಟ್ರಿ ಹಿಟ್ ಸಿನಿಮಾ ಯಾವುದು?

ಚಿರಂಜೀವಿ ಜೊತೆಗಿನ ಒಂದು ಇಂಡಸ್ಟ್ರಿ ಹಿಟ್ ಸಿನಿಮಾವನ್ನು ರೋಜಾ ಮಿಸ್ ಮಾಡಿಕೊಂಡರು. ಒಂದೇ ಒಂದು ಹಾಡಿನಿಂದಾಗಿ ಚಿರಂಜೀವಿ ರೋಜಾರನ್ನು ಕೈಬಿಟ್ಟು ಬೇರೆ ನಾಯಕಿಯನ್ನು ಆಯ್ಕೆ ಮಾಡಿದರು. ಆ ವಿವರ ಇಲ್ಲಿದೆ. 

Read Full Story

01:38 PM (IST) Oct 20

ಡಾ.ರಾಜ್‌ಕುಮಾರ್ ಹೀರೋಯಿನ್ ಇಲ್ಲದಿದ್ದರೆ ಈ ಸಿನಿಮಾಗಳೇ ಇರ್ತಿರಲಿಲ್ಲ.. ಎಲ್ಲರಿಗೂ ಆಕೆಯದ್ದೇ ಧ್ವನಿ!

ಹಿರಿಯ ನಟಿಯರಾದ ಸುಹಾಸಿನಿ, ವಿಜಯಶಾಂತಿ, ರಮ್ಯಾ ಕೃಷ್ಣರಿಂದ ಹಿಡಿದು ಆರತಿ ಅಗರ್ವಾಲ್‌ವರೆಗೆ ಅನೇಕ ಸ್ಟಾರ್ ನಟಿಯರಿಗೆ ತಮ್ಮ ಮಾಂತ್ರಿಕ ಧ್ವನಿ ನೀಡಿದ ನಟಿ, ಡಬ್ಬಿಂಗ್ ಕಲಾವಿದೆ ಸರಿತಾ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

Read Full Story

01:34 PM (IST) Oct 20

ದಿವಾಳಿಯಿಂದ ಸಂಸ್ಥೆಯನ್ನು ಲಾಭದ ಹಂತಕ್ಕೇರಿಸಿದ ಉದ್ಯೋಗಿಗಳಿಗೆ ಲಕ್ಸುರಿ ಕಾರು ಗಿಫ್ಟ್ ನೀಡಿದ ಮಾಲೀಕ

ಚಂಡೀಗಢದ ಎಂಐಟಿಎಸ್‌ ಗ್ರೂಪ್‌ನ ಮಾಲೀಕ ಎಂಕೆ ಭಟಿಯಾ, ದೀಪಾವಳಿ ಹಬ್ಬಕ್ಕೆ ತಮ್ಮ ಸಂಸ್ಥೆಯ 51 ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹಿಂದೆ ದಿವಾಳಿಯಾಗಿದ್ದ ಭಾಟಿಯಾ, ಈಗ ಯಶಸ್ವಿ ಉದ್ಯಮಿಯಾಗಿದ್ದು, ಅವರ ಈ ಉದಾರತೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

01:31 PM (IST) Oct 20

ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ ವರುಣನ ಅಡ್ಡಿ, ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Read Full Story

01:18 PM (IST) Oct 20

ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ - ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜಗದೀಶ್ ಶೆಟ್ಟರ್

ಸಿಎಂ ಸಿದ್ದರಾಮಯ್ಯ ಖರ್ಗೆ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ. ಇದು ಕಾಂಗ್ರೆಸ್ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.

Read Full Story

12:58 PM (IST) Oct 20

ದೀಪಾವಳಿಗೆ ಬಂದ ಮಿಂಚಿನುಡುಗೆ.. ಬಾಲಿವುಡ್ ನಟಿಯರ ದೇಸಿ-ಬೋಲ್ಡ್ ಲುಕ್‌ ಟ್ರೆಂಡ್‌ ಸೆಟ್ಟಿಂಗ್‌

ಬೆಳಕಿನ ಹಬ್ಬಕ್ಕೆ ಹೊಳೆ ಹೊಳೆಯುವ ಮಾದಕ ಉಡುಗೆಗಳಲ್ಲಿ ಬಿ ಟೌನ್‌ ಬೆಡಗಿಯರ ಮೆರವಣಿಗೆ ಹೊರಟಿದೆ. ‘ದೇಸಿ ಟಚ್‌, ಬೋಲ್ಡ್‌ ಲುಕ್‌’ನ ಉಡುಗೆಗಳು ದೀಪಾವಳಿ ಹಬ್ಬಕ್ಕೆ ಮಾಲೆ ಪಟಾಕಿಯಂತೆ ಸೌಂಡ್‌ ಮಾಡ್ತಿವೆ.

Read Full Story

12:32 PM (IST) Oct 20

ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ಏನಿದರ ವಿಶೇಷತೆ?

ಹೊಸಪೇಟೆಯ ದರೋಜಿ ಕರಡಿಧಾಮದ ಬಳಿ ಇದೇ ಮೊದಲ ಬಾರಿಗೆ 'ಭಾರತೀಯ ಸ್ಕಾಪ್ಸ್ ಗೂಬೆ' ಎಂಬ ವಿಶಿಷ್ಟ ನಿಶಾಚರಿ ಪತ್ತೆಯಾಗಿದೆ. ಛದ್ಮವೇಷಧಾರಿಯಾದ ಈ ಗೂಬೆಯನ್ನು ಅದರ ವಿಶಿಷ್ಟ ಸದ್ದಿನಿಂದ ಪಕ್ಷಿ ಪ್ರೇಮಿಗಳು ಗುರುತಿಸಿದ್ದು, ಈ ಭಾಗದಲ್ಲಿ ಈ ಪ್ರಭೇದದ ಗೋಚರತೆ ಅಚ್ಚರಿಗೆ ಕಾರಣವಾಗಿದೆ.
Read Full Story

12:29 PM (IST) Oct 20

Plane Crash - ಸ್ಕಿಡ್ ಆಗಿ ರನ್‌ವೇಯಿಂದ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ - ಇಬ್ಬರು ಸಾವು

ದುಬೈನಿಂದ ಹಾಂಗ್‌ಕಾಂಗ್‌ಗೆ ತೆರಳುತ್ತಿದ್ದ ಬೋಯಿಂಗ್ 747 ಸರಕು ಸಾಗಣೆ ವಿಮಾನವು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದಿದೆ. ಈ ಘಟನೆಯಲ್ಲಿ ವಿಮಾನದ ಸಿಬ್ಬಂದಿ ಸುರಕ್ಷಿತರಾಗಿದ್ದು, ನೆಲದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
Read Full Story

More Trending News