MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ದೀಪಾವಳಿಗೆ ಲಕ್ಷ್ಮೀ ವಾಹನ ಕಾಣಿಸಿದ್ರೆ ಏನರ್ಥ?

ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ದೀಪಾವಳಿಗೆ ಲಕ್ಷ್ಮೀ ವಾಹನ ಕಾಣಿಸಿದ್ರೆ ಏನರ್ಥ?

ಹೊಸಪೇಟೆಯ ದರೋಜಿ ಕರಡಿಧಾಮದ ಬಳಿ ಇದೇ ಮೊದಲ ಬಾರಿಗೆ 'ಭಾರತೀಯ ಸ್ಕಾಪ್ಸ್ ಗೂಬೆ' ಎಂಬ ವಿಶಿಷ್ಟ ನಿಶಾಚರಿ ಪತ್ತೆಯಾಗಿದೆ. ಛದ್ಮವೇಷಧಾರಿಯಾದ ಈ ಗೂಬೆಯನ್ನು ಅದರ ವಿಶಿಷ್ಟ ಸದ್ದಿನಿಂದ ಪಕ್ಷಿ ಪ್ರೇಮಿಗಳು ಗುರುತಿಸಿದ್ದು, ಈ ಭಾಗದಲ್ಲಿ ಈ ಪ್ರಭೇದದ ಗೋಚರತೆ ಅಚ್ಚರಿಗೆ ಕಾರಣವಾಗಿದೆ.

1 Min read
Mahmad Rafik
Published : Oct 20 2025, 12:32 PM IST| Updated : Oct 20 2025, 01:14 PM IST
Share this Photo Gallery
  • FB
  • TW
  • Linkdin
  • Whatsapp
13
ಭಾರತೀಯ ಸ್ಕಾಪ್ಸ್ ಗೂಬೆ
Image Credit : Asianet News

ಭಾರತೀಯ ಸ್ಕಾಪ್ಸ್ ಗೂಬೆ

ವಿಶಿಷ್ಟ ಕಿವಿಯಂತಹ ಗರಿ, ಛದ್ಮವೇಷಧಾರಿಯಾದ ನಿಶಾಚರಿ ' ಭಾರತೀಯ ಸ್ಕಾಪ್ಸ್ ಗೂಬೆ' ಇದೇ ಮೊದಲ ಬಾರಿ ದರೋಜಿ ಕರಡಿಧಾಮ ಬಳಿ ಪತ್ತೆಯಾಗಿದೆ. 

ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಬಳಿ ಪತ್ತೆಯಾಗಿರುವ ಈ ಗೂಬೆಯು, ಗಾತ್ರದಲ್ಲಿ ಚಿಕ್ಕದಾಗಿದೆ. 9ರಿಂದ 10 ಇಂಚು ಉದ್ದವಿರುವ ಈ ಗೂಬೆಯೂ ಬೂದು ಬಣ್ಣದ್ದಾಗಿದೆ. ಕಣ್ಣು ಕಡು ಬಣ್ಣವಿದೆ. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ.

ಇದನ್ನೂ ಓದಿ: 7 ಬಾರಿ ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ, ಯಾರಿಗೆ ಹೆಚ್ಚು ಕಾಡುತ್ತೆ ಹಾವಿನ ಭಯ?

23
 ಅಚ್ಚರಿ ಸಂಗತಿ
Image Credit : Asianet News

ಅಚ್ಚರಿ ಸಂಗತಿ

ಸ್ಕಾಪ್ಸ್ ಗೂಬೆ ವಟ ವಟ ಸದ್ದಿನಿಂದ ಹಿಂಬಾಲಿಸಿದ ಪಕ್ಷಿ ಪ್ರೇಮಿಗಳಾದ ಸಾಚಿರಾಯ್ ಮತ್ತು ಶ್ರೀಧರ್, ಪೆರುಮಾಳ್ ಪಂಪಯ್ಯ ಸ್ವಾಮ ಗುರುತಿಸಿದ್ದಾರೆ. ಈ ಪ್ರಬೇಧವೇ ಈ ಭಾಗದಲ್ಲಿ ಹೊಸದಾಗಿ ಗೋಚರಿಸಿರುವುದು ಅಚ್ಚರಿ ಸಂಗತಿಯಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ, ಪರಿಸರವಾದಿ ಪಂಪಯ್ಯಸ್ವಾಮಿ ಮಳೇಮಠ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ: ವೀಡಿಯೋ

Related Articles

Related image1
ಒಂದೇ ಫ್ರೇಮ್‌ನಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಮತ್ತು ರಾಷ್ಟ್ರೀಯ ಪಕ್ಷಿ ನವಿಲು: ಅಪರೂಪದ ದೃಶ್ಯ ವೈರಲ್!
Related image2
ಕೋಳಿ ಯಾವ ದೇಶದ ರಾಷ್ಟ್ರೀಯ ಪಕ್ಷಿ? ಬಹುಶಃ ನಿಮಗೂ ಈ ಉತ್ತರ ಗೊತ್ತಿರಲಿಕ್ಕಿಲ್ಲ!
33
ದೀಪಾವಳಿಗೆ ಲಕ್ಷ್ಮಿ ವಾಹನ
Image Credit : Asianet News

ದೀಪಾವಳಿಗೆ ಲಕ್ಷ್ಮಿ ವಾಹನ

ಗೂಬೆಯನ್ನು ಲಕ್ಷ್ಮೀದೇವಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ತೀಕ್ಷ್ಣ ದೃಷ್ಟಿ ಹೊಂದಿರುವ ಕಾರಣ ಲಕ್ಷ್ಮೀ ದೇವಿ ಗೂಬೆಯನ್ನು ತನ್ನ ವಾಹನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಗೂಬೆ ದರ್ಶನವು ಆರ್ಥಿಕ ಅಭಿವೃದ್ಧಿ ಮತ್ತು ಧನಾತ್ಮಕ ಶಕ್ತಿ ಪ್ರವಾಹ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜನರು ಮನೆ, ಕೆಲಸ ಮಾಡುವ ಸ್ಥಳಗಳಲ್ಲಿ ಗೂಬೆ ಪ್ರತಿಮೆ/ಫೋಟೋ ಇರಿಸಿಕೊಳ್ಳುತ್ತಾರೆ.

ದೀಪಾವಳಿ ಶುಭ ಸಂದರ್ಭದಲ್ಲಿಯೇ ವಿಶೇಷ ಗೂಬೆ ಹೊಸಪೇಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಎಲ್ಲರೂ ಪೂಜಿಸುವ ದೇವಿ ಲಕ್ಷ್ಮಿಗೆ ಗೂಬೆಯನ್ನೇಕೆ ವಾಹನ ಮಾಡಿಕೊಂಡಳು?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಿಜಯನಗರ
ವೈರಲ್ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved