LIVE NOW
Published : Jan 20, 2026, 06:58 AM ISTUpdated : Jan 20, 2026, 11:52 PM IST

Karnataka News Live: ಹಾವೇರಿಯಲ್ಲಿ ಅಮಾನವೀಯ ಕೃತ್ಯ - ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!

ಸಾರಾಂಶ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಮಹಿಳೆಯೊಬ್ಬರು ತನ್ನ ಮೊಮ್ಮಗಳ ಹೆಸರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ಜಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಗೃಹಲಕ್ಷ್ಮೀ ಹಣದಿಂದ ಹಲವಾರು ಕಡೆಗಳಲ್ಲಿ ಮಹಿಳೆಯರು ನಾನಾ ಕಾರ್ಯಗಳಿಗೆ ವಿನಿಯೋಗಿಸಿಕೊಂಡಿದ್ದಾರೆ. ತರಲಕಟ್ಟಿ ಗ್ರಾಮದ ಶರಣಮ್ಮ ಬ್ಯಾಳಿ ಅವರು ತಮ್ಮ ಮೊಮ್ಮಗಳು ಸಾನ್ವಿ ಬ್ಯಾಳಿ ಅವರಿಗೆ ಭವಿಷ್ಯದಲ್ಲಿ ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ಗೃಹಲಕ್ಷ್ಮೀ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ, ಸುಕನ್ಯಾ ಸಮೃದ್ಧಿ ಯೋಜನೆಗೆ ₹10 ಸಾವಿರ ಜಮೆ ಮಾಡಿದ್ದಾರೆ. ಮೊಮ್ಮಗಳ 18 ವರ್ಷದ ನಂತರ ಶಿಕ್ಷಣ, ಮದುವೆಗೆ ಅನುಕೂಲವಾಗಲಿಗೆ ಎಂದು ಮನಗಂಡು ಹಣ ಜಮೆ ಮಾಡಿ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

11:52 PM (IST) Jan 20

ಹಾವೇರಿಯಲ್ಲಿ ಅಮಾನವೀಯ ಕೃತ್ಯ - ನಿಷೇಧವಿದ್ದರೂ ಮಲಗುಂಡಿಗೆ ಇಳಿದ ಕಾರ್ಮಿಕರು!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ, ಇಬ್ಬರು ಮನೆ ಮಾಲೀಕರು ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮಲಗುಂಡಿ ಸ್ವಚ್ಛಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆಲಸವನ್ನು ನಿಲ್ಲಿಸಿ, ಕಾರ್ಮಿಕರನ್ನು ರಕ್ಷಿಸಿ, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Read Full Story

11:25 PM (IST) Jan 20

ರಾಯಚೂರು - ಎರಡು ಬುಲೆರೋಗಳ ನಡುವೆ ಭೀಕರ ಡಿಕ್ಕಿ; ಅಪ್ಪ-ಮಗ ಸೇರಿ ಐವರು ಬಲಿ, ಹಲವರು ಗಾಯ, ಮೂರು ಕುರಿಗಳು ಸಾವು!

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಎರಡು ಬುಲೆರೋ ವಾಹನಗಳ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಅಪ್ಪ-ಮಗ ಸೇರಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

10:58 PM (IST) Jan 20

ವೇಗವಾಗಿ ಬಂತು ಹೊಸ ಕಾರು, ಹೋಯ್ತು ಮಗುವಿನ ಪ್ರಾಣ - ತರಬೇತಿ ಇಲ್ಲದ ಚಾಲಕನ ಹುಚ್ಚಾಟಕ್ಕೆ 5 ವರ್ಷದ ಬಾಲಕ ಬಲಿ!

ಹಳಿಯಾಳ ತಾಲೂಕಿನ ಕಾವಲವಾಡ ಗ್ರಾಮದಲ್ಲಿ, ಚಾಲನಾ ತರಬೇತಿ ಇಲ್ಲದ ಚಾಲಕನೊಬ್ಬ ಇಕೋ ವ್ಯಾನ್ ಅನ್ನು ಮನೆಯ ಕಟ್ಟೆಯ ಮೇಲೆ ಹರಿಸಿದ ಪರಿಣಾಮ ಐದು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಬಾಲಕನ ಅಜ್ಜಿಗೂ ಗಂಭೀರ ಗಾಯಗಳಾಗಿದ್ದು, ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.
Read Full Story

10:02 PM (IST) Jan 20

ಆನೇಕಲ್‌ನಲ್ಲಿ ಅಗ್ನಿ ದುರಂತ - ಶಂಕಿತ ಬಾಂಗ್ಲಾ ವಲಸಿಗರಿದ್ದ ಸ್ಕ್ರಾಪ್ ಶೆಡ್‌ಗಳು ಸುಟ್ಟು ಭಸ್ಮ!

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಎಸ್. ಬಿಂಗೀಪುರ ಕೆರೆಯ ಬಳಿಯ ಸ್ಕ್ರಾಪ್ ಶೆಡ್‌ಗಳಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇತ್ತೀಚೆಗೆ ಶಂಕಿತ ಬಾಂಗ್ಲಾ ವಲಸಿಗರ ವಾಸಸ್ಥಳವೆಂದು ವಿವಾದಕ್ಕೆ ಕಾರಣವಾಗಿದ್ದ ಈ ಶೆಡ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

Read Full Story

09:42 PM (IST) Jan 20

ಫಸ್ಟ್‌ ಟೈಮ್ ರಿಯಲ್ 2ನೇ ಪತಿ, ಮುದ್ದಾದ ಮಗನ ಪರಿಚಯ ಮಾಡಿಕೊಟ್ಟ Bhagyalakshmi Serial ಸುಷ್ಮಾ ಕೆ ರಾವ್

Bhagyalakshmi Serial Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 25 ವರ್ಷಗಳಾಗಿವೆ, ಈ ಖುಷಿಯಲ್ಲಿ ಇವರ ಮಗ, ಪತಿಯ ಪರಿಚಯ ಮಾಡಿಕೊಡಲಾಗಿದೆ.

 

Read Full Story

09:37 PM (IST) Jan 20

ರೋಡ್‌ ಕಟಿಂಗ್‌ ಪರ್ಮಿಷನ್‌ಗೆ ಲಂಚ ಕೇಳಿದ ಅಧಿಕಾರಿ, ಬೆಂಗಳೂರಿನ ಭ್ರಷ್ಟಾಚಾರ ಕಂಡು ಕಂಗಾಲಾದ ಸ್ಟಾರ್ಟ್‌ಅಪ್‌ ಫೌಂಡರ್‌!

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಹ-ಸಂಸ್ಥಾಪಕರೊಬ್ಬರು, ತಮ್ಮ ಕಟ್ಟಡಕ್ಕೆ BWSSB ನೀರಿನ ಸಂಪರ್ಕ ಮತ್ತು ರೋಡ್ ಕಟಿಂಗ್ ಅನುಮತಿಗಾಗಿ ಅಧಿಕಾರಿಗಳು ಭಾರಿ ಲಂಚ ಕೇಳಿದ್ದಾರೆಂದು ಆರೋಪಿಸಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಮಾರ್ಗಗಳಿಗೆ ಬೇರೆ ಬೇರೆ ಲಂಚದ ದರಗಳನ್ನು ಮುಂದಿಟ್ಟಿದ್ದಾರೆ.

Read Full Story

09:13 PM (IST) Jan 20

Breaking - ವಿಜಯಪುರದಲ್ಲಿ ಐದು ಖಾಸಗಿ ಬಸ್‌ಗಳ ಸರಣಿ ಅಪಘಾತ; ತಪ್ಪಿದ ಅನಾಹುತ!

ವಿಜಯಪುರ ನಗರದ ಲಲಿತ ಮಹಲ್ ಹೋಟೆಲ್ ಬಳಿ ಐದು ಖಾಸಗಿ ಬಸ್‌ಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್ ನಿಂತಿದ್ದ ಬಸ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
Read Full Story

08:39 PM (IST) Jan 20

ಬೆಂಗಳೂರಿಗರಿಗೆ ಗುಡ್‌ನ್ಯೂಸ್ - ಹೊಸ ಮೆಟ್ರೋ ಪಿಂಕ್ ಲೈನ್ ಟ್ರಯಲ್ ರನ್ ಶುರು - ಮುಗಿಯಲಿದೆ ಟ್ರಾಫಿಕ್ ಗೋಳು!

ಬೆಂಗಳೂರಿನ 'ಪಿಂಕ್ ಲೈನ್' ಮೆಟ್ರೋ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದರ ಮನಮೋಹಕ ಡ್ರೋಣ್ ವಿಡಿಯೋ ವೈರಲ್ ಆಗಿದೆ. ಕಾಳೇನಾ ಅಗ್ರಹಾರದಿಂದ ತಾವರೆಕೆರೆವರೆಗಿನ ಮೊದಲ ಹಂತದ ಟ್ರಯಲ್ ರನ್ ಆರಂಭವಾಗಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
Read Full Story

08:01 PM (IST) Jan 20

ಭದ್ರಾವತಿಯಲ್ಲಿ ದಂಪತಿಗಳ ಅನುಮಾನಾಸ್ಪದ ಸಾವು - ವೈದ್ಯರು ನೀಡಿದ ಇಂಜೆಕ್ಷನ್ ಪ್ರಾಣಕ್ಕೆ ಕುತ್ತು ತಂದಿತೇ?

ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ವಯೋವೃದ್ಧ ದಂಪತಿಗಳಾದ ಚಂದ್ರಪ್ಪ ಮತ್ತು ಜಯಮ್ಮ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದವರು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು, ವೈದ್ಯರು ನೀಡಿದರೆನ್ನಲಾದ ಇಂಜೆಕ್ಷನ್ ಸಾವಿಗೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

Read Full Story

07:48 PM (IST) Jan 20

'ಎಂಜಿ ಹೆಕ್ಟರ್‌ ಕಾರಿದ್ದವನು ಬಡವ ಹೇಗಾಗ್ತಾನೆ..' ಬಿಗ್‌ಬಾಸ್‌ ಮುಗಿದರೂ ಅಶ್ವಿನಿ, ಧ್ರುವಂತ್‌ಗೆ ಈಗಲೂ ಗಿಲ್ಲಿಯೇ ಟಾರ್ಗೆಟ್‌!

ಬಿಗ್‌ಬಾಸ್‌ ಫಿನಾಲೆ ನಂತರ ವಿನ್ನರ್‌ ಗಿಲ್ಲಿ ನಾಪತ್ತೆಯಾಗಿದ್ದು, ಸಹ ಸ್ಪರ್ಧಿಗಳಾದ ಧ್ರುವಂತ್ ಮತ್ತು ಅಶ್ವಿನಿ, ಗಿಲ್ಲಿ ಬಡತನದ ವೇಷ ಹಾಕಿ ಸಿಂಪತಿ ಕಾರ್ಡ್ ಬಳಸಿ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಗಿಲ್ಲಿ ಬಳಿ ಎಂಜಿ ಹೆಕ್ಟರ್‌ ಕಾರು ಇರುವುದೇ ಇದಕ್ಕೆ ಸಾಕ್ಷಿ ಎಂದು ಧ್ರುವಂತ್ ಹೇಳಿದ್ದಾರೆ.

Read Full Story

07:33 PM (IST) Jan 20

ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಅಸಭ್ಯ ವರ್ತನೆ - ವೀಡಿಯೋ ಮಾಡ್ತಿದ್ದಂತೆ ಎಸ್ಕೇಪ್

ದೆಹಲಿಯ ಮೆಟ್ರೋ ನಿಲ್ದಾಣವೊಂದರಲ್ಲಿ ವ್ಯಕ್ತಿಯೊಬ್ಬ ಅನಾಗರಿಕನಂತೆ ವರ್ತಿಸಿದ್ದು, ಈ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ನಂತರ, ದೆಹಲಿ ಮೆಟ್ರೋ ನಿಗಮವು ಪ್ರಕಟಣೆ ಹೊರಡಿಸಿದೆ.

Read Full Story

07:21 PM (IST) Jan 20

ಮೈಸೂರು-ಕೇರಳ ನಡುವೆ 'ನಕಲಿ ಲೈಸೆನ್ಸ್' ಮಾಫಿಯಾ - ಆರ್‌ಟಿಒ ಅಧಿಕಾರಿಗಳ ಅಮಾನತು; ವಿಜಿಲೆನ್ಸ್ ತನಿಖೆಗೆ ಶಿಫಾರಸು!

ಮೈಸೂರು ಮತ್ತು ಕೇರಳದ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಶಾಮೀಲಾದ ಬೃಹತ್ ನಕಲಿ ಚಾಲನಾ ಪರವಾನಗಿ ಹಗರಣ ಬೆಳಕಿಗೆ ಬಂದಿದೆ. ಚಾಲನಾ ಪರೀಕ್ಷೆ ಇಲ್ಲದೆ ಮೈಸೂರಿನಿಂದ ಪರವಾನಗಿ ಪಡೆದು, ನಂತರ ಕೇರಳದಲ್ಲಿ ಹೊಸ ಪರವಾನಗಿ ನೀಡುವ ಜಾಲ ಸಕ್ರಿಯವಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳು ಅಮಾನತ್ತಾಗಿದ್ದಾರೆ.

Read Full Story

06:58 PM (IST) Jan 20

ಬಾಂಗ್ಲಾ ನುಸುಳುಕೋರರ ಬಗ್ಗೆ ಸುಳ್ಳು ಮಾಹಿತಿ, ಪ್ರಧಾನಿ ಮೋದಿ, ಅಜಿತ್ ದೋವಲ್ ವಿರುದ್ಧ ಸಂತೋಷ್ ಲಾಡ್ ಕಿಡಿ

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ, ಬೇಟಿ ಬಚಾವೋ ಯೋಜನೆಯ ವೈಫಲ್ಯ ಮತ್ತು ನುಸುಳುಕೋರರ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. 

Read Full Story

06:51 PM (IST) Jan 20

ಬಿಗ್‌ಬಾಸ್ ಮನೆಯಲ್ಲಿ ಕಾಸ್ಟ್ಯೂಮ್‌ಗಾಗಿ ಕಾವ್ಯಾ ಖರ್ಚು ಮಾಡಿದ್ದೆಷ್ಟು?

ಬಿಗ್ ಬಾಸ್ ಫಿನಾಲೆ ಹಂತದವರೆಗೆ ತಲುಪಿದ್ದ ಕಾವ್ಯಾ ಶೈವ, ಮನೆಯಿಂದ ಹೊರಬಂದ ನಂತರ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಮ್ಮ ಕಾಸ್ಟ್ಯೂಮ್‌ ಖರ್ಚಿನ ಬಗ್ಗೆ ಮಾತನಾಡಿದ ಅವರು, ಕಪ್ ಗೆಲ್ಲದಿದ್ದರೂ ಜನರ ಪ್ರೀತಿಯನ್ನು ಗೆದ್ದಿದ್ದೇ ದೊಡ್ಡ ಸಕ್ಸಸ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Read Full Story

06:48 PM (IST) Jan 20

ಲಕ್ಕುಂಡಿ ಉತ್ಖನನ - ಮನೆಯೊಳಗೆ ಪತ್ತೆಯಾಯ್ತು 10ನೇ ಶತಮಾನದ ಈಶ್ವರ ದೇಗುಲ; ಪುರಾತತ್ವ ಇಲಾಖೆ ಫುಲ್ ಖುಷ್!

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಉತ್ಖನನದ ವೇಳೆ ಮನೆಯೊಂದರ ಹಾಲ್ ಪಕ್ಕದಲ್ಲೇ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದೆ. ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಈ ದೇವಸ್ಥಾನದ ಆವರಣವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

Read Full Story

06:31 PM (IST) Jan 20

ಅಶೋಕ್, ವಿಜಯೇಂದ್ರ ಸೇರಿ ಈಗಿನ ರಾಜ್ಯ ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ- ಸಚಿವ ಬೋಸರಾಜು ಕಿಡಿ

Minister Boseraju on R Ashoka ವಿಪಕ್ಷ ನಾಯಕ ಆರ್. ಅಶೋಕ್ ಅವರ ಭ್ರಷ್ಟಾಚಾರ ಆರೋಪಕ್ಕೆ ಕೊಡಗಿನಲ್ಲಿ ತಿರುಗೇಟು ನೀಡಿರುವ ಸಚಿವ ಎನ್.ಎಸ್. ಬೋಸರಾಜ್, ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಕೇಂದ್ರದಿಂದ ಬರಬೇಕಾದ ಅನುದಾನ ತರುವಂತೆ ಸವಾಲು ಹಾಕಿದರು.

Read Full Story

06:25 PM (IST) Jan 20

ಯುವಕನ ಕಿರುಕುಳಕ್ಕೆ ಬಲಿಯಾದಳೇ 15ರ ಬಾಲಕಿ? ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ!

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಯುವಕನೊಬ್ಬನ ನಿರಂತರ ಕಿರುಕುಳದಿಂದ ನೊಂದ 15 ವರ್ಷದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿಗೆ ಯುವಕನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

06:15 PM (IST) Jan 20

ವೀಳ್ಯದೆಲೆ ಬೆಲೆ ಗಗನಕ್ಕೆ ಏರಿಕೆ, ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 200ರ ಗಡಿ ದಾಟಿದ ಪಾನ್ ಎಲೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ದಾಖಲೆಯ ಮಟ್ಟಕ್ಕೆ ಏರಿದ್ದು, ಒಂದು ಕಟ್ಟು ₹200ರ ಗಡಿ ದಾಟಿದೆ. ದಟ್ಟ ಮಂಜಿನಿಂದಾಗಿ ಇಳುವರಿ ಕುಸಿದಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಫೆಬ್ರವರಿವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲವೆಂದು ವ್ಯಾಪಾರಿಗಳು ತಿಳಿಸಿದ್ದಾರೆ.
Read Full Story

06:03 PM (IST) Jan 20

ನನ್ನ ಪೋಸ್ಟ್‌ ಅಶ್ವಿನಿ ಗೌಡಗೆ ನೀಡಿದ ಟಾಂಗ್‌ ಅಲ್ಲ, ಸ್ಪಷ್ಟನೆ ನೀಡಿದ ಕಾವ್ಯಾ!

ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿ ನಟರಾಜ್ ಕುರಿತು 'ಬಡವರ ಮಕ್ಕಳು ಬೆಳಿಬೇಕು' ಎಂದು ಹಾಕಿದ್ದ ಪೋಸ್ಟ್, ಸ್ಪರ್ಧಿ ಅಶ್ವಿನಿಗೆ ನೀಡಿದ ಟಾಂಗ್ ಎಂಬ ಚರ್ಚೆಗೆ ನಟಿ ಕಾವ್ಯಾ ಶೈವ ಸ್ಪಷ್ಟನೆ ನೀಡಿದ್ದಾರೆ. ಆ ಪೋಸ್ಟ್ ಯಾರನ್ನೂ ಉದ್ದೇಶಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. 

Read Full Story

05:56 PM (IST) Jan 20

ಕೋಲಾರ - ಗೊಂಬೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಿ ದೇಗುಲದಲ್ಲಿ ಭಯಾನಕ ಬೆಚ್ಚಿ ಬೀಳಿಸೋ ಪೂಜೆ ಮಾಡಿದ ಪೂಜಾರಿ ಹತ್ಯೆ!

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಸ್ಮಶಾನದ ದೇವಸ್ಥಾನದಲ್ಲಿ ಮಾಟ-ಮಂತ್ರ ಪೂಜೆ ನಡೆಸುತ್ತಿದ್ದ ಆಂಜಿನಪ್ಪ ಎಂಬ ಪೂಜಾರಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಮಾವಾಸ್ಯೆಯಂದು ನಡೆದ ಈ ಘಟನೆಯ ಹಿಂದೆ ವಾಮಾಚಾರದ ವೈಷಮ್ಯ, ಜಮೀನು ವಿವಾದ ಅಥವಾ ವೈಯಕ್ತಿಕ ದ್ವೇಷದ ಶಂಕೆ ವ್ಯಕ್ತವಾಗಿದೆ..

Read Full Story

05:54 PM (IST) Jan 20

ರಾಶಿ, ನಕ್ಷತ್ರ ನೋಡದೆ Bigg Boss ಕೂಡಿ ಹಾಕಿದ್ರು, ಇನ್ನೇನ್​ ಮಾಡೋಕಾಗತ್ತೆ? ಧ್ರುವಂತ್​ ಜೊತೆ ಜಗಳದ ಬಗ್ಗೆ ರಕ್ಷಿತಾ

ಬಿಗ್​ಬಾಸ್​ ಮನೆಯಲ್ಲಿ ತಮ್ಮ ನಿರಂತರ ಕಚ್ಚಾಟದಿಂದಲೇ ಗಮನ ಸೆಳೆದಿದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್, ಇದೀಗ ತಮ್ಮ ಜಗಳದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಮ್ಮಿಬ್ಬರದ್ದೂ ಒಂದೇ ರಾಶಿ, ಒಂದೇ ನಕ್ಷತ್ರ ಆಗಿದ್ದರಿಂದಲೇ ಅಷ್ಟು ಜಗಳವಾಡುತ್ತಿದ್ದೆವು ಎಂದಿದ್ದಾರೆ.

Read Full Story

05:48 PM (IST) Jan 20

ಮೊದಲ ದಿನವೇ ಎಲಿಮಿನೇಷನ್, ಈಗ ರನ್ನರ್ ಅಪ್! ಅಶ್ವಿನಿ ಗೌಡರನ್ನು ಹೊರದಬ್ಬಿ ಮಾತು ಉಳಿಸಿಕೊಂಡ ಕರಾವಳಿ ಕುವರಿ

ಬಿಗ್‌ ಬಾಸ್ ಸೀಸನ್ 12ರ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಮ್ಮ ದಿಟ್ಟ ಆಟದಿಂದ ಗಿಲ್ಲಿ ನಟನಂತಹ ಪ್ರಬಲ ಸ್ಪರ್ಧಿಗಳಿಗೆ ಸವಾಲೆಸೆದರು. ಮೊದಲ ದಿನವೇ ಎಲಿಮಿನೇಷನ್ ಅಂಚಿನಲ್ಲಿದ್ದರೂ, ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಅವರ ಜರ್ನಿಯ ವಿಶೇಷ.
Read Full Story

05:36 PM (IST) Jan 20

BMTC ನಿಗಮಕ್ಕೆ ಸಾರಿಗೆ ಸಿಬ್ಬಂದಿಯಿಂದಲೇ ಕನ್ನ; ಕಂಡಕ್ಟರ್‌ಗಳ QR Code ಕಳ್ಳಾಟ ಬಯಲು!

ಬಿಎಂಟಿಸಿ ಕಂಡಕ್ಟರ್‌ಗಳು ಅಧಿಕೃತ ಯುಪಿಐ ಸ್ಕ್ಯಾನರ್‌ಗಳನ್ನು ಬದಲಿಸಿ ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ಹಣ ಲಪಟಾಯಿಸುತ್ತಿದ್ದಾರೆ. ಇದರ ಜೊತೆಗೆ, ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ಕನ್ನಡ ಬಾರದ ಮಹಿಳೆಯರಿಗೆ ನೀಡಿ ಅವರಿಂದಲೂ ಹಣ ವಸೂಲಿ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. 

Read Full Story

05:31 PM (IST) Jan 20

ಅಬ್ಬಬ್ಬಾ! ಈ ಸ್ಟಾರ್​ ನಟರು ನೋಡಲು ಸೇಮ್​ ಟು ಸೇಮ್ - ಕುತೂಹಲದ ಫೋಟೋಸ್​ ವೈರಲ್​

ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬರನ್ನೇ ಹೋಲುವ ಇನ್ನೊಬ್ಬ ನಟರಿರುವುದು ಸಾಮಾನ್ಯ. ತಮಿಳು ನಟ ಸೂರ್ಯ ಮತ್ತು ಕನ್ನಡದ ಅಭಿಷೇಕ್ ಶ್ರೀಕಾಂತ್, ಶ್ರೀಮುರಳಿ ಮತ್ತು ರಾಣವ್ ಗೌಡ ಸೇರಿದಂತೆ ಹಲವು ನಟರ ಮುಖ ಹೋಲಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

Read Full Story

05:28 PM (IST) Jan 20

ಗಿಲ್ಲಿ ಗೆಲುವನ್ನು ಸಹಿಸದ ರಾಜಮಾತೆ! ನಾನು ಆ ಇಬ್ಬರನ್ನಂತೂ ಕ್ಷಮಿಸೊಲ್ಲವೆಂದ ಅಶ್ವಿನ್ ಗೌಡ

ಬಿಗ್‌ ಬಾಸ್​​​ ಮನೆಯ ರಾಜಮಾತೆ ಅಶ್ವಿನಿ ಗೌಡ ಫುಲ್ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ಗಿಲ್ಲಿ ನಟನ ಗೆಲುವು. ನಲ್ಲಿ ಮೂಳೆ ಗಿಲ್ಲಿ ನಾನು ಬಡವರ ಮನೆ ಹುಡುಗ ಅಂತ ಬೋರ್ಡ್​ ಹಾಕ್ಕೊಂಡು ಗೆದ್ದಿದ್ದಾನೆ ಅಂತ ಅಶ್ವಿನಿ ಗೌಡ ಕೌಂಟರ್​ ಕೊಟ್ಟಿದ್ದಾರೆ. ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಹೇಳಿದ್ದೇನು? 

 

Read Full Story

05:05 PM (IST) Jan 20

ಕೊಲೆ ಕೇಸಲ್ಲಿ ಎಫ್‌ಐಆರ್ ದಾಖಲಿಸಲು ಹಿಂದೇಟು - ಜ್ಞಾನಭಾರತಿ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಅಮಾನತು!

ಬೆಂಗಳೂರಿನ ಜ್ಞಾನಭಾರತಿ ಠಾಣೆಯ ಇನ್ಸ್‌ಪೆಕ್ಟರ್ ರವಿಕುಮಾರ್ ಅವರನ್ನು ಕೊಲೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎಸಗಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ. ಠಾಣಾ ವ್ಯಾಪ್ತಿಯ ಗೊಂದಲ ಸೃಷ್ಟಿಸಿ, ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದರಿಂದ ತನಿಖೆ ಕುಂಠಿತಗೊಂಡಿತ್ತು.

Read Full Story

05:05 PM (IST) Jan 20

ಬೆಳಗಾವಿ ಹಿಂಡಲಗಾ ಜೈಲಲ್ಲಿ ಖೈದಿಗಳ ನಡುವೆ ಹೊಡೆದಾಟ - ಮಾತಾಡೋಕೆ ಫೋನ್ ಸಿಗಲಿಲ್ಲ ಅಂತ ತಲೆ ಜಜ್ಜಿಬಿಟ್ಟ!

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಫೋನ್ ಕಾಲ್ ಬಳಸುವ ವಿಚಾರಕ್ಕೆ ಇಬ್ಬರು ಖೈದಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿದೆ. ಫಯಾನ್ ಎಂಬ ಖೈದಿಯು ಸುರೇಶ್ ಎಂಬಾತನ ತಲೆಗೆ ಕಲ್ಲಿನಿಂದ ಜಜ್ಜಿ ಗಂಭೀರವಾಗಿ ಗಾಯಗೊಳಿಸಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

04:54 PM (IST) Jan 20

ಶೂಟಿಂಗ್‌ನಲ್ಲಿ ಲಕ್ಷಾಂತರ ನಷ್ಟ, ಬಿಗ್‌ಬಾಸ್ ಮುಗಿದ ಬೆನ್ನಲ್ಲೇ ನಟ ಸುದೀಪ್ ವಿರುದ್ಧ ಬೆಂಗಳೂರು ಕಮಿಷನರ್‌ ಗೆ ದೂರು!

 ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಪಟೇಲ್, ನಟ ಸುದೀಪ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ. 2016ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಚಿತ್ರೀಕರಣ ತಂಡವು ತೋಟವನ್ನು ಹಾಳುಗೆಡವಿ, ಪರಿಹಾರ ನೀಡದೆ ವಂಚಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Read Full Story

04:28 PM (IST) Jan 20

ಕನ್ನಡ ಧ್ವಜಕ್ಕೆ ಅಪಮಾನಿಸಿದ್ದ ಸಿಲಂಬರಸನ್ ಅರೆಸ್ಟ್ - ಕೊನೆಗೂ ಮಂಡಿಯೂರಿ ಕ್ಷಮೆ ಕೇಳಿದ ಕಿಡಿಗೇಡಿ!

ತಮಿಳುನಾಡಿನಲ್ಲಿ ಅಯ್ಯಪ್ಪ ಮಾಲಾದಾರಿಗಳ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಕನ್ನಡ ಬಾವುಟಕ್ಕೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಥೇನಿ ಜಿಲ್ಲಾ ಎಸ್ಪಿ ಚಾಮರಾಜನಗರ ಎಸ್ಪಿಗೆ ಪತ್ರ ಬರೆದಿದ್ದಾರೆ. ಗಲಾಟೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಓರ್ವನನ್ನು ಬಂಧಿಸಲಾಗಿದೆ.

Read Full Story

04:22 PM (IST) Jan 20

ಕೊನೆಗೂ ಬಯಲಾಯ್ತು ಗಿಲ್ಲಿಯ ನಿಜವಾದ ಗೆಲುವಿನ ಸೀಕ್ರೆಟ್‌! ಬಿಗ್ ಬಾಸ್ ಗೆದ್ದ ಗಿಲ್ಲಿ, ವರ್ಕ್ ಔಟ್ ಆಗಿದ್ದು ಎಲ್ಲಿ?

ಆರು ರಿಯಾಲಿಟಿ ಶೋಗಳಲ್ಲಿ ಸೋತಿದ್ದ ಮಳವಳ್ಳಿಯ ಹಳ್ಳಿ ಹೈದ ಗಿಲ್ಲಿ, ಬಿಗ್ ಬಾಸ್ ಸೀಸನ್ 12 ಗೆದ್ದು ಇತಿಹಾಸ ಬರೆದಿದ್ದಾರೆ. ಅವರ ಸರಳ ವ್ಯಕ್ತಿತ್ವ, ಹಾಸ್ಯ ಪ್ರಜ್ಞೆ ಮತ್ತು ನಿರಂತರ ಮನರಂಜನೆಯೇ ಈ ಗೆಲುವಿಗೆ ಕಾರಣವಾಗಿದ್ದು, ಅವರ ವಿಜಯೋತ್ಸವದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
Read Full Story

04:14 PM (IST) Jan 20

'ಅವ್ರು ತಂಗಿ ಎನ್ನಲಿ ಬಿಡಿ, ಹುಡುಗನಲ್ಲಿ ಆ ಗುಣನೂ ಇರಬೇಕ್ರಿ' - ಪ್ರಶ್ನೆ ಕೇಳ್ದೋರನ್ನೇ ಸುಸ್ತು ಮಾಡಿದ ರಕ್ಷಿತಾ!

ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಸಹ ಸ್ಪರ್ಧಿ ಗಿಲ್ಲಿಯ ಮೇಲೆ ತಮಗಿದ್ದ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ತಮ್ಮನ್ನು 'ತಂಗಿ' ಎಂದು ಕರೆದಿದ್ದಕ್ಕೆ, ಹುಡುಗನಲ್ಲಿ ಅಣ್ಣ, ತಮ್ಮ, ಮಗುವಿನಂತಹ ಎಲ್ಲಾ ಗುಣಗಳಿರಬೇಕು ಎಂದು ಜಾಣ್ಮೆಯಿಂದ ಉತ್ತರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
Read Full Story

03:54 PM (IST) Jan 20

ಮರಳು ದಂಧೆ ವಿರುದ್ಧ ಸಮರ ಸಾರಿದ ದೇವದುರ್ಗ ಶಾಸಕಿಗೆ ಮನೆಗೆ ಬಂದು ಧಮ್ಕಿ, ಕಾರಿನ ಮೇಲೆ ಟಿಪ್ಪರ್‌ ಹರಿಸಿ ಹತ್ಯೆಗೆ ಯತ್ನ!

ದೇವದುರ್ಗದಲ್ಲಿ ಕೃಷ್ಣಾ ನದಿ ಪಾತ್ರದ ಅಕ್ರಮ ಮರಳು ಸಾಗಾಣಿಕೆ ವಿರೋಧಿಸಿದ್ದಕ್ಕೆ ಶಾಸಕಿ ಕರೆಮ್ಮ ಜಿ. ನಾಯಕರಿಗೆ ಮರಳು ದಂಧೆಕೋರರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಜೀವಭಯದಲ್ಲಿರುವುದಾಗಿ ಹೇಳಿರುವ ಶಾಸಕಿ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ. 

Read Full Story

03:42 PM (IST) Jan 20

ಅಪ್ಪನ ರಾಸಲೀಲೆ ಬೆನ್ನಲ್ಲೇ 'ಗೋಲ್ಡ್​ ಸ್ಮಗ್ಲರ್' ಪುತ್ರಿಗಾಗಿ ಹುಡುಕಾಟ - ಎಲ್ಲಿದ್ದಾಳೆ, ಹೇಗಿದ್ದಾಳೆ ನಟಿ ರನ್ಯಾ ರಾವ್​?

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅವರ ಮಗಳು ನಟಿ ರನ್ಯಾ ರಾವ್ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಕಳೆದ ವರ್ಷವೇ ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ರನ್ಯಾ, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
Read Full Story

03:31 PM (IST) Jan 20

ಬಿಗ್‌ ಬಾಸ್ ಗೆದ್ದ ಗಿಲ್ಲಿ ಮದ್ವೆ ಫಿಕ್ಸ್! ಮದುವೆ ಆಫರ್ ಬಗ್ಗೆ ಖುಷಿಯಲ್ಲಿ ಬಾಯ್ಬಿಟ್ಟ ಗಿಲ್ಲಿ ತಾಯಿ!

ಬಿಗ್​ಬಾಸ್​ ಸೀಸನ್​ 12ರ ವಿಜೇತ, 'ನಲ್ಲಿ ಮೂಳೆ ಸ್ಟಾರ್' ಗಿಲ್ಲಿ ನಟನಿಗೆ ಗೆಲುವಿನ ಬೆನ್ನಲ್ಲೇ ಮದುವೆ ಪ್ರಸ್ತಾಪವೊಂದು ಬಂದಿದೆ. ಗಿಲ್ಲಿ ಮತ್ತು ಕಾವ್ಯ ಜೋಡಿಯ ಮದುವೆಯ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದು, ಗಿಲ್ಲಿಯ ತಾಯಿಯೂ ಮಗನ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Read Full Story

03:01 PM (IST) Jan 20

ಬಿಎಂಟಿಸಿ ಟಿಕೆಟ್ ಹಣ ಗುಳುಂ - ಸ್ವಂತ UPI ಸ್ಕ್ಯಾನರ್ ಬಳಸಿ ಹಣ ಲೂಟಿ ಮಾಡುತ್ತಿದ್ದ 3 ಕಂಡಕ್ಟರ್‌ಗಳ ಅಮಾನತು!

ಬಿಎಂಟಿಸಿ ಆದಾಯಕ್ಕೆ ಕನ್ನ ಹಾಕುತ್ತಿದ್ದ ಮೂವರು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ. ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ ಬಳಸಿ ಟಿಕೆಟ್ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಈ ಅಕ್ರಮವನ್ನು ಸಂಸ್ಥೆ ಪತ್ತೆಹಚ್ಚಿದೆ.  ಬಿಎಂಟಿಸಿ ಶೀಘ್ರದಲ್ಲೇ ಡೈನಾಮಿಕ್ ಕ್ಯೂಆರ್ ಕೋಡ್ ಜಾರಿ ಮಾಡಲಿದೆ

Read Full Story

02:51 PM (IST) Jan 20

DGP Ramachandra Rao ರಂಗಿನಾಟಕ್ಕೆ ನಗುನಗುತ್ತಾ ಸಹಕರಿಸಿದ ಮಹಿಳಾ ಮಣಿಗಳು ಯಾರವರು?

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆಯ ವಿಡಿಯೋವೊಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ತಮ್ಮ ಕಚೇರಿಯಲ್ಲಿಯೇ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ವಿಡಿಯೋದಲ್ಲಿದ್ದು, ಇದು ಹನಿಟ್ರ್ಯಾಪೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಚರ್ಚೆ ಶುರುವಾಗಿದೆ. ಯಾರಿವರು?

Read Full Story

02:37 PM (IST) Jan 20

ಬೆಂಗಳೂರು ಆರ್‌ಟಿಒ ಬ್ರಹ್ಮಾಂಡ ಭ್ರಷ್ಟಾಚಾರ, ಕೂತಲ್ಲೇ ಗುಜರಾತ್, ಮಹಾರಾಷ್ಟ್ರ ವಾಹನಗಳಿಗೆ ಎಫ್‌ಸಿ!

ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿದ್ದ ವಾಹನಗಳಿಗೆ ಭೌತಿಕ ಪರಿಶೀಲನೆ ಇಲ್ಲದೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿರುವ ಬೃಹತ್ ಹಗರಣವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿದೆ.  

Read Full Story

02:20 PM (IST) Jan 20

ನಟಿ ಪವಿತ್ರಾ ಗೌಡಗೆ 'ಮನೆ ಊಟ' ಕೊಡಲೇಬೇಡಿ; ಸೆಷನ್ಸ್ ಕೋರ್ಟ್ ಊಟದ ಆದೇಶಕ್ಕೆ ಹೈಕೋರ್ಟ್ ತಡೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರಿಗೆ ಮನೆ ಊಟ ನೀಡಲು ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ ನ್ಯಾಯಾಲಯ, ಜೈಲು ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದೆ. 

Read Full Story

02:13 PM (IST) Jan 20

BBK 12 - ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಲೇ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಅಶ್ವಿನಿ ಗೌಡ!

ಬಿಗ್​ಬಾಸ್​ ಮನೆಯಲ್ಲಿ ಜಗಳದ ಮೂಲಕವೇ ಸದ್ದು ಮಾಡಿದ್ದ ಅಶ್ವಿನಿ ಗೌಡ, ಇದೀಗ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಸ್ಪರ್ಧೆಯಲ್ಲಿದ್ದಾಗ ನಡೆದ ಘಟನೆಗಳಿಗಾಗಿ ರಕ್ಷಿತಾ ಬಳಿ ಹಲವು ಬಾರಿ ಕ್ಷಮೆ ಕೇಳಿದ್ದಾಗಿ ಹೇಳಿಕೊಂಡಿರುವ ಅಶ್ವಿನಿ, ಕಣ್ಣೀರಿಟ್ಟಿದ್ದು ಯಾಕೆ? 

Read Full Story

01:26 PM (IST) Jan 20

ಸರ್ಕಾರಕ್ಕೆ ಲಕ್ಕುಂಡಿ ನಿಧಿ ಬೇಕು, ಇತಿಹಾಸ ಉತ್ಖನನ ಮಾಡೋದಕ್ಕೆ ಟೂಲ್ ಕಿಟ್ ಕೊಡಿಸುವ ಯೋಗ್ಯತೆ ಇಲ್ವಾ?

ಐತಿಹಾಸಿಕ ಲಕ್ಕುಂಡಿಯಲ್ಲಿ ಚಾಲುಕ್ಯರ ಕಾಲದ ವೈಭವವನ್ನು ಶೋಧಿಸಲು ಪುರಾತತ್ವ ಇಲಾಖೆ ಉತ್ಖನನ ಆರಂಭಿಸಿದೆ. ಆದರೆ, ಐದು ದಿನ ಕಳೆದರೂ ಸರ್ಕಾರವು ಅವಶೇಷಗಳನ್ನು ಹೊರತೆಗೆಯಲು ಬೇಕಾದ ಸೂಕ್ಷ್ಮ ಉಪಕರಣಗಳ ಕಿಟ್ ಪೂರೈಸಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಕೈಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

Read Full Story

More Trending News