Published : Jan 19, 2026, 06:50 AM ISTUpdated : Jan 19, 2026, 10:33 PM IST

Karnataka News Live: ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಸಾರಾಂಶ

ದಾವಣಗೆರೆ: ಸಿಎಂ ಬದಲಾವಣೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ಶೀಘ್ರ ಇತ್ಯರ್ಥ ಆಗಬೇಕೆಂಬ ಆಸೆ ಎಲ್ಲರದ್ದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಮ್ಮದು ಈ ಅವಧಿಗೆ ಅಲ್ಲ. 2028ರ ಚುನಾವಣೆಗೆ ಬೇಡಿಕೆ ಇರುವುದು. ನಮ್ಮ ಅಭಿಮಾನಿಗಳು ಮುಂಗಡವಾಗಿ ಕ್ಲೇಮ್ ಮಾಡುತ್ತಿದ್ದಾರೆ. ಈಗ ಯಾರೂ ಸಹ ಯಾರಿಗೂ ಕನ್ಫ್ಯೂಸ್ ಮಾಡಬೇಡಿ. ಈಗ ಯಾರು ಆಗುವರೋ ಆಗಲಿ, ನಮ್ಮದು ಸಪೋರ್ಟ್ ಇದ್ದೇ ಇರುತ್ತದೆ ಎಂದು ಹೇಳಿದರು. ಹಲಿಗೆ ಹೋಗುವುದು, ಬರುವುದು ಇದ್ದೇ ಇರುತ್ತದೆ. ಪ್ರತಿ ಸಲವೂ ಹೋಗುತ್ತಿರುತ್ತಾರೆ. ಈಗ ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹೋಗಿರಬಹುದು ಎಂದರು.

PUC EXAM

10:33 PM (IST) Jan 19

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಫೆ.10 ರಿಂದ ಫೆ.25ರ ವರೆಗೆ ಅನ್ವಯವಾಗುವಂತೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಮಹತ್ವದ ತಾಕೀತು ಮಾಡಿದೆ.

Read Full Story

08:56 PM (IST) Jan 19

ಗಿಲ್ಲಿ ನಟ, ರಕ್ಷಿತಾ TO ಅಶ್ವಿನಿ ಗೌಡ, ಈ ಬಾರಿಯ ಬಿಗ್ ಬಾಸ್ ಲೈಫ್ ಜಿಂಗಾಲಾಲ

ಗಿಲ್ಲಿ ಸೇರಿ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಅತೀ ದೊಡ್ಡ ಪಾಠ, ಗಿಲ್ಲಿ ಗೆಲುವಿನೊಂದಿಗೆ ಬಿಗ್ ಬಾಸ್ 12 ಅಂತ್ಯಗೊಂಡಿದೆ. ಸಂಭ್ರಮಾಚರಣೆ ಜೋರಾಗಿದೆ. ಈ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಪಾಠ ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ. ಏನದು?

 

Read Full Story

07:52 PM (IST) Jan 19

ದೇಶದ ಮೊದಲ ಸರಣಿ ಹಂತಕಿ, ಬೆಂಗಳೂರಿನ ಮಲ್ಲಿಕಾ ಕೊಲೆಗಾತಿಯಾಗಿದ್ದು ಯಾಕೆ? ಅವಳಿಗ್ಯಾಕೆ ಆ ಬಿರುದು?

ಕೆ.ಡಿ. ಕೆಂಪಮ್ಮ ಅಲಿಯಾಸ್ 'ಸೈನೈಡ್ ಮಲ್ಲಿಕಾ', ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿ. ಆಕೆ ದೇವಾಲಯಗಳಲ್ಲಿ ಮಹಿಳಾ ಭಕ್ತರೊಂದಿಗೆ ಸ್ನೇಹ ಬೆಳೆಸಿ, ಸೈನೈಡ್ ಮಿಶ್ರಿತ ತೀರ್ಥ ನೀಡಿ ಕೊಂದು ಅವರ ಚಿನ್ನಾಭರಣಗಳನ್ನು ದೋಚುತ್ತಿದ್ದಳು.  

Read Full Story

07:19 PM (IST) Jan 19

ಗಿಲ್ಲಿ ನಟ ರಾಜಕೀಯ ಎಂಟ್ರಿ - ವೋಟು ಕೇಳಿದ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ವಿಶ್ ಮಾಡಿದ ಕುಮಾರಸ್ವಾಮಿ!

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟನಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಶುಭ ಕೋರಿದ್ದಾರೆ. ಈ ರಾಜಕೀಯ ನಾಯಕರ ಶುಭಾಶಯಗಳು, ಗಿಲ್ಲಿ ನಟ ರಾಜಕೀಯಕ್ಕೆ ಬರುತ್ತಾರೆಯೇ ಮತ್ತು ಯಾವ ಪಕ್ಷವನ್ನು ಸೇರಬಹುದು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

06:39 PM (IST) Jan 19

ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅಮಾನತಿಗೆ ಸಿಎಂ ಖಡಕ್ ಸೂಚನೆ

ಡಿಜಿಪಿ ರಾಮಚಂದ್ರ ರಾವ್ ಅವರ ವಿವಾದಾತ್ಮಕ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಆರೋಪವನ್ನು ಸುಳ್ಳು ಮತ್ತು ಫ್ಯಾಬ್ರಿಕೇಟೆಡ್ ಎಂದು ತಳ್ಳಿಹಾಕಿರುವ ರಾಮಚಂದ್ರ ರಾವ್, ರಜೆಯ ಮೇಲೆ ತೆರಳಿದೆ.

Read Full Story

06:31 PM (IST) Jan 19

ರಾಸಲೀಲೆ ವಿಡಿಯೋ ಎಫೆಕ್ಟ್ - 10 ದಿನ ರಜೆ ಮೇಲೆ ತೆರಳಿದ ಡಿಜಿಪಿ ರಾಮಚಂದ್ರ ರಾವ್; ಮೊಬೈಲ್ ಸ್ವಿಚ್ಡ್ ಆಫ್!

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು 10 ದಿನಗಳ ರಜೆ ಮೇಲೆ ತೆರಳಿ ಅಜ್ಞಾತವಾಸಕ್ಕೆ ಜಾರಿದ್ದಾರೆ. ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ಈ ಪ್ರಕರಣವು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿದೆ.

Read Full Story

06:13 PM (IST) Jan 19

ಬೆಂಗಳೂರಿನಲ್ಲಿ 90 ಲಕ್ಷ ಸಂಬಳ ಸಾಕಾ? ಎನ್‌ಆರ್‌ಐ ಪ್ರಶ್ನೆಗೆ ಇಂಟರ್‌ನೆಟ್‌ನಲ್ಲಿ ಪರ-ವಿರೋಧ ಚರ್ಚೆ!

ಅಮೆರಿಕದಲ್ಲಿ 1.6 ಕೋಟಿ ರೂ. ಸಂಬಳ ಪಡೆಯುವ ಎನ್‌ಆರ್‌ಐ ವ್ಯಕ್ತಿಯೊಬ್ಬರು, ಪೋಷಕರ ಆರೈಕೆಗಾಗಿ ಬೆಂಗಳೂರಿಗೆ ಮರಳಲು ಯೋಚಿಸುತ್ತಿದ್ದಾರೆ. ಬೆಂಗಳೂರಿನ ಕಂಪನಿಯೊಂದು 90 ಲಕ್ಷ ರೂ. ಸಂಬಳದ ಆಫರ್ ನೀಡಿದ್ದು, ಈ ಸಂಬಳ ಉತ್ತಮ ಜೀವನಕ್ಕೆ ಸಾಕಾಗುವುದೇ ಎಂಬ ಗೊಂದಲವನ್ನು ರೆಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story

05:39 PM (IST) Jan 19

ಈಗಲೂ 'ನನಗೆ ಗೊತ್ತಿಲ್ಲ' ಎನ್ನುವುದು ಉತ್ತರವಾಗಬಾರದು - ಡಿಜಿಪಿ ವಿರುದ್ಧ ಕ್ರಮಕ್ಕೆ ಸುರೇಶ್‌ಕುಮಾರ್‌ ಒತ್ತಾಯ!

ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ಕಚೇರಿಯಲ್ಲಿನ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ 'ಎಐ ಜನರೇಟೆಡ್' ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದು, ಬಿಜೆಪಿ ನಾಯಕ ಎಸ್. ಸುರೇಶ್ ಕುಮಾರ್ ಸರ್ಕಾರದ ಮೌನವನ್ನು ಪ್ರಶ್ನಿಸಿ ತೀವ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.
Read Full Story

05:33 PM (IST) Jan 19

ಬೆಂಗಳೂರಿಗರ ಅಚ್ಚುಮೆಚ್ಚಿನ ಆಹಾರ ಬಿರಿಯಾನಿ - ಸ್ವಿಗ್ಗಿಯಲ್ಲಿ ದಾಖಲೆಯ 161 ಲಕ್ಷ ಬಿರಿಯಾನಿ ಆರ್ಡರ್!

ಸ್ವಿಗ್ಗಿಯ 2025ರ ಆಹಾರ ವರದಿಯ ಪ್ರಕಾರ, ಬೆಂಗಳೂರಿಗರು ಒಂದೇ ವರ್ಷದಲ್ಲಿ 161 ಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಬಿರಿಯಾನಿಯ ಜೊತೆಗೆ, ಇಡ್ಲಿ, ದೋಸೆಯಂತಹ ದಕ್ಷಿಣ ಭಾರತೀಯ ಖಾದ್ಯಗಳು ಮತ್ತು ಗುಲಾಬ್ ಜಾಮೂನ್‌ನಂತಹ ಸಿಹಿತಿಂಡಿಗಳಿಗೂ ಹೆಚ್ಚಿನ ಬೇಡಿಕೆಯಿದೆ. 

Read Full Story

04:45 PM (IST) Jan 19

ರಾಸಲೀಲೆ ರಾಮಚಂದ್ರನನ್ನು ಗೇಟಿನ ಬಾಗಿಲಲ್ಲೇ ವಾಪಸ್ ಕಳಿಸಿದ ಪರಮೇಶ್ವರ! ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ!

ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ ಆರೋಪ ಎದುರಿಸುತ್ತಿರುವ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಭೇಟಿಯಾಗಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರಾಕರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

Read Full Story

04:39 PM (IST) Jan 19

ದೆಹಲಿ ಭೇಟಿಯ ಗುಟ್ಟು ಬಿಚ್ಚಿಟ್ಟ ಡಿಸಿಎಂ ಡಿಕೆ ಶಿವಕುಮಾರ್, ಕಾಲವೇ ಉತ್ತರ ನೀಡಲಿದೆ ಎಂದ್ರು!

ದೆಹಲಿ ಪ್ರವಾಸದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಭೇಟಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಶಾಸಕರ ಬೆಂಬಲ ತಮಗಿದೆ ಎಂದು ಹೇಳಿದ್ದು, ಶೀಘ್ರದಲ್ಲೇ ಜಿಬಿಎ ಹಾಗೂ ಜಿಪಂ-ತಾಪಂ ಚುನಾವಣೆಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.
Read Full Story

04:39 PM (IST) Jan 19

Kannada Serial TRP - ಧಾರಾವಾಹಿಗಳ ಮಧ್ಯೆ ಪೈಪೋಟಿ; ನಂ 1 ಸ್ಥಾನ ಪಡೆದ ಸೀರಿಯಲ್‌ ಯಾವುದು?

Kannada Serial TRP: ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್‌ ಹೊರಬಿದ್ದಿದೆ. ವಾರದಿಂದ ವಾರಕ್ಕೆ ಧಾರಾವಾಹಿಗಳಲ್ಲಿರುವ ಟ್ವಿಸ್ಟ್‌ಗಳಿಂದ ಟಿಆರ್‌ಪಿ ಬದಲಾಗುವುದು. ಹಾಗೆಯೇ ಈ ವಾರ ಕೂಡ ಹಾಗೆ ಆಗಿದೆ. ಹಾಗಿದ್ದರೆ ಏನಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story

04:38 PM (IST) Jan 19

ರಾಮಚಂದ್ರನ ಕಾಮಪ್ರಸಂಗ - ಇದು 'AI' ಸೃಷ್ಟಿಯೋ ಅಥವಾ ಹಳೇ ವಿಡಿಯೋವೋ?

ಡಿಜಿಪಿ ರಾಮಚಂದ್ರ ರಾವ್ ಅವರ ಅಸಭ್ಯ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ 10 ವರ್ಷ ಹಳೆಯದು ಮತ್ತು ಎಐ-ರಚಿತ ಎಂದು ರಾವ್ ಹೇಳಿಕೊಂಡರೂ, ಅದರ ಸತ್ಯಾಸತ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Read Full Story

03:45 PM (IST) Jan 19

ಐಜಿಪಿ ರಾಮಚಂದ್ರನ ರಂಗಿನಾಟ; ಎದೆ ಭಾಗಕ್ಕೆ ಮುತ್ತು, ಲಿಪ್‌ಲಾಕ್ 47 ಸೆಕೆಂಡ್‌ನ ವಿಡಿಯೋದಲ್ಲಿ ಕಂಡಿದ್ದಿಷ್ಟು!

ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದೆನ್ನಲಾದ 47 ಸೆಕೆಂಡ್‌ಗಳ ವಿಡಿಯೋ ಲೀಕ್ ಆಗಿದ್ದು, ಕಚೇರಿಯಲ್ಲೇ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಖಾಕಿ ಸಮವಸ್ತ್ರದಲ್ಲೇ ಮಹಿಳೆಯರಿಗೆ ಮುತ್ತಿಕ್ಕುವುದು, ಖಾಸಗಿ ಭಾಗಗಳನ್ನು ಮುಟ್ಟುವಂತಹ ವಿಕೃತ ದೃಶ್ಯಗಳು ವಿಡಿಯೋದಲ್ಲಿವೆ.

Read Full Story

03:26 PM (IST) Jan 19

ದಾವಣಗೆರೆ ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು, ಸಾರ್ವಜನಿಕರಿಗೆ ಪ್ರವೇಶ ನಿಷೇಧ, ವೈದ್ಯರ ತೀವ್ರ ನಿಗಾ

ದಾವಣಗೆರೆಯ ಆನಗೋಡು ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸರಣಿಯಾಗಿ ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಶಂಕಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯವನ್ನು ಮುಚ್ಚಿ ಉಳಿದ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Read Full Story

02:58 PM (IST) Jan 19

ಬೆಂಗಳೂರಿಗೆ ಟಕ್ಕರ್ ಕೊಡೋಕೆ ಹೋಗಿ ಕೇಂದ್ರದಿಂದ ಮತ್ತೆ ಛೀಮಾರಿ ಹಾಕಿಸಿಕೊಂಡ ತಮಿಳುನಾಡು

Karnataka Vs Tamlinadu: ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಈ ಹಿಂದೆಯೇ ಉಡಾನ್‌ ಪಟ್ಟಿಯಿಂದ ಕೈಬಿಡಲಾಗಿತ್ತು.

Read Full Story

02:57 PM (IST) Jan 19

ರಕ್ಷಿತಾ ಶೆಟ್ಟಿ S ಕ್ಯಾಟಗರಿ ಎಂದರೇನು?; ಕೊನೆಗೂ ಸ್ಪಷ್ಟನೆ ಕೊಟ್ಟ Ashwini Gowda!

Bigg Boss Kannada Season 12 Ashwini Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮಧ್ಯೆ ಜಗಳ ಆಗಿತ್ತು. ಆ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾ ಎಸ್‌ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಎಸ್‌ ಕ್ಯಾಟಗರಿ ಅಂದರೆ ಏನು ಎಂದು ಅವರು ಮಾತನಾಡಿದ್ದಾರೆ.

 

Read Full Story

02:55 PM (IST) Jan 19

ರಾಸಲೀಲೆ ಆರೋಪ ತಳ್ಳಿಹಾಕಿದ ಐಜಿಪಿ ರಾಮಚಂದ್ರ ರಾವ್; ಅದು ಎಐ ವಿಡಿಯೋ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ!

ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವೈರಲ್ ವಿಡಿಯೋವನ್ನು ಐಜಿಪಿ ರಾಮಚಂದ್ರ ರಾವ್ ನಿರಾಕರಿಸಿದ್ದಾರೆ. ಇದು ತಮ್ಮ ತೇಜೋವಧೆ ಮಾಡಲು ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂದಿರುವ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗಿದ್ದಾರೆ. 

Read Full Story

02:49 PM (IST) Jan 19

BBK ಗಿಲ್ಲಿ ಮದ್ವೆಗೆ ಅಮ್ಮನ ಗ್ರೀನ್​ ಸಿಗ್ನಲ್​ - ಕಾವ್ಯಾಳನ್ನು ಎತ್ತಾಕ್ಕೊಂಡು ಬಂದು ಮದ್ವೆ ಮಾಡಿಸ್ತೀವಿ ಎಂದ ಫ್ಯಾನ್ಸ್​!

ಬಿಗ್​ಬಾಸ್​ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಗಿಲ್ಲಿ ನಟ ನಾವು ಸ್ನೇಹಿತರಷ್ಟೇ ಎಂದರೂ, ಅವರ ತಾಯಿ ಮಗ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.  ಅಭಿಮಾನಿಗಳು, ಕಾವ್ಯಾ ಅವರನ್ನೇ ಮದುವೆ ಮಾಡಿಸೋ ಪಟ್ಟು ಹಿಡಿದಿದ್ದಾರೆ.

Read Full Story

02:43 PM (IST) Jan 19

ಅಯ್ಯೋ ರಾಮಚಂದ್ರ.. ಮಗಳು ಚಿನ್ನ, ಅಪ್ಪ ರನ್ನ; 'ಸರಸ' ಕಂಡು ರಾಂಗ್‌ ಆದ ಸಿದ್ದರಾಮಯ್ಯ!

ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಸರಸವಾಡಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ ತನಿಖೆಗೆ ಆದೇಶಿಸಿದ್ದು, ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಈ ಕೃತ್ಯವನ್ನು ಖಂಡಿಸಿದ್ದಾರೆ.

Read Full Story

02:32 PM (IST) Jan 19

ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ಗಡಿ ಗ್ರಾಮದಲ್ಲಿ, ಶಾಸಕ ಎಂ.ಆರ್. ಮಂಜುನಾಥ್ ಅವರು ಜಿಲ್ಲೆಯ ಮೊದಲ ಸ್ಯಾಟಲೈಟ್ ಬಿಎಸ್ಎನ್ಎಲ್ ಟವರ್ ಸಂಪರ್ಕಕ್ಕೆ ಚಾಲನೆ ನೀಡಿದರು. 

Read Full Story

02:26 PM (IST) Jan 19

ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ, ಉಪನ್ಯಾಸಕರು ಸೇರಿ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ

ದ್ವಿತೀಯ ಪಿಯುಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನಂತರ, ಶಿಕ್ಷಣ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ, ಪದವಿ ಪೂರ್ವ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಚಿಂತನೆ ನಡೆಸಿದೆ.

Read Full Story

02:21 PM (IST) Jan 19

ನಟಿ ರನ್ಯಾ ರಾವ್ ಅಪ್ಪ ಐಜಿಪಿ ರಾಮಚಂದ್ರರಾವ್ ರಾಸಲೀಲೆ ಬಹಿರಂಗ; ಖಾಕಿ ಡ್ರೆಸ್‌ನಲ್ಲೇ ಹಲವರೊಂದಿಗೆ ಸರಸ!

ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋಗಳು ವೈರಲ್ ಆಗಿವೆ. ಈ 'ಕಾಮಕಾಂಡ' ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.

Read Full Story

02:10 PM (IST) Jan 19

ಯಾವುದೂ ಕೆಲಸ ಇಲ್ಲ ಅಂತ ಬರಿಗೈನಲ್ಲಿ ಬಿಗ್ ಬಾಸ್ ಮನೆಗೆ ಬಂದಿದ್ದ ಗಿಲ್ಲಿ ಗೆದ್ದಿದ್ದು ಇಷ್ಟೊಂದಾ? SUV ಕಾರಿನ ಬೆಲೆ ಎಷ್ಟು?

ಮಂಡ್ಯದ ಗ್ರಾಮೀಣ ಪ್ರತಿಭೆ ಗಿಲ್ಲಿ ನಟ, ಬಿಗ್ ಬಾಸ್ 12ನೇ ಸೀಸನ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ವಿಶಿಷ್ಟ ಶೈಲಿಯಿಂದ ಕನ್ನಡಿಗರ ಮನಗೆದ್ದ ಅವರು, 50 ಲಕ್ಷ ನಗದು, ಕಿಚ್ಚ ಸುದೀಪ್ ಅವರಿಂದ 10 ಲಕ್ಷ ವಿಶೇಷ ಬಹುಮಾನ ಹಾಗೂ 20 ಲಕ್ಷ ಮೌಲ್ಯದ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
Read Full Story

02:05 PM (IST) Jan 19

BBK 12 - ಆ ಗೆಟಪ್​ ಹಾಕ್ಕೊಂಡು ಗೆದ್ದಿರೋದು ಸರೀನಾ? ಗಿಲ್ಲಿಯ ಹೊಗಳುತ್ತಲೇ ತಿವಿದ ಅಶ್ವಿನಿ ಗೌಡ ಏನಂದ್ರು ಕೇಳಿ!

ಬಿಗ್​ಬಾಸ್​ನಲ್ಲಿ ದಾಖಲೆಯ ಮತಗಳಿಂದ ಗೆದ್ದ ಗಿಲ್ಲಿ ನಟನ ಮೇಲೆ ರನ್ನರ್ ಅಪ್ ಅಶ್ವಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಗಿಲ್ಲಿ ನಟ ಬಡವನ ಸೋಗಿನಲ್ಲಿ ಗೆಲುವು ಸಾಧಿಸಿದ್ದಾರೆ, ಆದರೆ ಆತ ನಿಜಕ್ಕೂ ಬಡವನಾ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.
Read Full Story

01:25 PM (IST) Jan 19

ಚಿನ್ನದ ಬೆಲೆ ಇಳಿಕೆ ಯಾವಾಗ? ಆರ್ಥಿಕ ತಜ್ಞ ವಿಜಯ್ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಹೇಳಿಕೆ

ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಬೆಳ್ಳಿ ದರವೂ ಗಣನೀಯವಾಗಿ ಏರಿಕೆಯಾಗಿದೆ. ಅಮೆರಿಕ-ವೆನೆಜುವೆಲಾ ನಡುವಿನ ಉದ್ವಿಗ್ನತೆಯಂತಹ ಜಾಗತಿಕ ಕಾರಣಗಳಿಂದ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಚಿನ್ನದತ್ತ ಮುಖ ಮಾಡುತ್ತಿದ್ದು, ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

Read Full Story

01:21 PM (IST) Jan 19

ಲಕ್ಕುಂಡಿ ಭೂಮಿಯಲ್ಲಿ 1000 ಕೆಜಿ ಚಿನ್ನದ ಶಿವಲಿಂಗ, 100 ಕೆಜಿ ಬಂಗಾರದ ದೇವಿ ವಿಗ್ರಹವಿದೆ - ಭವಿಷ್ಯ ನುಡಿದ ಸ್ವಾಮೀಜಿ

ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಶಿಲಾಯುಗದ ಆಯುಧಗಳು ಪತ್ತೆಯಾಗಿವೆ. ಇದೇ ವೇಳೆ, ಓರ್ವ ಸ್ವಾಮೀಜಿ ಸ್ಥಳದಲ್ಲಿ ಸಾವಿರ ಕೆಜಿ ಚಿನ್ನದ ಶಿವಲಿಂಗವಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಘಟನೆಗಳು ಉತ್ಖನನದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

Read Full Story

01:01 PM (IST) Jan 19

ಸಾಹಿತ್ಯ, ಅಂಬೇಡ್ಕರ್‌, ಸಂವಿಧಾನದ ಓದು ನನ್ನ ಬದುಕಿನ ನಡೆ, ಆಲೋಚನೆ ಬದಲಿಸುತ್ತಿದೆ

ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ 'ಲ್ಯಾಂಡ್‌ ಲಾರ್ಡ್' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಸುಳ್ಳು ಕೇಸುಗಳಿಂದ ಬೇಸತ್ತು ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಓದಲು ಪ್ರಾರಂಭಿಸಿದೆ ಎಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Read Full Story

12:41 PM (IST) Jan 19

BBK 12 - ಕಾವ್ಯ ಶೈವ ಜೊತೆ ಕೊನೆಗೂ ಮನಸ್ತಾಪ ಬಗೆಹರಿಯಲಿಲ್ಲ ಯಾಕೆ? ಸತ್ಯ ಬಿಚ್ಚಿಟ್ಟ ರಕ್ಷಿತಾ ಶೆಟ್ಟಿ Interview

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿ, ರನ್ನರ್‌ ಅಪ್‌ ಆಗಿದ್ದಾರೆ. ಕಾವ್ಯ ಶೈವ ಅವರು ಫಿನಾಲೆಯಲ್ಲಿ ಇರೋಕೆ ಅರ್ಹರಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು. ಈ ಬಗ್ಗೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.

 

Read Full Story

12:32 PM (IST) Jan 19

Gavi Mutt - 15 ಕಿ.ಮೀ ದೂರದಿಂದ ಗವಿಮಠಕ್ಕೆ ಅರ್ಧ ಕ್ವಿಂಟಲ್ ಅಕ್ಕಿ ಹೊತ್ತುಕೊಂಡು ಬಂದ ಭಕ್ತ

ತಾಲೂಕಿನ ತಾಳಕನಕಾಪೂರ ಗ್ರಾಮದ ಸಣ್ಣ ದುರ್ಗಪ್ಪ ಪರಿವರ್ ಎಂಬ ಯುವಕ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹಕ್ಕಾಗಿ ಅಪರೂಪದ ಸೇವೆ ಸಲ್ಲಿಸಿದ್ದಾನೆ. 50 ಕೆಜಿ ಅಕ್ಕಿ ಮೂಟೆಯನ್ನು ಹೆಗಲ ಮೇಲೆ ಹೊತ್ತು 15 ಕಿಲೋಮೀಟರ್ ಪಾದಯಾತ್ರೆ ಮೂಲಕ ಗವಿಮಠಕ್ಕೆ ತಲುಪಿಸಿ ತನ್ನ ಭಕ್ತಿ ಸಮರ್ಪಿಸಿದ್ದಾನೆ.

Read Full Story

12:32 PM (IST) Jan 19

ಲಕ್ಕುಂಡಿ ಉತ್ಖನನ - ಕಲ್ಯಾಣಿ ಚಾಲುಕ್ಯರ ಕಾಲದ ಮಹತ್ವದ ಕುರುಹುಗಳು ಪತ್ತೆ, ಭಾನುವಾರ ಪದೇ ಪದೇ ಕಾಣಿಸಿಕೊಂಡ ಹಾವು!

ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಮಹತ್ವದ ಕುರುಹುಗಳು ಪತ್ತೆಯಾಗಿವೆ. ಇತ್ತೀಚೆಗೆ ಲೋಹದ ಗಂಟೆ, ವಿಶಿಷ್ಟ ಶಿವಲಿಂಗ ಹಾಗೂ ನಾಗಮುದ್ರೆಯ ಶಿಲಾಕೃತಿ ದೊರೆತಿದ್ದು, ಈ ಐತಿಹಾಸಿಕ ಸಂಶೋಧನೆಯು ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದೆ.
Read Full Story

12:12 PM (IST) Jan 19

Shivamogga - ಒಂದೇ ಕುಟುಂಬದ ನಾಲ್ವರು ನೀರುಪಾಲು - ಮಕ್ಕಳೊಂದಿಗೆ ತವರಿಗೆ ಬಂದಿದ್ದ ಮಗಳು

ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ, ಬಟ್ಟೆ ತೊಳೆಯಲು ಭದ್ರಾ ನಾಲೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಕಾಲು ಜಾರಿ ನೀರುಪಾಲಾಗಿದ್ದಾರೆ. ತಾಯಿ-ಮಗಳು ಮೊದಲು ನಾಲೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಮಗ ಮತ್ತು ಅಳಿಯ ಕೂಡ ನೀರಿನಲ್ಲಿ ಮುಳುಗಿದ್ದಾರೆ. 

Read Full Story

12:08 PM (IST) Jan 19

ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪೋಕ್ಸೊ ಕೇಸ್‌ ದಾಖಲು - ಇರಲಾರದೆ ಇರುವೆ ಬಿಟ್ಕೊಳೋದು ಅಂದ್ರೆ ಇದೆನಾ?

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾರೆ. ಶ್ರೀರಾಮುಲು ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read Full Story

12:06 PM (IST) Jan 19

Bigg Boss ಗಿಲ್ಲಿ ನಟನ ಹೆಸರಲ್ಲಿ ಸುದೀಪ್​ ವಿಡಿಯೋಗಳು ವೈರಲ್​ - ಕೆರಳಿದ ಕಿಚ್ಚಿನ ಅಭಿಮಾನಿಗಳು!

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನ ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಟ ಸುದೀಪ್ ಅವರ ಹಳೆಯ ವಿಡಿಯೋವನ್ನು ಬಳಸಿ, ಅದು ಗಿಲ್ಲಿ ನಟನಿಗೆ ಸಿಕ್ಕ ಭದ್ರತೆ ಎಂದು ಬಿಂಬಿಸುತ್ತಿರುವುದು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

11:59 AM (IST) Jan 19

ಬಿಗ್‌ಬಾಸ್‌ ಮನೆಯಿಂದ ಹೊರಬಂದು ದರ್ಶನ್‌ ಸರಳತೆ ಬಗ್ಗೆ ಮಾತನಾಡಿದ ಗಿಲ್ಲಿ ನಟ!

ಬಿಗ್‌ಬಾಸ್‌ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ, 'ಡೆವಿಲ್‌' ಸಿನಿಮಾ ಚಿತ್ರೀಕರಣದ ವೇಳೆ ನಟ ದರ್ಶನ್‌ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ. ದರ್ಶನ್‌ ಅವರು ತಮ್ಮ ಕಾಮಿಡಿಯನ್ನು ಮೆಚ್ಚಿದ್ದನ್ನು ನೆನೆದ ಅವರು, ಬಿಗ್‌ಬಾಸ್‌ ಮನೆಯಲ್ಲಿ ತಮಗೆ ಬೆಂಬಲ ನೀಡಿದ ಸಹ ಸ್ಪರ್ಧಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Read Full Story

11:43 AM (IST) Jan 19

BBK 12 - ಒಟ್ಟೂ 60 ಲಕ್ಷ ಹಣವನ್ನು ಏನ್‌ ಮಾಡ್ತೀನಿ ಎಂದೇ ಹೇಳಿಬಿಟ್ರು Gilli Nata!

Bigg Boss Kannada Season 12 Winning Prize: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕೊನೆಗೂ ಮಂಡ್ಯದ ಗಂಡು ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಹೀಗಿರುವಾಗ ಅವರು ಆ ಬಹುಮಾನದಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲ ಇತ್ತು. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ.

 

Read Full Story

11:42 AM (IST) Jan 19

BBK 12 - ಸೈಲೆಂಟ್ ಅಲ್ಲ, ವೈಲೆಂಟ್ ಆಗಿ ಬರ್ತೀನಿ - ಟ್ರೋಫಿ ಇಲ್ಲದೇ ಹೋದ ಅಶ್ವಿನಿ ಗೌಡ ಲೈವ್ ಟಾಕ್

ಬಿಗ್‌ಬಾಸ್ ಕನ್ನಡ 12ರ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ, ಇನ್‌ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ತಾನು ಸೈಲೆಂಟ್ ಆಗಿ ಹೋಗುವುದಿಲ್ಲ, ಬದಲಿಗೆ ವೈಲೆಂಟ್ ಆಗಿ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳುವುದಾಗಿ ಹೇಳಿದ್ದಾರೆ. 

Read Full Story

11:25 AM (IST) Jan 19

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ - ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಿಜಯ್ ರಾಜ್ ಗೌಡ ಎಂಬಾತ, ತಾನು ಕೋಟ್ಯಾಧಿಪತಿ ಉದ್ಯಮಿ ಎಂದು ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 1.53 ಕೋಟಿ ರೂ. ವಂಚಿಸಿದ್ದಾನೆ. ತನ್ನ ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ, ಇಡಿ ಕೇಸ್ ನೆಪದಲ್ಲಿ ಹಣ ಪಡೆದಿದ್ದ ಈತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Read Full Story

11:19 AM (IST) Jan 19

Bigg Boss ರಕ್ಷಿತಾ ಶೆಟ್ಟಿ ನಟನೆಗೆ ಹೋಗ್ತಾರಾ? ಮುಂದಿನ ನಡೆ ತಿಳಿಸಿ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಪುಟ್ಟಿ

ಬಿಗ್​ಬಾಸ್​ 12ರ ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿರುವ ರಕ್ಷಿತಾ ಶೆಟ್ಟಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುವ ಬದಲು, ತಮ್ಮ ಯೂಟ್ಯೂಬ್ ಚಾನೆಲ್‌ಗೆ ಮರಳುವ ನಿರ್ಧಾರವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.
Read Full Story

11:16 AM (IST) Jan 19

ಬಿಗ್‌ಬಾಸ್‌ ಗೆದ್ದ ಗಿಲ್ಲಿಗೆ 50 ಲಕ್ಷ ಸಿಕ್ರೂ ನೆಮ್ಮದಿ ಇಲ್ಲ, ಸರ್ಕಾರಕ್ಕೆ ಕಟ್ಟಬೇಕು ಇಷ್ಟು ಟ್ಯಾಕ್ಸ್‌!

ಮಂಡ್ಯದ ಹಳ್ಳಿ ಹೈದ ಗಿಲ್ಲಿ ನಟರಾಜ್, ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಡತನದಿಂದ ಬಂದು, ತಮ್ಮ ಮುಗ್ಧತೆ ಮತ್ತು ಹಾಸ್ಯದಿಂದ ಜನರ ಮನಗೆದ್ದ ಇವರು, 50 ಲಕ್ಷ ನಗದು, ಕಾರು ಹಾಗೂ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

Read Full Story

More Trending News