LIVE NOW
Published : Jan 19, 2026, 06:50 AM ISTUpdated : Jan 19, 2026, 11:25 AM IST

Karnataka News Live: ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ - ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!

ಸಾರಾಂಶ

ದಾವಣಗೆರೆ: ಸಿಎಂ ಬದಲಾವಣೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ಶೀಘ್ರ ಇತ್ಯರ್ಥ ಆಗಬೇಕೆಂಬ ಆಸೆ ಎಲ್ಲರದ್ದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಮ್ಮದು ಈ ಅವಧಿಗೆ ಅಲ್ಲ. 2028ರ ಚುನಾವಣೆಗೆ ಬೇಡಿಕೆ ಇರುವುದು. ನಮ್ಮ ಅಭಿಮಾನಿಗಳು ಮುಂಗಡವಾಗಿ ಕ್ಲೇಮ್ ಮಾಡುತ್ತಿದ್ದಾರೆ. ಈಗ ಯಾರೂ ಸಹ ಯಾರಿಗೂ ಕನ್ಫ್ಯೂಸ್ ಮಾಡಬೇಡಿ. ಈಗ ಯಾರು ಆಗುವರೋ ಆಗಲಿ, ನಮ್ಮದು ಸಪೋರ್ಟ್ ಇದ್ದೇ ಇರುತ್ತದೆ ಎಂದು ಹೇಳಿದರು. ಹಲಿಗೆ ಹೋಗುವುದು, ಬರುವುದು ಇದ್ದೇ ಇರುತ್ತದೆ. ಪ್ರತಿ ಸಲವೂ ಹೋಗುತ್ತಿರುತ್ತಾರೆ. ಈಗ ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹೋಗಿರಬಹುದು ಎಂದರು.

Bengaluru Techie Marriage Fraud

11:25 AM (IST) Jan 19

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ - ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಿಜಯ್ ರಾಜ್ ಗೌಡ ಎಂಬಾತ, ತಾನು ಕೋಟ್ಯಾಧಿಪತಿ ಉದ್ಯಮಿ ಎಂದು ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 1.53 ಕೋಟಿ ರೂ. ವಂಚಿಸಿದ್ದಾನೆ. ತನ್ನ ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ, ಇಡಿ ಕೇಸ್ ನೆಪದಲ್ಲಿ ಹಣ ಪಡೆದಿದ್ದ ಈತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Read Full Story

11:19 AM (IST) Jan 19

Bigg Boss ರಕ್ಷಿತಾ ಶೆಟ್ಟಿ ನಟನೆಗೆ ಹೋಗ್ತಾರಾ? ಮುಂದಿನ ನಡೆ ತಿಳಿಸಿ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದ ಪುಟ್ಟಿ

ಬಿಗ್​ಬಾಸ್​ 12ರ ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿರುವ ರಕ್ಷಿತಾ ಶೆಟ್ಟಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುವ ಬದಲು, ತಮ್ಮ ಯೂಟ್ಯೂಬ್ ಚಾನೆಲ್‌ಗೆ ಮರಳುವ ನಿರ್ಧಾರವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.
Read Full Story

11:16 AM (IST) Jan 19

ಬಿಗ್‌ಬಾಸ್‌ ಗೆದ್ದ ಗಿಲ್ಲಿಗೆ 50 ಲಕ್ಷ ಸಿಕ್ರೂ ನೆಮ್ಮದಿ ಇಲ್ಲ, ಸರ್ಕಾರಕ್ಕೆ ಕಟ್ಟಬೇಕು ಇಷ್ಟು ಟ್ಯಾಕ್ಸ್‌!

ಮಂಡ್ಯದ ಹಳ್ಳಿ ಹೈದ ಗಿಲ್ಲಿ ನಟರಾಜ್, ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಡತನದಿಂದ ಬಂದು, ತಮ್ಮ ಮುಗ್ಧತೆ ಮತ್ತು ಹಾಸ್ಯದಿಂದ ಜನರ ಮನಗೆದ್ದ ಇವರು, 50 ಲಕ್ಷ ನಗದು, ಕಾರು ಹಾಗೂ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

Read Full Story

10:48 AM (IST) Jan 19

BBK 12 - ಗಿಲ್ಲಿ ನಟನ ಕಾಲಿಗೆ ಬೀಳಲು ಡಾಗ್​ ಸತೀಶ್​ಗೆ ಮುಹೂರ್ತ ಫಿಕ್ಸ್​? ಎಷ್ಟು ಲಕ್ಷದ ಬಟ್ಟೆ ಧರಿಸಿ ಬರ್ತಾರೆ?

ಬಿಗ್​ಬಾಸ್​ ಸೀಸನ್​ 12 ಅನ್ನು ಗಿಲ್ಲಿ ಗೆದ್ದಿದ್ದಾರೆ. ಈ ಹಿಂದೆ ಗಿಲ್ಲಿ ಗೆದ್ದರೆ ಅವರ ಕಾಲ ಕೆಳಗೆ ನುಸುಳುವುದಾಗಿ ಹೇಳಿದ್ದ ಡಾಗ್ ಸತೀಶ್‌ಗೆ, ಇದೀಗ ಗಿಲ್ಲಿ ಅಭಿಮಾನಿಗಳು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.
Read Full Story

10:39 AM (IST) Jan 19

Mandya News - ಸಾಲಬಾಧೆಯಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮ*ಹತ್ಯೆ; ತಾಯಿಗೆ ಹೃದಯಾಘಾತ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಸಾಲಬಾಧೆಯಿಂದ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ಕೇಳಿ ಆತನ ತಾಯಿ ಹೃದಯಾಘಾತಕ್ಕೊಳಗಾಗಿದ್ದಾರೆ. ಇದಲ್ಲದೆ, ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಲಾಗಿದೆ.

Read Full Story

10:23 AM (IST) Jan 19

Lakkundi - ನಾಲ್ಕನೇ ದಿನದ ಉತ್ಖನನ ಕಾರ್ಯಕ್ಕೆ ಎದುರಾಯ್ತು ಮತ್ತೊಂದು ವಿಘ್ನ; ಆಯುಧ ಮಾದರಿಯ ಕಲ್ಲು ಪತ್ತೆ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಕಾರ್ಮಿಕರ ಸಂಬಳ ಹೆಚ್ಚಳದ ಬೇಡಿಕೆಯಿಂದಾಗಿ ವಿಳಂಬವಾಯಿತು. ಈ ವಿಘ್ನದ ನಡುವೆಯೂ, ಶಿಲಾಯುಗದಲ್ಲಿ ಬಳಸುತ್ತಿದ್ದ ಆಯುಧವನ್ನು ಹೋಲುವ ಕಲ್ಲಿನ ವಸ್ತುವೊಂದು ಪತ್ತೆಯಾಗಿದ್ದು, ತಜ್ಞರು ಅದನ್ನು ವಶಕ್ಕೆ ಪಡೆದಿದ್ದಾರೆ.
Read Full Story

09:21 AM (IST) Jan 19

BBK 12 Rakshitha Shetty - ಮತ್ತೆ ಮತ್ತೆ ಸತ್ಯ ಆಯ್ತು ತುಳು ಪುಟ್ಟಿ ರಕ್ಷಿತಾ ಶೆಟ್ಟಿ ಮಾತು

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸರ್ಪೈಸ್ ಪ್ಯಾಕೇಜ್ ಆಗಿದ್ದ ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆರಂಭದಲ್ಲಿ ತಮ್ಮ ಕನ್ನಡದ ಬಗ್ಗೆ ಟೀಕೆ ಎದುರಿಸಿದ್ದರೂ, ಮನೆಯಲ್ಲಿ ಅವರು ಆಡಿದ ಹಲವು ಮಾತುಗಳು ಅಚ್ಚರಿಯ ರೀತಿಯಲ್ಲಿ ಸತ್ಯವಾಗಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. 

Read Full Story

09:12 AM (IST) Jan 19

ರಾಷ್ಟ್ರಧ್ವಜ ತಯಾರಿಸ್ತಿದ್ದ ಕೈಗಳಲ್ಲೀಗ ಕೆಲಸವಿಲ್ಲ!

ಗಣರಾಜ್ಯೋತ್ಸವಕ್ಕೆ (ಜ.26) ದಿನಗಣನೆ ಆರಂಭವಾಗಿದೆ. ಆದರೆ, ಶುದ್ಧ ಖಾದಿಯಿಂದ ಸಿದ್ಧಗೊಂಡ ರಾಷ್ಟ್ರಧ್ವಜಗಳಿಗೆ ಬೇಡಿಕೆ ಗಣನೀಯವಾಗಿ ಇಳಿಮುಖವಾಗಿ ಅವುಗಳ ತಯಾರಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕೆಲಸವಿಲ್ಲದೇ ಕೈಚೀಲ (ಬ್ಯಾಗ್‌) ಹೊಲೆಯುವ ಕೆಲಸದ ಮೊರೆ ಹೋಗಿದ್ದಾರೆ

Read Full Story

08:42 AM (IST) Jan 19

ಬೇಡ್ತಿಗಾಗಿ ಪಶ್ಚಿಮ ಘಟ್ಟ- ಬಯಲುಸೀಮೆ ಜಲ ಸಂಘರ್ಷ!

ಇದೀಗ ಬೇಡ್ತಿ-ವರದಾ ತಿರುವು ಯೋಜನೆ ಜಿಲ್ಲೆ ಜಿಲ್ಲೆಗಳ ಮಧ್ಯೆ ದೊಡ್ಡ ಸಂಘರ್ಷವನ್ನೇ ಹುಟ್ಟುಹಾಕಿದ್ದು, ಮಠಾಧೀಶರು, ಪರಿಸರ ತಜ್ಞರು, ಜನಪ್ರತಿನಿಧಿಗಳು ಈ ಹೋರಾಟದಲ್ಲಿ ಧುಮುಕಿದ್ದರಿಂದ ಸಂಘರ್ಷ ತಾರಕಕ್ಕೇರಿದೆ

Read Full Story

08:35 AM (IST) Jan 19

40 ಎಕರೆ, ಕಣದಲ್ಲಿ 30 ಮಾರು ಉದ್ದದ ಎರಡು ಮೆದೆ - ಎತ್ತುಗಳನ್ನು ಬಳಸಿ ರಾಗಿ ಬೆಳೆದ ರೈತ

ಮಾಗಡಿ ತಾಲೂಕಿನಲ್ಲಿ 40 ಎಕರೆಗೂ ಹೆಚ್ಚು ಜಮೀನಿನಲ್ಲಿ ರಾಗಿ ಬೆಳೆದು ಮಾದರಿ ಕೃಷಿಕರಾಗಿದ್ದಾರೆ. ರಾಸಾಯನಿಕ ಗೊಬ್ಬರ ಮತ್ತು ಯಂತ್ರಗಳ ಬದಲು, ಸಾಂಪ್ರದಾಯಿಕವಾಗಿ ಎತ್ತುಗಳು ಹಾಗೂ ಹಸುವಿನ ಗೊಬ್ಬರ ಬಳಸಿ 400 ಮೂಟೆಗೂ ಅಧಿಕ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

Read Full Story

08:23 AM (IST) Jan 19

ಯಾವಾಗ ಕಾಂಗ್ರೆಸ್‌ ಸೇರಿದ್ರೋ ಆವಾಗ ಕೆಟ್ಟು ಹೋದ್ರು - ಸಿಎಂ ಬಗ್ಗೆ ನಕ್ಕೊಂತ ಹೇಳಿದ ಹಳೇ ದೋಸ್ತು

ಸಿದ್ರಾಮಣ್ಣ ಮೊದಲಿನಿಂದಲೂ ನನಗೆ ಬಾಳ ಆತ್ಮೀಯ. ಭಯಂಕರ ಚೊಲೋ ಇದ್ದರು. ನಾ ಮಂತ್ರಿ ಆಗಿದ್ದಾಗ ಅವರು ಏನೂ ಇರಲಿಲ್ಲ. ನಮ್ಮ ಜೊತೆಗೆ ಇದ್ದಾಗ ಬಹಳ ಒಳ್ಳೆಯವ ಇದ್ದರು. ಯಾವತ್ತು ಕಾಂಗ್ರೆಸ್‌ಗೆ ಹೋದ್ರೋ ಆವಾಗಿನಿಂದ ಭಯಂಕರವಾಗಿ ಕೆಟ್ಟು ಬಿಟ್ರು

Read Full Story

08:14 AM (IST) Jan 19

ಕರ್ಣ-ನಿತ್ಯಾಳನ್ನು ಹಿಂಬಾಲಿಸಿದ ಪೆಡಂಭೂತ; ನಿಟ್ಟುಸಿರುವ ಬಿಟ್ರು ರಮೇಶ್, ತಾರಾ, ಸಂಜಯ್

ತನ್ನ ಮಗುವಿನ ತಂದೆ ಕರ್ಣ ಅಲ್ಲ ಎಂಬ ಸತ್ಯವನ್ನು ನಿತ್ಯಾ ಹೇಳಲು ಮುಂದಾಗುತ್ತಾಳೆ. ಆದರೆ ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ತೇಜಸ್, ಆ ಮಗುವಿನ ಅಪ್ಪ ಕರ್ಣನೇ ಎಂದು ಹೇಳಿ ಎಲ್ಲರಿಗೂ ಆಘಾತ ನೀಡುತ್ತಾನೆ, ಇದರಿಂದ ಕರ್ಣನ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತವೆ.
Read Full Story

08:11 AM (IST) Jan 19

BBK 12 - ಕಾವ್ಯ ಶೈವ ಜೊತೆ ಮದುವೆ ಆಗ್ತೀರಾ? ಎಂದಾಗ 'ಕಂಕಣಬಲ ಕೂಡಿ ಬರಬೇಕು' ಎಂದ ಗಿಲ್ಲಿ ನಟ

Bigg Boss Kannada Season 12: ಬಿಗ್‌ ಬಾಸ್‌ ಶೋನಲ್ಲಿ ಗಿಲ್ಲಿ ನಟ ಅವರು ಟ್ರೋಫಿ ಗೆದ್ದಾಗಿದೆ. ಈಗ ಅವರ ಅಭಿಮಾನಿ ಬಳಗ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರ ಮದುವೆ ಮಾಡಿಸೋದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಗಿಲ್ಲಿ ನಟ ಏನಂದ್ರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

07:39 AM (IST) Jan 19

ಲಕ್ಕುಂಡಿ ಬಂಗಾರದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿಗೆ ಸರ್ಕಾರಿ ಉದ್ಯೋಗ

ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರಿಗೆ ಸರ್ಕಾರದಿಂದ ಉದ್ಯೋಗ ಮತ್ತು ಮನೆ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Read Full Story

07:38 AM (IST) Jan 19

ಐತಿಹಾಸಿಕ ಲಕ್ಕುಂಡಿಗೆ ಸರ್ಕಾರದಿಂದ ವಿಶೇಷ ರಕ್ಷಾಕವಚ - ರಿತ್ತಿ ಕುಟುಂಬಕ್ಕೆ ಗುಡ್‌ನ್ಯೂಸ್

ಐತಿಹಾಸಿಕ ಲಕ್ಕುಂಡಿ ಗ್ರಾಮದ 44 ತಾಣಗಳನ್ನು ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸಲಾಗಿದ್ದು, ಇವು ಸರ್ಕಾರದ ನೇರ ಉಸ್ತುವಾರಿಗೆ ಒಳಪಡಲಿವೆ. ಈ ತಾಣಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
Read Full Story

07:23 AM (IST) Jan 19

Bigg Boss Kannada 12 - ಕಲರ್ಸ್ ಕನ್ನಡದಲ್ಲಿ ಗೆದ್ದ ಗಿಲ್ಲಿ ಗೆಲುವನ್ನು ಸಂಭ್ರಮಿಸಿದ ಜೀ ಕನ್ನಡ

ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರಿಂದ, ಪ್ರತಿಸ್ಪರ್ಧಿ ವಾಹಿನಿಯಾದ ಜೀ ಕನ್ನಡವು ಅವರ ಗೆಲುವನ್ನು ಸಂಭ್ರಮಿಸಿದೆ. ಗಿಲ್ಲಿ 

Read Full Story

07:12 AM (IST) Jan 19

ಮಿನಿ ವಿಶ್ವಸಂಸ್ಥೆ ಕಟ್ಟಲು ಟ್ರಂಪ್‌ ಪ್ರಯತ್ನ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ‘ಮಿನಿ ವಿಶ್ವಸಂಸ್ಥೆ’ಯೊಂದನ್ನು ಸ್ಥಾಪಿಸಲು ಹೊರಟಿದ್ದಾರೆಯೇ? ಇಂಥದ್ದೊಂದು ಅನುಮಾನ ಟ್ರಂಪ್‌ ವಿರೋಧಿಗಳನ್ನು ಕಾಡಲು ಶುರುವಾಗಿದೆ. ವಿಶ್ವಸಂಸ್ಥೆಯನ್ನು ಬಹಿರಂಗವಾಗಿಯೇ ಟೀಕಿಸುತ್ತಾ ಬಂದಿರುವ ಡೊನಾಲ್ಡ್‌ ಟ್ರಂಪ್‌

Read Full Story

07:06 AM (IST) Jan 19

ಮುಕೇಶ್‌ ಅಂಬಾನಿ ಮನೆ ತಿಂಗಳ ವಿದ್ಯುತ್‌ ಬಿಲ್‌ 70 ಲಕ್ಷ ರು.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿರುವ ಐಷಾರಾಮಿ ಆ್ಯಂಟೀಲಿಯಾ ಬಂಗಲೆಯ ಮಾಸಿಕ ವಿದ್ಯುತ್‌ ಬಿಲ್‌ 70 ಲಕ್ಷ ರು.ಗಳಂತೆ.

Read Full Story

More Trending News