LIVE NOW
Published : Jun 17, 2026, 07:02 AM ISTUpdated : Jun 17, 2026, 10:26 AM IST

Karnataka News Live: Bengaluru crime - ತಾಯಿ-ಅಕ್ಕನ ಬಗ್ಗೆ ಆಡಿದ ಆ ಮಾತಿಗೆ ಗೆಳೆಯನ್ನೇ ಇರಿದು ಕೊಂದ ಯುವಕ!

ಸಾರಾಂಶ

ಬೆಂಗಳೂರು: ‘ಬಿಡದಿ ಸ್ಮಾರ್ಟ್‌ ಸಿಟಿ ನನ್ನ ಯೋಜನೆಯಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಗೆ ಅಧಿಸೂಚನೆ ಹೊರಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರ ಈ ಜಾಗದಲ್ಲಿ 1 ಸಾವಿರ ಎಕರೆಯನ್ನು ಕೆಐಎಡಿಬಿಗೆ ಸ್ವಾಧೀನಪಡಿಸಿಕೊಂಡಾಗ ಅವರು ಯಾಕೆ ಸುಮ್ಮನಿದ್ದರು?’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಡದಿ ಟೌನ್‌ಶಿಪ್‌ ಕುರಿತ ಜೆಡಿಎಸ್‌ ಪಾದಯಾತ್ರೆ ಬಗ್ಗೆ ಸದ್ಯಕ್ಕೆ ಉತ್ತರ ಕೊಡಲ್ಲ. ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮಾಡಿದ್ದು ಯಾರು? ಬಿಡದಿಯಲ್ಲಿ ರೈತರು ಜಮೀನು ನೀಡಲು ಮುಂದಾಗಿದ್ದಾರೆ. ಆದರೂ ಇವರಿಗೆ ರಾಜಕಾರಣ ಮಾಡಬೇಕು, ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

10:26 AM (IST) Jun 17

Bengaluru crime - ತಾಯಿ-ಅಕ್ಕನ ಬಗ್ಗೆ ಆಡಿದ ಆ ಮಾತಿಗೆ ಗೆಳೆಯನ್ನೇ ಇರಿದು ಕೊಂದ ಯುವಕ!

ಬೆಂಗಳೂರಿನ ನಿಮ್ಹಾನ್ಸ್ ಲೇಔಟ್‌(Bengaluru nimhans layout)ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರಾದ ವಾಸಿಂ ಮತ್ತು ಸೈಯದ್ ನಡುವೆ ಜಗಳ ನಡೆದಿದೆ. ಸೈಯದ್‌ನ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯವಾಗಿ ನಿಂದಿಸಿದ್ದರಿಂದ ಕೋಪಗೊಂಡ ಸೈಯದ್, ಚಾಕುವಿನಿಂದ ಇರಿದು ವಾಸಿಂನನ್ನು ಕೊಲೆ ಮಾಡಿದ್ದಾನೆ.

Read Full Story

09:49 AM (IST) Jun 17

ಒಂದು ರಸ್ತೆಗೆ ಎರಡು ಬಾರಿ ಉದ್ಘಾಟನೆ ಭಾಗ್ಯ - ಏನಿದು ಜಟಾಟಪಟಿ? ಶಾಸಕರು ಹೇಳಿದ್ದೇನು?

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ರಸ್ತೆಯು ಎರಡು ದಿನಗಳಲ್ಲಿ ಎರಡು ಬಾರಿ ಪ್ರತ್ಯೇಕವಾಗಿ ಉದ್ಘಾಟನೆಗೊಂಡಿದೆ. ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಒಂದು ದಿನ ನಡೆದರೆ, ಮರುದಿನ ದೇವಸ್ಥಾನ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಮತ್ತೊಂದು ಉದ್ಘಾಟನೆ ನಡೆಯಿತು, ಇದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
Read Full Story

09:42 AM (IST) Jun 17

VTU online classes - ವಿಟಿಯು ಮಹತ್ವದ ನಿರ್ಧಾರ; ಈ ಕಾರಣಕ್ಕಾಗಿ ಇನ್ಮುಂದೆ ಪ್ರತಿ ಶನಿವಾರ ಆನ್‌ಲೈನ್ ಕ್ಲಾಸ್!

ಇಂಧನ ಕೊರತೆ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಇನ್ನು ಮುಂದೆ ಪ್ರತಿ ಶನಿವಾರ ಆನ್‌ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. 

Read Full Story

09:30 AM (IST) Jun 17

ವೆನ್ನೆಲ್ಲಾ ಹ*ತ್ಯೆ ಕೇಸ್‌ - FSL ವರದಿಯಲ್ಲಿ ಕೊಲೆಯ ಮತ್ತಷ್ಟು ಭೀಕರತೆ ಬೆಳಕಿಗೆ! ಕೊಲೆ ನಡೆದದ್ದು ಹೇಗೆ?

ಕಾಡುಗೋಡಿಯಲ್ಲಿ ನಡೆದ 6 ವರ್ಷದ ಬಾಲಕಿ ವೆನ್ನೆಲ್ಲಾ ಸಾವು ಕೊಲೆ ಎಂದು ಮರಣೋತ್ತರ ಮತ್ತು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ. ತಾಯಿಯ ಪ್ರಿಯಕರ ಮೋಹನ್ ಹೊಟ್ಟೆಗೆ ಗುದ್ದಿ, ಉಸಿರುಗಟ್ಟಿಸಿ ಕೊಂದಿರುವುದು ಬಹಿರಂಗವಾಗಿದ್ದು, ಪೊಲೀಸರು ಆರೋಪಿ ಮೋಹನ್ ಮತ್ತು ತಾಯಿ ಪ್ರಿಯಾಂಕಳನ್ನು ಬಂಧಿಸಿದ್ದಾರೆ.
Read Full Story

09:21 AM (IST) Jun 17

ಅಥಣಿಯ ಜಲಮೂಲ ರಹಸ್ಯ - ನದಿ ಬತ್ತುತ್ತಿದ್ದರೂ ಕುಡಿಯುವ ನೀರಿಗಿಲ್ಲ ಬರ, ಶಾಶ್ವತ ಪರಿಹಾರ

ಅಥಣಿ ತಾಲೂಕಿನಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ₹140 ಕೋಟಿ ವೆಚ್ಚದ ಕೆರೆ ತುಂಬುವ ಯೋಜನೆ ಯಶಸ್ವಿಯಾಗಿದೆ. ಕೃಷ್ಣಾ ನದಿಯಿಂದ 9 ಕೆರೆಗಳಿಗೆ ನೀರು ತುಂಬಿಸುವ ಮೂಲಕ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ರೈತರ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ.
Read Full Story

08:59 AM (IST) Jun 17

Exclusive - ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಗಂಭೀರ ಲೋಪ - HCGಗೆ ಬಿತ್ತು 2 ವರ್ಷ ನಿಷೇಧ

ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ನಡೆದ ಗಂಭೀರ ಲೋಪಗಳಿಗಾಗಿ ಕೇಂದ್ರ ಸರ್ಕಾರವು ಆಸ್ಪತ್ರೆಯ ನೈತಿಕ ಸಮಿತಿಗೆ ಎರಡು ವರ್ಷಗಳ ನಿಷೇಧ ಹೇರಿದೆ. ತನಿಖೆಯಲ್ಲಿ ರೋಗಿಗಳ ಸಾವುಗಳನ್ನು ವರದಿ ಮಾಡದಿರುವುದು, ನಿಯಮ ಉಲ್ಲಂಘನೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿದ್ದು, ಹೊಸ ಟ್ರಯಲ್‌ಗಳನ್ನು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.
Read Full Story

08:53 AM (IST) Jun 17

Bengaluru NICE road accident - ರಸ್ತೆ ಅಪಘಾತದಲ್ಲಿ ಅರ್ಧದೇಹ ಸಿಕ್ಕಿದೆ, ಗುರುತು ಸಿಕ್ಕಿಲ್ಲ! ಪೊಲೀಸರಿಗೆ ತಲೆನೋವಾದ ಪ್ರಕರಣ!

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮೇ 4 ರಂದು ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಪತ್ತೆಯಾಗಿದೆ. ಒಂದೂವರೆ ತಿಂಗಳು ಕಳೆದರೂ ಮೃತರ ಗುರುತು ಅಥವಾ ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಿಗೂಢ ಪ್ರಕರಣವನ್ನು ಭೇದಿಸಲು ಕಾಮಾಕ್ಷಿಪಾಳ್ಯ ಸಂಚಾ ಪೊಲೀಸರಿಂದ ತನಿಖೆ..

Read Full Story

08:47 AM (IST) Jun 17

ಬೆಂಗಳೂರು ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳ ಮೇಲೆ ಗುಡುಗಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ನಗರದ ರಸ್ತೆ ಗುಂಡಿಗಳ ಸಮಸ್ಯೆಯ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ ಎಂದು ಪ್ರಶ್ನಿಸಿದ ಅವರು, ತಾತ್ಕಾಲಿಕ ಪರಿಹಾರದ ಬದಲು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.
Read Full Story

08:44 AM (IST) Jun 17

Karnataka Lokayukta Raid - 8 ಅಧಿಕಾರಿಗಳ ಬಳಿ ಪತ್ತೆಯಾಯ್ತಯ ₹31.11 ಕೋಟಿ ಆಸ್ತಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ದಾವಣಗೆರೆ, ಕಲಬುರಗಿ ಸೇರಿದಂತೆ ಹಲವೆಡೆ ನಡೆದ ಈ ದಾಳಿಯಲ್ಲಿ ಒಟ್ಟು ₹31.11 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Read Full Story

08:35 AM (IST) Jun 17

Davanagere - ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲ್ ಕುಸಿದು ಸಾವು

ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲಕುಮಾರ್ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಇವರು ಅಂತರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಈ ಘಟನೆಯು ಅತಿಯಾದ ದೇಹ ಕಸರತ್ತಿನ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

08:21 AM (IST) Jun 17

Karnataka MSP payment dela - ಬೆಂಬಲ ಬೆಲೆಯ ಬಲೆಗೆ ಸಿಲುಕಿ ರಾಜ್ಯದ 1.40 ಲಕ್ಷ ರೈತರು ಪರದಾಟ!

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಿದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರ ಇನ್ನೂ 1,714 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮುಂಗಾರು ಬಿತ್ತನೆಗೆ ಹಣವಿಲ್ಲದೆ ರೈತರು ಪರದಾಡುತ್ತಿದ್ದು, ಬಾಕಿ ಹಣ ಪಾವತಿಗೆ ಒತ್ತಡ ಹೆಚ್ಚಾದ ನಂತರ ಸರ್ಕಾರ 650 ಕೋಟಿ ರೂ. ಬಿಡುಗಡೆ ಮಾಡಿದೆ.

Read Full Story

08:18 AM (IST) Jun 17

FIFA World Cup 2026 - ಒಂದೇ ದಿನ ಬರೋಬ್ಬರಿ 4 ಪಂದ್ಯಗಳು ಡ್ರಾ - 68 ವರ್ಷಗಳಲ್ಲಿ ಇದೇ ಮೊದಲು

ಪಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ 68 ವರ್ಷಗಳ ಬಳಿಕ ಒಂದೇ ದಿನ ನಾಲ್ಕು ಪಂದ್ಯಗಳು ಡ್ರಾಗೊಂಡಿವೆ. ಮಾಜಿ ಚಾಂಪಿಯನ್ ಸ್ಪೇನ್‌ ವಿರುದ್ಧ ಕೇಪ್‌ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿದರೆ, ಬೆಲ್ಜಿಯಂ ಮತ್ತು ಈಜಿಫ್ಟ್‌ ನಡುವಿನ ಪಂದ್ಯವೂ 1-1 ಗೋಲುಗಳಿಂದ ಸಮಬಲಗೊಂಡಿತು. ಈ ಮೂಲಕ 1958ರ ಬಳಿಕ ಈ ಅಪರೂಪದ ದಾಖಲೆ ಮರುಕಳಿಸಿದೆ.
Read Full Story

08:06 AM (IST) Jun 17

ಫೇಸ್-ಲೊಕೇಶನ್ ಹಾಜರಾತಿ ಎಫೆಕ್ಟ್‌ - ನಿಗದಿತ ಸಮಯಕ್ಕೆ ಶಾಲೆ ಅಂಗಳದಲ್ಲಿ ಶಿಕ್ಷಕರು ಹಾಜರ್

ಬಳ್ಳಾರಿಯಲ್ಲಿ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಎಐ ಆಧಾರಿತ ಫೇಸ್-ಲೊಕೇಶನ್ ಹಾಜರಾತಿ ವ್ಯವಸ್ಥೆಯಿಂದಾಗಿ, ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿದ್ದಾರೆ. ಈ ಹೊಸ ನಿಯಮವು ಶಿಕ್ಷಕರ ಸಮಯಪ್ರಜ್ಞೆಯನ್ನು ಹೆಚ್ಚಿಸಿದ್ದು, ತಡವಾಗಿ ಬರುವ ಪ್ರವೃತ್ತಿಗೆ ಕಡಿವಾಣ ಹಾಕಿದೆ. ಇದೇ ವ್ಯವಸ್ಥೆಯನ್ನು ಶೀಘ್ರದಲ್ಲೇ ವಿದ್ಯಾರ್ಥಿಗಳಿಗೂ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.
Read Full Story

07:53 AM (IST) Jun 17

Karnataka Congress - ಎಸ್‌ಐಆರ್ ಜನಜಾಗೃತಿಗಾಗಿ ರಾಜ್ಯದ 5 ಕಡೆ ಕಾಂಗ್ರೆಸ್ ಬೃಹತ್ ಸಮಾವೇಶ! ಯಾವಾಗ, ಎಲ್ಲೆಲ್ಲಿ ಕಾರ್ಯಕ್ರಮ?

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಿಂದ (SIR) ತಮ್ಮ ಮತಬ್ಯಾಂಕ್‌ಗೆ ಸೇರಿದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಹೆಸರುಗಳು ಕೈಬಿಡುವ ಆತಂಕ. ಕಾಂಗ್ರೆಸ್(Congress) ಇದೆ. ಇದನ್ನು ತಡೆಯಲು, ರಾಜ್ಯಾದ್ಯಂತ ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ

Read Full Story

07:42 AM (IST) Jun 17

ಜೂನ್ 21ರಿಂದ ಜೋಗ, ಸಿಗಂದೂರು ಪ್ರವಾಸಕ್ಕೆ ವಿಶೇಷ ವೇಗದೂತ ಬಸ್ ಸೇವೆ - ಇಲ್ಲಿದೆ ಮಾಹಿತಿ

ಜೋಗ್ ಫಾಲ್ಸ್ ಮತ್ತು ಸಿಗಂದೂರು ದೇವಸ್ಥಾನಕ್ಕೆ ಜೂ. 21 ರಿಂದ ವಿಶೇಷ ವೇಗದೂತ ಬಸ್ ಸೇವೆ ಆರಂಭವಾಗಲಿದೆ. ಈ ಲೇಖನದಲ್ಲಿ ಬಸ್‌ನ ಸಮಯ, ಮಾರ್ಗ, ದರ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿಲ್ಲದಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನದ ವಿವರಗಳೂ ಇವೆ.

Read Full Story

More Trending News