LIVE NOW
Published : Jul 14, 2026, 05:10 AM ISTUpdated : Jul 14, 2026, 08:05 AM IST

Karnataka News Live: ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!

ಸಾರಾಂಶ

ಬೆಂಗಳೂರು: ಆ.6ರಿಂದ ಮಳೆಗಾಲದ ವಿಧಾನಮಂಡಲ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ.6 ರಂದು ಅಧಿವೇಶನ ಕರೆಯಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಹೀಗಾಗಿ ಆಗಸ್ಟ್‌ ಮೊದಲ ವಾರ ಅಧಿವೇಶನ ನಡೆಯುವುದು ಬಹುತೇಕ ಖಚಿತಗೊಂಡಿದೆ.

ಆ.6 ರಿಂದ ಅಧಿವೇಶನ ಶುರುವಾಗಲಿದ್ದು, ಮೊದಲ ದಿನ ಹಂಗಾಮಿ ಸ್ಪೀಕರ್ ಆಗಿರುವ ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಬಳಿಕ ನಿಧನರಾದ ಮಾಜಿ ಸಚಿವ ಸುಧಾಕರ್ ಅವರಿಗೆ ಸಂತಾಪ ಸೂಚನೆ ನಡೆಯಲಿದೆ. ನಂತರ ಆ.10 ರಿಂದ ಕಾರ್ಯಕಲಾಪ ಶುರುವಾಗಲಿದ್ದು ಆ.14ರವರೆಗೆ ನಡೆಯುತ್ತದೆಯೇ ಅಥವಾ ಆ.21ರವರೆಗೆ ನಡೆಯುತ್ತದೆಯೇ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಸರ್ಕಾರದಿಂದ ವಿಧಾನಸಭೆ ಸಚಿವಾಲಯಕ್ಕೆ ಈವರೆಗೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ತಲುಪಿಲ್ಲ. ದಿನಾಂಕದ ಬಗ್ಗೆ ಮಾಹಿತಿ ತಲುಪಿದರೆ ಶಾಸಕರಿಗೆ ಪ್ರಶ್ನೋತ್ತರಕ್ಕೆ ಪ್ರಶ್ನೆಗಳನ್ನು ಸಲ್ಲಿಸಲು ಸೂಚಿಸಬೇಕಾಗುತ್ತದೆ. ಸಚಿವಾಲಯಕ್ಕೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

08:05 AM (IST) Jul 14

ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!

ಖ್ಯಾತ ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿ, ತಮ್ಮ ಹಿಂದೂ ಪತ್ನಿ ಗಾಯತ್ರಿ ಅವರ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ. ಲವ್ ಜಿಹಾದ್ ಆರೋಪದ ವಿವಾದದ ನಂತರ, ಈ ದಂಪತಿ ಪತ್ನಿಯ ಸಂಪ್ರದಾಯಕ್ಕೆ ಗೌರವ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story

08:02 AM (IST) Jul 14

ಶಿವಮೊಗ್ಗ-ಮಂಗಳೂರು ರೈಲ್ವೆ ಯೋಜನೆ - ತೀರ್ಥಹಳ್ಳಿ-ಶೃಂಗೇರಿ ಮಾರ್ಗಕ್ಕೆ ಹೊಸ ತಿರುವು?

ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಶಿವಮೊಗ್ಗ-ಮಂಗಳೂರು ರೈಲ್ವೇ ಯೋಜನೆಯ ಮಾರ್ಗ ವಿವಾದ, ಶೃಂಗೇರಿಯ ಗ್ರಾಮ ಸಡಕ್ ಯೋಜನೆಗಳ ವಿಳಂಬ ಮತ್ತು ಶಾಶ್ವತ ವಾಸ್ತವ್ಯದ ಪ್ರಮಾಣಪತ್ರಗಳ ದುರ್ಬಳಕೆ ಕುರಿತು ಮಾತನಾಡಿದರು.

Read Full Story

07:39 AM (IST) Jul 14

ಸಿಂಗಾಪುರದ ತಟ್ಟೆಯಲ್ಲಿ ಅಂಕೋಲಾ ಫೇಮಸ್ ಏಡಿ; ವಿಮಾನ ಏರುವ ಮಾದನಗೇರಿಯ ಕಲ್ಲು ಜೆಂಜಿ

ಅಂಕೋಲಾದ ಮಾದನಗೇರಿಯ 'ಕಲ್ಲು ಜೆಂಜಿ' ಎಂಬ ವಿಶೇಷ ಏಡಿಗೆ ಸಿಂಗಾಪುರ, ಮಲೇಶಿಯಾದಂತಹ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸಜೀವವಾಗಿ ವಿಮಾನದ ಮೂಲಕ ರಫ್ತಾಗುವ ಈ ಏಡಿಗಳು ಮೀನುಗಾರರಿಗೆ ಉತ್ತಮ ಆದಾಯ ತರುತ್ತಿದ್ದರೂ, ಪರಿಸರ ಮಾಲಿನ್ಯ ಮತ್ತು ಇತರ ಕಾರಣಗಳಿಂದ ಇವುಗಳ ಸಂತತಿ ಕ್ಷೀಣಿಸುತ್ತಿದೆ.
Read Full Story

07:33 AM (IST) Jul 14

ಇರಾನ್‌ನಿಂದ ಮತ್ತೆ ಘಾತಕ ಮಿಸೈಲ್ ಅಟ್ಯಾಕ್; ಭಾರತದ ಓರ್ವ ಸಾವು, 6 ಮಂದಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ಯುಎಇಗೆ ಸೇರಿದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿ, ಇತರ ಆರು ಭಾರತೀಯರು ಗಾಯಗೊಂಡಿದ್ದಾರೆ. ಈ ಘಟನೆಯು ಅಮೆರಿಕ-ಇರಾನ್ ಸಂಘರ್ಷವನ್ನು ಉಲ್ಬಣಗೊಳಿಸಿದ್ದು, ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.

Read Full Story

07:23 AM (IST) Jul 14

ಕಚೇರಿ ಆರಂಭಕ್ಕೂ ಮುನ್ನವೇ ಕುಸಿದ ತೋಟಗಾರಿಕೆ ಇಲಾಖೆ ಕಟ್ಟಡ ; ಚಾಯ್‌ವಾಲಾನಿಂದ ಉಳಿತು ಜೀವ

ಭಾರೀ ಮಳೆಗೆ ತೋಟಗಾರಿಕೆ ಇಲಾಖೆಯ ಕಚೇರಿ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡ ಕುಸಿಯುವ ಮುನ್ಸೂಚನೆ ನೀಡಿದ ಚಾಯ್‌ವಾಲಾ ಆದಂ ಅವರ ಎಚ್ಚರಿಕೆಯಿಂದಾಗಿ, ಸಿಬ್ಬಂದಿ ಪ್ರಮುಖ ದಾಖಲೆಗಳನ್ನು ಸ್ಥಳಾಂತರಿಸಿ ದೂರ ಉಳಿದಿದ್ದರಿಂದ ಏಳು ಮಂದಿಯ ಪ್ರಾಣ ಉಳಿದಿದೆ.

Read Full Story

07:11 AM (IST) Jul 14

ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು

ವಸತಿ ಉದ್ದೇಶಕ್ಕಾಗಿ ಪಡೆದ ಪರವಾನಗಿಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ. ಈ ಅಕ್ರಮ ನಿರ್ಮಾಣದಿಂದಾಗಿ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

Read Full Story

06:13 AM (IST) Jul 14

ಅಂಜನಾದ್ರಿ, ಗೋಕಾಕ್, ಮಧುಗಿರಿ ಸೇರಿದಂತೆ ರಾಜ್ಯದ 13 ಕಡೆಯಲ್ಲಿ ರೋಪ್‌ವೇ - ಜಾರ್ಜ್

ರಾಜ್ಯದ 13 ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ದೇಶಿತ ರೋಪ್‌ವೇ ಯೋಜನೆಗಳ ವಿಳಂಬಕ್ಕೆ ಸಚಿವ ಕೆ.ಜೆ.ಜಾರ್ಜ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಹಲವು ವರ್ಷಗಳಿಂದ ಪ್ರಸ್ತಾಪದ ಹಂತದಲ್ಲೇ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌, ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡಿದ್ದಾರೆ.

Read Full Story

06:04 AM (IST) Jul 14

Bengaluru - ಹೆಬ್ಬಾಳ ಫ್ಲೈಓವರ್‌ ಕೆಳಗೆ ಅಕ್ರಮ ಪಾರ್ಕಿಂಗ್‌, ಓಣಿಯಂತಿರುವ ಸರ್ವೀಸ್‌ ರಸ್ತೆ

ಸಂಚಾರ ದಟ್ಟಣೆ ನಿವಾರಣೆಗೆ ನಿರ್ಮಿಸಿದ ಹೆಬ್ಬಾಳ ಮೇಲ್ಸೇತುವೆಯೇ ಈಗ ಅಕ್ರಮ ಪಾರ್ಕಿಂಗ್ ಮತ್ತು ಅವೈಜ್ಞಾನಿಕ ಬಸ್ ನಿಲ್ದಾಣದಿಂದಾಗಿ ಸಂಚಾರ ದಟ್ಟಣೆಯ ಕೇಂದ್ರವಾಗಿದೆ. ಇಕ್ಕಟ್ಟಾದ ಸರ್ವೀಸ್ ರಸ್ತೆ ಮತ್ತು ಸಂಚಾರಿ ಪೊಲೀಸರ ಗೈರುಹಾಜರಿಯಿಂದಾಗಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Read Full Story

05:30 AM (IST) Jul 14

ಫುಟ್ಪಾತ್‌, ಒತ್ತುವರಿ ತೆರವು ಬಳಿಕ ರಾಜಕಾಲುವೆ ಒತ್ತುವರಿ ತೆರವು; ಎಲ್ಲಿಂದ ಆರಂಭ?

ಫುಟ್‌ಪಾತ್ ಮತ್ತು ಅನಾಥ ವಾಹನಗಳ ತೆರವು ಕಾರ್ಯಾಚರಣೆಯ ಯಶಸ್ಸಿನ ನಂತರ, ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕಾರ್ಯಾಚರಣೆಯು ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಪರಿಣಾಮ ಬೀರುವುದರಿಂದ, ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ವಿರೋಧ ಎದುರಾಗುವ ಸಾಧ್ಯತೆಯಿದೆ.
Read Full Story

05:23 AM (IST) Jul 14

ಬೆಂಗ್ಳೂರಿನ 12 ವರ್ಷದ ಪೋಕ್ಸೋ ಕೇಸ್‌ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಿ - ಹೈಕೋರ್ಟ್‌

2014ರಲ್ಲಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಬಗ್ಗೆ ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ. 12 ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವುದನ್ನು ಖಂಡಿಸಿ, ಪ್ರಕರಣದ ವಿಚಾರಣೆಯನ್ನು 8 ವಾರಗಳಲ್ಲಿ ಪೂರ್ಣಗೊಳಿಸುವಂತೆ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
Read Full Story

More Trending News