LIVE NOW
Published : Jul 14, 2026, 05:10 AM ISTUpdated : Jul 14, 2026, 10:05 PM IST

Karnataka News Live: ನಮ್ಮ ಮೆಟ್ರೋ ಸುರಕ್ಷತೆಗೆ ಬಿಗ್‌ ಪುಶ್ - ₹1,274 ಕೋಟಿ ವೆಚ್ಚದಲ್ಲಿ ಎಲ್ಲಾ ನಿಲ್ದಾಣಗಳಿಗೂ ಬರಲಿವೆ ‘ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್’!

ಸಾರಾಂಶ

ಬೆಂಗಳೂರು: ಆ.6ರಿಂದ ಮಳೆಗಾಲದ ವಿಧಾನಮಂಡಲ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ.6 ರಂದು ಅಧಿವೇಶನ ಕರೆಯಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಹೀಗಾಗಿ ಆಗಸ್ಟ್‌ ಮೊದಲ ವಾರ ಅಧಿವೇಶನ ನಡೆಯುವುದು ಬಹುತೇಕ ಖಚಿತಗೊಂಡಿದೆ.

ಆ.6 ರಿಂದ ಅಧಿವೇಶನ ಶುರುವಾಗಲಿದ್ದು, ಮೊದಲ ದಿನ ಹಂಗಾಮಿ ಸ್ಪೀಕರ್ ಆಗಿರುವ ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಬಳಿಕ ನಿಧನರಾದ ಮಾಜಿ ಸಚಿವ ಸುಧಾಕರ್ ಅವರಿಗೆ ಸಂತಾಪ ಸೂಚನೆ ನಡೆಯಲಿದೆ. ನಂತರ ಆ.10 ರಿಂದ ಕಾರ್ಯಕಲಾಪ ಶುರುವಾಗಲಿದ್ದು ಆ.14ರವರೆಗೆ ನಡೆಯುತ್ತದೆಯೇ ಅಥವಾ ಆ.21ರವರೆಗೆ ನಡೆಯುತ್ತದೆಯೇ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಸರ್ಕಾರದಿಂದ ವಿಧಾನಸಭೆ ಸಚಿವಾಲಯಕ್ಕೆ ಈವರೆಗೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ತಲುಪಿಲ್ಲ. ದಿನಾಂಕದ ಬಗ್ಗೆ ಮಾಹಿತಿ ತಲುಪಿದರೆ ಶಾಸಕರಿಗೆ ಪ್ರಶ್ನೋತ್ತರಕ್ಕೆ ಪ್ರಶ್ನೆಗಳನ್ನು ಸಲ್ಲಿಸಲು ಸೂಚಿಸಬೇಕಾಗುತ್ತದೆ. ಸಚಿವಾಲಯಕ್ಕೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

10:05 PM (IST) Jul 14

ನಮ್ಮ ಮೆಟ್ರೋ ಸುರಕ್ಷತೆಗೆ ಬಿಗ್‌ ಪುಶ್ - ₹1,274 ಕೋಟಿ ವೆಚ್ಚದಲ್ಲಿ ಎಲ್ಲಾ ನಿಲ್ದಾಣಗಳಿಗೂ ಬರಲಿವೆ ‘ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್’!

ಬೆಂಗಳೂರು ಮೆಟ್ರೋದಲ್ಲಿ ಹೆಚ್ಚುತ್ತಿರುವ ಹಳಿ ದುರಂತ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು, ಬಿಎಂಆರ್‌ಸಿಎಲ್ ತನ್ನ 177 ನಿಲ್ದಾಣಗಳಲ್ಲಿ ₹1,274 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ (PSD) ಅಳವಡಿಸಲು ಬೃಹತ್ ಯೋಜನೆ ರೂಪಿಸಿದೆ.

Read Full Story

09:50 PM (IST) Jul 14

ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ - ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಡಿಕೆಶಿ ಮನವಿ

Karnataka Drought: ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ನಿಯೋಜಿಸಬೇಕು" ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Read Full Story

09:32 PM (IST) Jul 14

'ನೀನು ವಿಲನ್ ಅಲ್ಲ, ಆ್ಯಂಟಿ ಹೀರೋ' - 'ಲೆನಿನ್' ಪಾತ್ರದ ಹಿಂದಿನ ಕಥೆ ಹೇಳಿದ ನಟ ಪ್ರಮೋದ್

ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದೊಂದಿಗೆ ಕನ್ನಡದ ನಟ ಪ್ರಮೋದ್ ಕೂಡ ಗಮನ ಸೆಳೆದಿದ್ದಾರೆ.

Read Full Story

08:55 PM (IST) Jul 14

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಖರ್ಚಾಗಿರುವ ಹಣವೆಷ್ಟು?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈವರೆಗೆ ಒಟ್ಟು 15,470 ಕೋಟಿ ರೂಪಾಯಿ ವೆಚ್ಚವಾಗಿದೆ. ಗ್ರೀನ್‌ಫೀಲ್ಡ್‌ ಯೋಜನೆಯಾಗಿ ಆರಂಭವಾದ ಈ ವಿಮಾನ ನಿಲ್ದಾಣ, ಟರ್ಮಿನಲ್-1ರ ವಿಸ್ತರಣೆ ಹಾಗೂ ಪರಿಸರಸ್ನೇಹಿ ಟರ್ಮಿನಲ್-2 ನಿರ್ಮಾಣದ ಮೂಲಕ ಅಭಿವೃದ್ಧಿ ಹೊಂದಿದೆ.

Read Full Story

08:51 PM (IST) Jul 14

ಮಲೆನಾಡಿನಲ್ಲೇ ಮಳೆ ಕೊರತೆ - ಕೊಡಗಿನ ರೈತರ ಆತಂಕ ಹೆಚ್ಚಿಸಿದ ಹವಾಮಾನ ವರದಿ

ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ.

Read Full Story

08:10 PM (IST) Jul 14

ದರ್ಶನ್ ಹಾಡು ಹಾಡಿದ ಅಪರೂಪದ ವಿಡಿಯೋ ಹಂಚಿಕೊಂಡ ವಿಜಯಲಕ್ಷ್ಮಿ - ಫ್ಯಾನ್ಸ್ ಫುಲ್ ಖುಷ್

ದರ್ಶನ್ ಅವರ ಅಪರೂಪದ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Read Full Story

07:46 PM (IST) Jul 14

ಬೆಂಗಳೂರು TO ತುಮಕೂರು - ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ

ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳಿಗಾಗಿ ಬಿಎಂಟಿಸಿ ಹೊಸ ವಿಸ್ತಾರ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ 101 ಕಿ.ಮೀ ಸಂಚರಿಸುವ ಈ ನೇರ ಸೇವೆಯಿಂದಾಗಿ ಪ್ರಯಾಣಿಕರ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇದು ಬಿಎಂಟಿಸಿಯ ಅತಿ ಉದ್ದದ ಮಾರ್ಗವಾಗಿದೆ.
Read Full Story

07:43 PM (IST) Jul 14

'ಅಪ್ಪನ ಹಣವಲ್ಲ, ನನ್ನ ಪರಿಶ್ರಮ'... ಪ್ಯಾರಿಸ್‌ನಲ್ಲಿ ಮನೆ ಖರೀದಿಸಿದ ಭಾರತೀಯ ಯುವತಿಯ ಯಶೋಗಾಥೆ

ತ್ರಿಪುರಾ ಮೂಲದ 28 ವರ್ಷದ ಬೋರ್ನಿ ಬಾನಿಕ್ ಪ್ಯಾರಿಸ್ ಬಳಿ ಸ್ವಂತ ಮನೆ ಖರೀದಿಸಿದ ನಂತರ ಎದುರಾಗುವ ಗುಪ್ತ ವೆಚ್ಚಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಿಂಗಳಿಗೆ ₹1.4 ಲಕ್ಷ ಇಎಂಐ ಹೊರತಾಗಿಯೂ ಹಲವು ನಿರ್ವಹಣಾ ಶುಲ್ಕಗಳು ಇರುತ್ತವೆ ಎಂದು ಅವರು ವಿವರಿಸಿದ್ದಾರೆ. ಮನೆ ಖರೀದಿಯ ಆರ್ಥಿಕ ಸತ್ಯವನ್ನು ಮುಕ್ತವಾಗಿ ಹಂಚಿಕೊಂಡ ಇವರ ಪಾರದರ್ಶಕತೆಗೆ ನೆಟಿಜನ್‌ಗಳು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read Full Story

06:50 PM (IST) Jul 14

'ರಿಚರ್ಡ್ ಆ್ಯಂಟನಿ' ಸಿನಿಮಾ ಅಲ್ಲ, ನ್ಯೂಕ್ಲಿಯರ್ ಬಾಂಬ್ - ರಕ್ಷಿತ್‌ ಶೆಟ್ಟಿ ಬಗ್ಗೆ ಅಜನೀಶ್ ಏನಂದ್ರು?

ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಇದೀಗ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ನೀಡಿರುವ ಹೇಳಿಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

06:48 PM (IST) Jul 14

S Janaki - ಹೆತ್ತಮ್ಮನ ಚಿನ್ನ ಅಡವಿಟ್ಟು ಜಾನಕಮ್ಮನ ಮನೆಗೆ ಹೋದ ಬಾಲಕ; ಕೊನೆಗಾಲದಲ್ಲಿ ಅಮ್ಮನೇ ಆದ ಎಸ್ ಜಾನಕಿ!

ಇದೀಗ, ಎಸ್ ಜಾನಕಿ-ನವೀನ್ ಮೈಸೂರು ಸಂಬಂಧ ಹಲವರ ಕಣ್ಣನ್ನು ತೇವಗೊಳಿಸಿದೆ. ಆ ಪುಟ್ಟ ಬಾಲಕನ ಅಪರೊಮಿತ ಅಭಿಮಾನವೇ ಎಸ್ ಜಾನಕಿಯವರ ಕೊನೆಗಾಲದಲ್ಲಿ ತಾಯಿ-ಮಗ ಅನ್ನುವಂತಹ ಬಾಂಧವ್ಯಕ್ಕೆ ಕಾರಣವಾಯ್ತು. ಜೀವನದ ಕೊನೆಯ ಕ್ಷಣಗಳಲ್ಲಿ ಹೇಗಿದ್ದರು, ಏನೆಲ್ಲಾ ಆಯ್ತು? ಈ ಸ್ಟೋರಿ ನೋಡಿ..

Read Full Story

06:34 PM (IST) Jul 14

Mangaluru - ಸೇಂಟ್ ಅಲೋಶಿಯಸ್ ಶಾಲೆಗೆ 1983ರ ಬ್ಯಾಚ್‌ನಿಂದ ರೂ. 65 ಲಕ್ಷದ ವಿದ್ಯಾರ್ಥಿವೇತನ ದತ್ತಿ ಕೊಡುಗೆ!

ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

Read Full Story

06:27 PM (IST) Jul 14

ತಿರುಪತಿ ಮೊದಲ ಆರತಿ ಗೌರವಕ್ಕೆ ಹೊಸ ಶಿಷ್ಟಾಚಾರ - ಡಿಕೆಶಿ ಪ್ರಸ್ತಾಪಕ್ಕೆ ಟಿಟಿಡಿ ಸದಸ್ಯ ನರೇಶ್ ಬೆಂಬಲ

ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರೊಬ್ಬರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಶಿಷ್ಟಾಚಾರ ರೂಪಿಸುವುದು ಸೂಕ್ತ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.

Read Full Story

06:02 PM (IST) Jul 14

ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಕೂರುವೆ - ಮಾಜಿ ಪ್ರಧಾನಿ ಗೌಡರಿಂದ ಸರ್ಕಾರಕ್ಕೆ ಎಚ್ಚರಿಕೆ

ಬಿಡದಿ ಉಪನಗರ ಯೋಜನೆಯ ಭೂಸ್ವಾಧೀನವನ್ನು ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಬಳಿ ಧರಣಿ ಕೂರುವುದಾಗಿ ಎಚ್ಚರಿಸಿರುವ ಅವರು, ಇದು ₹20,000 ಕೋಟಿಯ ಯೋಜನೆಯಾಗಿದ್ದು, ಬಡ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story

05:14 PM (IST) Jul 14

'ನನ್ನ ಮುದ್ದಿನ ಚಂಪಿ ಕೊನೆಗೂ ಮದುವೆಯಾದಳು'... ಶರ್ಮಿಳಾಗೆ ರಮ್ಯಾ ಹೃದಯಸ್ಪರ್ಶಿ ಶುಭಾಶಯ

ಶರ್ಮಿಳಾ ಮಾಂಡ್ರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದ ನಟಿ ರಮ್ಯಾ, ತಮ್ಮ ಆತ್ಮೀಯ ಗೆಳತಿ ಶರ್ಮಿಳಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

Read Full Story

05:13 PM (IST) Jul 14

ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!

ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Read Full Story

05:02 PM (IST) Jul 14

₹120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ - ಸ್ಮಶಾನದ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ11 ಮಂದಿ ಅರೆಸ್ಟ್!

ಆದಿಚುಂಚನಗಿರಿ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಸ್ಮಶಾನದಲ್ಲಿ ಸಮಾಧಿ ಹುಡುಕಿ ನಕಲಿ ವಂಶವೃಕ್ಷ ತಯಾರಿಸಿ, ಸರ್ಕಾರಿ ಅಧಿಕಾರಿಗಳ ನೆರವಿನಿಂದ ಈ ವಂಚನೆ ಎಸಗಲಾಗಿದ್ದು, 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.
Read Full Story

04:49 PM (IST) Jul 14

ಗಂಗಾವತಿಯಲ್ಲಿ ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಎಚ್.ಆರ್. ಶ್ರೀನಾಥ್ ಬಿಗ್ ಡಿಮ್ಯಾಂಡ್

ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.

Read Full Story

04:37 PM (IST) Jul 14

ಆ್ಯಕ್ಷನ್, ಅಟಿಟ್ಯೂಡ್, ರಗಡ್ ಲುಕ್... 'ಪರಾಕ್' ಟೀಸರ್‌ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹವಾ

Paraak Kannada Movie: ಸ್ಯಾಂಡಲ್​ವುಡ್‌ನ ಬಹುಬೇಡಿಕೆಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ.

Read Full Story

04:07 PM (IST) Jul 14

ಗರ್ಭಿಣಿಯಾಗಿದ್ದಾಗ ಫಿಂಗರ್​ಚಿಪ್ಸ್​ ತಿನ್ನಬೇಡ ಎಂದ ಪತಿ - ಹೈಕೋರ್ಟ್​ ಮೆಟ್ಟಿಲೇರಿದ ದೌರ್ಜನ್ಯ ಕೇಸ್​

ಗರ್ಭಿಣಿಯಾಗಿದ್ದಾಗ ಫಿಂಗರ್ ಚಿಪ್ಸ್ ತಿನ್ನಬೇಡ ಎಂದ ಪತಿಯ ವಿರುದ್ಧ ಪತ್ನಿ ಗೃಹಹಿಂಸೆ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪತ್ನಿಯ ದೂರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ, ಪತಿಯ ಮೇಲಿನ ತನಿಖೆಗೆ ತಡೆ ನೀಡಿದೆ. ಈ ಘಟನೆಯು ಕೌಟುಂಬಿಕ ದೌರ್ಜನ್ಯ ಕಾನೂನಿನ ದುರುಪಯೋಗದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

04:02 PM (IST) Jul 14

Udupi Mutt - ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಶ್ರೀ ಶಂಕಾರಾಚಾರ್ಯರ ನಿಂದನೆ; ಕ್ಷಮೆ ಕೇಳಿದ ಮಹಿಳೆ

Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.

Read Full Story

04:00 PM (IST) Jul 14

ಛೀ... ಛೀ... ಇದೆಂತ ಅಸಹ್ಯ! ನಮ್ಮ ಮೆಟ್ರೋದಲ್ಲಿ ಮುತ್ತಿನಾಟ, ಲಿಪ್ ಟು ಲಿಪ್ ಕಿಸ್‌ ಮಾಡಿ ಮೈಮರೆತ ಜೋಡಿ!

ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನಲ್ಲಿ ಯುವ ಜೋಡಿಯೊಂದು ಸಾರ್ವಜನಿಕವಾಗಿ ಮುತ್ತಿಕ್ಕುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಸಹ-ಪ್ರಯಾಣಿಕರಲ್ಲಿ ಮುಜುಗರ ಉಂಟುಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿನ ಅಸಭ್ಯ ವರ್ತನೆ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ನಿಯಮಗಳ ಪಾಲನೆ ಮತ್ತು ಕಠಿಣ ಕ್ರಮಗಳ ಅಗತ್ಯತೆಯ ಬಗ್ಗೆ ಚರ್ಚೆ ಶುರುವಾಗಿದೆ.
Read Full Story

03:33 PM (IST) Jul 14

ನಮ್ಮ ಮನೇಲಿ ದೇವರ ರೂಮ್‌ ಇದೆ, ಲವ್‌ ಜಿಹಾದ್‌ ಮಾಡ್ತಿಲ್ಲ - ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌

Kannada Youtuber Sam Sameer Neha Gupta Wedding: ಕನ್ನಡ ಯುಟ್ಯೂಬರ್ ಸ್ಯಾಮ್‌ ಸಮೀರ್‌ ಅವರು ನೇಹಾ ಗುಪ್ತ ಜೊತೆ ಮದುವೆಯಾಗಲು ರೆಡಿಯಾಗಿದ್ದಾರೆ. ಈಗಾಗಲೇ ಹೆಣ್ಣು ನೋಡುವ ಶಾಸ್ತ್ರ ಕೂಡ ಆಗಿದೆ. ಈಗ ಇವರಿಬ್ಬರು ಸೇರಿಕೊಂಡು ಒಂದು Vlog ಮಾಡಿ ಕೆಲ ಮಾತುಗಳಿಗೆ ಉತ್ತರ ಕೊಟ್ಟಿದ್ದಾರೆ.

Read Full Story

02:40 PM (IST) Jul 14

ಲೋನ್ ಮಾಡಬೇಕು ಅಂದುಕೊಂಡವ್ರಿಗೆ ಕೆಟ್ಟ ಸುದ್ದಿ.. EMI ದುಪ್ಪಟ್ಟು ಬರೆ? ಎಚ್ಚರಿಕೆ ಕೊಟ್ಟ ತಜ್ಞರು

ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವರ್ಷದ ಅಂತ್ಯದ ವೇಳೆಗೆ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ವರದಿಗಳು ಸೂಚಿಸುತ್ತಿವೆ. ಜಾಗತಿಕ ಉದ್ವಿಗ್ನತೆ ಮತ್ತು ಹಣದುಬ್ಬರ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಬಹುದಾಗಿದ್ದು, ಇದು ಗೃಹ, ವಾಹನ ಸಾಲಗಳ ಇಎಂಐ ಮೇಲೆ ನೇರ ಪರಿಣಾಮ ಬೀರಲಿದೆ.
Read Full Story

01:38 PM (IST) Jul 14

ಕಂಟೆಂಟ್ ಕ್ರಿಯೇಟರ್ ಆಗಲು 1.7 ಕೋಟಿ ಸಂಬಳದ ಕೆಲಸ ಬಿಟ್ಟ 27ರ ಯುವಕ; ಮುಂದೆ ಆಗಿದ್ದೇನು?

1.7 ಕೋಟಿ ರೂಪಾಯಿ ಸಂಬಳದ ಮೈಕ್ರೋಸಾಫ್ಟ್ ಕೆಲಸವನ್ನು ತೊರೆದು ಕಂಟೆಂಟ್ ಕ್ರಿಯೇಟರ್ ಆಗಲು ಹೊರಟ 27 ವರ್ಷದ ಕ್ರಿಸ್ ಹಾರ್ಮ್ಸ್ ಅವರ ಕಥೆಯಿದು. ಆರಂಭದಲ್ಲಿ ಸೋಲು, ಹತಾಶೆ ಅನುಭವಿಸಿದರೂ, ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ, ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಯಶಸ್ಸು ಕಂಡುಕೊಂಡರು.
Read Full Story

01:33 PM (IST) Jul 14

ಬೆಂಗಳೂರಲ್ಲಿ ದೇಶದ ಮೊದಲ AI University ಸ್ಥಾಪನೆ - ಸಿಎಂ ಡಿಕೆಶಿ ಘೋಷಣೆ, ಜಾಗತಿಕ ಇತಿಹಾಸಕ್ಕೆ ಸಜ್ಜಾದ ಕರ್ನಾಟಕ!

ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಘೋಷಣೆ ಮಾಡಿದ್ದು, ಕರ್ನಾಟಕವನ್ನು 'ಜವಾಬ್ದಾರಿಯುತ ಎಐ' ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

01:14 PM (IST) Jul 14

KS Chithra-S Janaki - ಅಮ್ಮ ಪದೇ ಪದೇ ಮಾಡುತ್ತಿದ್ದ ಫೋನ್ ಕರೆಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ - ಕೆಎಸ್ ಚಿತ್ರಾ

‘ನನ್ನ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಾನು ಮೈಸೂರಿನಿಂದ ಮರಳಿ ಬಂದಿದ್ದೇನೆ. ಅವರು ಇನ್ನು ಮುಂದೆ ನನ್ನ ಜೊತೆಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅವರು ಪದೇ ಪದೇ ಮಾಡುತ್ತಿದ್ದ ಫೋನ್ ಕರೆಗಳನ್ನು ನಾನು ತುಂಬಾ ಮಿಸ್ ಮಾಡುತ್ತೇನೆ...’

Read Full Story

12:43 PM (IST) Jul 14

ಅಂಗಾಂಗ ಕಳ್ಳತನದ Paradox Movie - ‌ ಎಷ್ಟೋ ವರ್ಷಗಳ ಬಳಿಕ ಕನ್ನಡಕ್ಕೆ ಬಂದ ನಟಿ ಹನ್ಸಿಕಾ ಮೊಟ್ವಾನಿ!

Paradox Kannada Movie: ನೃತ್ಯ ನಿರ್ದೇಶಕ ಕ್ಯಾಪ್ಟನ್ ಕಿಶೋರ್ ಈಗ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಅವರು 'ಪ್ಯಾರಾಡಾಕ್ಸ್' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರವಾಗಿದ್ದು, ಪ್ರಮುಖ ಪಾತ್ರದಲ್ಲಿ ಬಹು ಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅಭಿನಯ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.

Read Full Story

12:39 PM (IST) Jul 14

ಖಾಕಿ ಏನು ಬೇಕಾದ್ರೂ ಮಾಡಬಹುದಾ? ಸೈಟ್‌, ಮನೆ, ಹಣ ಕೊಟ್ಟಿಲ್ಲ ನಿಮ್ಮಪ್ಪ ಎಂದು ಪತ್ನಿ ಮೇಲೆ Bengaluru PSI ಹಲ್ಲೆ

ಬೆಂಗಳೂರಿನ ಪಿಎಸ್‌ಐ ಭೈರಪ್ಪ, ತಮ್ಮ ಪತ್ನಿ ಮತ್ತು ಮಾವನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರ ಪತ್ನಿಯೇ ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್ ಯುವತಿಯರಿಗೆ ಗಾಳ ಹಾಕುವುದು ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದು,  ಆಯುಕ್ತರ ಮೊರೆ ಹೋಗಲು ನಿರ್ಧರಿಸಿದ್ದಾರೆ.

Read Full Story

12:23 PM (IST) Jul 14

S Janaki - P Susheela - ಎಸ್ ಜಾನಕಿ ಬಗ್ಗೆ ಸಮಕಾಲೀನ ಗಾಯಕಿ ಪಿ ಸುಶೀಲಾ ಹೇಳಿದ್ದೇನು? ವೈರಲ್ ಆಯ್ತು ಸೋಷಿಯಲ್ ಮೀಡಿಯಾದ ಈ ವಿಡಿಯೋ!

ಜಾನಕಿ ಇಲ್ಲದೆ ಸಂಗೀತ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ.. ಜಾನಕಮ್ಮನಂತಹ ಮಹಾನ್ ಗಾಯಕಿಯ ಧ್ವನಿಯನ್ನು ಕೇಳುವ ಭಾಗ್ಯವನ್ನು ಪಡೆಯುವ ಮೂಲಕ ಈ ಪೀಳಿಗೆಗೆ ಸಾಕಷ್ಟು ಪುಣ್ಯ ಸಿಕ್ಕಿ.. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಅಮರ ಹಾಡುಗಳು ಹಾಗೇ ಇರುತ್ತದೆ..

Read Full Story

12:19 PM (IST) Jul 14

ಎರಡು ಪ್ರತ್ಯೇಕ ರೈಲು ಮಾರ್ಗದ ಕಾಮಗಾರಿಗೆ ವೇಗ; ಮಧುಗಿರಿ–ಶಿರಾ–ಪಾವಗಡ ಜನರ ಕಾಯುವಿಕೆ ಅಂತ್ಯ!

ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲ್ವೆ ಕನಸು ಕೊನೆಗೂ ನನಸಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಎರಡು ಪ್ರತ್ಯೇಕ ನೂತನ ರೈಲು ಮಾರ್ಗಗಳ ಪ್ರಗತಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.

Read Full Story

12:08 PM (IST) Jul 14

Dildaar Movie - 'ದಿಲ್‌ದಾರ್‌' ಆದ 'ಪಡ್ಡೆಹುಲಿ' ಸಿನಿಮಾ ಖ್ಯಾತಿಯ ಶ್ರೇಯಸ್‌ ಮಂಜು; ಪೋಸ್ಟರ್‌ ರಿಲೀಸ್

Dildar Kannada Movie: ಪಡ್ಡೆಹುಲಿ ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್‌ದಾರ್'. ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

12:01 PM (IST) Jul 14

ಡಿಸಿಪಿಯನ್ನೂ ಬಿಡಲಿಲ್ಲ ದುಷ್ಟರು.. ಬೆಂಗಳೂರಲ್ಲಿ ವಂಚನೆಯ ಜಾಲ ಹೆಂಗಿದೆ ಅಂದ್ರೆ..

ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚೆಗಿನ ದಿನಗಳಲ್ಲಿ ತೀರಾಸಾಮಾನ್ಯವಾಗಿ ಬಿಟ್ಟಿದೆ. ಜನ ಎಷ್ಟೇ ಎಚ್ಚೆತ್ತುಕೊಂಡಿದ್ದರೂ, ಖದೀಮರು ಇನ್ಯಾವುದೋ ರೂಪದಲ್ಲಿ ಯಾಮಾರಿಸ್ತಿದ್ದಾರೆ. ಇದೀಗ ಐಪಿಎಸ್ ಅಧಿಕಾರಿ ಒಬ್ಬರ ಹೆಸರಲ್ಲೇ ಮಹಾವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.

Read Full Story

11:52 AM (IST) Jul 14

Maina Serial - ‌ ಬಲು ರೋಚಕವಾದ ಮೈನಾ ಧಾರಾವಾಹಿಯ ಕಬಡ್ಡಿ ಎಪಿಸೋಡ್‌ಗಳು!

ಸನ್‌ ಉದಯ ವಾಹಿನಿಯಲ್ಲಿ ‘ಮೈನಾ’ ಧಾರಾವಾಹಿ ಪ್ರಸಾರ ಆಗುತ್ತಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಧನುಷ್‌ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇವರ ಜೊತೆ ‘ವಧು’ ಧಾರಾವಾಹಿಯ ದುರ್ಗಶ್ರೀ ಕೂಡ ನಟಿಸಿದ್ದಾರೆ.

Read Full Story

11:40 AM (IST) Jul 14

ಕನ್ನಡದಲ್ಲಿ ವಿಡಿಯೋ ಮಾಡ್ತೀರಾ? ಅಮೆರಿಕದ ವ್ಲಾಗರ್‌ಗೆ ಬೆಂಗಳೂರಿನ ಮುಗ್ದ ಆಟೋ ಚಾಲಕನ ಪ್ರಶ್ನೆ ವೈರಲ್

ನೀವು ಕನ್ನಡದಲ್ಲಿ ವಿಡಿಯೋ ಮಾಡುತ್ತೀರಾ, ನಮಗೆ ಇಂಗ್ಲೀಷ್ ಗೊತ್ತಾಗಲ್ಲ ಎಂದು ಬೆಂಗಳೂರಿನ ಮುಗ್ದ ಆಟೋ ಚಾಲಕ ಅಮೆರಿಕನ್ ವ್ಲಾಗರ್‌ಗೆ ಪ್ರಶ್ನಿಸಿದ್ದರೆ, ಅತ್ತ ವ್ಲಾಗರ್, ಇಲ್ಲಾ ನಾನು ಕೆನಾಡಗೆ ಹೋಗಿಲ್ಲ ಎಂದು ಉತ್ತರಿಸಿದ್ದಾನೆ. ಈ ಸಂಭಾಷಣೆ ವಿಡಿಯೋ ಭಾರಿ ವೈರಲ್ ಆಗಿದೆ.

Read Full Story

11:31 AM (IST) Jul 14

ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ನಿಧನ - ಸಿಎಂ ಡಿಕೆಶಿ, ಹೆಚ್‌ಡಿಕೆ ಸೇರಿ ಹಲವು ಗಣ್ಯರ ಸಂತಾಪ

ಬಿಜೆಪಿಯ ಹಿರಿಯ ನಾಯಕ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ (88) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಸಚಿವರಾಗುವವರೆಗೆ ಸಾಗಿದ ಅವರ ರಾಜಕೀಯ ಹಾದಿ, ಸಿದ್ಧಾಂತಕ್ಕೆ ಬದ್ಧರಾಗಿ ರಾಜೀನಾಮೆ ನೀಡಿದ ಘಟನೆ ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಈ ಲೇಖನ ವಿವರಿಸುತ್ತದೆ.
Read Full Story

10:40 AM (IST) Jul 14

ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ - ಕೆಇಎಯಿಂದ ಮಹತ್ವದ ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಮತ್ತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಇಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಅವಕಾಶವಿದೆ.
Read Full Story

10:37 AM (IST) Jul 14

ಟೀಮ್ ಮೆಸೇಜ್‌ನಿಂದ ಟಾಯ್ಲೆಟ್ ಬ್ರೇಕ್‌ವರೆಗೆ... ಮ್ಯಾನೇಜರ್ ವಿರುದ್ಧ ಉದ್ಯೋಗಿಯ ಗಂಭೀರ ಆರೋಪ ವೈರಲ್

ಡಿಜಿಟಲ್ ಏಜೆನ್ಸಿಯೊಂದರಲ್ಲಿ ಬಾತ್‌ರೂಮ್ ವಿರಾಮ ಹಾಗೂ ಖಾಸಗಿ ಚಾಟ್‌ಗಳನ್ನು ಟ್ರ್ಯಾಕ್ ಮಾಡುವ ವಿಷಕಾರಿ ಸಂಸ್ಕೃತಿ ವಿರುದ್ಧ ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಬೇಸರ ಹೊರಹಾಕಿದ್ದಾರೆ. ಸಹೋದ್ಯೋಗಿಯೊಂದಿಗಿನ ಚಾಟ್ ಕದ್ದಾಲಿಸಿ ಮ್ಯಾನೇಜರ್ ಆತನಿಗೆ ವಜಾ ಮಾಡುವ ಬೆದರಿಕೆ ಒಡ್ಡಿದ್ದಾರೆ. ಈ ಪೋಸ್ಟ್‌ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ಕೆಲಸ ಹುಡುಕಿಕೊಂಡು ತಕ್ಷಣ ಆಫೀಸ್ ಬಿಡುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ.

Read Full Story

10:25 AM (IST) Jul 14

KRS ಒಳಹರಿವಿನಲ್ಲಿ ಭಾರೀ ಕುಸಿತ, ರೈತರಲ್ಲಿ ಮನೆ ಮಾಡಿದ ಆತಂಕ..!

ಕಳೆದ ಒಂದು ವಾರದ ಹಿಂದೆ ಆರ್ಭಟಿಸಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ಕಳೆದು ಹೋಗಿದ್ದಾನೆ. ಪರಿಣಾಮ ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೆಆರ್‍‌ಎಸ್ ಡ್ಯಾಂ ಕುರಿತ ಮಾಹಿತಿ ಇಲ್ಲಿದೆ.

Read Full Story

09:47 AM (IST) Jul 14

ಬೇಸಿಗೆ ಆಗಿ ಬದಲಾಯ್ತು ಮಳೆಗಾಲ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ 3 ರಿಂದ 4 ಡಿಗ್ರಿ ಸೆ ಉಷ್ಣಾಂಶ ಏರಿಕೆ!

ನೈರುತ್ಯ ಮಾನ್ಸೂನ್ ದುರ್ಬಲಗೊಂಡಿದ್ದರಿಂದ ಕರ್ನಾಟಕದಲ್ಲಿ ಮಳೆಗಾಲದಲ್ಲಿಯೇ ಬೇಸಿಗೆಯಂತಹ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯ ಕೊರತೆಯಿಂದ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.
Read Full Story

09:45 AM (IST) Jul 14

ಅತಿಥಿ ಉಪನ್ಯಾಸಕರ ನೇಮಕಾತಿ ಆರಂಭ; ಅರ್ಜಿಯಲ್ಲಿ ಈ ತಪ್ಪು ಮಾಡಿದ್ರೆ ಕ್ರಿಮಿನಲ್ ಕೇಸ್

ಮಾಸ್ಟರ್ ಡಿಗ್ರಿ ಮಾಡ್ಕೊಂಡು ಕೆಲಸಕ್ಕಾಗಿ ಅಲೆದಾಟ ನಡೆಸ್ತಿರೋರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯದಲ್ಲಿರುವ ವಿವಿಧ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

Read Full Story

More Trending News