ಬೆಂಗಳೂರು (ಜೂ.10) : ರಾಜ್ಯನ ರಾಜಕಾರಣದಲ್ಲಿ ಸಂಭವಿಸಿದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಇಮೇಜ್ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಬುಲಾವ್ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಈ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಲಿದ್ದಾರೆ.
ಹಾಲಿ ಸಚಿವ ಸಂಪುಟದ 8 ರಿಂದ 10 ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್ ಮುಟ್ಟಿವೆ. ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್ಗೆ ಇದೆ ಎನ್ನಲಾಗಿದೆ.
11:28 PM (IST) Jun 10
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಇದೀಗ UEFA ನೇಷನ್ ಲೀಗ್ಸ್ ಫೈನಲ್ ಪಂದ್ಯದಲ್ಲಿ ದುರಂತ ನಡೆದಿದೆ. ಓರ್ವ ಅಭಿಮಾನಿ ಮೃತಪಟ್ಟಿದ್ದಾನೆ.
11:12 PM (IST) Jun 10
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭಗೊಂಡಿದೆ. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
10:48 PM (IST) Jun 10
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಉದ್ಯೋಗಗಳ ಭದ್ರತೆ ಪ್ರಶ್ನಾರ್ಹವಾಗಿದೆ. ಐಟಿ ಕ್ಷೇತ್ರಕ್ಕೆ ಬರಲು ಬಯಸುವವರಿಗೆ ಮೈಕ್ರೋಸಾಫ್ಟ್ ಸಿಇಒ ಸಲಹೆ ನೀಡಿದ್ದಾರೆ.
10:36 PM (IST) Jun 10
ಆಪಲ್ನ iOS 26 "ಲಿಕ್ವಿಡ್ ಗ್ಲಾಸ್" ವಿನ್ಯಾಸ, ಆನ್-ಡಿವೈಸ್ AI, ಲೈವ್ ಟ್ರಾನ್ಸ್ಲೇಷನ್, ಜೆನ್ಮೋಜಿ ಸೇರಿದಂತೆ ಹತ್ತು ಹಲವು ಫೀಚರ್ಸ್ ಹೊಂದಿರುವ ಹಾಗೂ ಎಐ ಟೆಕ್ iOS 26 ಬಿಡುಗಡೆಯಾಗಿದೆ. ಏನಿದರೆ ವಿಶೇಷತೆ?
10:00 PM (IST) Jun 10
ದೇಶ ವಿದೇಶದಲ್ಲೂ ಜನ ಮನ ಗೆದ್ದ 777 ಚಾರ್ಲಿ ಸಿನಿಮಾಗೆ ಮೂರು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ನಟರಾದ ಸಂಗೀತ ಶೃಂಗೇರಿ ಹಾಗೂ ರಕ್ಷಿತ್ ಶೆಟ್ಟಿ ಏನು ಹೇಳಿದ್ದಾರೆ ನೋಡಿ.
09:59 PM (IST) Jun 10
ಬನ್ನೇರುಘಟ್ಟ ಮೃಗಾಲಯದಲ್ಲಿರುವ ವನ್ಯ ಮೃಗಗಳಿಗೆ ಇದೀಗ ಕಾಡು ಚಿರತೆಗಳ ಆತಂಕ ಕಾಡುತ್ತಿದೆ. ಇದೀಗ ಗರ್ಭಿಣಿ ಜೀಬ್ರಾ ಇದೇ ಕಾಡು ಚಿರತೆಗಳ ಓಡಾಟದ ಭಯದಿಂದ ಸಾವನ್ನಪ್ಪಿದೆ.
09:24 PM (IST) Jun 10
ಭಾರತದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗಿದೆ. ಇದೀಗ 7000 ಗಡಿ ತಲುಪಿದೆ. ಇತ್ತ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಇಬ್ಬರು ಕೋವಿಡ್ ವೈರಸ್ಗೆ ಬಲಿಯಾಗಿದ್ದಾರೆ.
09:05 PM (IST) Jun 10
90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿಯರು ಈವಾಗ ವಯಸ್ಸಾದ ಮೇಲೆ ಹೇಗಾಗಿದ್ದಾರೆ ಇಲ್ಲಿದೆ ಫೋಟೊಗಳು.
08:46 PM (IST) Jun 10
ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದ ಕೆಎಸ್ಸಿಎ ತೀವ್ರ ಹಿನ್ನಡೆ ಅನುಭವಿಸಿದೆ. ಎಫ್ಐಆರ್ ಸಂಕಷ್ಟದ ನಡುವೆ ಇದೀಗ ಬಿಸಿಸಿಐ ಶಾಕ್ ಕೊಟ್ಟಿದೆ.
08:07 PM (IST) Jun 10
ಪಾಕಿಸ್ತಾನದ ಸೆನೆಟರ್ ಶೆರ್ರಿ ರೆಹಮಾನ್, ಸ್ಕೈ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದನೆಯ ಕುರಿತು ತಮ್ಮ ದೇಶದ ಸ್ಥಿತಿಗತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಕ್ರಿಯ ಹೋರಾಟ ನಡೆಯುತ್ತಿದೆ, ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವರದಿ ಮಾಡುತ್ತಿವೆ ಎಂದು ಆರೋಪಿಸಿದರು.
08:00 PM (IST) Jun 10
07:21 PM (IST) Jun 10
ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆಯಾ? ಒಂದು ಕಾಲದಲ್ಲಿ ಭಾರಿ ಲಾಭದಲ್ಲಿದ್ದ ಪಿಜಿ (ಪೇಯಿಂಗ್ ಗೆಸ್ಟ್) ಉದ್ಯಮ ಇದೀಗ ನಷ್ಟದಲ್ಲಿದೆ. ಪ್ರತಿ ದಿನ ಒಂದೊಂದು ಪಿಜಿಗಳು ಬಂದ್ ಆಗುತ್ತಿದೆ. ಇದೀಗ ನಗರದಲ್ಲಿ 200 ರಿಂದ 300 ಪಿಜಿ ಸ್ಥಗಿತಗೊಂಡಿದೆ.
07:20 PM (IST) Jun 10
ಇದು ಬೇಡಿಕೆ ಆಧಾರಿತ ಜನ ಕಲ್ಯಾಣ ಕಾರ್ಯಕ್ರಮವಾಗಿರುವುದರಿಂದ ಅಂತಹ ಖರ್ಚು ಮಿತಿಗಳು ಈ ಯೋಜನೆಗೆ ಕೆಲಸ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ವಾದಿಸಿದೆ ಎಂದು ವರದಿ ಹೇಳಿದೆ.
07:05 PM (IST) Jun 10
50 ಸಾವಿರಕ್ಕೂ ಅಧಿಕ ತಿಂಡಿ-ತಿನಿಸುಗಳಲ್ಲಿ ನಿಮಗೆ ಬೇಕಾದದ್ದನ್ನು ಖುದ್ದು ಬ್ರೋಸ್ ಮಾಡಿ ಆಯ್ಕೆ ಮಾಡಿ ಮನೆಯಿಂದಲೇ ಸೇವಿಸುವ ಹೊಸ ಫುಡ್ ಡೆಲವರಿಯನ್ನು ಶುರು ಮಾಡುತ್ತಿದೆ ರಾಪಿಡೋ. ಇದರ ವಿವರ ಇಲ್ಲಿದೆ...
06:34 PM (IST) Jun 10
06:24 PM (IST) Jun 10
ಚೀನಾದ ಶತಕೋಟಿ ಡಾಲರ್ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳು ಬೇಕಾಗಿರುವ ಕಾರಣದಿಂದ 30 ಸಾವಿರ ಇದ್ದ ಕತ್ತೆಗಳ ಬೆಲೆ 2 ಲಕ್ಷ ರೂಪಾಯಿ ದಾಟಿದೆ. ಪಾಕಿಸ್ತಾನಕ್ಕೆ ಸದ್ಯ ಕತ್ತೆ ಕೈಹಿಡಿಯುತ್ತಿದೆ. ಈ ಕುರಿತು ಒಂದು ವರದಿ.
06:06 PM (IST) Jun 10
05:52 PM (IST) Jun 10
ಒಂದು ಕಾಲದಲ್ಲಿ ಬೀದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಈ ಕುಟುಂಬವು ಈಗ ಕಪೂರ್ಗಳು, ಜೋಹರ್ಗಳು, ಖಾನ್ಗಳು, ಚೋಪ್ರಾಗಳು ಮತ್ತು ಬಚ್ಚನ್ಗಳನ್ನು ಹಿಂದಿಕ್ಕಿ ಬಾಲಿವುಡ್ನಲ್ಲಿ ಅತ್ಯಂತ ಶ್ರೀಮಂತ ಕುಟುಂಬವಾಗಿ ಎದ್ದು ನಿಂತಿದೆ.
05:51 PM (IST) Jun 10
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್ರ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ ಎಐಎಡಿಎಂಕೆ ಪಕ್ಷಕ್ಕೆ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಿವೃತ ಸರ್ವೆಯರ್ ಒಬ್ಬರು ಜಿಲ್ಲಾ ಕಚೇರಿಯಲ್ಲಿ ಇದನ್ನು ಪ್ರಶ್ನಸಿದ್ದಾರೆ.
05:31 PM (IST) Jun 10
05:28 PM (IST) Jun 10
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಶತಕ ಬಾರಿಸಿರುವ 5 ಭಾರತೀಯ ಬ್ಯಾಟರ್ಗಳ ಬಗ್ಗೆ ತಿಳಿದುಕೊಳ್ಳೋಣ.
05:24 PM (IST) Jun 10
ಚಿನ್ನ, ಬೆಳ್ಳಿ, ಭೂಮಿ, ಹಣ ಅಲ್ಲ, ಮುಂದಿನ 5 ರಿಂದ 10 ವರ್ಷದಲ್ಲಿಈ ವಸ್ತು ಅತ್ಯಂತ ದುಬಾರಿಯಾಗುತ್ತದೆ ಎಂದು ಶ್ರೀಮಂತ ಯುವ ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದಾರೆ. ಅಷ್ಟಕ್ಕೂ ನಿಖಿಲ್ ಕಾಮತ್ ಹೇಳಿದ ಅತೀ ಹೆಚ್ಚು ಮೌಲ್ಯ, ಬೆಲೆಯಾಗಿ ಹೊರಹೊಮ್ಮಲಿರು ಆ ವಸ್ತು ಯಾವುದು?
05:12 PM (IST) Jun 10
05:11 PM (IST) Jun 10
ದಾಂಪತ್ಯ, ಸಂಬಂಧಗಳೇ ಮಾಯ ಆಗ್ತಿದೆಯಾ ಎನ್ನುವಂಥ ಈ ದಿನಗಳಲ್ಲಿ ಬಿಕ್ಕಿ ಬಿಕ್ಕಿ ಅಳ್ತಿರೋ ಪತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಆಗಿದ್ದೇನು ನೋಡಿ!
05:03 PM (IST) Jun 10
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಭಾರತದ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಒಲಿದು ಬಂದಿದೆ. ಇದರ ಬೆನ್ನಲ್ಲೇ ಧೋನಿ ಬಗ್ಗೆ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
04:59 PM (IST) Jun 10
ಭಾರತದ ಜೊತೆ ಜಗತ್ತಿನ ಕೆಲ ರಾಷ್ಟ್ರಗಳ ಜೊತೆ ಅನಾದಿಕಾಲದಿಂದಲೂ ಬಹಳ ಉತ್ತಮ ಹಾಗೂ ಆಳವಾದ ಸಂಬಂಧವಿದೆ. ಅಂತಹ 5 ದೇಶಗಳ ಬಗ್ಗೆ ಈಗ ನೋಡೋಣ
04:40 PM (IST) Jun 10
ದೆಹಲಿಯ ದ್ವಾರಕೆಯಲ್ಲಿನ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ. ಇಬ್ಬರು ಮಕ್ಕಳ ರಕ್ಷಿಸಲು ತಂದೆ 7ನೇ ಮಹಡಿಯಿಂದ ಹಾರಿದ ಘಟನೆ ನಡೆದಿದೆ. ಮುಂದೇನಾಯ್ತು?
04:10 PM (IST) Jun 10
03:58 PM (IST) Jun 10
03:55 PM (IST) Jun 10
03:48 PM (IST) Jun 10
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಆರ್ಸಿಬಿ ತಂಡ ಖರೀದಿಸಬೇಕಿದ್ರೆ ನಿಮ್ಮ ಬಳಿ ಎಷ್ಟು ಹಣವಿರಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
03:40 PM (IST) Jun 10
ಗುಜರಾತ್ನ ಸೂರತ್ನಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೊರಾ ನಿಗೂಢವಾಗಿ ಸಾವಿಗೆ ಶರಣಾಗಿದ್ದಾರೆ.
03:38 PM (IST) Jun 10
ಭಾರತದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಆಸ್ತಿಗಳನ್ನು ಬ್ಯಾಂಕ್ ಮುಟ್ಟುಗೋಲು ಮಾಡಲಾಗಿದೆ. 9 ವರ್ಷಗಳಿಂದ ಲಂಡನ್ನಲ್ಲಿ ನೆಲೆಸಿರುವ ವಿಜಯ್ ಮಲ್ಯ, ಭಾರತದಲ್ಲಿ ಎಲ್ಲವನ್ನೂ ಕಳೆದುಕೊಂಡಿಲ್ಲ. ಈಗಲೂ ವಿಜಯ್ ಮಲ್ಯ ಭಾರತದಲ್ಲಿ ಬರೋಬ್ಬರಿ 4,400 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.
03:31 PM (IST) Jun 10
ನಂದಮೂರಿ ಬಾಲಕೃಷ್ಣ ಇಂದು ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಸತತ ಗೆಲುವು ಸಾಧಿಸಿದ್ದಾರೆ. ರಾಜಕಾರಣಿಯಾಗಿಯೂ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಹೊಡೆದಿದ್ದಾರೆ. ಹೀಗಾಗಿ ಈ ಹುಟ್ಟುಹಬ್ಬ ತುಂಬಾ ವಿಶೇಷ.
03:29 PM (IST) Jun 10
02:56 PM (IST) Jun 10
02:54 PM (IST) Jun 10
ಜೂನ್ 4 ರಂದು ವಿಧಾನಸೌಧದ ಎದುರು ಐಪಿಎಲ್ 2024 ಚಾಂಪಿಯನ್ಗಳನ್ನು ಸನ್ಮಾನಿಸಲು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದ್ದರು ಎಂದು ರಾಜಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
02:46 PM (IST) Jun 10
02:46 PM (IST) Jun 10
ಹೆಸರಲ್ಲೇನಿದೆ ಎಂಬುದು ಅನೇಕರ ಮಾತು ಆದರೆ ಸಂಖ್ಯಾಶಾಸ್ತ್ರ ಹಿಂದೆ ಹೋದರೆ ಹೆಸರಲ್ಲೇ ಎಲ್ಲಾ ಇದೆ ಎಂಬುದನ್ನು ಹೇಳುತ್ತದೆ. ಅಮೆರಿಕದಲ್ಲಿ ಕೆಲವು ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ. ಈ ಹೆಸರುಗಳು ಯಾವುದು ಅಂ ನೋಡೋಣ
02:33 PM (IST) Jun 10