Published : Jun 10, 2025, 07:37 AM ISTUpdated : Jun 10, 2025, 11:28 PM IST

Karnataka News Live: ಚಿನ್ನಸ್ವಾಮಿ ಕಾಲ್ತುಳಿತದ ಬೆನ್ನಲ್ಲೇ UEFA ನೇಷನ್ ಲೀಗ್‌ನಲ್ಲಿ ಅವಘಡ, ಓರ್ವ ಅಭಿಮಾನಿ ಸಾವು

ಸಾರಾಂಶ

ಬೆಂಗಳೂರು (ಜೂ.10) : ರಾಜ್ಯನ ರಾಜಕಾರಣದಲ್ಲಿ ಸಂಭವಿಸಿದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಸರ್ಕಾರದ ಇಮೇಜ್‌ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಈ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಲಿದ್ದಾರೆ.

ಹಾಲಿ ಸಚಿವ ಸಂಪುಟದ 8 ರಿಂದ 10 ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್‌ ಮುಟ್ಟಿವೆ. ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್‌ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.

11:28 PM (IST) Jun 10

ಚಿನ್ನಸ್ವಾಮಿ ಕಾಲ್ತುಳಿತದ ಬೆನ್ನಲ್ಲೇ UEFA ನೇಷನ್ ಲೀಗ್‌ನಲ್ಲಿ ಅವಘಡ, ಓರ್ವ ಅಭಿಮಾನಿ ಸಾವು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಇದೀಗ UEFA ನೇಷನ್ ಲೀಗ್ಸ್ ಫೈನಲ್ ಪಂದ್ಯದಲ್ಲಿ ದುರಂತ ನಡೆದಿದೆ. ಓರ್ವ ಅಭಿಮಾನಿ ಮೃತಪಟ್ಟಿದ್ದಾನೆ.  

Read Full Story

11:12 PM (IST) Jun 10

ಬೆಂಗಳೂರಿನಲ್ಲಿ ಭಾರಿ ಮಳೆ ಆರಂಭ, ತಗ್ಗು ಪ್ರದೇಶದ ಜನ ಎಚ್ಚರಿಕೆಯಿಂದಿರಲು ಸೂಚನೆ

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭಗೊಂಡಿದೆ. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

Read Full Story

10:48 PM (IST) Jun 10

ಐಟಿ ಕ್ಷೇತ್ರಕ್ಕೆ ಕಾಲಿಡಲು ಬಯಸುತ್ತಿರುವ ಎಂಜಿನೀಯರ್ಸ್‌ಗೆ ಸತ್ಯ ನಾಡೆಲ್ಲಾ ಸಲಹೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಉದ್ಯೋಗಗಳ ಭದ್ರತೆ ಪ್ರಶ್ನಾರ್ಹವಾಗಿದೆ. ಐಟಿ ಕ್ಷೇತ್ರಕ್ಕೆ ಬರಲು ಬಯಸುವವರಿಗೆ ಮೈಕ್ರೋಸಾಫ್ಟ್ ಸಿಇಒ ಸಲಹೆ ನೀಡಿದ್ದಾರೆ.

Read Full Story

10:36 PM (IST) Jun 10

ವಿಡಿಯೋ ಮೇಕ್ಓವರ್, ಸ್ಮಾರ್ಟ್ ಆನ್ ಡಿವೈಸ್ ಎಐ ಒಳಗೊಂಡ ಆ್ಯಪಲ್ iOS 26 ಬಿಡುಗಡೆ

ಆಪಲ್‌ನ iOS 26 "ಲಿಕ್ವಿಡ್ ಗ್ಲಾಸ್" ವಿನ್ಯಾಸ, ಆನ್-ಡಿವೈಸ್ AI, ಲೈವ್ ಟ್ರಾನ್ಸ್‌ಲೇಷನ್, ಜೆನ್‌ಮೋಜಿ ಸೇರಿದಂತೆ ಹತ್ತು ಹಲವು ಫೀಚರ್ಸ್ ಹೊಂದಿರುವ ಹಾಗೂ ಎಐ ಟೆಕ್ iOS 26 ಬಿಡುಗಡೆಯಾಗಿದೆ. ಏನಿದರೆ ವಿಶೇಷತೆ? 

Read Full Story

10:00 PM (IST) Jun 10

777 ಚಾರ್ಲಿ ಗೆ 3 ವರ್ಷ… ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ ಪೋಸ್ಟ್ ಹಂಚಿಕೊಂಡು ಹೇಳಿದ್ದೇನು?

ದೇಶ ವಿದೇಶದಲ್ಲೂ ಜನ ಮನ ಗೆದ್ದ 777 ಚಾರ್ಲಿ ಸಿನಿಮಾಗೆ ಮೂರು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ನಟರಾದ ಸಂಗೀತ ಶೃಂಗೇರಿ ಹಾಗೂ ರಕ್ಷಿತ್ ಶೆಟ್ಟಿ ಏನು ಹೇಳಿದ್ದಾರೆ ನೋಡಿ.

Read Full Story

09:59 PM (IST) Jun 10

ಕಾಡಿನ ಚಿರತೆಗಳ ಭಯಕ್ಕೆ ಬನ್ನೇರುಘಟ್ಟ ಮೃಗಾಲಯದ ಗರ್ಭಿಣಿ ಜೀಬ್ರಾ ಸಾವು

ಬನ್ನೇರುಘಟ್ಟ ಮೃಗಾಲಯದಲ್ಲಿರುವ ವನ್ಯ ಮೃಗಗಳಿಗೆ ಇದೀಗ ಕಾಡು ಚಿರತೆಗಳ ಆತಂಕ ಕಾಡುತ್ತಿದೆ. ಇದೀಗ ಗರ್ಭಿಣಿ ಜೀಬ್ರಾ ಇದೇ ಕಾಡು ಚಿರತೆಗಳ ಓಡಾಟದ ಭಯದಿಂದ ಸಾವನ್ನಪ್ಪಿದೆ.

Read Full Story

09:24 PM (IST) Jun 10

ರಾಜ್ಯದಲ್ಲಿ ಕೋವಿಡ್‌ಗೆ ಮತ್ತೆರೆಡು ಬಲಿ, 7 ಸಾವಿರ ಗಡಿ ತಲುಪಿದ ವೈರಸ್ ಕೇಸ್

ಭಾರತದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗಿದೆ. ಇದೀಗ 7000 ಗಡಿ ತಲುಪಿದೆ. ಇತ್ತ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಇಬ್ಬರು ಕೋವಿಡ್ ವೈರಸ್‌ಗೆ ಬಲಿಯಾಗಿದ್ದಾರೆ.

Read Full Story

09:05 PM (IST) Jun 10

ಒಂದು ಕಾಲದಲ್ಲಿ ಹುಡುಗರ ಹೃದಯವನ್ನೇ ಗೆದ್ದಿದ್ದ ನಟಿಯರು ಈಗ ಹೇಗಿದ್ದಾರೆ ನೋಡಿ

90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿಯರು ಈವಾಗ ವಯಸ್ಸಾದ ಮೇಲೆ ಹೇಗಾಗಿದ್ದಾರೆ ಇಲ್ಲಿದೆ ಫೋಟೊಗಳು.

Read Full Story

08:46 PM (IST) Jun 10

ಕಾಲ್ತುಳಿತದಿಂದ KSCAಗೆ ಶಾಕ್ ಕೊಟ್ಟ ಬಿಸಿಸಿಐ, ಬೆಂಗಳೂರು ಚಿನ್ನಸ್ವಾಮಿ ಪಂದ್ಯ ಸ್ಥಳಾಂತರ

ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದ ಕೆಎಸ್‌ಸಿಎ ತೀವ್ರ ಹಿನ್ನಡೆ ಅನುಭವಿಸಿದೆ. ಎಫ್ಐಆರ್ ಸಂಕಷ್ಟದ ನಡುವೆ ಇದೀಗ ಬಿಸಿಸಿಐ ಶಾಕ್ ಕೊಟ್ಟಿದೆ.

Read Full Story

08:07 PM (IST) Jun 10

ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವೆ - ಸ್ಕೈ ನ್ಯೂಸ್‌ ಚರ್ಚೆಯಲ್ಲಿ ಪಾಕ್ ಸೆನೆಟರ್‌ ಆರೋಪ

ಪಾಕಿಸ್ತಾನದ ಸೆನೆಟರ್ ಶೆರ್ರಿ ರೆಹಮಾನ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದನೆಯ ಕುರಿತು ತಮ್ಮ ದೇಶದ ಸ್ಥಿತಿಗತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಕ್ರಿಯ ಹೋರಾಟ ನಡೆಯುತ್ತಿದೆ, ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದ ಪರವಾಗಿವರದಿ ಮಾಡುತ್ತಿವೆ ಎಂದು ಆರೋಪಿಸಿದರು.

Read Full Story

08:00 PM (IST) Jun 10

BoycottMaldives ಬಿಸಿ, ಭಾರತೀಯ ಪ್ರವಾಸಿಗರ ಸೆಳೆಯಲು ಕತ್ರಿನಾ ಕೈಫ್‌ರನ್ನ ಜಾಗತಿಕ ರಾಯಭಾರಿ ಮಾಡಿದ ಮಾಲ್ಡೀವ್ಸ್‌!

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಾಲ್ಡೀವ್ಸ್‌ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿದ್ದಾರೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಸ್ವಲ್ಪ ಹಳಸಿದ ಸಮಯದಲ್ಲಿ ಈ ಸಹಯೋಗವು ಬಂದಿದೆ.
Read Full Story

07:21 PM (IST) Jun 10

ಬೆಂಗಳೂರಿಗೆ ಆರ್ಥಿಕ ಸಂಕಷ್ಟ? ಬ್ಯಾಚ್ಯುಲರ್ಸ್‌ಗೆ ಆಸರೆಯಾಗಿದ್ದ 200 ಪಿಜಿ ಸ್ಥಗಿತ

ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆಯಾ? ಒಂದು ಕಾಲದಲ್ಲಿ ಭಾರಿ ಲಾಭದಲ್ಲಿದ್ದ ಪಿಜಿ (ಪೇಯಿಂಗ್ ಗೆಸ್ಟ್) ಉದ್ಯಮ ಇದೀಗ ನಷ್ಟದಲ್ಲಿದೆ. ಪ್ರತಿ ದಿನ ಒಂದೊಂದು ಪಿಜಿಗಳು ಬಂದ್ ಆಗುತ್ತಿದೆ. ಇದೀಗ ನಗರದಲ್ಲಿ 200 ರಿಂದ 300 ಪಿಜಿ ಸ್ಥಗಿತಗೊಂಡಿದೆ.

Read Full Story

07:20 PM (IST) Jun 10

ಮೊಟ್ಟಮೊದಲ ಬಾರಿಗೆ MGNREGS ಖರ್ಚಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ!

ಇದು ಬೇಡಿಕೆ ಆಧಾರಿತ ಜನ ಕಲ್ಯಾಣ ಕಾರ್ಯಕ್ರಮವಾಗಿರುವುದರಿಂದ ಅಂತಹ ಖರ್ಚು ಮಿತಿಗಳು ಈ ಯೋಜನೆಗೆ ಕೆಲಸ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ವಾದಿಸಿದೆ ಎಂದು ವರದಿ ಹೇಳಿದೆ.

Read Full Story

07:05 PM (IST) Jun 10

ಹೋಟೆಲ್ಲೇ ಮನೆ ಬಾಗಿಲಿಗೆ! ಬೇಕಾದ ಆಹಾರ ನೀವೇ ಕ್ಲಿಕ್ಕಿಸಿ ತರಿಸಿಕೊಳ್ಳಿ... ರಾಪಿಡೋ ವಿನೂತನ ಯೋಜನೆ

50 ಸಾವಿರಕ್ಕೂ ಅಧಿಕ ತಿಂಡಿ-ತಿನಿಸುಗಳಲ್ಲಿ ನಿಮಗೆ ಬೇಕಾದದ್ದನ್ನು ಖುದ್ದು ಬ್ರೋಸ್​​ ಮಾಡಿ ಆಯ್ಕೆ ಮಾಡಿ ಮನೆಯಿಂದಲೇ ಸೇವಿಸುವ ಹೊಸ ಫುಡ್​ ಡೆಲವರಿಯನ್ನು ಶುರು ಮಾಡುತ್ತಿದೆ ರಾಪಿಡೋ. ಇದರ ವಿವರ ಇಲ್ಲಿದೆ...

Read Full Story

06:34 PM (IST) Jun 10

ಫಳ ಫಳ ಹೊಳೆಯುವ ಚರ್ಮಕ್ಕಾಗಿ ಆಲೂಗಡ್ಡೆ ಜೊತೆ ಈ ಫೇಸ್‌ಪ್ಯಾಕ್ ಹಚ್ಚಿ

ಆಲೂಗೆಡ್ಡೆಯಲ್ಲಿರುವ ವಿಟಮಿನ್ ಸಿ, ಬಿ ಮತ್ತು ವಿವಿಧ ಖನಿಜಗಳು ಚರ್ಮದ ಕಪ್ಪು ಕಲೆಗಳನ್ನು ನಿವಾರಿಸಿ, ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಆಲೂಗೆಡ್ಡೆಯ ಜೊತೆ ನಿಂಬೆರಸ, ಜೇನುತುಪ್ಪ, ಅರಿಶಿನ, ಕಡಲೆ ಹಿಟ್ಟು ಮುಂತಾದವುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಬಹುದು.
Read Full Story

06:24 PM (IST) Jun 10

ಹೆಚ್ಚೆಚ್ಚು ಕತ್ತೆ ಹುಟ್ಟಿಸಲು ಪಾಕ್​ ಯೋಜನೆ - ಚೀನಾದಿಂದ ಭಾರಿ ಬೇಡಿಕೆ; ಒಂದೊಂದಕ್ಕೆ 2 ಲಕ್ಷ ರೂ!

ಚೀನಾದ ಶತಕೋಟಿ ಡಾಲರ್​ ಔಷಧ ಉದ್ಯಮಕ್ಕೆ ಪಾಕಿಸ್ತಾನದ ಕತ್ತೆಗಳು ಬೇಕಾಗಿರುವ ಕಾರಣದಿಂದ 30 ಸಾವಿರ ಇದ್ದ ಕತ್ತೆಗಳ ಬೆಲೆ 2 ಲಕ್ಷ ರೂಪಾಯಿ ದಾಟಿದೆ. ಪಾಕಿಸ್ತಾನಕ್ಕೆ ಸದ್ಯ ಕತ್ತೆ ಕೈಹಿಡಿಯುತ್ತಿದೆ. ಈ ಕುರಿತು ಒಂದು ವರದಿ.

Read Full Story

06:06 PM (IST) Jun 10

ChatGPT ಡೌನ್ - ಮೀಮ್ಸ್‌ಗಳ ಹಬ್ಬ, ಭಾರತ-ಅಮೆರಿಕಕ್ಕೆ ಹೆಚ್ಚು ತೊಂದರೆ!

ಮಂಗಳವಾರ ChatGPT ಜಾಗತಿಕವಾಗಿ ಡೌನ್ ಆಗಿ, ನೂರಾರು ಬಳಕೆದಾರರಿಗೆ, ವಿಶೇಷವಾಗಿ ಭಾರತ ಮತ್ತು ಅಮೆರಿಕದಲ್ಲಿ ತೊಂದರೆಯಾಯಿತು. ಮೂಲ ಕಾರ್ಯ, API ಏಕೀಕರಣ ಮತ್ತು ಮೊಬೈಲ್ ಆ್ಯಪ್ ಪ್ರವೇಶಕ್ಕೆ ಅಡಚಣೆಯಾಯಿತು, ಸಾಮಾಜಿಕ ಮಾಧ್ಯಮದಲ್ಲಿ ಮೀಮ್ಸ್‌ಗಳ ಅಲೆ ಎದ್ದಿತು.
Read Full Story

05:52 PM (IST) Jun 10

ಅಂದು ಬೀದಿ ವ್ಯಾಪಾರ ಮಾಡುತ್ತಿದ್ದವರು ಇಂದು ಬಾಲಿವುಡ್ ನ ಶ್ರೀಮಂತ ಕುಟುಂಬ

ಒಂದು ಕಾಲದಲ್ಲಿ ಬೀದಿಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಈ ಕುಟುಂಬವು ಈಗ ಕಪೂರ್‌ಗಳು, ಜೋಹರ್‌ಗಳು, ಖಾನ್‌ಗಳು, ಚೋಪ್ರಾಗಳು ಮತ್ತು ಬಚ್ಚನ್‌ಗಳನ್ನು ಹಿಂದಿಕ್ಕಿ ಬಾಲಿವುಡ್‌ನಲ್ಲಿ ಅತ್ಯಂತ ಶ್ರೀಮಂತ ಕುಟುಂಬವಾಗಿ ಎದ್ದು ನಿಂತಿದೆ.

Read Full Story

05:51 PM (IST) Jun 10

ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!

 ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್‌ರ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ  ಎಐಎಡಿಎಂಕೆ ಪಕ್ಷಕ್ಕೆ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಿವೃತ ಸರ್ವೆಯರ್ ಒಬ್ಬರು ಜಿಲ್ಲಾ ಕಚೇರಿಯಲ್ಲಿ ಇದನ್ನು ಪ್ರಶ್ನಸಿದ್ದಾರೆ.

Read Full Story

05:31 PM (IST) Jun 10

ಆರ್‌ಸಿಬಿ ಸೇಲ್‌ ಮಾಡೋ ಪ್ರಶ್ನೆಯೇ ಇಲ್ಲ ಎಂದ ಯುನೈಟೆಡ್‌ ಸ್ಪಿರಿಟ್ಸ್‌!

ಯುನೈಟೆಡ್ ಸ್ಪಿರಿಟ್ಸ್ ಕಂಪನಿಯು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟದ ವರದಿಗಳನ್ನು ನಿರಾಕರಿಸಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಯುಎಸ್‌ಎಲ್ ಆರ್‌ಸಿಬಿಯನ್ನು ಸುಮಾರು 17 ಸಾವಿರ ಕೋಟಿಗಳಿಗೆ ಮಾರಾಟ ಮಾಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿತ್ತು.
Read Full Story

05:28 PM (IST) Jun 10

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ 5 ಭಾರತೀಯ ಬ್ಯಾಟರ್‌ಗಳಿವರು

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿಹೆಚ್ಚು ಶತಕ ಬಾರಿಸಿರುವ 5 ಭಾರತೀಯ ಬ್ಯಾಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ.

Read Full Story

05:24 PM (IST) Jun 10

ಚಿನ್ನ, ಭೂಮಿ ಅಲ್ಲ ಮುಂದಿನ 5-10 ವರ್ಷದಲ್ಲಿ ಈ ವಸ್ತು ಅತೀ ದುಬಾರಿ; ನಿಖಿಲ್ ಕಾಮತ್

ಚಿನ್ನ, ಬೆಳ್ಳಿ, ಭೂಮಿ, ಹಣ ಅಲ್ಲ, ಮುಂದಿನ 5 ರಿಂದ 10 ವರ್ಷದಲ್ಲಿಈ ವಸ್ತು ಅತ್ಯಂತ ದುಬಾರಿಯಾಗುತ್ತದೆ ಎಂದು ಶ್ರೀಮಂತ ಯುವ ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದಾರೆ. ಅಷ್ಟಕ್ಕೂ ನಿಖಿಲ್ ಕಾಮತ್ ಹೇಳಿದ ಅತೀ ಹೆಚ್ಚು ಮೌಲ್ಯ, ಬೆಲೆಯಾಗಿ ಹೊರಹೊಮ್ಮಲಿರು ಆ ವಸ್ತು ಯಾವುದು?

Read Full Story

05:12 PM (IST) Jun 10

ಮರಳಿ ಬರ್ತಿದೆ ನೋಕಿಯಾ 1100, ಚಿಕ್ಕ ಫೋನ್‌ನಲ್ಲಿ ಇರಲಿದೆ DSLR ಪವರ್‌!

ಹಳೆಯ ಕಾಲದ ನೋಕಿಯಾ 1100 4G ಮತ್ತು DSLR-ಮಟ್ಟದ ಕ್ಯಾಮೆರಾದೊಂದಿಗೆ ಮತ್ತೆ ಬರುತ್ತಿದೆ. ಬೃಹತ್ ಬ್ಯಾಟರಿ ಬಾಳಿಕೆ, ಪ್ರೀಮಿಯಂ ವಿನ್ಯಾಸ ಮತ್ತು ಸರಳ ಬಳಕೆದಾರ ಇಂಟರ್ಫೇಸ್ ಹೊಂದಿದೆ.
Read Full Story

05:11 PM (IST) Jun 10

ಬಿಕ್ಕಿ ಬಿಕ್ಕಿ ಅಳ್ತಿರೋ ಈತನ ನೋಡಿ ನಮ್ಗೂ ಇಂಥ ಗಂಡ ಸಿಗಬಾರ್ದೇ ಅಂತಿರೋ ವನಿತೆಯರು! ಏನಿದು?

ದಾಂಪತ್ಯ, ಸಂಬಂಧಗಳೇ ಮಾಯ ಆಗ್ತಿದೆಯಾ ಎನ್ನುವಂಥ ಈ ದಿನಗಳಲ್ಲಿ ಬಿಕ್ಕಿ ಬಿಕ್ಕಿ ಅಳ್ತಿರೋ ಪತಿಯೊಬ್ಬನ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಆಗಿದ್ದೇನು ನೋಡಿ!

Read Full Story

05:03 PM (IST) Jun 10

ಧೋನಿ ಕೈಚಳಕ ಪಿಕ್‌ ಪಾಕೆಟ್ ಮಾಡೋರಿಗಿಂತ ಫಾಸ್ಟ್ - ರವಿಶಾಸ್ತ್ರಿ ಅಚ್ಚರಿ ಹೇಳಿಕೆ!

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಭಾರತದ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಒಲಿದು ಬಂದಿದೆ. ಇದರ ಬೆನ್ನಲ್ಲೇ ಧೋನಿ ಬಗ್ಗೆ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Read Full Story

04:59 PM (IST) Jun 10

ಭಾರತದ ಜೊತೆ ಅಳವಾದ ಸಂಪರ್ಕ ಹೊಂದಿರುವ ಜಗತ್ತಿನ 5 ದೇಶಗಳು

ಭಾರತದ ಜೊತೆ ಜಗತ್ತಿನ ಕೆಲ ರಾಷ್ಟ್ರಗಳ ಜೊತೆ ಅನಾದಿಕಾಲದಿಂದಲೂ ಬಹಳ ಉತ್ತಮ ಹಾಗೂ ಆಳವಾದ ಸಂಬಂಧವಿದೆ. ಅಂತಹ 5 ದೇಶಗಳ ಬಗ್ಗೆ ಈಗ ನೋಡೋಣ

Read Full Story

04:40 PM (IST) Jun 10

ಬೆಂಕಿಯಿಂದ ಪ್ರಾಣ ಉಳಿಸಲು ಇಬ್ಬರು ಮಕ್ಕಳ ಹಿಡಿದು 7ನೇ ಮಹಡಿಯಿಂದ ಜಿಗಿದ ತಂದೆ

ದೆಹಲಿಯ ದ್ವಾರಕೆಯಲ್ಲಿನ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ. ಇಬ್ಬರು ಮಕ್ಕಳ ರಕ್ಷಿಸಲು ತಂದೆ 7ನೇ ಮಹಡಿಯಿಂದ ಹಾರಿದ ಘಟನೆ ನಡೆದಿದೆ. ಮುಂದೇನಾಯ್ತು?

Read Full Story

04:10 PM (IST) Jun 10

ರಾಜ್ಯದಲ್ಲಿ ನಾಳೆಯಿಂದ ಮುಂಗಾರು ಅಬ್ಬರ; 5 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಜೂನ್ 10ರಿಂದ 13ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ.
Read Full Story

03:58 PM (IST) Jun 10

ಆರ್‌ಸಿಬಿ ಮಾರಾಟ ವದಂತಿ - ಡಿಕೆಶಿ ಖರೀದಿ ಮಾಡಿದ್ರೆ ಹೆಸರು ಏನಿರಬಹುದು? ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಟ್ರೋಲ್‌!

ಡಿಯಾಜಿಯೋ 17 ಸಾವಿರ ಕೋಟಿ ರೂ.ಗೆ ಆರ್‌ಸಿಬಿ ಮಾರಾಟ ಮಾಡುವ ಆಲೋಚನೆಯಲ್ಲಿದೆ. ಸರ್ಕಾರದ ನಿಯಮಗಳ ಬದಲಾವಣೆ ಮತ್ತು ಚಿನ್ನಸ್ವಾಮಿ ಕಾಲ್ತುಳಿತ ಘಟನೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಕೆ ಶಿವಕುಮಾರ್ ಖರೀದಿಸುವ ಸಾಧ್ಯತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
Read Full Story

03:55 PM (IST) Jun 10

ಮೈಸೂರು ಮುಡಾ ಹಗರಣ - ಈವರೆಗೆ ₹400 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ₹400 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ಹೆಸರು ಈ ಹಗರಣದಲ್ಲಿ ಉಲ್ಲೇಖವಾಗಿದೆ.
Read Full Story

03:48 PM (IST) Jun 10

ನಿಮ್ಮ ಹತ್ರ ಇಷ್ಟು ಕೋಟಿಯಿದ್ರೆ, ನೀವೂ ಆರ್‌ಸಿಬಿ ತಂಡ ಖರೀದಿಸಬಹುದು!

ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಆರ್‌ಸಿಬಿ ತಂಡ ಖರೀದಿಸಬೇಕಿದ್ರೆ ನಿಮ್ಮ ಬಳಿ ಎಷ್ಟು ಹಣವಿರಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story

03:40 PM (IST) Jun 10

ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಸಾವಿಗೆ ಶರಣು

ಗುಜರಾತ್‌ನ ಸೂರತ್‌ನಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೊರಾ ನಿಗೂಢವಾಗಿ ಸಾವಿಗೆ ಶರಣಾಗಿದ್ದಾರೆ. 

Read Full Story

03:38 PM (IST) Jun 10

ಭಾರತದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ವಿಜಯ್ ಮಲ್ಯ ಬಳಿ ಇನ್ನೂ ಇದೆ 4,400 ಕೋಟಿ ರೂ ಆಸ್ತಿ

ಭಾರತದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಆಸ್ತಿಗಳನ್ನು ಬ್ಯಾಂಕ್ ಮುಟ್ಟುಗೋಲು ಮಾಡಲಾಗಿದೆ.  9 ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ವಿಜಯ್ ಮಲ್ಯ, ಭಾರತದಲ್ಲಿ ಎಲ್ಲವನ್ನೂ ಕಳೆದುಕೊಂಡಿಲ್ಲ. ಈಗಲೂ ವಿಜಯ್ ಮಲ್ಯ ಭಾರತದಲ್ಲಿ ಬರೋಬ್ಬರಿ 4,400 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.

Read Full Story

03:31 PM (IST) Jun 10

ನಟ, ರಾಜಕಾರಣಿ, ನಿರೂಪಕರಾಗಿ ಗೆದ್ದ ಬಾಲಯ್ಯ, ಈ ಒಂದು ಕ್ಷೇತ್ರದಲ್ಲಿ ಹೀನಾಯ ಸೋಲು

ನಂದಮೂರಿ ಬಾಲಕೃಷ್ಣ ಇಂದು ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಸತತ ಗೆಲುವು ಸಾಧಿಸಿದ್ದಾರೆ. ರಾಜಕಾರಣಿಯಾಗಿಯೂ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಹೊಡೆದಿದ್ದಾರೆ. ಹೀಗಾಗಿ ಈ ಹುಟ್ಟುಹಬ್ಬ ತುಂಬಾ ವಿಶೇಷ.

Read Full Story

03:29 PM (IST) Jun 10

4 ದಿನದಲ್ಲೇ 2 ಕೋಟಿಗೂ ಅಧಿಕ ವೀಕ್ಷಣೆ ಕಂಡ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌, ಮದ್ಯದ ದೊರೆ ಫುಲ್‌ ಖುಷ್‌!

ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತ ಸರ್ಕಾರಕ್ಕೆ ಮೋಸ್ಟ್‌ ವಾಂಟೆಡ್‌ ಆಗಿರುವ ವಿಜಯ್ ಮಲ್ಯ ಅವರ ಪಾಡ್‌ಕ್ಯಾಸ್ಟ್ 2.1 ಕೋಟಿ ವೀಕ್ಷಣೆಗಳನ್ನು ಗಳಿಸಿದೆ. ತಮ್ಮ ಜೀವನದ ಕಥೆ, ಆರೋಪಗಳು ಮತ್ತು ಭಾರತಕ್ಕೆ ಮರಳುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ.
Read Full Story

02:56 PM (IST) Jun 10

ಅಡಿಕೆ ಹಾಳೆ ತಟ್ಟೆಯಲ್ಲಿ ಊಟ ಮಾಡಿದರೆ ಕ್ಯಾನ್ಸರ್; ಭಾರತದ ಉದ್ಯಮಕ್ಕೆ ಅಮೆರಿಕ ವರದಿ ಆಘಾತ

ಅಮೆರಿಕದ ಎಫ್‌ಡಿಎ ಅಡಿಕೆ ಹಾಳೆಯ ತಟ್ಟೆಗಳ ಮೇಲೆ ನಿಷೇಧ ಹೇರಿದೆ, ಇದು ಕರ್ನಾಟಕದಲ್ಲಿ ಸಾವಿರಾರು ಜನರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಸಿಪಿಸಿಆರ್‌ಐ ಸಂಶೋಧನೆಗೆ ₹9.3 ಕೋಟಿ ಅನುದಾನ ನೀಡಲಾಗಿದ್ದು, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಲಾಗುತ್ತಿದೆ.
Read Full Story

02:54 PM (IST) Jun 10

ಚಿನ್ನಸ್ವಾಮಿ ಕಾಲ್ತುಳಿತ - ಆರ್‌ಸಿಬಿ ಇವೆಂಟ್‌ಗೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ದು ಸಿಎಂ ಸಿದ್ದರಾಮಯ್ಯ ಎಂದ ರಾಜಭವನ

ಜೂನ್ 4 ರಂದು ವಿಧಾನಸೌಧದ ಎದುರು ಐಪಿಎಲ್ 2024 ಚಾಂಪಿಯನ್‌ಗಳನ್ನು ಸನ್ಮಾನಿಸಲು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದ್ದರು ಎಂದು ರಾಜಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Read Full Story

02:46 PM (IST) Jun 10

ಕಾವೇರಿ ಆರತಿ ವಿವಾದ - ರೈತರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೆ ಭರದ ಸಿದ್ದತೆ, ಮರಗಳ ಮಾರಣ ಹೋಮ!

ವಿವಾದಾತ್ಮಕ ಕಾವೇರಿ ಆರತಿ ಯೋಜನೆಯ ಕೆಲಸಗಳು ಕೆಆರ್‌ಎಸ್‌ ಬಳಿ ಯಾವುದೇ ಸೂಚನೆ ಇಲ್ಲದೆ ಆರಂಭವಾಗಿವೆ. ಜಿಲ್ಲಾಡಳಿತ ಯೋಜನೆ ಸ್ಥಗಿತಗೊಳಿಸುವ ಭರವಸೆ ನೀಡಿದ್ದರೂ, ಕೆಲಸಗಳು ಮುಂದುವರೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

02:46 PM (IST) Jun 10

ಈ 11 ಹೆಸರುಗಳಿಗೆ ಇದೆ ನಿಷೇಧ - ನೀವು ಅಮೆರಿಕಾದಲ್ಲಿ ಮಕ್ಕಳಿಗೆ ಈ ಹೆಸರು ಇಡುವಂತೇ ಇಲ್ಲ

ಹೆಸರಲ್ಲೇನಿದೆ ಎಂಬುದು ಅನೇಕರ ಮಾತು ಆದರೆ ಸಂಖ್ಯಾಶಾಸ್ತ್ರ ಹಿಂದೆ ಹೋದರೆ ಹೆಸರಲ್ಲೇ ಎಲ್ಲಾ ಇದೆ ಎಂಬುದನ್ನು ಹೇಳುತ್ತದೆ. ಅಮೆರಿಕದಲ್ಲಿ ಕೆಲವು ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ. ಈ ಹೆಸರುಗಳು  ಯಾವುದು ಅಂ ನೋಡೋಣ

Read Full Story

02:33 PM (IST) Jun 10

ಸೇನೆಗೆ ಹೊಸ ವಾಯು ರಕ್ಷಣಾ ವ್ಯವಸ್ಥೆ QRSAM, ಡಿಆರ್‌ಡಿಓ ಮೂಲಕ 30 ಸಾವಿರ ಕೋಟಿಗೆ ಖರೀದಿ!

ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ವಾಯು ರಕ್ಷಣಾ ವ್ಯವಸ್ಥೆ QRSAM ಅನ್ನು ಪಡೆಯಲಿದೆ. ಈ ವ್ಯವಸ್ಥೆಯು 30 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಚಲಿಸುವ ಗುರಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
Read Full Story

More Trending News