MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!

ಎಂಜಿಆರ್ ಬಂಗಲೆ ಪಟ್ಟಾ ಹಕ್ಕಿನಿಂದ ಕುಟುಂಬದವರ ಹೆಸರು ಮಾಯ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಾರಸುದಾರ!

 ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್‌ರ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ  ಎಐಎಡಿಎಂಕೆ ಪಕ್ಷಕ್ಕೆ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಿವೃತ ಸರ್ವೆಯರ್ ಒಬ್ಬರು ಜಿಲ್ಲಾ ಕಚೇರಿಯಲ್ಲಿ ಇದನ್ನು ಪ್ರಶ್ನಸಿದ್ದಾರೆ.

2 Min read
Author : Gowthami K
Published : Jun 10 2025, 05:51 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ತಿರುಚ್ಚಿಯಲ್ಲಿರುವ 25 ಕೋಟಿ ಮೌಲ್ಯದ ಬಂಗಲೆಯ ಪಟ್ಟಾವನ್ನು ಕಾನೂನುಬಾಹಿರವಾಗಿ ಬದಲಾಯಿಸಲಾಗಿದೆ. ಎಂಜಿಆರ್ ವಾರಸುದಾರರ ಹೆಸರಿಗೆ ಪಟ್ಟಾವನ್ನು ಬದಲಾಯಿಸಬೇಕೆಂದು ತಿರುಚ್ಚಿ ಕಟ್ಟೂರ್ ಗಾಂಧಿನಗರದ ನಿವೃತ್ತ ಸರ್ವೇಯರ್ ಚಾರ್ಲ್ಸ್ ತಿರುಚ್ಚಿ ಜಿಲ್ಲಾಧಿಕಾರಿ ಪ್ರದೀಪ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ. ಎಐಎಡಿಎಂಕೆ ಪಕ್ಷಕ್ಕೆ ಆ ಆಸ್ತಿ ಹೋಗಿದ್ದೇಗೆ ಎಂದು ಪ್ರಶ್ನಿಸಿದ್ದಾರೆ.

27
Image Credit : Google

ತಿರುಚ್ಚಿ ಉರೈಯೂರ್ ತಿರುತ್ತಾಂತೋಣಿ ರಸ್ತೆಯಲ್ಲಿರುವ ಮೃತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಜಿಆರ್‌ಗೆ ಸೇರಿದ ಬಂಗಲೆ ಮತ್ತು ಖಾಲಿ ಜಾಗ 80,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 25 ಕೋಟಿ ರೂ. ಆಗಿದೆ. ಎಂಜಿಆರ್ ನಿಧನದ ನಂತರ, ಅವರ ಅಣ್ಣ ಎಂಜಿ ಚಕ್ರಪಾಣಿಯವರ ಮಗ ಮತ್ತು ಹತ್ತು ಹೆಣ್ಣುಮಕ್ಕಳು ವಾರಸುದಾರರಾಗಿ ತಮ್ಮ ಹೆಸರು ನೋಂದಾಯಿಸಿಕೊಂಡು ತಮ್ಮ ಹೆಸರಿನಲ್ಲಿ ಪಟ್ಟಾ ಪಡೆದರು.

37
Image Credit : Google

ಆದರೆ ಈಗ ವಾರಸುದಾರರ ಹೆಸರುಗಳು ಬದಲಾಗಿದೆ. ಕುಟುಂಬದವರ ಹೆಸರಿದ್ದ ದಾಖಲೆಯಿಂದ ಹೆಸರು ತೆಗೆದುಹಾಕಿ ಮಧುರಾಮ್ ಪತಿ ಗೋವಿಂದಸ್ವಾಮಿ ಎಂದು ಪಟ್ಟಾ ಹೆಸರನ್ನು ಬದಲಾಯಿಸಲಾಗಿದೆ. ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಪಟ್ಟಾದಿಂದ ತೆಗೆದುಹಾಕಬೇಕಾದರೆ, ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೇಲ್ಮನವಿ ಸಲ್ಲಿಸಿ ಹೆಸರುಗಳನ್ನು ತೆಗೆದುಹಾಕಲು ಅವರ ಆದೇಶವನ್ನು ಪಡೆಯಬೇಕಾಗಿತ್ತು. ಆದರೆ, ಈ ವಿಧಾನವನ್ನು ಕೂಡ ಅನುಸರಿಸಲಾಗಿಲ್ಲ. ಆದರೆ ಈಗ ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಪ್ರಸ್ತುತ ಭೂ ನೋಂದಣಿಯಲ್ಲಿ ದಾಖಲಿಸಲಾಗಿಲ್ಲ, ಮತ್ತು 'ಮಧುರಂ ಪತಿ ಗೋವಿಂದಸ್ವಾಮಿ' ಎಂಬ ಹೆಸರನ್ನು ಕೂಡ ತೆಗೆದು ಹಾಕಿ ಕಂಪ್ಯೂಟರ್‌ನಲ್ಲಿ 'ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ' ಎಂದು ಹೆಸರು ನಮೂದಿಸಲಾಗಿದೆ.

47
Image Credit : Google

ಆದ್ದರಿಂದ, ಎಂಜಿಆರ್ ತಮ್ಮ ಆಸ್ತಿಯನ್ನು ಎಐಎಡಿಎಂಕೆಗೆ ಪತ್ರದ ಮೂಲಕ ನೀಡಿದ್ದಾರೋ ಅಥವಾ ತಮ್ಮ ಉಯಿಲಿನಲ್ಲಿ ಏನನ್ನಾದರೂ ಬರೆದಿದ್ದಾರೋ ಎಂಬ ಬಗ್ಗೆ ಸ್ಪಷ್ಟನೆ ಬೇಕು. ದಿವಂಗತ ಮಾಜಿ ಮುಖ್ಯಮಂತ್ರಿ ಎಂಜಿಆರ್ ಒಡೆತನದ ಬಂಗಲೆಯ ಹಕ್ಕು ಪತ್ರವನ್ನು ಅಕ್ರಮವಾಗಿ ಬದಲಾಯಿಸಲಾಗಿದೆ ಎಂದು ಆರೋಪಿಸಿರುವ ತಿರುಚ್ಚಿಯ ಉತ್ತರ ಕಟ್ಟೂರಿನ ಗಾಂಧಿನಗರ ಪ್ರದೇಶದ ನಿವೃತ್ತ ಭೂಮಾಪಕ ಚಾರ್ಲ್ಸ್ ಅವರು ತಿರುಚ್ಚಿ ಜಿಲ್ಲಾಧಿಕಾರಿ ಎಂ. ಪ್ರದೀಪ್ ಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

57
Image Credit : Google

ವಿಭಾಗೀಯ ಆಯುಕ್ತರ ಕಚೇರಿ ಕಡತವನ್ನು ಜಿಲ್ಲಾಧಿಕಾರಿಗಳು ಪಡೆದು ತನಿಖೆ ಮತ್ತು ಆದೇಶವನ್ನು ಪರಿಶೀಲಿಸಬೇಕು ಮತ್ತು ಬಡತನದಲ್ಲಿ ಬದುಕುತ್ತಿರುವ ಎಂಜಿಆರ್ ಅವರ ಉತ್ತರಾಧಿಕಾರಿಗಳ ಹೆಸರುಗಳನ್ನು ಭೂ ನೋಂದಣಿಯಲ್ಲಿ ಮತ್ತೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಎಂ.ಜಿ. ಚಕ್ರಪಾಣಿ ಅವರ ಮಗ ಚಂದ್ರನ್ ಎಂಜಿಆರ್ ಬಂಗಲೆಯ ಹೆಸರನ್ನು ಬದಲಾಯಿಸಲು ನಿರಂತರವಾಗಿ ಹೋರಾಟ ನಡೆಸಿದ್ದರು. ಆದರೆ ಕೊರೋನಾ ಸಮಯದಲ್ಲಿ ಅವರು ನಿಧನರಾದರು. ಇತರ ಎಂಜಿಆರ್ ಉತ್ತರಾಧಿಕಾರಿಗಳು ನಮ್ಮ ಚಿಕ್ಕಪ್ಪನ ಸ್ಥಳ ನಮಗೆ ಸಿಗಬೇಕೆಂದು ಹೋರಾಡುತ್ತಿದ್ದಾರೆ ಎಂದು ಚಾಲ್ಸ್ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

67
Image Credit : Google

ಈಗ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಈ ಬಂಗಲೆಯ ಒಂದು ಭಾಗದ ಗೋಡೆಯನ್ನು ಒಡೆದು, ಸ್ಥಳೀಯ ಭಾಗದ ಜನರು ಕಸವನ್ನು ಸುರಿದು ಆ ಮನೆಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದಾರೆ. ಕೆಲವರು ಆ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕೂಡ ನಿರ್ಮಿಸಿದ್ದಾರೆ. ತಿರುಚಿಯಲ್ಲಿರುವ ಎಂಜಿಆರ್ ಎಸ್ಟೇಟ್ ಅನ್ನು ಎಂಜಿ ರಾಮಚಂದ್ರನ್ 1984 ರಲ್ಲಿ ₹4 ಲಕ್ಷಕ್ಕೆ ಖರೀದಿಸಿದ್ದರಂತೆ.

77
Image Credit : Google

ರಾಜಕಾರಣದಲ್ಲಿ ತಿರುಚ್ಚಿಯನ್ನು 2 ನೇ ರಾಜಧಾನಿಯನ್ನಾಗಿ ಮಾಡುವುದಾಗಿ ಘೋಷಿಸಿದ ಎಂಜಿ ರಾಮಚಂದ್ರನ್ ವೃದ್ಧಾಪ್ಯದಲ್ಲಿ ತಿರುಚ್ಚಿಯಲ್ಲಿ ಮನೆ ಖರೀದಿಸಿ, ಬಯಸಿದಾಗಲೆಲ್ಲಾ ಅಲ್ಲಿಗೆ ಬಂದು ನೆಲೆಸಲು ಬಯಸಿದ್ದರು. ಅರ್ಚಕರೊಬ್ಬರಿಂದ ಎಂಜಿಆರ್ ಸುಮಾರು 2 ಎಕರೆ ವಿಸ್ತೀರ್ಣದಲ್ಲಿದ್ದ ಈ ಜಾಗ ಮತ್ತು ಬಂಗಲೆಯನ್ನು ಖರೀದಿಸಿದರು. ಆದರೆ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಈ ಜಾಗದಲ್ಲಿ ಬಂದು ನೆಲೆಸುವ ಅವರ ಆಸೆ ಕನಸಾಗಿಯೇ ಉಳಿಯಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ತಮಿಳುನಾಡು
ರಾಜಕೀಯ ಪಕ್ಷ
ಭಾರತ ಸುದ್ದಿ

Latest Videos
Recommended Stories
Recommended image1
ಒಂದೇ ವರ್ಷದಲ್ಲಿ ಚಿನ್ನದ ಚೋರಿ ರನ್ಯಾಳಿಂದ 1.27 ಕ್ವಿಂಟಲ್ ಚಿನ್ನ ಸ್ಮಗ್ಲಿಂಗ್!
Recommended image2
‘ನ್ಯಾಯಾಂಗದ ಭ್ರಷ್ಟಾಚಾರ’ ಪಠ್ಯಕ್ಕೆ ಕೊಕ್‌
Recommended image3
ಗ್ಯಾರಂಟಿಯಿಂದ ರಾಜ್ಯ ಸರ್ಕಾರಕ್ಕೆ ಹೊರೆ! ಆದ್ರೂ ರಾಜ್ಯದ ಜನಕ್ಕೆ ಶಕ್ತಿ ತುಂಬುತ್ತಿದ್ದೇವೆ: ಡಿಕೆಶಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved