Published : Oct 29, 2025, 06:58 AM ISTUpdated : Oct 29, 2025, 11:08 PM IST

Karnataka Latest News Live: ಈ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ವಿದೇಶದಿಂದ 64 ಟನ್‌ ಚಿನ್ನ ವಾಪಾಸ್‌ ತಂದ ಆರ್‌ಬಿಐ!

ಸಾರಾಂಶ

ಧಾರವಾಡ/ಕಲಬುರಗಿ: ಸರ್ಕಾರಿ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ನ.2 ರಂದು ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್ಎಸ್ ಗೆ ಹಾದಿ ಸುಗಮ ಆಗಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ ಹಾಕಲು ತಮಿಳು ನಾಡು ಮಾದರಿಯಲ್ಲಿ ನಿರ್ಬಂಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಸರ್ಕಾರವು ಸರ್ಕಾರಿ ಸ್ಥಳಗಳಲ್ಲಿ ಆರೆಸ್‌ಎಸ್ ರೀತಿಯ ಚಟುವಟಿಕೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು.

RBI Repatriates 64 ton Gold

11:08 PM (IST) Oct 29

ಈ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ವಿದೇಶದಿಂದ 64 ಟನ್‌ ಚಿನ್ನ ವಾಪಾಸ್‌ ತಂದ ಆರ್‌ಬಿಐ!

RBI Repatriates 64 Tonnes of Gold in H1 FY ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ನಿಕ್ಷೇಪಗಳ ದೊಡ್ಡ ಭಾಗವನ್ನು ವಿದೇಶದಿಂದ ಭಾರತಕ್ಕೆ ಮರಳಿ ತರುತ್ತಿದೆ. ಪ್ರಸ್ತುತ, ಶೇ. 65ಕ್ಕೂ ಹೆಚ್ಚು ಚಿನ್ನವನ್ನು ದೇಶೀಯವಾಗಿ ಸಂಗ್ರಹಿಸಲಾಗಿದೆ.

Read Full Story

10:29 PM (IST) Oct 29

ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ

ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ ನಡೆಸಿದೆ. ಈ ಮೂಲಕ ಧರ್ಮಸ್ಥಳ ವಿರುದ್ದ ಮಾಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ಬುರುಡೆ ಗ್ಯಾಂಗ್ ಇದೀಗ ಮೆಲ್ಲನೆ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.

Read Full Story

09:37 PM (IST) Oct 29

Karna Serial - ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ

ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ, ತೇಜಸ್ ಅಪಹರಣದ ಹಿಂದೆ ತನ್ನ ಗಂಡ ರಮೇಶ್‌ನ ಕೈವಾಡವಿದೆ ಎಂಬ ಸತ್ಯ ಮಾಲತಿಗೆ ತಿಳಿಯುತ್ತದೆ. ಚಿಕ್ಕಮಗಳೂರಿನಲ್ಲಿ ತೇಜಸ್ ಇರುವ ಸುಳಿವನ್ನು ಮಾಲತಿ ಮಗ ಕರ್ಣನಿಗೆ ನೀಡಿದ್ದು, ಕರ್ಣ ಮತ್ತು ನಿತ್ಯಾ ಮುಂದಿನ ನಡೆ ಕುತೂಹಲ ಕೆರಳಿಸಿದೆ.
Read Full Story

08:38 PM (IST) Oct 29

ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ

ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ, ಶ್ರೀಕೃಷ್ಣನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ ಪ್ರಸಾದ ಸ್ವೀಕರಿಸಲಿದ್ದಾರೆ. ಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read Full Story

08:38 PM (IST) Oct 29

ಪಾಸಿಂಗ್‌ ಮಾರ್ಕ್ಸ್‌ 33ಕ್ಕೆ ಇಳಿಕೆ, ಶಿಕ್ಷಣ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡ ಸಭಾಪತಿ ಬಸವರಾಜ್‌ ಹೊರಟ್ಟಿ!

Basavaraj Horatti Slams Madhu Bangarappa Over Reducing Pass Marks to 33 ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಅನ್ನು 35 ರಿಂದ 33ಕ್ಕೆ ಇಳಿಸುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Read Full Story

08:35 PM (IST) Oct 29

ದೀಪಿಕಾ ಪಡುಕೋಣೆ ಭಾರೀ ಟ್ರೋಲ್ ಆದ್ರು, ಬಿಗ್ ಸಿನಿಮಾ ಕೈತಪ್ಪಿ ಹೋಯ್ತು; ಆದ್ರೂ ಗ್ರೇಟ್ ಯಾಕೆ?

ದೀಪಿಕಾ ಪಡುಕೋಣೆ, ತೆರೆಯ ಮೇಲೆ ತಮ್ಮ ನಟನೆಯಿಂದ ಮಾತ್ರವಲ್ಲ, ತೆರೆಯ ಹಿಂದೆ ತಮ್ಮ ಮೌಲ್ಯಯುತ ನಿಲುವುಗಳಿಂದಲೂ ಗಮನ ಸೆಳೆಯುತ್ತಾರೆ. ಅವರು ಕೇವಲ ಸ್ಟಾರ್ ಆಗಿ ಉಳಿಯದೆ, ಬದಲಾವಣೆಗೆ ನಾಂದಿ ಹಾಡುವ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ನೀವೇನಂತೀರಾ?

Read Full Story

07:05 PM (IST) Oct 29

ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ

ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ, ಗೋವಾದ ಕಾನಕೋನದಿಂದ ಕಾರವಾರದತ್ತ ಬೈಕ್‌ನಲ್ಲಿ ಮರಳುತ್ತಿರುವ ವೇಳೆ ಎಮ್ಮೆ ಅಡ್ಡಬಂದು ಅಪಘಾತ ಸಂಭವಿಸಿದೆ. 

Read Full Story

06:23 PM (IST) Oct 29

ಕಾವ್ಯಾ, ಗಗನ, ಯಶು... ಯಾರು Bigg Boss ಗಿಲ್ಲಿ ಹೆಂಡ್ತಿಯಾಗ್ಬೇಕು ಕೇಳಿದಾಗ ಚಿಕ್ಕಪ್ಪ ಹೇಳಿದ್ದೇನು?

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸ್ನೇಹ ಎಲ್ಲರ ಗಮನ ಸೆಳೆಯುತ್ತಿದೆ. ಕಾವ್ಯಾಗೆ ಸದಾ ಬೆಂಬಲವಾಗಿ ನಿಲ್ಲುವ ಗಿಲ್ಲಿಯನ್ನು ಸುದೀಪ್ ಕೂಡ ತಮಾಷೆ ಮಾಡುತ್ತಾರೆ. ಇದೀಗ, ಗಿಲ್ಲಿಯವರ ಚಿಕ್ಕಪ್ಪ, ತಮ್ಮ ಮನೆಗೆ ಸೊಸೆಯಾಗಿ ಕಾವ್ಯಾ ಬರಲಿ ಎಂದು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.
Read Full Story

06:08 PM (IST) Oct 29

(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ

(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದರೆ ಯತ್ನಾಳ್ ಹೊಸ ಪಕ್ಷ ಅಧಿಕೃತವಾಗಿ ಘೋಷಣೆಯಾಗಲಿದೆ. ಹೊಸ ಪಕ್ಷ ಕುರಿತು ಯತ್ನಾಳ್ ಸೂಚನೆ ಸಂಚಲನ ಸೃಷ್ಟಿಸಿದೆ

Read Full Story

05:32 PM (IST) Oct 29

Amruthadhaare ವಠಾರದವರ ಕಣ್ಣಿಗೆ ಬಿತ್ತು ಗೌತಮ್​- ಭೂಮಿಕಾ ಕುಚುಕುಚು - ಶುರುವಾಯ್ತು ಬೆಟ್ಟಿಂಗ್​!

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದ ಬಗ್ಗೆ ವಠಾರದ ಜನರಿಗೆ ಅನುಮಾನ ಶುರುವಾಗಿದೆ. ಇವರಿಬ್ಬರ ಬಗ್ಗೆಯೇ ಬೆಟ್ಟಿಂಗ್ ನಡೆಯುತ್ತಿರುವಾಗ, ಗೌತಮ್‌ಗೆ ಬಂದ ಕ್ಯಾಬ್ ಬುಕಿಂಗ್ ಭೂಮಿಕಾಳದ್ದೇ ಆಗಿದ್ದು, ಇದು ವಠಾರದವರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
Read Full Story

05:05 PM (IST) Oct 29

Lakshmi Nivasa - ವಿಶ್ವನ ತಲೆಗೆ ಪಿಸ್ತೂಲ್​​ನಿಂದ ಗುರಿ ಇಟ್ಟ ಜಯಂತ್​- ಮುಂದಾಗಿದ್ದು ಯಾರೂ ಊಹಿಸದ ಟ್ವಿಸ್ಟ್​!

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ಸೈಕೋ ಜಯಂತ್‌ಗೆ ತಿಳಿದಿದೆ. ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಕರೆದು, ಪಿಸ್ತೂಲ್ ತೋರಿಸಿ ಜಾಹ್ನವಿ ಎಲ್ಲಿದ್ದಾಳೆ ಎಂದು ಬೆದರಿಸುತ್ತಾನೆ. ವಿಶ್ವ ಆಕೆ ಎಲ್ಲಿದ್ದಾಳೆಂದು ಹೇಳದೆ, ಸಾಧ್ಯವಾದರೆ ಜಯಂತ್‌ಗೆ ಸವಾಲು ಹಾಕುತ್ತಾನೆ.

Read Full Story

04:57 PM (IST) Oct 29

'ಬೆಂಗಳೂರಿನ ಅರಾಜಕತೆಗೆ ಕೊನೆ ಎಂದು?' ಮಗಳ ಸಾವಿನಲ್ಲೂ ನಿಲ್ಲದ ಭ್ರಷ್ಟಾಚಾರಕ್ಕೆ ಬಿಪಿಸಿಎಲ್‌ ಮಾಜಿ ಸಿಎಫ್‌ಓ ಆಕ್ರೋಶ

Ex BPCL CFO K Shivakumar Exposes Systemic Corruption in Bengaluru After Daughter Tragic Death ಬಿಪಿಸಿಎಲ್‌ನ ಮಾಜಿ ಸಿಎಫ್‌ಒ ಕೆ. ಶಿವಕುಮಾರ್, ತಮ್ಮ ಮಗಳು ಅಕ್ಷಯಾ ಸಾವಿನ ನಂತರ ಬೆಂಗಳೂರಿನಲ್ಲಿ ಎದುರಿಸಿದ ಭ್ರಷ್ಟಾಚಾರದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. 

Read Full Story

03:48 PM (IST) Oct 29

'ಕನ್ನಡದ ರಿಯಲ್‌ ಹೀರೋ' Puneeth Rajkumar ನಟನೆಯ ಟಾಪ್‌ 10 ಸೂಪರ್‌ ಹಿಟ್‌ ಸಿನಿಮಾಗಳಿವು!

Actor Puneeth Rajkumar Movies: ಇಂದು ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಹೃದಯಾಘಾತದಿಂದ ಅವರು ನಿಧನರಾದರು. ನಟನೆಯ ಹೊರತಾಗಿ ಪುನೀತ್‌ ಅವರ ಸಾಮಾಜಿಕ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಇವರ ಸೂಪರ್‌ ಹಿಟ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. 

Read Full Story

03:25 PM (IST) Oct 29

ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ

ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಕಾಂಗ್ರೆಸ್ ಅಧಿಕಾರ ಬದಲಾವಣೆಯಲ್ಲಿ ಸಿದ್ದರಾಮಯ್ಯ ಕುರ್ಚಿ ಮೇಲೆ ಕಣ್ಣಿಟ್ಟಿರುವ, ರೇಸ್‌ನಲ್ಲಿರುವ ಯಾವ ನಾಯಕರು ಸಿಎಂ ಆಗಲ್ಲ ಎಂದಿದ್ದಾರೆ.

Read Full Story

03:15 PM (IST) Oct 29

BBK 12 - ರಕ್ಷಿತಾರನ್ನ ಮನೆ ಕೆಲಸದವ್ರು ಎಂದ್ಕೊಂಡ್ರು; ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ ಅಶ್ವಿನಿ ಅವ್ರೇ!

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಈ ಹಿಂದೆ ರಕ್ಷಿತಾ ಮೇಲೆ ಅಶ್ವಿನಿ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಅಶ್ವಿನಿ, ರಿಷಾ ಗೌಡ, ರಾಶಿಕಾ ಸೇರಿಕೊಂಡು ರಕ್ಷಿತಾ ಮೇಲೆ ಹರಿಹಾಯ್ದಿದ್ದಾರೆ. ಅಡುಗೆ ವಿಚಾರಕ್ಕೆ ಜಗಳ ಶುರುವಾಗಿದೆ. ಆ ವೇಳೆ ಅಶ್ವಿನಿ ಏನು ಹೇಳಿದ್ರು? 

 

Read Full Story

02:03 PM (IST) Oct 29

ಹಳ್ಳಿ ಶಾಲೆ, ಗಾಳಿಪಟ ಸ್ಪರ್ಧೆ, ಮಕ್ಕಳ ಕನಸು - ನ.14ರಂದು 'ಕೈಟ್‌ ಬ್ರದರ್ಸ್‌' ತೆರೆಗೆ

ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್‌ 14ರಂದು ಮಕ್ಕಳ ಜೊತೆಗೆ ಪೋಷಕರು ಕೂಡ ನೋಡುವಂತಹ ಸಿನಿಮಾವೊಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಹೆಸರು ‘ಕೈಟ್‌ ಬ್ರದರ್ಸ್‌’. ವಿರೇನ್‌ ಸಾಗರ್‌ ಬಗಾಡೆ ನಿರ್ದೇಶನದ ಚಿತ್ರವಿದು.

Read Full Story

01:50 PM (IST) Oct 29

Bigg Boss ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಕನ್ನಡದ 'ಸೀತೆ' ಧಾರಾವಾಹಿ ನಟ; ಯಾರದು?

ಕನ್ನಡದಲ್ಲಿ ದಶಕದ ಹಿಂದೆ ಸೀತೆ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಸೀತೆ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ಅಮಿತ್‌ ಭಾರ್ಗವ ನಟಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಸೀರಿಯಲ್‌ನ್ನು ನೋಡುತ್ತಿದ್ದರು. ಈಗ ಈ ಸೀರಿಯಲ್‌ ನಟ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿದ್ದಾರೆ.

Read Full Story

01:42 PM (IST) Oct 29

ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು - ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?

ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು. ಮೊದಲ ನಿರ್ದೇಶನದ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದಾರೆ ಅಂದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತರ್ಥ. ರವಿ ಒಳ್ಳೆಯ ಸಿನಿಮಾ ಮೇಕರ್, ಟ್ರೇಲರ್‌ ಚೆನ್ನಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.

Read Full Story

01:25 PM (IST) Oct 29

ಆಪಲ್ ಕಂಪನಿಯ ಸಂಕಷ್ಟದಿಂದ ಮೇಲೆತ್ತಿದ್ದ ಐಫೋನ್ 17, ಐಫೋನ್ ಏರ್‌ ಗ್ರಾಹಕರು - ಸಂಸ್ಥೆಗೆ ಭಾರಿ ಲಾಭ

Apple stock value increase: ಐಫೋನ್ ಮೇಲಿನ ಜನರ ಅಪಾರ ಕ್ರೇಜ್‌ನಿಂದಾಗಿ, ಆಪಲ್ ಸಂಸ್ಥೆಯು ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ದಾಟಿದೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 17 ಮತ್ತು ಐಫೋನ್ ಏರ್ ಮಾದರಿಗಳ ಭರ್ಜರಿ ಮಾರಾಟವು ಕಂಪನಿಯ ಷೇರು ಮೌಲ್ಯವನ್ನು ಹೆಚ್ಚಿಸಿದೆ.

Read Full Story

01:24 PM (IST) Oct 29

ಕಂಟೆಂಟ್‌ ಜೊತೆಗೆ ಫ್ಯಾಂಟಸಿ, ಹಾರರ್‌ ಹ್ಯೂಮರ್‌ ಇರೋ ಸಿನಿಮಾ ಕೋಣ - ನಟ ಕೋಮಲ್‌

ಕೋಣ ಕತೆ ತುಂಬಾ ಸರಳ. ಕೋಣವನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಊರಿಗೆ ಚಿತ್ರದ ನಾಯಕ ಹೋಗುತ್ತಾನೆ. ಬಲಿ ಆಗಬೇಕಾದ ಕೋಣದ ಜತೆಗೆ ಹೀರೋ ಕೂಡ ಲಾಕ್‌ ಆಗುತ್ತಾನೆ. ನಂತರ ಆ ಊರಿನಿಂದ ಹೇಗೆ ಹೊರಗೆ ಬರುತ್ತಾನೆ.

Read Full Story

01:20 PM (IST) Oct 29

ನಾನು Too hot to handle ಎಂದ ಪ್ರೇಮಕಾವ್ಯ ಧಾರಾವಾಹಿ ನಟಿ ವೈಷ್ಣವಿ ಕೌಂಡಿನ್ಯ Photos; ಗುರುತು ಸಿಗ್ತಾ?

Actress Vaishnavi Koundinya Photos: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪ್ರೇಮಕಾವ್ಯ ಧಾರಾವಾಹಿಯಲ್ಲಿ ಕಾವ್ಯ ಪಾತ್ರದಲ್ಲಿ ವೈಷ್ಣವಿ ಕೌಂಡಿನ್ಯ ಅವರು ನಟಿಸುತ್ತಿದ್ದಾರೆ. ಕೆಲ ಸಮಯಗಳ ಕಾಲ ಅವರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದು, ಈಗ ಕನ್ನಡಕ್ಕೆ ಕಂಬ್ಯಾಕ್‌ ಮಾಡಿದ್ದಾರೆ.

Read Full Story

01:12 PM (IST) Oct 29

Bhagyalakshmi ಆದಿ ಜೊತೆ ಮದ್ವೆಗೆ ರೆಡಿಯಾದಳಾ ಭಾಗ್ಯ? ಮದುಮಗಳ ಲುಕ್ ಹಿಂದಿರೋ ಸೀಕ್ರೆಟ್​ ಏನು?

ಭಾಗ್ಯಲಕ್ಷ್ಮಿ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಆದಿ ಮತ್ತು ಭಾಗ್ಯಳನ್ನು ಒಂದು ಮಾಡಲು ಕುಸುಮಾ ಪ್ರಯತ್ನಿಸುತ್ತಿದ್ದಾಳೆ. ಈ ನಡುವೆ, ನಟಿ ಸುಷ್ಮಾ ಕೆ. ರಾವ್ ಮದುಮಗಳ ಗೆಟಪ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.
Read Full Story

01:03 PM (IST) Oct 29

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ - ಕನ್ನಡ ರಾಜ್ಯೋತ್ಸವದಂದು 5ನೇ ರೈಲು ಸಂಚಾರ ಆರಂಭ

ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆರ್.ವಿ ರೋಡಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಮಾಡಲಿದೆ.

Read Full Story

12:50 PM (IST) Oct 29

Gen Z ಪೀಳಿಗೆಯ ಉದ್ಯೋಗಿ ಬರೆದ ಲೀವ್‌ ಲೆಟರ್‌ ನೋಡಿ ಕಂಗಾಲಾದ ಬಾಸ್;‌ ತಕ್ಷಣವೇ ಮಿಲಿಯನ್‌ ವೀಕ್ಷಣೆ

Gen Z ಪೀಳಿಗೆಯವರು ನಿಜಕ್ಕೂ ಭಾರೀ ಅಪ್‌ಡೇಟ್‌ ಆಗಿರೋದರಲ್ಲಿ ಯಾವುದೇ ಸಂಶಯವಿಲ್ಲ, ಬದುಕನ್ನು ನೋಡುವ ಮನಸ್ಥಿತಿ ಅಥವಾ ಲೈಫ್‌ನ್ನು ಎಂಜಾಯ್‌ ಮಾಡೋದು ಕೂಡ ಅನೇಕರಿಗೆ ಆಶ್ಚರ್ಯ ತಂದಿದೆ. ಈಗ ಲೀವ್‌ ಲೆಟರ್‌ ಭಾರೀ ವೈರಲ್‌ ಆಗ್ತಿದೆ. 

Read Full Story

12:43 PM (IST) Oct 29

ದುಬೈನ ಕನ್ನಡ ಮಿತ್ರರು ಸಂಘಕ್ಕೆ ಅಂ.ರಾ. ಪುರಸ್ಕಾರ - 1200 ಮಕ್ಕಳಿಗೆ ಉಚಿತ ಕನ್ನಡ ಬೋಧನೆ

ಕನ್ನಡ ಪಾಠ ಶಾಲೆ ದುಬೈ ಶಾಲೆಯಲ್ಲಿ 2014 ರಿಂದ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಬೋಧನೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಈ ಶಾಲೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ದೊರತಿದೆ.

Read Full Story

12:23 PM (IST) Oct 29

Bigg Bossಗೆ ಹೋದ ನಟಿ - 'ಪುಟ್ಟಕ್ಕನ ಮಕ್ಕಳು' ಬಂಗಾರಮ್ಮ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ದಾಖಲು!

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಂಗಾರಮ್ಮ ಖ್ಯಾತಿಯ ಮಂಜು ಭಾಷಿಣಿ ಅವರು ಬಿಗ್ ಬಾಸ್ 12 ರಿಂದ ಹೊರಬಂದಿದ್ದಾರೆ. ಅವರು ಬಿಗ್ ಬಾಸ್‌ಗೆ ಹೋದ ಕಾರಣ, ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಕೋಮಾಕ್ಕೆ ಜಾರುವಂತೆ ತೋರಿಸಲಾಗಿದ್ದು, ಮುಂದೆ ಅವರೇ ಈ ಪಾತ್ರದಲ್ಲಿ ಮುಂದುವರೆಯುತ್ತಾರೆಯೇ ಎಂಬ ಕುತೂಹಲ ಮೂಡಿದೆ.
Read Full Story

12:18 PM (IST) Oct 29

ಹಾಸಿಗೆ, ದಿಂಬು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ಬಿಗ್‌ ಶಾಕ್

ಜೈಲಿನಲ್ಲಿ ಹಾಸಿಗೆ ಮತ್ತು ದಿಂಬು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ನಟ ದರ್ಶನ್‌ಗೆ ನಿರಾಸೆಯಾಗಿದೆ. ಜೈಲಿನ ಕೈಪಿಡಿಯ ಪ್ರಕಾರವೇ ಸವಲತ್ತುಗಳನ್ನು ನೀಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸಿದ್ದಾರೆ.
Read Full Story

12:13 PM (IST) Oct 29

ಕಾವೇರಿಯೂ ಸೇರಿದಂತೆ ಯಾವ ನದಿಯೂ ಶುದ್ಧವಾಗಿಲ್ಲ - ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಕಾವೇರಿಯೂ ಸೇರಿದಂತೆ ಎಲ್ಲಾ ನದಿಗಳಿಗೂ ಕೈಗಾರಿಕೆಗಳ ತ್ಯಾಜ್ಯ ಹಾಗೂ ಒಳಚರಂಡಿ ನೀರು ಸೇರಿ ಕಲುಷಿತಗೊಳಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನದಿಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿ ಆಗಬೇಕಾದ ಕೆಲಸ.

Read Full Story

12:08 PM (IST) Oct 29

BBK 12 - ಅದೊಂದು ಕಾರಣಕ್ಕೆ ಒಂದೇ ವಾರಕ್ಕೆ ಹುಟ್ಟಿದ್ದ ರಾಶಿಕಾ ಶೆಟ್ಟಿ, ಸೂರಜ್ ಆತ್ಮೀಯತೆ ಮುಗಿದೋಯ್ತು..

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ಅವರು ಒಂದೇ ವಾರಕ್ಕೆ ತುಂಬ ಕ್ಲೋಸ್‌ ಆಗಿದ್ದಾರೆ. ಈಗ ಈ ಜೋಡಿ ಮಧ್ಯೆ ಬಿರುಕು ಬಂದಿದೆ. ಇದಕ್ಕೆ ಕಾರಣ ಏನು? ನಿಜಕ್ಕೂ ಏನು ಆಯ್ತು?

 

Read Full Story

11:59 AM (IST) Oct 29

Karna Serial - ನಿತ್ಯಾ- ಕರ್ಣ ಜೋಡಿನ ಮೆಚ್ಚಿಕೊಂಡ ಜನ… ಮಿಲನ ಚಿತ್ರದ ಅಂಜಲಿ-ಆಕಾಶ್ ನೆನಪಾಗ್ತಾರಂತೆ!

Karna Serial: ಇಲ್ಲಿವರೆಗೆ ಕರ್ಣ ಮತ್ತು ನಿಧಿ ಜೋಡಿನ ಮೆಚ್ಚಿ, ನಿತ್ಯಾಳನ್ನು ಆಡಿಕೊಳ್ಳುತ್ತಿದ್ದ ವೀಕ್ಷಕರು ಇದೀಗ ಹೊಸ ಎಪಿಸೋಡ್ ಪ್ರೊಮೋಗಳನ್ನು ನೋಡಿ, ಈ ಜೋಡಿ ಸೂಪರ್ ಆಗಿದೆ. ಮಿಲನ ಸಿನಿಮಾದ ಅಂಜಲಿ ಮತ್ತು ಆಕಾಶ್ ಜೋಡಿಯಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.

Read Full Story

11:43 AM (IST) Oct 29

ಅಣ್ಣನನ್ನ ಸಿಎಂ ಮಾಡಬೇಕೆಂಬ ನನಗೂ ಆಸೆ ಇದೆ, ಆದ್ರೆ... ಮಾಜಿ ಸಂಸದ‌ ಡಿ.ಕೆ. ಸುರೇಶ್ ಹೇಳಿದ್ದೇನು?

ರಾಹುಲ್ ಗಾಂಧಿಯವರ ರಾಜ್ಯಕ್ಕೆ ಆಗಮನ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ. ಕಾಂಗ್ರೆಸ್ ಭನವಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ ಎಂದು ಮಾಜಿ ಸಂಸದ‌ ಡಿ.ಕೆ. ಸುರೇಶ್ ಹೇಳಿದರು.

Read Full Story

11:21 AM (IST) Oct 29

Karna Serial - ರಮೇಶ್‌ನಿಗೆ ಮತ್ತೊಂದು ಶಾಕ್; ಗಾಯಗೊಂಡ ಹಾವಿನಂತಾದ ಕರ್ಣನ ನೀಚ ತಂದೆ

Ramesh s plan failed: ಮಗ ಕರ್ಣನ ನಗುವನ್ನು ಕಿತ್ತುಕೊಳ್ಳಲು ತಂದೆ ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆಗೆ ಬಂದ ಮಹಿಳೆಯರ ಕೊಂಕು ಮಾತುಗಳಿಗೆ ಕರ್ಣ ತಕ್ಕ ಉತ್ತರ ನೀಡಿದ್ದು, ನಿತ್ಯಾಳನ್ನು ಗೆಲ್ಲಿಸಿದ್ದಾನೆ. ಇದರಿಂದ ರಮೇಶ್ ಮತ್ತೊಮ್ಮೆ ಸೋಲನುಭವಿಸಿದ್ದಾನೆ.

Read Full Story

11:18 AM (IST) Oct 29

ಪೊಲೀಸರ ಮುಡಿಗೇರಿದ ಪಿ-ಕ್ಯಾಪ್‌ - ಈ ಕ್ಯಾಪ್ ಮಾದರಿಯನ್ನೂ ಆಯ್ಕೆ‌ ಮಾಡಿದ್ದು ನಾನೇ ಎಂದ ಸಿದ್ದು

ಕೆಲ ಪೊಲೀಸರು ರಿಯಲ್‌ ಎಸ್ಟೇಟ್‌ ಮಾಡುವವರು, ಡ್ರಗ್ಸ್‌ ಜಾಲದ ಜೊತೆ ಶಾಮಿಲಾಗಿರುತ್ತಾರೆ, ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿರುವ ಬಗ್ಗೆ ಸ್ವಯಂ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story

11:11 AM (IST) Oct 29

ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ಇಲ್ಲ - ಸಚಿವ ಸತೀಶ್‌ ಜಾರಕಿಹೊಳಿ

‘ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ಇಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಎರಡ್ಮೂರು ಸಲ ಹೇಳಿದ್ದಾರೆ. ಹೀಗಾಗಿ ಆ ಸಮಯ ಬಂದಾಗ ಮಾತನಾಡುತ್ತೇವೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Read Full Story

10:50 AM (IST) Oct 29

ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು - ವಿಪ್ರೋ ಮತ್ತು ಐಐಎಸ್‌ಸಿ ಸಹಯೋಗದ ಚಾಲಕರಹಿತ ಕಾರು ಅನಾವರಣ

ವಿಪ್ರೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಕಾರನ್ನು ಇತ್ತೀಚೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅನಾವರಣಗೊಳಿಸಲಾಗಿದೆ.

Read Full Story

10:41 AM (IST) Oct 29

ನಾನು ಸೀನಿಯರ್‌, ಸಚಿವ ಸ್ಥಾನ ಸಿಗೋ ನಿರೀಕ್ಷೆ ಇದೆ - ಶಾಸಕ ಸಿ.ಎಸ್.ನಾಡಗೌಡ

ಕಾಂಗ್ರೆಸ್‌ನಲ್ಲಿ ನಾನು ಸೀನಿಯರ್‌ ಲೀಡರ್‌. ಈ ಹಿಂದೆಯೂ ನನಗೆ ಯಾವುದೇ ಬೇಡಿಕೆ ಇಲ್ಲದೆ ಸಚಿವ ಸ್ಥಾನ ನೀಡಿದ್ದರು. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಈ ಬಾರಿ ನನಗೆ ಸಚಿವ ಸ್ಥಾನ ಕೊಡಬಹುದು ಎನ್ನುವ ನಿರೀಕ್ಷೆಯಿದೆ.

Read Full Story

10:26 AM (IST) Oct 29

BBK 12 - ಕಾಮಿಡಿ, ಲವ್‌ ಬಿಟ್ಟು ಹೊಸ ಅವತಾರ ತಾಳಿದ ಗಿಲ್ಲಿ ನಟ; ಬೆಚ್ಚಿಬಿದ್ದ ಸ್ಪರ್ಧಿಗಳು

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರುವ ರಿಷಾ ಗೌಡಗೂ ಹಾಗೂ ಗಿಲ್ಲಿ ನಟನಿಗೂ ಜಗಳ ಶುರುವಾಗಿದೆ. ಇದಕ್ಕೆ ಕಾರಣ ಏನು? ಅಂಥದ್ದೇನಾಯ್ತು?

 

Read Full Story

10:19 AM (IST) Oct 29

ಡಿಕೆಶಿ ಸಿಎಂ ಆದ್ರೆ ಕಾಂಗ್ರೆಸ್‌ ಕಚೇರಿಗಳಿಗೆ ದೊಡ್ಡ ಬೀಗ ಬೀಳುತ್ತದೆ - ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ

ಒಂದು ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯದ ಕಾಂಗ್ರೆಸ್‌ ಕಚೇರಿಗಳಿಗೆ ದೊಡ್ಡ ಬೀಗ ಹಾಕಬೇಕಾಗುತ್ತೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Read Full Story

09:51 AM (IST) Oct 29

ಇದೇ ನೋಡಿ ಇಳಯರಾಜಾ ಮ್ಯಾಜಿಕ್ - ಸಿನಿಮಾ ಫ್ಲಾಪ್.. ಆದ್ರೆ ಒಂದೇ ಹಾಡಿನಿಂದ 1 ಕೋಟಿ ಲಾಭ ಮಾಡಿದ ನಿರ್ಮಾಪಕ

ಇಸೈಜ್ಞಾನಿ ಇಳಯರಾಜಾ ಸಂಗೀತದಲ್ಲಿ ಅಸಂಖ್ಯಾತ ಹಿಟ್ ಹಾಡುಗಳು ಬಂದಿವೆ. ಅದರಲ್ಲಿ ಅವತಾರಂ ಚಿತ್ರದ ಒಂದೇ ಒಂದು ಹಾಡು ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿದೆ. ಅದರ ಬಗ್ಗೆ ನೋಡೋಣ.

Read Full Story

09:36 AM (IST) Oct 29

ಸಿಎಂ ವಿಚಾರವಾಗಿ ನನ್ನ ಹೇಳಿಕೆಗೆ ಈಗಲೂ ಬದ್ಧ - ಶಾಸಕ ಇಕ್ಬಾಲ್‌ ಹುಸೇನ್

ಸಿಎಂ ಸ್ಥಾನಕ್ಕೆ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಆಸೆ ಪಟ್ಟವರಿಗೆಲ್ಲ ಕಡಿವಾಣ ಹಾಕಲು ಸಾಧ್ಯವಿಲ್ಲ. ನಾನಂತೂ ಮುಖ್ಯಮಂತ್ರಿ ವಿಚಾರವಾಗಿ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.

Read Full Story

More Trending News