ಬೆಂಗಳೂರು (ಏ.17): ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಿಚ್ಚು ಎಬ್ಬಿಸಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸಿಎಂ ಸಿದ್ದರಾಮಯ್ಯ ಹೇಳುವಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಕುರಿತು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ವರದಿಗೆ ಬೆಂಬಲ ವ್ಯಕ್ತಪಡಿಸಿವೆ. ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.

11:46 PM (IST) Apr 17
ಒಂದು ನವದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ಆಭರಣಗಳನ್ನು ತೆಗೆಯುವ ದೃಶ್ಯವಿದ್ದು, ಕೆಲವರು ಇದನ್ನು ಖಂಡಿಸಿದ್ದಾರೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ11:24 PM (IST) Apr 17
ಸೌರವ್ ಗಂಗೂಲಿ ಅಷೆಲ್ಲ ಹೆಸರು ಮಾಡಿದ್ದರೂ ಕೂಡ, ಈಗ ಇವರಿಗೆ ಸೆಡ್ಡು ಹೊಡೆಯುವಂತೆ ಮಗಳು ಸನಾ ಕಾರ್ಪೋರೇಟ್ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಅಂದಹಾಗೆ ಇವರಿಗೆ ಸಿಗುತ್ತಿರುವ ಸಂಬಳ ಎಷ್ಟು?
11:08 PM (IST) Apr 17
ಚಿನ್ನದ ಬೆಲೆ ದಾಖಲೆ ಮಟ್ಟ ಮುಟ್ಟುತ್ತಿರುವ ಈ ಸಮಯದಲ್ಲಿ, ಚಿನ್ನಾಭರಣಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯ. ಹಲವು ವಿಮಾ ಕಂಪನಿಗಳು ಚಿನ್ನಕ್ಕೆ ಪ್ರತ್ಯೇಕ ವಿಮಾ ರಕ್ಷಣೆ ನೀಡುತ್ತಿವೆ. ಜಾಗತಿಕ ಟ್ರೇಡ್ ವಾರ್, ರೂಪಾಯಿ ಮೌಲ್ಯ ಕುಸಿತ, ಮತ್ತು ಮದುವೆ ಸೀಸನ್ ಚಿನ್ನದ ಬೆಲೆ ಏರಿಕೆಗೆ ಕಾರಣ.
ಪೂರ್ತಿ ಓದಿ10:51 PM (IST) Apr 17
ಮುಂಬೈನಲ್ಲಿ ಯುವತಿಯೊಬ್ಬರು ತಮ್ಮ 2BHK ಮನೆಯ ಒಂದು ಬೆಡ್ರೂಮ್ಗೆ ₹52,000 ಬಾಡಿಗೆ ಕೇಳಿದ್ದಾರೆ. ಈ ಬೆಲೆ ದುಬಾರಿ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಫ್ಲಾಟ್ ಜಿಮ್, ಜಾಗಿಂಗ್ ಟ್ರ್ಯಾಕ್ನಂತಹ ಸೌಲಭ್ಯಗಳನ್ನು ಹೊಂದಿದ್ದರೂ, ಬಾಡಿಗೆ ವಿಪರೀತ ಎಂಬುದು ಜನರ ಅಭಿಪ್ರಾಯ.
ಪೂರ್ತಿ ಓದಿ10:08 PM (IST) Apr 17
ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ತಿ ಓದಿ10:00 PM (IST) Apr 17
ಅಧಿಕಾರ ಹಂಚಿಕೆ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಬ್ರಹ್ಮಾಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಜನಗಣತಿ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪೂರ್ತಿ ಓದಿ09:50 PM (IST) Apr 17
ಕಡಲ ತಡಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿದೆ. ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ.
ಪೂರ್ತಿ ಓದಿ09:50 PM (IST) Apr 17
ಭಾರತದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಜಪಾನ್ ಘೋಷಣೆ ಭಾರತೀಯರ ಸಂತಸಕ್ಕೆ ಕಾರಣವಾಗಿದೆ. ಜಪಾನ್ ಇದೀಗ ಎರಡು ಹೈಸ್ಪೀಡ್ ಬುಲೆಟ್ ರೈಲು ಉಚಿತವಾಗಿ ಭಾರತಕ್ಕೆ ನೀಡುತ್ತಿದೆ.
ಪೂರ್ತಿ ಓದಿ09:33 PM (IST) Apr 17
ಜಿಲ್ಲೆಯಲ್ಲಿ 4 ನದಿಗಳು ಹುಟ್ಟಿ ಹರಿದರೂ ಆ ಒಂದು ಗ್ರಾಮಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿಗೆ ಬರ ಬಂದಿದೆ. ಊರಿನಿಂದ ನೂರೇ ಮೀಟರ್ ದೂರದಲ್ಲಿ ಜಲಾಶಯವಿದ್ದರೂ ಇವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿಲ್ಲ.
ಪೂರ್ತಿ ಓದಿ08:24 PM (IST) Apr 17
ಎಸ್ಆರ್ಹೆಚ್ ಟ್ರಾವಿಸ್ ಹೆಡ್ ಒಳಗೊಂಡ ಉಬರ್ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೈದರಾಬಾದಿ ಜಾಹೀರಾತಿನಲ್ಲಿ ಆರ್ಸಿಬಿಗೆ ಅಪಮಮಾನ ಮಾಡಲಾಗಿದೆ ಎಂದು ಆರ್ಸಿಬಿ ಫ್ರಾಂಚೈಸಿ ಕೋರ್ಟ್ ಮೆಟ್ಟಿಲೇರಿದೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಹೇಳಿದ್ದೇನು?
ಪೂರ್ತಿ ಓದಿ08:23 PM (IST) Apr 17
ಸ್ವಾಮಿ ತಾತ ಕೋಪದಲ್ಲಿ ಸುಬ್ಬಿಗೆ ತಾನು ಕಿಡ್ನಾಪ್ ಮಾಡಿದ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಸೀತಾಳಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಸುಬ್ಬಿ ಒಬ್ಬಳು ಎಂಬುದು ಬೆಳಕಿಗೆ ಬರುತ್ತದೆ. ಸುಬ್ಬಿ ತನ್ನ ನಿಜವಾದ ತಾಯಿಯನ್ನು ತಿಳಿದು ಖುಷಿಪಡುತ್ತಾಳೆ.
ಪೂರ್ತಿ ಓದಿ08:20 PM (IST) Apr 17
ಮಳೆಗಾಲ ಆರಂಭವಾದ ತಕ್ಷಣ ಭದ್ರೆಯ ಅಬ್ಬರಕ್ಕೆ ಪ್ರತಿ ವರ್ಷವೂ ಮೊದಲು ಮುಳುಗೋ ಸೇತುವೆಯೇ ಹೆಬ್ಬಾಳೆ ಸೇತುವೆ. ಸ್ಥಳೀಯರು ,ಭಕ್ತರು ಸೇತುವೆ ಮುಳುಗಡೆಯಿಂದ ಬೇಸತ್ತು ಹೊಸ ಸೇತುವೆಗೆ ಬೇಡಿಕೆಯಿಟ್ಟಿದ್ರು.
ಪೂರ್ತಿ ಓದಿ08:01 PM (IST) Apr 17
ಇನ್ಫೋಸಿಸ್ ತನ್ನ FY25ರ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ನಿವ್ವಳ ಲಾಭವು 12% ರಷ್ಟು ಕುಸಿದು ₹7,033 ಕೋಟಿಗೆ ತಲುಪಿದೆ. ಆದಾಯವು 8% ರಷ್ಟು ಹೆಚ್ಚಳವಾಗಿ ₹40,925 ಕೋಟಿಗೆ ತಲುಪಿದೆ. ಕಂಪನಿಯು FY26 ರಲ್ಲಿ 0-3% ರಷ್ಟು ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ.
ಪೂರ್ತಿ ಓದಿ07:21 PM (IST) Apr 17
ಜಾತಿಗಣತಿ ವರದಿ ಜಾರಿಗೆ ಚಾಮರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ07:16 PM (IST) Apr 17
ಜಾತಿ ಗಣತಿ ವರದಿ ಜಾರಿಗೆ ತರಲು ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಚಿವರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಂದ ಲಿಖಿತ ರೂಪದಲ್ಲಿ ಉತ್ತರ ಕೇಳಿದ್ದಾರೆ.
ಪೂರ್ತಿ ಓದಿ07:11 PM (IST) Apr 17
ವಕ್ಫ್ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಪೂರ್ತಿ ಓದಿ07:02 PM (IST) Apr 17
ಬಾಸ್ ಜೊತೆ ಪ್ರವಾಸದಲ್ಲಿ ಫುಲ್ ಎಂಜಾಯ್, ಈಗ ನಿನ್ನ ಫುಲ್ ಸೈಝ್ ಫೋಟೋ ಒಂದು ಕಳುಹಿಸು. ಬಾಸ್ ನಿನ್ನ ಪ್ರೊಫೈಲ್ ಫಿಗರ್ ತೋರಿಸಬೇಕಿದೆ. ಇದು ಯುವತಿ ಜೊತೆ ಕಂಪನಿಯ ಹೆಚ್ಆರ್ ನಡೆಸಿದ ವ್ಯಾಟ್ಸಾಪ್ ಚಾಟ್. ಕಂಪನಿಯ ಇನ್ನೊಂದು ಮುಖವನ್ನು ಯವತಿ ಬಹಿರಂಗಪಡಿಸಿದ್ದಾಳೆ.
ಪೂರ್ತಿ ಓದಿ07:01 PM (IST) Apr 17
ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಗಂಭೀರ ಆರೋಪ ಮಾಡಿದ್ದಾರೆ. ಕ್ರೆಡಿಟ್ ಕದಿಯುವುದು, ಪೇಮೆಂಟ್ ನೀಡದಿರುವುದು ಮತ್ತು 'ನಾದಬ್ರಹ್ಮ' ಬಿರುದಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ06:42 PM (IST) Apr 17
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್ಐಆರ್ ದಾಖಲಿಸದ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪೂರ್ತಿ ಓದಿ06:38 PM (IST) Apr 17
ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಗಾಯಕ ಶಂಕರ್ ಶಾನುಭಾಗ್ ಪ್ರತಿಫಲ ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ06:33 PM (IST) Apr 17
ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಗುಂಪೊಂದು ಭರ್ಜರಿಯಾಗಿ ಭಜನೆಯನ್ನು ಮಾಡಿದೆ. ತಬಲಾ, ತಾಳ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ಭಾರಿಸುತ್ತಾ ಕೀರ್ತನೆ ಪದಗಳನ್ನು ಹಾಡಿ ಮಜಾ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.
ಪೂರ್ತಿ ಓದಿ06:01 PM (IST) Apr 17
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡಿರೋದಕ್ಕೆ ಅವರು ಹೇಳಿದ್ದೇನು?
05:51 PM (IST) Apr 17
ಎಲಾನ್ ಮಸ್ಕ್ ಪತ್ನಿ, ಗೆಳತಿ ಸೇರಿ ನಾಲ್ವರು ಮಹಿಳೆಯರಿಂದ 14 ಮಕ್ಕಳ ತಂದೆಯಾಗಿರುವ ಶ್ರೀಮಂತ ಉದ್ಯಮಿ ಇದೀಗ 15ನೇ ಮಗು ಪಡೆಯಲು ಪ್ಲಾನ್ ಮಾಡಿದ್ದಾರೆ. ಈ ಬಾರಿ ಮಸ್ಕ್ ಹೊಸ ಪ್ಲಾನ್ ಮಾಡಿದ್ದಾರೆ. ಜಪಾನ್ ಮಹಿಳೆಗೆ ತನ್ನ ವೀರ್ಯ ಕಳುಹಿಸಿದ್ದಾರೆ.
ಪೂರ್ತಿ ಓದಿ05:50 PM (IST) Apr 17
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತವು ಪುನರುಚ್ಚರಿಸಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ಖಡಕ್ ಉತ್ತರ ನೀಡಿದೆ.
ಪೂರ್ತಿ ಓದಿ05:48 PM (IST) Apr 17
ಗಂಡ ಹೆಂಡತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರೋ ಘಟನೆ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತ ಪಟ್ಟ ದುರ್ದೈವಿಗಳನ್ನು ಗಂಡ ಮೆಹೆಬೂಬ್ (45) ಹಾಗೂ ಹೆಂಡ್ತಿ ಪರ್ವೀನ್ (35) ಎಂದು ಗುರುತಿಸಲಾಗಿದೆ.
ಪೂರ್ತಿ ಓದಿ05:19 PM (IST) Apr 17
10 ವರ್ಷಗಳ ಸಾಕಷ್ಟು ಏಳು ಬೀಳಿನ ಬಳಿಕ ಮದುವೆಯಾದ ಖುಷಿಗೆ ಫುಡ್ ವ್ಲಾಗರ್ ಒಬ್ಬರು ಮೊದಲು ರಾತ್ರಿಯ ವಿಡಿಯೋ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.
05:09 PM (IST) Apr 17
ಬಿಬಿಎಂಪಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂ ಮಾಡುತ್ತಿದೆ. 1ನೇ ಮೇ 2025 ರಂದು ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪೌರಕಾರ್ಮಿಕರ ದಿನಾಚರಣೆಯಂದು ಈ ಘೋಷಣೆ ಮಾಡಲಾಗಿದೆ.
ಪೂರ್ತಿ ಓದಿ04:38 PM (IST) Apr 17
ಹೆಣ್ಣುಮಕ್ಕಳು ದುಡಿಯುತ್ತಿದ್ದರೆ ಅವರ ಮದುವೆಯೆನ್ನುವ ಕನಸಿನ ಗೋಪುರವನ್ನು ಛಿದ್ರ ಮಾಡುತ್ತಿದ್ದಾರಾ ಅಪ್ಪ-ಅಮ್ಮ? ಇದೇನಿದು ಅಂತೀರಾ? ಕಹಿ ಎನ್ನಿಸುವ ಸತ್ಯದ ವರದಿ ಇದು...
04:36 PM (IST) Apr 17
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಜಮ್ಮು ಕಾಶ್ಮೀರವನ್ನು ಇಸ್ಲಾಮಾಬಾದ್ನ ರಕ್ತನಾಳ ಎಂದು ಕರೆದಿದ್ದಾರೆ. ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಮರ್ಥಿಸಿಕೊಂಡ ಅವರು, ಪಾಕಿಸ್ತಾನ ಕಾಶ್ಮೀರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಪೂರ್ತಿ ಓದಿ04:25 PM (IST) Apr 17
ಗೂಗಲ್ ಮತ್ತೊಮ್ಮೆ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಭಾರತದಲ್ಲಿ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳ ಮೇಲೆ ಪರಿಣಾಮ ಬೀರಲಿದೆ. ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ಹೆಚ್ಚಿನ ಉದ್ಯೋಗ ಕಡಿತ ಇರಲಿದೆ ಎಂದು ವರದಿಯಾಗಿದೆ.
ಪೂರ್ತಿ ಓದಿ04:01 PM (IST) Apr 17
ಈ 50 ಸಿನಿಮಾಗಳು ನಿಜಕ್ಕೂ ಒಳ್ಳೆಯ ಕಂಟೆಂಟ್ ಹೊಂದಿದೆ. ಹೀಗಾಗಿ ಮಿಸ್ ಮಾಡದೆ ಈ ಸಿನಿಮಾ ನೋಡಿ.
ಪೂರ್ತಿ ಓದಿ03:37 PM (IST) Apr 17
ಐಪಿಎಲ್ ಪಂದ್ಯದಲ್ಲಿ ಗಾಯಗೊಂಡ ಸಂಜು ಸ್ಯಾಮ್ಸನ್ ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದರು. ಇದು ತಿಲಕ್ ವರ್ಮಾ ಮತ್ತು ಡೆವೊನ್ ಕಾನ್ವೆ ಅವರ ರಿಟೈರ್ಡ್ ಔಟ್ ನಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ರಿಟೈರ್ಡ್ ಹರ್ಟ್ ಆರೋಗ್ಯ ಸಮಸ್ಯೆಯಿಂದಾಗಿ ಆಗಿದ್ದರೆ, ರಿಟೈರ್ಡ್ ಔಟ್ ತಂಡದ ತಂತ್ರಗಾರಿಕೆಯ ನಿರ್ಧಾರವಾಗಿದೆ.
ಪೂರ್ತಿ ಓದಿ03:31 PM (IST) Apr 17
ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್ಗೇಟ್ಸ್ ತಮ್ಮ ಮಕ್ಕಳಿಗಾಗಿ ತಮ್ಮ ಆಸ್ತಿಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ಉಳಿಸುವ ಯೋಜನೆಯಲ್ಲಿದ್ದಾರೆ.ಈ ಬಗ್ಗೆ ಅವರ ಮಕ್ಕಳು ಏನೆನ್ನಬಹುದು ಎಂಬ ಬಗ್ಗೆಯೂ ಗೇಟ್ಸ್ ಮಾತನಾಡಿದ್ದಾರೆ.
ಪೂರ್ತಿ ಓದಿ03:09 PM (IST) Apr 17
ನಟಿ ಶಿವರಾಜ್ಕುಮಾರ್ ಅವರ ಮಗಳು ನಿವೇದಿತಾ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮೊದಲ ಸಿನಿಮಾ ʼಫೈರ್ ಫ್ಲೈʼ ಹೇಗಿದೆ?
03:04 PM (IST) Apr 17
ಎಲೆಕ್ಟ್ರಿಕ್ ಬೈಕ್, ಸ್ಕೂಟರ್ಗಳಲ್ಲಿ ಗೇರ್ ಇಲ್ಲ. ಇನ್ನು ಇವಿ ಕಾರುಗಳಲ್ಲೂ ಟ್ರಾನ್ಸ್ಮಿಶನ್ ಇರಲ್ಲ, ಏನಿದ್ದರು ಡ್ರೈವ್, ಸ್ಪೋರ್ಟ್ ಮೂಡ್, ರಿವರ್ಸ್ ಹೀಗಿರುತ್ತೆ. ಆದರೆ ಇವಿಯಲ್ಲಿ ಇದೀಗ ಕ್ರಾಂತಿಯಾಗಿದೆ. ಬೆಂಗಳೂರಿನಲ್ಲಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಅತ್ಯಾಕರ್ಷಕ ಹಾಗೂ ಉತ್ತಮ ಪರ್ಫಾಮೆನ್ಸ್ ಬೈಕ್ ಬೆಲೆ ಎಷ್ಟು?
ಪೂರ್ತಿ ಓದಿ02:57 PM (IST) Apr 17
ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ, ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ ಯುವತಿ. ಇದರ ವಿಡಿಯೋ ವೈರಲ್ ಆಗಿದ್ದು, ಕಮೆಂಟ್ಸ್ ಸುರಿಮಳೆ ಆಗ್ತಿದೆ.
02:48 PM (IST) Apr 17
ವಕ್ಫ್ (ತಿದ್ದುಪಡಿ) ಕಾಯ್ದೆ 2025ಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ, ವಕ್ಫ್ ಬೋರ್ಡ್ ಮತ್ತು ಅರ್ಜಿದಾರರಿಗೆ ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ನಿಗದಿಪಡಿಸಿದೆ. ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಿದೆ.
ಪೂರ್ತಿ ಓದಿ01:42 PM (IST) Apr 17
ಬೆಂಗಳೂರಿನ ಉತ್ಸಾಹಿ ಶ್ವಾನ ಪ್ರೇಮಿ ಎಸ್.ಸತೀಶ್ 50 ಕೋಟಿ ರೂ. ಬೆಲೆಬಾಳುವ ವೂಲ್ಫ್ ಡಾಗ್ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದು ಸುಳ್ಳು ಎಂದು ಬಯಲು ಮಾಡಿದ್ದಾರೆ. ಬೇರೆಯವರಿಂದ ನಾಯಿಗಳನ್ನು ಬಾಡಿಗೆ ಪಡೆದು ಸತೀಶ್ ವಿಡಿಯೋ ಮಾಡಿಕೊಳ್ಳುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೂರ್ತಿ ಓದಿ01:41 PM (IST) Apr 17
ಇಪ್ಸೊಸ್ ಹೆಲ್ತ್ ಸರ್ವೀಸಸ್ ವರದಿಯ ಪ್ರಕಾರ, ಭಾರತೀಯರಲ್ಲಿ ಕ್ಯಾನ್ಸರ್ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಬೊಜ್ಜು, ಮಾನಸಿಕ ಆರೋಗ್ಯ, ಮತ್ತು ಮಾದಕ ವ್ಯಸನದಂತಹ ಸಮಸ್ಯೆಗಳೂ ಹೆಚ್ಚುತ್ತಿವೆ. ಕೈಗೆಟುಕುವ ಆರೋಗ್ಯ ಸೇವೆ ಮತ್ತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
ಪೂರ್ತಿ ಓದಿ01:29 PM (IST) Apr 17
ಶ್ರೀದೇವಿ ಮಗಳು ಜಾಹ್ನವಿ ತನ್ನ ಅಮ್ಮನ ಆಸೆಯಂತೆ ಇದ್ದಾರೆಯೇ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಜಾಹ್ನವಿ ಸರಳ ಸ್ವಭಾವ ಹಾಗೂ ಒಳ್ಳೆಯತನಕ್ಕೆ ಹೆಸರಾಗಿಲ್ಲ ಅನ್ನೋದು ಹಲವರ ಅನಿಸಿಕೆ. ಆದರೆ, ಜಾಹ್ನವಿ ಸರಿಯಿಲ್ಲ ಎಂದು ಹೇಳುವ ಹಕ್ಕು ಯಾರಿಗೂ..
ಪೂರ್ತಿ ಓದಿ