userpic
user icon
0 Min read

ಬಿಜೆಪಿಗರು ಲಜ್ಜೆಗೆಟ್ಟವರು, ಸುಳ್ಳು ಅವ್ರ ಮನೆ ದೇವ್ರು: ಸಿದ್ದರಾಮಯ್ಯ ವಾಗ್ದಾಳಿ

The BJP Leaders is adamant about lying Says CM Siddaramaiah gvd
Siddaramaiah

Synopsis

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್‌ (ಏ.17): ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಗರದ ನೆಹರು ಕ್ರೀಡಾಂಗಣದಲ್ಲಿಂದು ನಡೆದ 2025 ಕೋಟಿ ರು. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೆಲೆ ಏರಿಕೆ ಆಗಿದ್ದಕ್ಕೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಾರಣ, ಹಾಗಿದ್ದರೂ ಕರ್ನಾಟಕದಲ್ಲಿ ಬೆಲೆ ಏರಿಕೆ ಆಗಿದೆ ಎಂದು ರಾಜ್ಯದಲ್ಲಿ ಜನಾಕ್ರೋಶ ಸಭೆಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಇವರಿಗೆ ಮಾನ ಮರ್ಯಾದೆ ಇದ್ರೆ, ಕಿಂಚಿತ್ತೂ ಜನಪರ ಕಾಳಜಿ ಇದ್ರೆ ಈ ಸುಳ್ಳು ನಾಟಕವನ್ನು ಬಂದ್‌ ಮಾಡಬೇಕಿತ್ತು. ಮನಮೋಹನ್‌ಸಿಂಗ್‌ ಅವರು ಅಧಿಕಾರದಲ್ಲಿದ್ದಾಗ ಪೆಟ್ರೋಲ್‌ ಡೀಸಲ್‌ ಬೆಲೆ ಎಷ್ಟಿತ್ತು ಅಂದು ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಎಷ್ಟಿತ್ತು ಎಂಬುವದನ್ನು ತಿಳಿದುಕೊಳ್ಳಿ. ಕಚ್ಚಾ ತೈಲ ಬೆಲೆ 118ಡಾಲರ್‌ ಇತ್ತು ಮೊನ್ನೆ ಮೊನ್ನೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 65 ಡಾಲರ್‌ಗೆ ಇಳಿದಿದೆ. ಅಂದು 46.59ರು. ಇದ್ದದ್ದು ಪೆಟ್ರೋಲ್‌ ಬೆಲೆ 73ರು ಇದ್ದದ್ದೀಗ 100ರು.ಗಳಿಗಿಂತ ಹೆಚ್ಚಾಗಿದ್ದು ಯಾರು ಕಾರಣ ಎಂದು ಜನತೆ ಅರಿತಿದ್ದಾರೆ ಕೇಂದ್ರದ ಮೋದಿ ಸರ್ಕಾರ ಕಾರಣ ಎಂದು ಆರೋಪಿಸಿದರು.

ಖರ್ಗೆ, ಸಿದ್ದು, ಡಿಕೆಶಿ, ನಮ್ಮನೆಗೂ ಸಮೀಕ್ಷೆಗೆ ಬಂದಿಲ್ಲ: ಎಂ.ಪಿ.ರೇಣುಕಾಚಾರ್ಯ

ಕೇಂದ್ರದಲ್ಲಿ 2014ರ ನಮ್ಮ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಗ್ಯಾಸ್‌ ಬೆಲೆ ಎಷ್ಟಿತ್ತು, 430ರು. ಇದ್ದದ್ದು ಇಂದು ಒಂದು ಸಾವಿರ ರು. ಆಗಿದೆ. ಎಕ್ಸೈಸ್‌ ಡ್ಯೂಟಿ ಡೀಸಲ್‌ ಮೇಲೆ 3.4ರು. ಪೆಟ್ರೋಲ್‌ ಮೇಲೆ 9ರು. ಇತ್ತು ಈಗ ಎಷ್ಟು ಹೆಚ್ಚು ಮಾಡಿದ್ದಾರೆ ಎಂದು ಅರಿತರೆ ಇವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಅದಾಗ್ಯೂ ಜನರ ಗಮನ ಬೇರೆಡೆ ಸೆಳೆಯಲು ಬೆಲೆ ಏರಿಕೆಯ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಳೆದ ವರ್ಷ ಬಂಡವಾಳ ವೆಚ್ಚ 56ಸಾವಿರ ಕೋಟಿ ಈ ವರ್ಷ 83ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ದೇಶದಲ್ಲಿರುವ ಎಲ್ಲ ಬಿಜೆಪಿ ಸರ್ಕಾರದ ರಾಜ್ಯಗಳಿಗಿಂತ ಹೆಚ್ಚು ಬಂಡವಾಳ ವೆಚ್ಚವನ್ನು ಮಾಡಿದ್ದು ರಾಜ್ಯದ ಕಾಂಗ್ರೆಸ್‌ ಸರ್ಕಾರ. 

ಬಂಡವಾಳ ವೆಚ್ಚವನ್ನು ದಿವಾಳಿ ಆಗಿರುವ ಸರ್ಕಾರ ಮಾಡಲು ಆಗೋಲ್ಲ ಎಂಬುವದನ್ನು ಅರ್ಥ ಮಾಡಿಕೊಳ್ಳಿ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಗ್ಯಾರಂಟಿ ಯೋಜನೆಗಳಿಗೆ ದುಡ್ಡಿನ ಕೊರತೆ ಇಲ್ಲವೇ ಇಲ್ಲ ಆರ್ಥಿಕವಾಗಿ ಕರ್ನಾಟಕ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು. 2018ರಲ್ಲಿ 400 ಭರವಸೆಗಳನ್ನು ನೀಡಿದ್ದ ಬಿಜೆಪಿ 40 ಭರವಸೆಗಳನ್ನು ಈಡೇರಿಸಲಾಗಲಿಲ್ಲ. ಅಧಿಕಾರಕ್ಕೆ ಬಂದಾಗಲೆಲ್ಲ ಜನಾಶೀರ್ವಾದದಿಂದ ಬಂದಿಲ್ಲ ಆಪರೇಷನ್‌ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಿದವರು ನಮಗೆ ಪಾಠ ಹೇಳಲು ಬಂದಿದ್ದಾರೆ ಬೆಲೆ ಏರಿಕೆಯ ಹಣೆ ಪಟ್ಟಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷ 3ಲಕ್ಷ 71ಸಾವಿರ ಕೋಟಿ, ಪ್ರಸಕ್ತ ಸಾಲಿನಲ್ಲಿ 4ಲಕ್ಷ 9ಸಾವಿರ ಕೋಟಿ ರು. ಬಜೆಟ್‌ ಮಂಡಿಸಿದ್ದೇವೆ ನಮಗೆ ಆರ್ಥಿಕ ಮುಗ್ಗಟ್ಟು ಇದ್ದಲ್ಲಿ 38ಸಾವಿರ ಕೋಟಿ ರು. ಬಜೆಟ್‌ ಗಾತ್ರ ಹಿಗ್ಗಿಸಲು ಆಗುತ್ತಿತ್ತಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ ಅವರು ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ 2 ವರ್ಷ ಆಗುತ್ತಿದೆ. ಎರಡು ವರ್ಷದ ಸಾಧನೆಗಳನ್ನು ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿನ ಜನರ ಮುಂದಿಡುತ್ತೇವೆ ಎಂದು ತಿಳಿಸಿದರು.

ಅಚ್ಛೇ ದಿನ್‌ ಆಯೇಗಾ ಎಂದು ನರೇಂದ್ರ ಮೋದಿ ಹೇಳಿದ್ರು ಆದರೆ ನಿಮಗ್ಯಾರಿಗಾದರೂ ಬಂದಿದೆಯಾ? ಎಂದು ಪ್ರೇಕ್ಷಕರಿಗೆ ಸವಾಲೆಸೆದ ಸಿದ್ದರಾಮಯ್ಯ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿ ಅವರೇನೇ ಮಾಡಿದರೂ ಜನ ನಮ್ಮ ಕೈ ಹಿಡಿದಿದ್ದಾರೆ ಎಂಬುವದಕ್ಕೆ ಕೇಂದ್ರ ಸಚಿವರಾಗಿದ್ದ ಕುಮಾರಸ್ವಾಮಿ ಮಗ ನಿಖಿಲ್‌ ಸ್ವಾಮಿ, ರಾಜ್ಯದ ಸಿಎಂ ಆಗಿದ್ದ ಬೊಮ್ಮಾಯಿ ಅವರ ಮಗನನ್ನು ಸೋಲಿಸಿದ್ದೇ ಸಾಕ್ಷಿ. ರಾಜ್ಯದ ಜನರಿಗೆ ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂದು ಗೊತ್ತಿದೆ ಅದಕ್ಕಾಗಿಯೇ ವಿಧಾನಸಭೆ, ಉಪಚುನಾವಣೆಯಲ್ಲಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ ಎಂದರು.

ಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರ ಅಸಮಾಧಾನ: ವಾಹನ ಸವಾರರ ಪರದಾಟ

ಬೀದರ್‌ ಜಿಲ್ಲೆಯಲ್ಲಿ ಈಶ್ವರ ಖಂಡ್ರೆ ಹಾಗೂ ರಹೀಮ್‌ಖಾನ್‌ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಖಂಡ್ರೆ ಎಲ್ಲರನ್ನೂ ಕೊಂಡೊಯ್ಯುವ ಕೆಲಸ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬೀದರ್‌ ಜಿಲ್ಲೆಯ 4 ಸ್ಥಾನಗಳಲ್ಲಿ ಸೋಲಿಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್‌ನ ಸಾಗರ ಖಂಡ್ರೆ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಿದ್ದೀರಿ ಅದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು. ಸಾಗರ್‌ ಜನನಾಯಕನಾಗುವ ಹಾಗೂ ಹೆಮ್ಮರವಾಗಿ ಬೆಳೆಯುವ ಕಾತರ ಇದೆ ಎಂಬುವದನ್ನು ನಾನು ಗುರುತಿಸಿದ್ದೇನೆ ಅವರಿಗೆ ಶುಭವಾಗಲಿ ಎಂದು ಸಿದ್ದರಾಮಯ್ಯ ಶುಭ ಕೋರಿದರು.

Download App

Latest Videos