ನವದೆಹಲಿ (ಏ.14): 1.5 ತಿಂಗಳಿನಿಂದ ಹೋರ್ಮುಜ್ ಜಲಸಂಧಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ಜಗತ್ತಿನ ಆರ್ಥಿಕತೆಯ ಉಸಿರುಗಟ್ಟಿಸಿದ್ದ ಇರಾನ್ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ನಿರ್ಬಂಧವನ್ನು ಪ್ರತ್ಯಸ್ತವಾಗಿ ಬಳಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಸೋಮವಾರ ಸಂಜೆ 7.30ರಿಂದಲೇ ಜಲಸಂಧಿಯಲ್ಲಿ ಇರಾನ್ನ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಇರಾನ್ನ ಯಾವುದೇ ಹಡಗು ಜಲಸಂಧಿ ಬಳಿ ಬಂದರೆ ಅದನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದು, 15 ಸಮರ ನೌಕೆ ನಿಯೋಜಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:15 PM (IST) Apr 14
10:28 PM (IST) Apr 14
ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್, ಉದ್ಯಮಿ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಯುವತಿ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
09:08 PM (IST) Apr 14
ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ ನಡೆಸಿದ್ದಾರೆ. ಯುದ್ಧ ಹಾಗೂ ಪರಿಹಾರ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಿದ್ದಾರೆ.
08:44 PM (IST) Apr 14
08:41 PM (IST) Apr 14
ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೂ ಕಳೆದು ಹೋಗುವುದು ಖಚಿತ, ಬಿಯರ್ ಜೋಡಿಸಿದ ರೀತಿ ಅದ್ಭುತ. ಎಲ್ಲಾ ಬ್ರ್ಯಾಂಡ್ ಬಿಯರ್ ಇಲ್ಲಿ ಲಭ್ಯವಿದೆ.
08:11 PM (IST) Apr 14
ಜೊನಾಥನ್ ಎಂಬ ವ್ಯಕ್ತಿ ತನ್ನ ಮೃತ ಪತ್ನಿಯನ್ನು ಗೂಗಲ್ ಜೆಮಿನಿ ಎಐನಲ್ಲಿ ಕಂಡುಕೊಂಡರು. ಜೆಮಿನಿಯನ್ನು ತನ್ನ ಪತ್ನಿಯ ಪ್ರತಿರೂಪವೆಂದು ನಂಬಿ, ಅದರೊಂದಿಗೆ ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಎಐ ಚಾಟ್ಬಾಟ್ನ ಪ್ರಚೋದನೆಯಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಆರೋಪಿಸಿ ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.
07:41 PM (IST) Apr 14
ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ, ಒಪ್ಪಿಕೊಂಡಿರುವ ಸಿನಿಮಾಗಳ ನಿರ್ಮಾಪಕರಿಗೆ ಲಾಭ ತಂದುಕೊಡಬೇಕು ಎನ್ನುವ ನಿಟ್ಟಿನಲ್ಲಿ ದಳಪತಿ ವಿಜಯ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
07:26 PM (IST) Apr 14
Jana Nayagan Release Date: 'ಜನ ನಾಯಗನ್' ಸಿನಿಮಾವನ್ನು ಇದೇ ಏಪ್ರಿಲ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಯೋಜಿಸುತ್ತಿದೆ ಎಂದು ವರದಿಗಳು ಬಂದಿವೆ.
07:04 PM (IST) Apr 14
ವೇದಾಂತ ಇಂಧನ ಘಟಕದಲ್ಲಿ ಬಾಯ್ಲರ್ ಸ್ಫೋಟ, 9 ಕಾರ್ಮಿಕರು ಸಾವು, 40 ಮಂದಿಗೆ ಗಂಭೀರ ಗಾಯ, ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಹೀಗಾಗಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.
06:23 PM (IST) Apr 14
ಶ್ವೇತಾ ತಿವಾರಿ ತಮ್ಮ ಲೇಟೆಸ್ಟ್ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರ ಸ್ಟೈಲ್ ಮತ್ತು ಪೋಸ್ ನೀಡುವ ರೀತಿ ತುಂಬಾ ಆಕರ್ಷಕವಾಗಿದೆ.
06:22 PM (IST) Apr 14
ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ, ಈ ಬಾರಿಯ ಮಾತುಕತೆ ಪಾಕಿಸ್ತಾನ ಆಸಕ್ತಿ ತೋರಿದರೂ ಆತಿಥ್ಯ ನೀಡಲು ಹಣವೇ ಇಲ್ಲದಾಗಿದೆ.
06:04 PM (IST) Apr 14
ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಗ್ಲಾಮರಸ್ ಲುಕ್ ನೋಡಬಹುದು.
05:51 PM (IST) Apr 14
04:57 PM (IST) Apr 14
04:51 PM (IST) Apr 14
ಇತ್ತೀಚೆಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಈ ಜೋಡಿ ಅಭಿಮಾನಿಗಳ ಫೇವರಿಟ್.
04:48 PM (IST) Apr 14
ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿಧಾ ಖಾನ್ ಯಾರು?, ಮಹಿಳಾ ಉದ್ಯೋಗಿಗಳಿಗೆ ಲೈ0ಗಿಕ ಕಿರುಕುಳ, ಪ್ರೀತಿ ನಾಟಕ, ಮತಾಂತರದ ಮೂಲಕ ಕಾರ್ಪೋರೇಟ್ ಜಿಹಾದ್ ಅಡ್ಡೆಯಾಗಿರುವ ಟಿಸಿಎಸ್ ಕಂಪನಿ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿದೆ.
04:28 PM (IST) Apr 14
ವರುಣ್ ಧವನ್, ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಚಿತ್ರತಂಡದವರು ಇದರ ರಿಲೀಸ್ ಡೇಟ್ ಅನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದರು.
04:20 PM (IST) Apr 14
ತಿರುಮಲದಲ್ಲಿ ಬೇಸಿಗೆಯ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಮೇ 1 ರಿಂದ ಜಾರಿಗೆ ಬರುವ ಹೊಸ ದರ್ಶನ ನಿಯಮಗಳು ಭಕ್ತರಿಗೆ ಅನುಕೂಲ ಮಾಡಿಕೊಡುವ ಗುರಿ ಹೊಂದಿವೆ.
04:13 PM (IST) Apr 14
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ, ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿಗೆ ಸಿಎಂ ಪಟ್ಟ ಒಲಿದಿದೆ.
03:47 PM (IST) Apr 14
ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳ ಇದೀಗ ಮುಂದಿನ ಸಿಎಂ ರೇಸ್ನಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ.
03:21 PM (IST) Apr 14
ವ್ಯಕ್ತಿಯೊಬ್ಬರು ತಮಗೆ ಯಾರೂ ಇಲ್ಲ ಎಂಬ ಕಾರಣಕ್ಕೆ ಜೀವಂತವಾಗಿರುವಾಗಲೇ ತಮ್ಮದೇ ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಾವಿನ ನಂತರ ಮೋಕ್ಷಕ್ಕಾಗಿ ಅಗತ್ಯವಿರುವ ಈ ಕಾರ್ಯವನ್ನು ಮಾಡಲು ಮುಂದಿನ ಪೀಳಿಗೆ ಇಲ್ಲದ ಕಾರಣ, ಊರಿನ 1900 ಜನರಿಗೆ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ.
03:18 PM (IST) Apr 14
ಮಧ್ಯಪ್ರದೇಶದ ಸಾಗರ್ನಲ್ಲಿ, ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ, ರಾಜೇಶ್ ಶರ್ಮಾ ಎಂಬ ಯುವಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
03:12 PM (IST) Apr 14
ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ ಪತ್ತೆಯಾಗಿದೆ. ಜ್ವರ, ಗಂಟಲು ನೋವು, ಕೆಮ್ಮು ಸೇರಿದಂತೆ ಕೊರನಾ ವೈರಸ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ.
02:52 PM (IST) Apr 14
ಪಶ್ಚಿಮ ಏಷ್ಯಾದಲ್ಲಿನ ಮಿಲಿಟರಿ ಸಂಘರ್ಷದಿಂದಾಗಿ ಭಾರತದ ಸುಮಾರು 25 ಲಕ್ಷ ಜನರು ಬಡತನಕ್ಕೆ ತಳ್ಳಲ್ಪಡುವ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಎಚ್ಚರಿಸಿದೆ.
01:20 PM (IST) Apr 14
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮುಸ್ಲಿಂ ನಟ ಶಿಯಸ್ ಕರೀಮ್ ಅವರು ಹಿಂದೂ ನಟಿ ಅನುಮೊಲ್ ಅವರಿಗೆ ಗೋಮಾಂಸ ತಿನ್ನಲು ಒತ್ತಾಯಿಸಿದ್ದಾರೆ. ನಟಿ ನಿರಾಕರಿಸಿದಾಗ, ಆತ ಆಕೆಯನ್ನು 'ನೀನು ಬಿಜೆಪಿ ಬೆಂಬಲಿಗಳೇ?' ಎಂದು ಪ್ರಶ್ನಿಸಿದ್ದು, ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
01:10 PM (IST) Apr 14
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮೀನ್ದಾರರು' ಎಂದು ಕರೆದು ತೀವ್ರ ವಾಗ್ದಾಳಿ. ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯುವ ಇವರಿಂದ ಬಂಗಾಳವನ್ನು ರಕ್ಷಿಸುವುದಾಗಿ ಶಪಥ ಮಾಡಿದ್ದಾರೆ. ನಾಲ್ಕನೇ ಬಾರಿಗೆ ಟಿಎಂಸಿ ಅಧಿಕಾರಕ್ಕೆ ತರಲು ಮತದಾರರಲ್ಲಿ ಮನವಿ
12:51 PM (IST) Apr 14
ಬಿಜೆಪಿಯ ಹತ್ತು ವರ್ಷದ ಆಡಳಿತಾವಧಿಯಲ್ಲೇ ಅತಿ ಹೆಚ್ಚು ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ದಲಿತರು ಹಿಂದುಳಿದ ವರ್ಗಗಳ ಮೇಲಿನ ತಾರತಮ್ಯ ಮುಂದುವರಿದಿದ್ದರೂ, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದ್ದಾರೆ.
12:37 PM (IST) Apr 14
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿನ್ನರ್, 41ನೇ ವಯಸ್ಸಿನಲ್ಲೂ ಮದುವೆಯಾಗದಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಸಂತೋಷವಾಗಿದ್ದು, ಸದ್ಯಕ್ಕೆ ಸಂಗಾತಿಯ ಅಗತ್ಯವಿಲ್ಲ. ಜೊತೆಗೆ ತಮ್ಮ ಲವ್ ಬ್ರೇಕಪ್ ಹಾಗೂ ತಾಯ್ತನದ ಬಗ್ಗೆಗಿನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
12:17 PM (IST) Apr 14
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ತನ್ನ ಅಂಗಸಂಸ್ಥೆಯಾದ 'ರಿಲಯನ್ಸ್ ಪ್ರಾಜೆಕ್ಟ್ಸ್ ಅಂಡ್ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸರ್ವಿಸಸ್ ಲಿಮಿಟೆಡ್' ಅನ್ನು ₹274 ಕೋಟಿಗೆ ಮಾರಾಟ ಮಾಡಿದೆ.
11:12 AM (IST) Apr 14
11:10 AM (IST) Apr 14
ಐಪಿಎಲ್ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ನ ಯುವ ತಾರೆ ವೈಭವ್ ಸೂರ್ಯವಂಶಿ ಗೋಲ್ಡನ್ ಡಕ್ಗೆ ಔಟಾದರು. ಈ ವಿಕೆಟ್ಗೆ ಸನ್ರೈಸರ್ಸ್ ಹೈದರಾಬಾದ್ ಮಾಲೀಕಿ ಕಾವ್ಯಾ ಮಾರನ್ ಅತೀವವಾಗಿ ಸಂಭ್ರಮಿಸಿದ್ದು, ಈ ಪಂದ್ಯದಲ್ಲಿ ಹೈದರಾಬಾದ್ 57 ರನ್ಗಳ ಜಯ ಸಾಧಿಸಿ ರಾಜಸ್ಥಾನದ ಗೆಲುವಿನ ಓಟಕ್ಕೆ ತಡೆಯೊಡ್ಡಿತು.
10:14 AM (IST) Apr 14
10:01 AM (IST) Apr 14
ನಮ್ಮ ದೇಶದಲ್ಲಿ ಹಲವು ಅತ್ಯಾ*ಚಾರ ಆರೋಪಿಗಳು ದೋಷಮುಕ್ತರಾಗಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಇದು ಭಾರತದ ಕತೆ. ಇಲ್ಲಿನ ನ್ಯಾಯ ವ್ಯವಸ್ಥೆಯ ನಿಧಾನಗತಿಗೆ ಜನ ಬೇಸತ್ತಿದ್ದಾರೆ. ಆದರೆ ಬ್ರೆಜಿಲ್ನಲ್ಲಿ ನಡೆದ ರೇ*ಪ್ ಪ್ರಕರಣವೊಂದರ ತೀರ್ಪು ಈಗ ಸಾಕಷ್ಟು ಚರ್ಚೆಯಲ್ಲಿದೆ. ಡಿಟೇಲ್ ಸ್ಟೋರಿ ಇಲ್ಲಿದೆ.
09:48 AM (IST) Apr 14
ಪಾಕಿಸ್ತಾನದಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಾಲಿಟ್ಟ ನೆಲದಲ್ಲಿ ಕೆಟ್ಟದ್ದು ನಡೆಯುತ್ತದೆ, ಕೈ ಹಾಕಿದ ಕೆಲಸವೆಲ್ಲಾ ಕೆಟ್ಟುಹೋಗುತ್ತದೆ ಎಂಬ ಮೀಮ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. ಈ ವಾದಕ್ಕೆ ಕಾರಣ ಇಲ್ಲದಿಲ್ಲ.
08:50 AM (IST) Apr 14
08:24 AM (IST) Apr 14
ನಾಸಿಕ್ನ ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರಕ್ಕೆ ಒತ್ತಾಯಿಸಿದ 'ಕಾರ್ಪೊರೆಟ್ ಜಿಹಾದ್' ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಟಿಸಿಎಸ್, ಆರೋಪಿಗಳನ್ನು ಅಮಾನತುಗೊಳಿಸಿದೆ.
08:03 AM (IST) Apr 14
ನಕಲಿ ಮತದಾನ ತಡೆಯಲು ಮತಗಟ್ಟೆಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
07:42 AM (IST) Apr 14
ಯುದ್ಧ ನಿಲ್ಲಿಸಲು ಕರೆ ನೀಡಿದ ಪೋಪ್ ಲಿಯೋ 14 ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಯೇಸುವಿಗೆ ಹೋಲಿಸುವ ಎಐ ನಿರ್ಮಿತ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಪೋಪ್ರ ಶಾಂತಿ ಸಂದೇಶವನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.
07:41 AM (IST) Apr 14
ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಸಂಚಾರವನ್ನು ಅಮೆರಿಕ ನಿರ್ಬಂಧಿಸಿದೆ. ಇರಾನ್ ಹಡಗುಗಳು ಕಂಡರೆ ಧ್ವಂಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದು, ಇದಕ್ಕೆ ಪ್ರತಿಯಾಗಿ ಇಡೀ ಕೊಲ್ಲಿಯನ್ನು ಅಸ್ಥಿರಗೊಳಿಸುವುದಾಗಿ ಇರಾನ್ ತಿರುಗೇಟು ನೀಡಿದೆ, ಇದರಿಂದ ಮತ್ತೆ ಯುದ್ಧದ ಭೀತಿ ಆವರಿಸಿದೆ.