ನವದೆಹಲಿ (ಜೂ.20): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸಂಸದರ ಬಂಡಾಯ ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಶರದ್ ಪವಾರ್ ನೇತೃತ್ವದ ಎನ್ಸಿಪಿ-ಎಸ್ಪಿಯ ಹಲವಾರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅಜಿತ್ ಪವಾರ್ ಅವರ ಎನ್ಸಿಪಿ ಹೇಳಿದೆ. ಈ ಮೂಲಕ ಈಗಾಗಲೇ ಒಮ್ಮೆ ಹೋಳಾಗಿರುವ ಪಕ್ಷ ಮತ್ತೊಮ್ಮೆ ಹೋಳಾಗುವ ಭೀತಿ ಎದುರಾಗಿದೆ. ಇತ್ತ ಟಿಎಂಸಿ, ಸೇನೆ (ಯುಬಿಟಿ) ಬಂಡಾಯದ ಹೊಡೆತಕ್ಕೆ ಸಿಲುಕಿರುವ ಇಂಡಿ ಮೈತ್ರಿಕೂಟಕ್ಕೆ ಮತ್ತೊಂದು ಏಟು ಬೀಳುವ ಸಾಧ್ಯತೆಯಿದೆ.ಆದರೆ ಎನ್ಸಿಪಿ-ಎಸ್ಪಿ ನಾಯಕರು ಇದನ್ನು ಅಲ್ಲಗಳೆದಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:56 PM (IST) Jun 20
ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ತಂಡ ನಾಳೆ (ಗುರುವಾರ) ಒಂದು ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ. ಚಿತ್ರದ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ "ನಾಳೆ ಏನಾದರೂ ಪ್ಲ್ಯಾನ್ಸ್ ಇದೆಯೇ?" (Any plans for tomorrow?) ಎಂದು ಕೇಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
10:24 PM (IST) Jun 20
09:46 PM (IST) Jun 20
Ananthan Kaadu: ಮುರಳಿ ಗೋಪಿ ಕಥೆ ಬರೆದಿರುವ, ಜಿ.ಎನ್. ಕೃಷ್ಣಕುಮಾರ್ ನಿರ್ದೇಶನದ 'ಅನಂತನ್ ಕಾಡು' ಸಿನಿಮಾ ಜೂನ್ 25ಕ್ಕೆ ರಿಲೀಸ್ ಆಗಲಿದೆ. 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಮೊದಲ ಮಲಯಾಳಂ ಚಿತ್ರ.
08:51 PM (IST) Jun 20
06:48 PM (IST) Jun 20
Kriti Sanon: ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಕಾಕ್ಟೇಲ್ 2' ಸಿನಿಮಾ ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
06:17 PM (IST) Jun 20
Rashmika Mandanna: 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಲೇ ಇದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ತಮ್ಮ ಪಾತ್ರಗಳ ಆಯ್ಕೆಯಲ್ಲಿ ಸದಾ ಹೊಸತನ ಮೆರೆಯುವ ನಟಿ.
06:17 PM (IST) Jun 20
05:57 PM (IST) Jun 20
ಬೆಂಗಳೂರು: ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಹಿನ್ನಡೆ ಎದುರಾಗಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ಇಂಗ್ಲೆಂಡ್ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
05:31 PM (IST) Jun 20
Actor Ram Charan Teja And Upasana Konidela Daughter Photo: ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕೊನಿಡೆಲ ಇದುವರೆಗೂ ಎಲ್ಲಿಯೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇತ್ತೀಚೆಗೆ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ರಾಮ್ ಚರಣ್ ತೇಜ ಅವರು ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದರು.
04:09 PM (IST) Jun 20
03:31 PM (IST) Jun 20
ಕಾಫಿ ವಿಥ್ ಕರಣ್ ಶೋನಲ್ಲಿ ನಟಿ ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಬುರ್ಖಾ ಧರಿಸುವುದಾಗಿ ಹೇಳಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಈ ದಾರಿ ಕಂಡುಕೊಂಡಿರುವುದಾಗಿ ತಿಳಿಸಿದ್ದು, ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.
03:27 PM (IST) Jun 20
Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ.
03:26 PM (IST) Jun 20
02:33 PM (IST) Jun 20
02:29 PM (IST) Jun 20
ಒಂದೆಡೆ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡುತ್ತಿರುವ ಅಂಜನಾ ಸುಖಾನಿ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಮೈನ್ ವಾಪಸ್ ಆವುಂಗಾ' (Main Vaapas Aaunga) ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
02:20 PM (IST) Jun 20
ನಾಳೆ ನೀಟ್ ಮರು ಪರೀಕ್ಷೆಗೆ ನಡೆಯಲಿದ್ದು,NTA ಮತ್ತೊಂದು ಎಡವಟ್ಟು ಮಾಡಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ನಂತರ, ಎನ್ಟಿಎ ಸಂಜೆಯೊಳಗೆ ಬದಲಾಯಿಸುವುದಾಗಿ ಭರವಸೆ ನೀಡಿದೆ.
02:00 PM (IST) Jun 20
01:46 PM (IST) Jun 20
Bollywood Actor Anil Kapoor Daughter: ಬಾಲಿವುಡ್ ನಟ ಅನಿಲ್ ಕಪೂರ್ ಅವರ ಎರಡನೇ ಪುತ್ರಿ, ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಅವರ ಕಿವಿಓಲೆ ಕಳ್ಳತನ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.
01:29 PM (IST) Jun 20
ಬೆಂಗಳೂರು ಮಾದರಿಯಲ್ಲಿ ದೆಹಲಿ ಅಭಿವೃದ್ಧಿಗೆ ಬ್ಲೂಪ್ರಿಂಟ್ ರೆಡಿಯಾಗಿದೆ. ಎನ್ಸಿಆರ್ ಪ್ರಾದೇಶಿಕ ಯೋಜನೆ-2041ರ ಅಡಿಯಲ್ಲಿ ನಾಲ್ಕು ಹೊಸ ನಮೋ ನಗರಗಳು, ಮೂರು ವಿಶೇಷ ಆರ್ಥಿಕ ವಲಯಗಳ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿದೆ.
01:23 PM (IST) Jun 20
ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಅರ್ಪಿಸುವ ಕಾಣಿಕೆಯನ್ನು ಅತ್ಯಂತ ಪಾರದರ್ಶಕವಾಗಿ ಸಂಗ್ರಹಿಸಲಾಗುತ್ತದೆ. ಬಹುಹಂತದ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಮತ್ತು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಹಣವನ್ನು ಎಣಿಕೆ ಮಾಡಿ, ಸುರಕ್ಷಿತವಾಗಿ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
01:01 PM (IST) Jun 20
ಏರುತ್ತಿರುವ ಇಂಧನ ಬೆಲೆಗಳಿಂದಾಗಿ ಸಿಎನ್ಜಿ ಕಾರುಗಳು ಜನಪ್ರಿಯವಾಗಿವೆ, ಆದರೆ ಈಗ ಎಥನಾಲ್ನಿಂದ ಚಲಿಸುವ ಫ್ಲೆಕ್ಸ್-ಫ್ಯುಯೆಲ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ಈ ಲೇಖನವು ಮೈಲೇಜ್, ಬೆಲೆ ಮತ್ತು ಪ್ರಯಾಣದ ವೆಚ್ಚದ ಆಧಾರದ ಮೇಲೆ ಈ ಎರಡೂ ಕಾರುಗಳನ್ನು ಹೋಲಿಸಲಾಗಿದೆ.
12:57 PM (IST) Jun 20
ಮದುವೆಯ ನಂತರ ಸಮಂತಾ ನಟಿಸಿದ ಮೊದಲ ಸಿನಿಮಾ 'ಮಾ ಇಂಟಿ ಬಂಗಾರಂ' ಬಾಕ್ಸ್ ಆಫೀಸ್ನಲ್ಲಿ ಹವಾ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಮಂತಾ ಸ್ಟಾರ್ ಪವರ್ ಇಂದಿಗೂ ಕುಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
12:18 PM (IST) Jun 20
ಭಾರತದ ನಕ್ಷೆಯನ್ನು ನೋಡಿದಾಗಲೆಲ್ಲಾ ಜೊತೆಗೆ ಶ್ರೀಲಂಕಾ ಕೂಡ ಕಾಣಿಸುತ್ತದೆ. ಶ್ರೀಲಂಕಾ ಒಂದು ಪ್ರತ್ಯೇಕ ದೇಶವಾದರೂ, ಭಾರತದ ನಕ್ಷೆಯಲ್ಲಿ ಅದನ್ನು ಯಾಕೆ ತೋರಿಸುತ್ತಾರೆ? ಇದರ ಹಿಂದಿರುವ ಅಂತರಾಷ್ಟ್ರೀಯ ಸಮುದ್ರ ಕಾನೂನು ಮತ್ತು ಭೌಗೋಳಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
11:54 AM (IST) Jun 20
ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲಿ ಮಂಗಲವಾದ್ಯ ಕೇಳಿಬರಬೇಕಿತ್ತು. ಆದರೆ ಮದುವೆ ಮಂಟಪ ಏರುವ ಮುನ್ನವೇ ಇವರ ಸಂಬಂಧದ ಹಡಗು ಮುಳುಗಿದೆಯೇ? ಹೌದು ಎನ್ನುತ್ತಿವೆ ಸಿನಿಮಾ ಮೂಲಗಳು. ಧನುಷ್ ಮತ್ತು ಮೃಣಾಲ್ ಠಾಕೂರ್ ಇತ್ತೀಚೆಗೆ ಬೇರೆಬೇರೆ ಆಗಿದ್ದಾರೆ ಎನ್ನುತ್ತಿವೆ ಸುದ್ದಿಮೂಲಗಳು!
11:54 AM (IST) Jun 20
ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಾಯನ್ ಟೆನ್ ಡೊಶ್ಚೇಟ್, 2027ರ ವಿಶ್ವಕಪ್ ದೃಷ್ಟಿಯಿಂದ ಪ್ರದರ್ಶನದ ಆಧಾರದ ಮೇಲೆ ಮಾತ್ರ ಆಟಗಾರರ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳಪೆ ಫಾರ್ಮ್ನಲ್ಲಿರುವ ಸ್ಪಿನ್ನರ್ ಕುಲದೀಪ್ ಯಾದವ್ಗೆ ನೇರ ಎಚ್ಚರಿಕೆ ನೀಡಿದ್ದಾರೆ.
11:07 AM (IST) Jun 20
10:19 AM (IST) Jun 20
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಹಾನ್ ನಾಯಕ' ಮತ್ತು 'ಅತ್ಯಂತ ಕಠಿಣ ವ್ಯಕ್ತಿ' ಎಂದು ಶ್ಲಾಘಿಸಿದ್ದಾರೆ. ಭಾರತಕ್ಕೆ ರಾಜಕೀಯ ಸ್ಥಿರತೆ ತಂದ ಮೋದಿ, ವಿಶ್ವದ ಇಬ್ಬರು ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಟ್ರಂಪ್ ಬಣ್ಣಿಸಿದ್ದಾರೆ.
09:08 AM (IST) Jun 20
Home investment strategy in india: ದೇಶದಲ್ಲಿ ಸ್ವಂತ ಮನೆ ಅನ್ನೋದು ಬಹುತೇಕರ ಜೀವನದ ಕನಸು. ಅದರಲ್ಲೂ ಒಂದು ಕೋಟಿ ರೂಪಾಯಿ ಬಜೆಟ್ ಇದ್ದರೆ, ಸ್ವಂತ ಮನೆ ಕಟ್ಟಬೇಕಾ ಅಥವಾ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿಸಬೇಕಾ ಅನ್ನೋ ಗೊಂದಲ ಅನೇಕರಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
08:39 AM (IST) Jun 20
08:21 AM (IST) Jun 20
ಜಿ7 ಶೃಂಗದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು 'ಕಟ್ಟುಕತೆ' ಎಂದು ತಳ್ಳಿಹಾಕಿದ ಮೆಲೋನಿ, ಇಟಲಿ ಯಾರನ್ನೂ ಬೇಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
07:55 AM (IST) Jun 20
ಶಾಂತಿ ಒಪ್ಪಂದದ ಅಡಿಯಲ್ಲಿ ಇರಾನ್ಗೆ 28 ಲಕ್ಷ ಕೋಟಿ ರು. ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ, 10 ಸೆಂಟ್ಸ್ ಕೂಡ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅಮೆರಿಕ-ಇರಾನ್ ನಡುವಿನ ಸ್ವಿಸ್ ಸಂಧಾನ ಸಭೆ ಮುಂದೂಡಲ್ಪಟ್ಟಿದೆ.
07:45 AM (IST) Jun 20
ಅಜಿತ್ ಪವಾರ್ ನೇತೃತ್ವದ ಎನ್ಸಿಪಿ, ಶರದ್ ಪವಾರ್ ಬಣದ ಹಲವು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಇದು ಪಕ್ಷದಲ್ಲಿ ಮತ್ತೊಂದು ವಿಭಜನೆಯ ಆತಂಕ ಸೃಷ್ಟಿಸಿದೆ.