ನವದೆಹಲಿ (ಜೂ.19): ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಆಗುವುದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ಯುದ್ಧ ಅಂತ್ಯ ಕಂಡಿದೆ. ಶಾಂತಿ ಒಪ್ಪಂದಕ್ಕೆ ಫ್ರಾನ್ಸ್ನಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ನಲ್ಲಿ ಪೆಜೆಶ್ಕಿ ಸಹಿ ಹಾಕಿದ್ದಾರೆ. ಇದು ಇಸ್ಲಾಮಾಬಾದ್ ಎಂದು ಪಾಕ್ ಹೇಳಿಕೊಂಡಿದೆ. ತತ್ತರಿಸಿದ ಇಡೀ ಜಗತ್ತು ಕೊನೆಗೂ ಇದರೊಂದಿಗೆ ನಿಟ್ಟುಸಿರು ಬಿಟ್ಟಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:47 PM (IST) Jun 19
09:28 PM (IST) Jun 19
Nagabandham: ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ರಹಸ್ಯಗಳನ್ನೇ ಆಧರಿಸಿದ ಸಿನಿಮಾ 'ನಾಗಬಂಧಂ'. ಇದೊಂದು ಮಿಸ್ಟರಿ ಅಡ್ವೆಂಚರ್ ಸಿನಿಮಾ ಆಗಿದ್ದು, ಇತ್ತೀಚೆಗೆ ಇದರ ಟ್ರೇಲರ್ ರಿಲೀಸ್ ಆಗಿದೆ. ಹಾಗಿದ್ರೆ ಈ ಟ್ರೇಲರ್ ಹೇಗಿದೆ?
09:02 PM (IST) Jun 19
"ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಲ್ಲ ಅಥವಾ ಆಕೆ ಮೈ ಪ್ರದರ್ಶನ ಮಾಡಿದ್ದಾಳೆ ಎಂದೂ ಅಲ್ಲ'.. ಟೀ ಶರ್ಟ್ ಮೇಲಿದ್ದ ಆ ಒಂದು ವಾಕ್ಯಕ್ಕೆ ಕೆಲಸ ಕಳೆದುಕೊಂಡ ಯುವತಿ: ಅಮೆಜಾನ್ ಎಕ್ಸಿಕ್ಯೂಟಿವ್ ಹಂಚಿಕೊಂಡ ರೋಚಕ ಕಥೆ ಇಲ್ಲಿದೆ ನೋಡಿ..
08:44 PM (IST) Jun 19
Maa Inti Bangaram Review: ಸಮಂತಾ ರುತ್ ಪ್ರಭು 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ. ಈ ಫ್ಯಾಮಿಲಿ ಆಕ್ಷನ್ ಎಂಟರ್ಟೈನರ್ನಲ್ಲಿ ಅವರು ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.
07:20 PM (IST) Jun 19
ಸೂಪರ್ ಹಿಟ್ ನಿರ್ದೇಶಕ Anil Ravipudi ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಒಟ್ಟಿಗೆ ನಟಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದೊಂದು ಪಕ್ಕಾ ಹಬ್ಬದ ಮನರಂಜನೆಯ ಸಿನಿಮಾವಾಗಲಿದೆ.
06:42 PM (IST) Jun 19
Bollywood: ಅಕ್ಷಯ್ ಕುಮಾರ್ ಅವರ ಹಲವು ಫೇಮಸ್ ಕಾಮಿಡಿ ಡೈಲಾಗ್ಗಳು ಸ್ಕ್ರಿಪ್ಟ್ನ ಭಾಗವಾಗಿರಲಿಲ್ಲವಂತೆ. ಶೂಟಿಂಗ್ ವೇಳೆ ತಾವೇ ಸ್ವತಃ ಹೇಳಿದ ಈ ಸಂಭಾಷಣೆಗಳು ಯಾವುವು? ಅವು ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ಸ್ವಾರಸ್ಯಕರ ಮಾಹಿತಿ.
06:27 PM (IST) Jun 19
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಇನ್ನೆಷ್ಟು ವರ್ಷ ಐಪಿಎಲ್ ಆಡುತ್ತಾರೆ ಎನ್ನುವ ಕುತೂಹಲಕ್ಕೆ ಆರ್ಸಿಬಿ ತಂಡದ ಸಿಇಒ ತೆರೆ ಎಳೆದಿದ್ದಾರೆ.
06:26 PM (IST) Jun 19
Chimpanzee Viral Video: ಪ್ರಾಣಿಗಳಿಗೂ ಮನುಷ್ಯರ ಹಾಗೆ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಶಕ್ತಿ ಇದೆಯಾ? ದುಃಖದಲ್ಲಿರೋ ವ್ಯಕ್ತಿಗೆ ಒಂದು ಚಿಂಪಾಂಜಿ ಸಮಾಧಾನ ಮಾಡೋಕೆ ಸಾಧ್ಯನಾ? ಲಿಂಬಾನಿ ಅನ್ನೋ ಚಿಂಪಾಂಜಿ ಮಾಡಿದ್ದನ್ನು ನೋಡಿ ಲಕ್ಷಾಂತರ ಜನ ಯಾಕೆ ಭಾವುಕರಾದ್ರು?
06:12 PM (IST) Jun 19
2013 ರಲ್ಲಿ ಮಣಿರತ್ನಂ ಅವರ 'ಕಡಲ್' ಸಿನಿಮಾ ಮೂಲಕ ಅರವಿಂದ್ ಸ್ವಾಮಿ ಮತ್ತೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. ಆದರೆ ಈ ಬಾರಿ ಅವರು ಕೇವಲ ಹಳೇ ಚಾಕೊಲೇಟ್ ಬಾಯ್ ಆಗಿರಲಿಲ್ಲ, ಬದಲಾಗಿ ಒಬ್ಬ ಪಕ್ವ ನಟನಾಗಿ ಮರಳಿದ್ದರು. ಅದರಲ್ಲೂ 'ತನಿ ಒರುವನ್' ಚಿತ್ರದ ಸಿದ್ಧಾರ್ಥ್ ಅಭಿಮನ್ಯು ಎಂಬ ಸ್ಟೈಲಿಶ್ ವಿಲನ್ ಪಾತ್ರ ಅವರಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು.
06:00 PM (IST) Jun 19
Viral 20 Rupee Note: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ 20 ರೂಪಾಯಿ ನೋಟಿನ ಮೇಲಿನ ವಿಚಿತ್ರ ಬರಹ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
05:37 PM (IST) Jun 19
Cocktail 2 ಸಿನಿಮಾವು ಇಂದಿನ ಕಾಲದ ಸಂಬಂಧಗಳು ಮತ್ತು ಕಮಿಟ್ಮೆಂಟ್ಗಳ ಬಗ್ಗೆ ಒಂದು ಮುಖ್ಯವಾದ ಸಂದೇಶವನ್ನು ಹೊಂದಿದೆ ಎಂದು ನಟಿ ಕೃತಿ ಸನೋನ್ ಹೇಳಿದ್ದಾರೆ. ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿರುವ ಈ ಚಿತ್ರ, 2012ರಲ್ಲಿ ಬಂದ ಹಿಟ್ ಸಿನಿಮಾದ ಸ್ಪಿರಿಚುವಲ್ ಸೀಕ್ವೆಲ್ ಆಗಿದೆ.
05:17 PM (IST) Jun 19
Samantha ಕೋಲ್ಡ್ ಡ್ರಿಂಕ್ಸ್ ಕುಡಿಯುವಾಗ ಸ್ಟ್ರಾ ಬಳಸುತ್ತಾರೆ. ಈ ಅಭ್ಯಾಸದಿಂದ ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತೆ, ಹಲ್ಲುಗಳ ಜುಮ್ಮೆನ್ನುವಿಕೆ ಕಡಿಮೆಯಾಗುತ್ತೆ ಮತ್ತು ಹಲ್ಲಿನ ಎನಾಮೆಲ್ ಕೂಡಾ ಸುರಕ್ಷಿತವಾಗಿರುತ್ತೆ. ಅವರ ಈ ಆರೋಗ್ಯಕರ ಅಭ್ಯಾಸ ಈಗ ವೈರಲ್ ಆಗಿದೆ.
05:16 PM (IST) Jun 19
ಮಕ್ಕಳಿಗೆ ನೀವು ಕಿಂಡರ್ ಜಾಯ್ ಕೊಡುತ್ತಿದ್ದೀರಾ? ಇದೀಗ FSSAI ಕಿಂಡರ್ ಜಾಯ್ ಸೇರಿದಂತೆ ಹಲವು ಉತ್ಪನ್ನಗಳಿಗೆ ನೋಟಿಸ್ ನೀಡಿದೆ. ಅಷ್ಟಕ್ಕೂ ಅಹಾರ ಗುಣಮಟ್ಟ ಹಾಗೂ ಸುರಕ್ಷತಾ ಪ್ರಾಧಿಕಾರ ನೋಟಿಸ್ ನೀಡಿದ್ದು ಯಾಕೆ?
04:46 PM (IST) Jun 19
ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಹಲವು ನಾಯಕರನ್ನು ಭೇಟಿಯಾಗಿದ್ದಾರೆ. ಸ್ಲೋವಾಕ್ ಪಾರ್ಲಿಮೆಂಟ್ ಸ್ವೀಕರ್ಗೆ ತೆಕುವಾ ಸಿಹಿ ತಿಂಡಿ ಗಿಫ್ಟ್ ನೀಡಿದ್ದಾರೆ. ಈ ಸ್ವೀಟ್ ವಿಶೇಷತೆ ಏನು?
04:45 PM (IST) Jun 19
ಮೇಕಿಂಗ್ ಮತ್ತು ಸಂಗೀತದ ವಿಚಾರದಲ್ಲಿಯೂ ಶ್ರೀಮಂತವಾಗಿದೆ 'ಕಾಕ್ಟೇಲ್ 2' ಚಿತ್ರ. ಈ ಚಿತ್ರವು ಸೀಕ್ವೆಲ್ ಆಗಿ ಮಾತ್ರವಲ್ಲದೆ, ಸ್ವತಂತ್ರವಾಗಿ ಒಂದು ಅದ್ಭುತ ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಿದೆ. ಆಕ್ಷನ್ ಸಿನಿಮಾಗಳ ನಡುವೆ ಒಂದು ರಿಫ್ರೆಶಿಂಗ್ ಪ್ರೇಮಕಥೆ ನೋಡಬಯಸುವವರಿಗೆ 'ಕಾಕ್ಟೇಲ್ 2' ಪರ್ಫೆಕ್ಟ್ ಚಾಯ್ಸ್!'
04:34 PM (IST) Jun 19
Coolie ಚಿತ್ರದ ಬಳಿಕ ನಟ ಉಪೇಂದ್ರ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಹಾಗೂ ಗುನೀತ್ ಮೋಂಗಾ ನಿರ್ಮಾಣದ ಈ ಚಿತ್ರದ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ.
03:40 PM (IST) Jun 19
90ರ ದಶಕದ ಬಾಲಿವುಡ್ ಸುವರ್ಣ ಯುಗದಲ್ಲಿ ಫರೋಗ್ ಸಿದ್ದಿಕಿ ಅವರ ಹೆಸರು ಅಜರಾಮರ. ದೊಡ್ಡ ತಾರಾಗಣವನ್ನು ಇಟ್ಟುಕೊಂಡು ಪ್ರೇಕ್ಷಕರಿಗೆ ಬೇಕಾದ ಸಿನೆಮಾ ನೀಡುವಲ್ಲಿ ಅವರು ಯಶಸ್ವಿಯಾಗಿದ್ದರು. ಹಿರಿಯ ನಿರ್ದೇಶಕನ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
01:10 PM (IST) Jun 19
‘ಸಾಮಾನ್ಯವಾಗಿ ಮಹಿಳಾ ಪ್ರಧಾನ ಸಿನಿಮಾ ಅಂದರೆ ಅದರಲ್ಲಿ ನಟಿ ದೇವತೆಯಂತೆ ಇರಬೇಕು, ಸದಾ ತ್ಯಾಗ ಮಾಡಬೇಕು, ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಎಂಬ ಸಿದ್ಧಸೂತ್ರಗಳಿವೆ. ನಾವು ಹೆಣ್ಣುಮಕ್ಕಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿದ್ದೇವೆ. ಆದರೆ ನನಗೆ ಈ ಇಮೇಜ್ ಮುರಿಯಬೇಕು ಎಂಬ ಆಸೆ ಇದೆ’…
01:04 PM (IST) Jun 19
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿರುವ ಭಾರತದ ಸ್ಟಾರ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರ ಸ್ಥಾನಕ್ಕೆ ಮತ್ತೋರ್ವ ಆರ್ಸಿಬಿ ಆಟಗಾರ್ತಿ, ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
12:21 PM (IST) Jun 19
NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಇದು NTA ವೈಫಲ್ಯವನ್ನು ಮರೆಮಾಚಲು ಈ ಕ್ರಮ ಎಂದು ಅರೋಪಿಸಿದ್ದಾರೆ.
12:19 PM (IST) Jun 19
"ಆ ಸಮಯದಲ್ಲಿ ನಾನು ಸೇವಿಸುವ ಆಹಾರವೇ ನನ್ನ ಕಾಯಿಲೆಗೆ ಪ್ರಚೋದನೆ (Trigger) ನೀಡುತ್ತಿತ್ತು. ನನ್ನ ಜೀರ್ಣಾಂಗವ್ಯೂಹಕ್ಕೆ (Gut) ಸಣ್ಣ ತೊಂದರೆಯಾದರೂ ನನ್ನ ಮಯೋಸಿಟಿಸ್ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಹಾಗಾಗಿ, ನಾನು ಅತ್ಯಂತ ಕಟ್ಟುನಿಟ್ಟಾದ ಪಥ್ಯವನ್ನು ಪಾಲಿಸಬೇಕಾಯಿತು.
12:16 PM (IST) Jun 19
ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದಾಗಿ, ಭಾರತೀಯ ಷೇರುಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಇಟಿಎಫ್ಗಳು ತೀವ್ರ ನಷ್ಟ ಅನುಭವಿಸಿವೆ. ಯುಎಸ್ ಫೆಡರಲ್ ರಿಸರ್ವ್ನ ಕಠಿಣ ನೀತಿಯಿಂದಾಗಿ ಚಿನ್ನದ ಇಟಿಎಫ್ಗಳು ಶೇ. 2.5 ರಷ್ಟು ಮತ್ತು ಬೆಳ್ಳಿ ಇಟಿಎಫ್ಗಳು ಶೇ. 5 ಕ್ಕೂ ಹೆಚ್ಚು ಕುಸಿದಿವೆ.
11:10 AM (IST) Jun 19
ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ.
09:46 AM (IST) Jun 19
09:36 AM (IST) Jun 19
ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಪುನರಾರಂಭವಾಗಿದೆ. ಇದು ಕರ್ನಾಟಕದಲ್ಲಿ ಡಾಂಬರು, ರಸಗೊಬ್ಬರ ಲಭ್ಯತೆಗೆ ಆಶಾಕಿರಣ ಮೂಡಿಸಿದ್ದು, ಷೇರುಪೇಟೆ ಮತ್ತು ರುಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ.
09:23 AM (IST) Jun 19
08:44 AM (IST) Jun 19
08:23 AM (IST) Jun 19
07:50 AM (IST) Jun 19
ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಸಮರಕ್ಕೆ ಅಧಿಕೃತವಾಗಿ ಅಂತ್ಯ ಹಾಡಲಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ರಾಷ್ಟ್ರಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಯುದ್ಧ ನಿಲುಗಡೆ, ಅಣ್ವಸ್ತ್ರ ಮಾತುಕತೆ ಪುನರಾರಂಭ ಮತ್ತು ನಿರ್ಬಂಧಗಳ ಸಡಿಲಿಕೆ ಇದರ ಪ್ರಮುಖ ಅಂಶಗಳಾಗಿವೆ.