LIVE NOW
Published : Feb 06, 2026, 06:56 AM ISTUpdated : Feb 06, 2026, 09:41 AM IST

India News Live: Baba Vanga Prediction - 2026ರ ವೇಳೆಗೆ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗುತ್ತೆ? ಬಾಬಾ ವಂಗಾ ಭವಿಷ್ಯ ನಿಜವಾಗುತ್ತಾ?

ಸಾರಾಂಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಬುಧವಾರ ಲೋಕಸಭೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಲು ಕಾಂಗ್ರೆಸ್ ಸದಸ್ಯರು ಯೋಜಿಸಿದ್ದರು. ಜೊತೆಗೆ ಈ ಕೃತ್ಯ ಮುಚ್ಚಿಡುವ ಸಲುವಾಗಿಯೇ ಮಹಿಳಾ ಸಂಸದೆಯರನ್ನು ಮೋದಿ ಕೂರುವ ಸ್ಥಳದ ಸುತ್ತಲೂ ಸುತ್ತುವರೆದು ನಿಲ್ಲಿಸುವ ಯೋಜನೆ ರೂಪಿಸಲಾಗಿತ್ತು ಎಂದು ಗಂಭೀರ ಆರೋಪವೊಂದು ಕೇಳಿಬಂದಿದೆ. ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ಇಂಥದ್ದೊಂದು ಸುದ್ದಿ ಪ್ರಕಟಿಸಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಬುಧವಾರ ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾ ಬೇಕಿತ್ತು. ಆದರೆ ಇದಕ್ಕೂ ಮುನ್ನ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳದತ್ತ ಧಾವಿಸಿ ಇಡೀ ಪ್ರದೇಶವನ್ನು ಸುತ್ತುವರೆದು, ಬಿಜೆಪಿಯ ಪುರುಷ ಸದಸ್ಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು.

ಈ ಘಟನೆಯನ್ನು ಪುಷ್ಟಿಕರಿಸುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬುಧವಾರ ಲೋಕಸಭೆಯಲ್ಲಿ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳವನ್ನು ಸುತ್ತುವರೆದರು ಆ ಬಳಿಕ ಅನಿವಾರ್ಯವಾಗಿ ಮೋದಿ ಭಾಷಣ ರದ್ದುಪಡಿಸಿ ಕಲಾಪವನ್ನೇ ಮುಂದೂಡಿದ ಘಟನೆ ಬಗ್ಗೆ ಸ್ಪೀಕರ್ ಈ ಬಿರ್ಲಾ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

 

09:41 AM (IST) Feb 06

Baba Vanga Prediction - 2026ರ ವೇಳೆಗೆ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗುತ್ತೆ? ಬಾಬಾ ವಂಗಾ ಭವಿಷ್ಯ ನಿಜವಾಗುತ್ತಾ?

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿವೆ. ಈ ಬೆಲೆ ಏರಿಕೆಯ ಬಗ್ಗೆ ತಜ್ಞರು ತಮ್ಮದೇ ಆದ ಅಂದಾಜುಗಳನ್ನು ಮಾಡುತ್ತಿದ್ದಾರೆ. ಇದರ ನಡುವೆಯೇ, ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Read Full Story

09:20 AM (IST) Feb 06

ಸತತ ಎರಡು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ಬೆಲೆ! ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತ! ಇಳಿಕೆ ಕಾರಣ ಏನು? ಬಂಗಾರದ ಬೆಲೆ ಎಷ್ಟು?

ಬೆಂಗಳೂರು: ಡಿಸೆಂಬರ್ 30ರಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನ ಮತ್ತೆ ಏರುಗತಿ ಕಂಡಿತ್ತು. ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಫೆಬ್ರವರಿ 05ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿತ್ತು?

 

Read Full Story

08:54 AM (IST) Feb 06

ಈಗಾಗಲೇ ಮದ್ವೆಯಾಗಿರುವ ಮಹಿಳೆ, ತನಗೆ ಮದ್ವೆ ಭರವಸೆ ನೀಡಿ ಅತ್ಯಾ*ಚಾರವೆಸಗಿದರು ಎಂದು ದೂರುವಂತಿಲ್ಲ - ಸುಪ್ರೀಂಕೋರ್ಟ್‌

ವಿವಾಹಿತ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಆತ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದರೂ ಅತ್ಯಾ*ಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 

Read Full Story

08:23 AM (IST) Feb 06

WPL 2026 - ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್!

ವಡೋದರಾ: 2026ನೇ ಸಾಲಿನ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಆರ್‌ಸಿಬಿ ಅಭಿಮಾನಿಗಳು ಹೃದಯ ಗೆಲ್ಲುವಂತ ಮಾತುಗಳನ್ನಾಡಿದ್ದಾರೆ.

 

Read Full Story

More Trending News