ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ‘ನಮ್ಮ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು’ ಎಂದರು.
10:42 PM (IST) Jun 01
ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.
09:12 PM (IST) Jun 01
OTT Movies Release: ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಹೊಸ ಸಿನಿಮಾ-ಸೀರೀಸ್ಗಳು ಬರ್ತಿವೆ? 'ಧುರಂಧರ್: ದಿ ರಿವೆಂಜ್' ಈ ವಾರದ ಅತಿದೊಡ್ಡ ರಿಲೀಸ್ ಆಗಲಿದೆಯೇ? ಮಾಧುರಿ ದೀಕ್ಷಿತ್ ಅವರ 'ಮಾ ಬೆಹೆನ್' ಪ್ರೇಕ್ಷಕರಿಗೆ ಶಾಕ್ ಕೊಡಲಿದೆಯೇ? 'ಗುಲ್ಲಕ್ 5' ಮತ್ತೆ ಮನಸ್ಸು ಗೆಲ್ಲುತ್ತಾ?
08:53 PM (IST) Jun 01
Kushboo Daughter Instagram: ನಟಿ ಖುಷ್ಬೂ ಸುಂದರ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇವರ ಹಿರಿಯ ಮಗಳು ಅವಂತಿಕಾ ಮದುವೆಯಾಗಲು ರೆಡಿಯಾಗಿದ್ದಾರೆ. ಈಗ ಪಿಎಂ ನರೇಂದ್ರ ಮೋದಿಗೂ ಕೂಡ ಮದುವೆ ಆಹ್ವಾನ ಹೋಗಿದೆ.
08:37 PM (IST) Jun 01
'ವಾರಣಾಸಿ' ಶೂಟಿಂಗ್ ನಡುವೆ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್ವೇರ್ನಲ್ಲಿ ಪೂಲ್ ಸೆಷನ್ ಮಾಡಿದ್ದು ಯಾಕೆ ಚರ್ಚೆಯಲ್ಲಿದೆ? ಅವರ ಸ್ಕಿನ್ಕೇರ್ ರಹಸ್ಯವೇನು? ನೇರಳೆ ಹಣ್ಣು ತಿನ್ನುವ ಮೂಲಕ ದೇಸಿ ಶೈಲಿ ತೋರಿಸಿದ್ದಾರೆ. 'ಮಂದಾಕಿನಿ'ಯಾಗಿ ಪ್ರಿಯಾಂಕಾ ಹೊಸ ಇತಿಹಾಸ ಬರೆಯುತ್ತಾರಾ?
08:16 PM (IST) Jun 01
ಬಿಜೆಪಿಯಲ್ಲಿ ಮೂಲೆಗುಂಪಾದ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ದೆಹಲಿ ಭೇಟಿ ಬಳಿಕ ಈ ಪ್ರಶ್ನೆಗೆ ಅಣ್ಣಾಮಲೈ ನೀಡಿದ ಉತ್ತರ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.
08:10 PM (IST) Jun 01
ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದಾರೆ ಉರ್ಫಿ ಜಾವೇದ್.
08:03 PM (IST) Jun 01
ಸಾಲ ವಸೂಲಾತಿಗಾಗಿ ಬಡ ಕುಟುಂಬದ ಮನೆ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಯೊಬ್ಬರು, ಅವರ ಬಡತನ ಕಂಡು ಮನಕರಗಿ, ತಾವೇ ಸಂಪೂರ್ಣ ಸಾಲವನ್ನು ತೀರಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದು ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ, ಮಾನವೀಯತೆ ಮೆರೆದಿದ್ದಾರೆ.
07:39 PM (IST) Jun 01
'ಕಾಕ್ಟೇಲ್ 2' ಚಿತ್ರದ ಸ್ಟಾರ್ಕಾಸ್ಟ್ಗೆ ಸಿಕ್ಕ ಸಂಭಾವನೆ ಎಷ್ಟು? ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪೈಕಿ ಅತಿ ಹೆಚ್ಚು ಹಣ ಪಡೆದವರು ಯಾರು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ?
07:16 PM (IST) Jun 01
ಒಬ್ಬ ಕಾಸ್ಟಿಂಗ್ ಡೈರೆಕ್ಟರ್ 'ನಿನ್ನ ನಗು ಚೆನ್ನಾಗಿಲ್ಲ' ಅಂದಿದ್ದಕ್ಕೆ ನಟಿ ನೇಹಾ ಧೂಪಿಯಾ ಸುಮಾರು 10 ವರ್ಷ ನಗೋದನ್ನೇ ಬಿಟ್ಟಿದ್ರಂತೆ. ಮಿಸ್ ಇಂಡಿಯಾ ಕಿರೀಟ ಗೆದ್ದಾಗಲೂ ಫೋಟೋಗಳಲ್ಲಿ ನಗಲೇ ಇಲ್ಲ ಅಂತ ತಮ್ಮ ನೋವಿನ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
06:47 PM (IST) Jun 01
ಮಲಯಾಳಂ ಸುಂದರ ಭಾಷೆ, ಆದರೆ ಕಲಿಯೋಕೆ ತುಂಬಾ ಕಷ್ಟ. ಅದಕ್ಕೆ ಮತ್ತೆ ಆ ಭಾಷೆಯಲ್ಲಿ ನಟಿಸೋಕೆ ಇಷ್ಟ ಇಲ್ಲ ಅಂತ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. ತಮಿಳು, ತೆಲುಗು ತನಗೆ ಹೆಚ್ಚು ಸುಲಭ ಎನಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.
06:25 PM (IST) Jun 01
ಸಿನಿಮಾ ಇಂಡಸ್ಟ್ರಿಯಲ್ಲಿ ದಪ್ಪ ಆದ್ರೂ, ಸಣ್ಣ ಆದ್ರೂ ಬಾಡಿ ಶೇಮಿಂಗ್ ತಪ್ಪಿದ್ದಲ್ಲ. ನನ್ನ ತೂಕ ಹೆಚ್ಚಾಗಿದ್ದಕ್ಕೆ ಅತಿಯಾದ ಊಟ ಕಾರಣವಲ್ಲ, ಆರೋಗ್ಯ ಸಮಸ್ಯೆ ಕಾರಣ ಎಂದು ನಟಿ ಶಾಲಿನ್ ಸೋಯಾ ಹೇಳಿದ್ದಾರೆ.
06:15 PM (IST) Jun 01
UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?
05:53 PM (IST) Jun 01
ನಟ ನಾಗ ಚೈತನ್ಯ ಜೊತೆಗಿನ ಮದುವೆಯ ನಂತರ ಎದುರಾದ ಸೈಬರ್ ದಾಳಿ ಮತ್ತು ಟೀಕೆಗಳ ಬಗ್ಗೆ ನಟಿ ಶೋಭಿತಾ ಧೂಳಿಪಾಲ ಮಾತನಾಡಿದ್ದಾರೆ. ಸಮಾಜದ ಅಭಿಪ್ರಾಯಗಳು ಹವಾಮಾನದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದಿದ್ದಾರೆ.
05:35 PM (IST) Jun 01
Blinkit, ಸೂಪರ್ಮಾರ್ಕೆಟ್ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.
05:30 PM (IST) Jun 01
ಸುಭಾಷ್ ಕೆ ರಾಜ್ ನಿರ್ದೇಶನದ 'ಬ್ಲಾಸ್ಟ್' ಸಿನಿಮಾ ಉತ್ತಮ ಪ್ರತಿಕ್ರಿಯೆಯೊಂದಿಗೆ ಪ್ರದರ್ಶನ ಕಾಣುತ್ತಿದೆ. ಅರ್ಜುನ್ ಸರ್ಜಾ ನಟನೆಯ ಈ ಆಕ್ಷನ್ ಫ್ಯಾಮಿಲಿ ಎಂಟರ್ಟೈನರ್ ವಿಶ್ವಾದ್ಯಂತ 21 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
05:09 PM (IST) Jun 01
ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್ಸಿಬಿ ಪರವೂ ಆಡಿದ್ದಾರೆ.
05:08 PM (IST) Jun 01
ನಾನಿದ್ದ ರೀತಿಯ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಹರಿದುಬರಲಾರಂಭಿಸಿದವು. ನನಗೆ ಆಘಾತವಾಯಿತು. ನನ್ನ ಆತ್ಮವಿಶ್ವಾಸ ಕುಸಿಯಿತು. ಖಿನ್ನತೆಗೆ ಜಾರಿದ್ದೆ. ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ ಮಾತುಗಳಿವು.
04:53 PM (IST) Jun 01
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ಈ ಫೋಟೋದಲ್ಲಿ ಚಿತ್ರದ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಸೆಟ್ ಎಷ್ಟು ಗ್ರ್ಯಾಂಡ್ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ.
04:44 PM (IST) Jun 01
ಭಾರತೀಯ ರೈಲ್ವೆಯ ಐಆರ್ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್ರಾಜ್ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ
04:34 PM (IST) Jun 01
ನಟಿ ರುಕ್ಮಿಣಿ ವಸಂತ್ ಖಾತೆಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಜಮೆಯಾಗಿದೆ. ತಮಿಳಿನ ಸೂರ್ಯ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಗಿದ್ದಾರೆ. ಈ ಚಿತ್ರವನ್ನು ನಿರ್ಮಿಸುತ್ತಿರುವುದು ಕೆವಿಎನ್ ಪ್ರೊಡಕ್ಷನ್.
04:29 PM (IST) Jun 01
ಬಿಗ್ಬಾಸ್ ಸ್ಪರ್ಧಿ ಹಾಗೂ ನಟಿ ಮಾರಿಯಾ ಜೂಲಿ, ತಮಗೆ ಆದ ಗರ್ಭಪಾತಕ್ಕೆ ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಆನ್ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.
04:28 PM (IST) Jun 01
ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್. ಐಪಿಎಲ್ನಲ್ಲಿ 15ನೇ ವಯಸ್ಸಿಗೆ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಬೆನ್ನಲ್ಲೇ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ - ವೈಭವ್ ಇಂಡಿಯಾಕ್ಕೆ ಯಾವಾಗ ಆಡ್ತಾರೆ?
03:57 PM (IST) Jun 01
ಭಾರತದ ಪೈಲೆಟ್ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಬಳಿಕ ಹೆಲಿಕಾಪ್ಟರ್ ಮೂಲಕ ಪತ್ನಿ ಜೊತೆ ಮಂಟಪದಿಂದಲೇ ಹನಿಮೂನ್ಗೆ ತೆರಳಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಪತನಗೊಂಡು ದುರಂತ ನಡೆದಿದೆ.
03:53 PM (IST) Jun 01
17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು.
03:26 PM (IST) Jun 01
ಅಮೆರಿಕಾದಲ್ಲಿನ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅದಾನಿ ಸಮೂಹ, ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬೇಡಿಕೆ ಪೂರೈಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ವೇಗಗೊಳಿಸುತ್ತಿದೆ.
03:07 PM (IST) Jun 01
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದರ ಹೊರತಾಗಿಯೂ ಆರ್ಸಿಬಿ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ 3 ಆಟಗಾರರಿಗೆ ಗೇಟ್ಪಾಸ್ ನೀಡಲು ಚಿಂತನೆ ನಡೆಸಿದೆ.
03:02 PM (IST) Jun 01
ಕೋರ್ಟ್ ಆವರಣಕ್ಕೆ 2 ಲಕ್ಷ ರೂಪಾಯಿ ಬ್ಯಾಗ್ ಹಿಡಿದು ಬಂದ ಲಾಯರ್ ಮೇಲೆ ಕೋತಿ ದಾಳಿ ಮಾಡಿದೆ. ಹಣವಿದ್ದ ಬ್ಯಾಗ್ ಎತ್ತಿ ಮರದ ಮೇಲೆಕ್ಕೆ ಹೋದ ಕೋತಿ ಬಳಿಕ ಬ್ಯಾಗ್ ತೆರೆದು ಕಂತೆ ಕಂತೆ ನೋಟುಗಳ ಮಳೆ ಸುರಿಸಿದ ಘಟನೆ ನಡೆದಿದೆ.
01:55 PM (IST) Jun 01
ಕೇಂದ್ರದ 'ಪಿಎಂ-ಸೇತು' ಯೋಜನೆಯಡಿ, ವಿಶಾಖಪಟ್ಟಣಂನ ಐಟಿಐ ಕ್ಲಸ್ಟರ್ ಅನ್ನು ಉನ್ನತೀಕರಿಸಲು 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಸಂಸ್ಥೆಗೆ ಅನುಮೋದನೆ ದೊರೆತಿದೆ. ಈ ಮೂಲಕ, ಖಾಸಗಿ ಸಹಭಾಗಿತ್ವದಲ್ಲಿ ಐಟಿಐ ಅಭಿವೃದ್ಧಿಪಡಿಸುವ ದೇಶದ ಮೊದಲ ಸಂಸ್ಥೆ ಮತ್ತು ರಾಜ್ಯ ಎಂಬ ಹೆಗ್ಗಳಿಕೆಗೆ ಕ್ರಮವಾಗಿ ಆರ್ಸೆಲರ್ ಮಿತ್ತಲ್ ಮತ್ತು ಆಂಧ್ರಪ್ರದೇಶ ಪಾತ್ರವಾಗಿವೆ.
01:53 PM (IST) Jun 01
ಡಿ.ಕೆ.ಶಿವಕುಮಾರ್ ರಾಜ್ಯದ ನೂತನ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ಶಾಸಕರ ಪಟ್ಟಿಯಲ್ಲಿ ಇವರಿಗಿಂತ ಇಬ್ಬರು ಶ್ರೀಮಂತರಿದ್ದು, ಇವರು 3ನೇ ಸ್ಥಾನದಲ್ಲಿದ್ದಾರೆ.
01:39 PM (IST) Jun 01
01:08 PM (IST) Jun 01
ಭಾರತೀಯ ರೈಲ್ವೆಯು IRCTC ಜೊತೆಗೆ RailOne ಎಂಬ ಹೊಸ 'ಸೂಪರ್ ಅಪ್ಲಿಕೇಶನ್' ಅನ್ನು ಪರಿಚಯಿಸಿದೆ. ಈ ಲೇಖನವು ಎರಡೂ ಅಪ್ಲಿಕೇಶನ್ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ, ಇದರಲ್ಲಿ ಟಿಕೆಟ್ ಬುಕಿಂಗ್, ವೇಗ, ವಿಶ್ವಾಸಾರ್ಹತೆ ಮತ್ತು ಇತರ ಸೇವೆಗಳನ್ನು ಹೋಲಿಸಲಾಗುತ್ತದೆ.
12:09 PM (IST) Jun 01
ಅಹಮದಾಬಾದ್: ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಮ್ಯಾಚ್ ಮುಗಿಸಿ ಹೋಟೆಲ್ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಆಟಗಾರರಿದ್ದ ಬಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
11:55 AM (IST) Jun 01
11:45 AM (IST) Jun 01
11:00 AM (IST) Jun 01
10:12 AM (IST) Jun 01
10:05 AM (IST) Jun 01
09:20 AM (IST) Jun 01
07:58 AM (IST) Jun 01
07:22 AM (IST) Jun 01