MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಸಮಂತಾ ವಿಚಾರದಲ್ಲಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟ ನಾಗ ಚೈತನ್ಯ ಪತ್ನಿ: ಅಷ್ಟಕ್ಕೂ ಏನಾಯ್ತು?

ಸಮಂತಾ ವಿಚಾರದಲ್ಲಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟ ನಾಗ ಚೈತನ್ಯ ಪತ್ನಿ: ಅಷ್ಟಕ್ಕೂ ಏನಾಯ್ತು?

ನಟ ನಾಗ ಚೈತನ್ಯ ಜೊತೆಗಿನ ಮದುವೆಯ ನಂತರ ಎದುರಾದ ಸೈಬರ್ ದಾಳಿ ಮತ್ತು ಟೀಕೆಗಳ ಬಗ್ಗೆ ನಟಿ ಶೋಭಿತಾ ಧೂಳಿಪಾಲ ಮಾತನಾಡಿದ್ದಾರೆ. ಸಮಾಜದ ಅಭಿಪ್ರಾಯಗಳು ಹವಾಮಾನದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದಿದ್ದಾರೆ.

1 Min read
Author : Govindaraj S
Published : Jun 01 2026, 05:53 PM IST
Share this Photo Gallery
  • FB
  • TW
  • Linkdin
  • Whatsapp
15
ಕುಟುಂಬ ಮುರಿದವಳು
Image Credit : Sobitad/Instagram

ಕುಟುಂಬ ಮುರಿದವಳು

ನಟ ನಾಗ ಚೈತನ್ಯ ಜೊತೆ ಮದುವೆಯಾದ ನಂತರ ನಟಿ ಶೋಭಿತಾ ಧೂಳಿಪಾಲ ಅವರು ದೊಡ್ಡ ಮಟ್ಟದ ಸೈಬರ್ ದಾಳಿ ಮತ್ತು ನಿಂದನೆಗಳನ್ನು ಎದುರಿಸಬೇಕಾಯ್ತು. ಮೂಲಗಳ ವರದಿ ಪ್ರಕಾರ, 2024ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. 'ಸಮಂತಾ ಜೀವನ ಹಾಳು ಮಾಡಿದವಳು', 'ಕುಟುಂಬ ಮುರಿದವಳು' ಹೀಗೆ ನಾನಾ ರೀತಿಯ ನಿಂದನೆಗಳು ಶೋಭಿತಾ ವಿರುದ್ಧ ಕೇಳಿಬಂದಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜೀವನವನ್ನು ನಡೆಸುತ್ತಿದ್ದೇನೆ
Image Credit : Instagram/ Sobhita Dhulipala

ಜೀವನವನ್ನು ನಡೆಸುತ್ತಿದ್ದೇನೆ

ಕಳೆದ ವರ್ಷ ಸಮಂತಾ ಅವರು ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಮದುವೆಯಾದ ನಂತರ ಈ ರೀತಿಯ ನಿಂದನೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದವು. ಈಗ, ಈ ಬದಲಾವಣೆಯ ಬಗ್ಗೆ ಶೋಭಿತಾ ಮಾತನಾಡಿದ್ದು, ತಾನು ತನ್ನ ಜೀವನವನ್ನು ನಡೆಸುತ್ತಿದ್ದೇನೆ ಮತ್ತು ಜನರು ತನ್ನಿಂದ ಯಾವ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿದ್ದರು ಎಂಬುದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಕಾಲ ಕಳೆದಂತೆ, ತಾನು ಯಾರೆಂಬುದರ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗುತ್ತಿದೆ ಅಂತಾನೂ ಅವರು ಹೇಳಿದ್ದಾರೆ.

Related Articles

Related image1
ನನ್ನ ಸೊಸೆಯಂದಿರು ಅದ್ಭುತ.. ಶೋಭಿತಾ, ಜೈನಬ್ ಬಗ್ಗೆ ಮೊದಲ ಬಾರಿಗೆ ಅಮಲಾ ಅಕ್ಕಿನೇನಿ ಹೇಳಿದ್ದೇನು?
Related image2
ಸಮಂತಾ ಮದುವೆ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ಟ ನಾಗ ಚೈತನ್ಯ-ಶೋಭಿತಾ ಜೋಡಿ: ಹರಿದುಬಂತು ಶುಭಾಶಯಗಳ ಮಹಾಪೂರ
35
ಉತ್ತಮ ಸ್ಥಿತಿಯಲ್ಲಿದ್ದೇನೆ
Image Credit : instagram

ಉತ್ತಮ ಸ್ಥಿತಿಯಲ್ಲಿದ್ದೇನೆ

ಖಂಡಿತ, ಜನರ ಗಮನ ನನ್ನ ಮೇಲಿತ್ತು. ಅವರಿಗೆ ಕುತೂಹಲ ಇತ್ತು ಅಂತ ನನಗೆ ಅನಿಸುತ್ತೆ. ನಾನು ನನ್ನ ಜೀವನವನ್ನು ಬದುಕುತ್ತಿದ್ದೇನೆ. ಜನ ನನ್ನಿಂದ ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದರು ಅಂತ ನನಗೆ ಗೊತ್ತಿಲ್ಲ. ನನ್ನ ಜೀವನದಲ್ಲಿ ನಾನೀಗ ಉತ್ತಮ ಸ್ಥಿತಿಯಲ್ಲಿದ್ದೇನೆ. ಸಮಯ ಕಳೆದಂತೆ, ನಾನು ಯಾರು ಅನ್ನೋದ್ರ ಬಗ್ಗೆ ನನಗೆ ಹೆಚ್ಚು ಖಚಿತತೆ ಸಿಗುತ್ತಿದೆ.

45
ಬಿಸಿ ಬಿಸಿಯಾಗಿ ಮಾತನಾಡುತ್ತಾರೆ
Image Credit : @sobhita dhulipala

ಬಿಸಿ ಬಿಸಿಯಾಗಿ ಮಾತನಾಡುತ್ತಾರೆ

ಈ ತರಹದ ಬೇರೆ ಬೇರೆ ಅಭಿಪ್ರಾಯಗಳ ಮಧ್ಯೆ, ಅದರಿಂದ ಪ್ರಭಾವಿತರಾಗದೆ ಬದುಕುವುದು ಒಂದು ರೀತಿಯಲ್ಲಿ ಆರಾಮದಾಯಕ ಅನುಭವ. ಸಾಮಾನ್ಯವಾಗಿ ಎಲ್ಲ ವಿಚಾರಗಳ ಬಗ್ಗೆಯೂ ಜನರು ಬಿಸಿ ಬಿಸಿಯಾಗಿ ಮಾತನಾಡುತ್ತಾರೆ. ಇದು ವಾತಾವರಣ ಇದ್ದ ಹಾಗೆ. ಸಮಾಜಕ್ಕೂ ಒಂದು ಹವಾಮಾನವಿದೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು. ಯಾಕಂದ್ರೆ ಅದು ಶಾಶ್ವತವಾಗಿ ಇರುವುದಿಲ್ಲ.

55
ತಾನು ಗಮನಹರಿಸಬೇಕು
Image Credit : our own

ತಾನು ಗಮನಹರಿಸಬೇಕು

ಹವಾಮಾನ ಬದಲಾದಂತೆ ಅದೂ ಬದಲಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ಗಮನಹರಿಸಬೇಕು ಅಂತ ನನಗನಿಸುತ್ತೆ ಎಂದು ಗಲಾಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಶೋಭಿತಾ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ, ಈ ವರ್ಷ ಶೋಭಿತಾ ನಟನೆಯ 'ಚೀಕಟಿಲೋ' ಎಂಬ ತೆಲುಗು ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರೇಕ್ಷಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ನಾಗ ಚೈತನ್ಯ
ಸಮಂತಾ ರುತ್ ಪ್ರಭು
ಮನರಂಜನಾ ಸುದ್ದಿ

Latest Videos
Recommended Stories
Recommended image1
Amruthadhaare: ಅಲ್ಲಿ ಹನಿಮೂನ್​ ಮೂಡ್​ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ
Recommended image2
ನನ್ನ ಮಗಳಿಗೆ ತೊಂದ್ರೆ ಆದ್ರೆ ಸುಮ್ನೆ ಇರಲ್ಲ, ಕೊಂದುಬಿಡ್ತೀನಿ: 'ರಕ್ತ ಕಣ್ಣೀರು' ನಟಿ ಹೀಗೆ ಹೇಳಿದ್ಯಾಕೆ?
Recommended image3
ಬರೋಬ್ಬರಿ 14 ವರ್ಷದ ಬಳಿಕ ‘ಅಮೃತವರ್ಷಿಣಿ’ ಅತ್ತಿಗೆ-ನಾದಿನಿಯರ ಭೇಟಿ
Related Stories
Recommended image1
ನನ್ನ ಸೊಸೆಯಂದಿರು ಅದ್ಭುತ.. ಶೋಭಿತಾ, ಜೈನಬ್ ಬಗ್ಗೆ ಮೊದಲ ಬಾರಿಗೆ ಅಮಲಾ ಅಕ್ಕಿನೇನಿ ಹೇಳಿದ್ದೇನು?
Recommended image2
ಸಮಂತಾ ಮದುವೆ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ಟ ನಾಗ ಚೈತನ್ಯ-ಶೋಭಿತಾ ಜೋಡಿ: ಹರಿದುಬಂತು ಶುಭಾಶಯಗಳ ಮಹಾಪೂರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved