ನವದೆಹಲಿ: ನಟ ಅಮಿತಾಬ್ ಬಚ್ಚನ್, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬರೋಬ್ಬರಿ 35 ಕೋಟಿ ರು. ಹಣ ನೀಡಿ 2.67 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಖಾಸಗಿ ರಿಯಾಲ್ಟಿ ಸಂಸ್ಥೆ ಹೌಸ್ ಆಫ್ ಅಭಿನಂದನ್ ಲೋಧಾ (ಎಚ್ಒಎಬಿಎಲ್) ಕಂಪನಿಯಿಂದ ಅಮಿತಾಬ್ ಬಚ್ಚನ್ ಜಾಗ ಖರೀದಿ ಮಾಡಿದ್ದಾರೆ. ಇದಕ್ಕೂ ಮುನ್ನ 2024ರ ಜನವರಿಯಲ್ಲಿ ಬಚ್ಚನ್ ಇದೇ ಕಂಪನಿಯ ದಿ ಸರಯೂ ಪ್ರಾಜೆಕ್ಟ್ನಲ್ಲಿ ಅಯೋಧ್ಯೆಯಲ್ಲಿ 14.5 ಕೋಟಿ ರು. ಮೌಲ್ಯದಲ್ಲಿ 10,000 ಚ.ಅಡಿ ಜಾಗ ಖರೀದಿ ಮಾಡಿದ್ದರು.

11:36 PM (IST) Mar 07
ಫಿಲ್ಮ್ ಇಂಡಸ್ಟ್ರಿಯಲ್ಲಿ ಒಬ್ಬರಿಗಾಗಿ ಬರೆದ ಕಥೆಯಲ್ಲಿ ಇನ್ನೊಬ್ಬ ಹೀರೋ ಸಿನಿಮಾ ಮಾಡೋದು ಕಾಮನ್. ಮೆಗಾ ಹೀರೋಗಳ ವಿಚಾರದಲ್ಲೂ ಹೀಗೆಯೇ ಆಗಿದೆ. ನಿರ್ದೇಶಕರೊಬ್ಬರು ಮೆಗಾ ಪವರ್ ಸ್ಟಾರ್ ರಾಮ್ ಚರಣ್ಗಾಗಿ ಒಂದು ಕಥೆ ಬರೆದಿದ್ದರು.
10:39 PM (IST) Mar 07
ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಧ್ಯಾಹ್ನದ ವೇಳೆ ಡ್ರೋನ್ ದಾಳಿಯಾಗಿದೆ. ಇದೇ ವೇಳೆ ನಾಗರೀಕರು ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
09:22 PM (IST) Mar 07
ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ ಶುರುವಾಗಿದೆ. ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಬಳಿಕ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್ ಇದೀಗ ಈ ಕುರಿತು ಮಾತನಾಡಿದ್ದಾರೆ.
08:39 PM (IST) Mar 07
ಚಿರಂಜೀವಿ ಮತ್ತು ಮೋಹನ್ ಬಾಬು ಒಮ್ಮೆ ಸಂದರ್ಶನವೊಂದರಲ್ಲಿ ಪರಸ್ಪರರ ಬಗ್ಗೆ ಮಾತನಾಡಿದ್ದರು. ಆಗ ಮೋಹನ್ ಬಾಬು ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಚಿರಂಜೀವಿ ಓಪನ್ ಆಗಿ ಹೇಳಿಕೊಂಡಿದ್ದರು.
08:38 PM (IST) Mar 07
ಅಮೆರಿಕ ಗೂಗಲ್ ಆಫೀಸ್ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಯುವಕ, ಅಮೆರಿಕ ಭಾರತ ಹೀಗೆ ಒದ್ದಾಡುತ್ತಿದ್ದ ಯುವಕ ಇದೀಗ 402ನೇ ರ್ಯಾಂಕ್ ಪಡೆದು ಕನಸು ನನಸು ಮಾಡಿದ್ದಾರೆ.
08:13 PM (IST) Mar 07
ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ 'ಧುರಂಧರ್: ದಿ ರಿವೆಂಜ್' ಮಾರ್ಚ್ 19, 2026 ರಂದು ತೆರೆಗೆ ಬರಲಿದೆ. ದೇಶದಾದ್ಯಂತ ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂಗಳು ನಡೆಯಲಿವೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
08:01 PM (IST) Mar 07
ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ, ಭಾರತ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಆತಂಕ ಶುರುವಾಗಿದ್ದು ಯಾಕೆ?
06:54 PM (IST) Mar 07
06:49 PM (IST) Mar 07
ಒಂದು ಕಾಲದಲ್ಲಿ ಅಭಿಮಾನಿಗಳಿಂದ 'ಮುಂದಿನ ಮುಖ್ಯಮಂತ್ರಿ' ಎಂದು ಕರೆಸಿಕೊಂಡಿದ್ದ ನಟ ವಿಜಯ್ ಅವರ ಇಮೇಜ್ಗೆ ಕರೂರ್ ದುರಂತ, 'ಜನ ನಾಯಗನ್' ಸಿನಿಮಾ ವಿವಾದ ಮತ್ತು ಇದೀಗ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಿಂದಾಗಿ ದೊಡ್ಡ ಪೆಟ್ಟು ಬಿದ್ದಿದೆ.
06:20 PM (IST) Mar 07
ರಾಮಾಯಣ ಸಿನಿಮಾದ ಸೆಟ್ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಫೋಟೋ ವೈರಲ್ ಆಗಿದೆ ಎಂದು ಇಂಟರ್ನೆಟ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ಫೋಟೋ ನಿಜವೇ? ಸತ್ಯ ಏನು, 'ರಾಮಾಯಣ 2026' ಸಿನಿಮಾದ ಸಂಪೂರ್ಣ ಅಪ್ಡೇಟ್, ಫಸ್ಟ್ ಲುಕ್ ಯಾವಾಗ, ಭಾಗ 1 ಮತ್ತು 2ರ ರಿಲೀಸ್ ಡೇಟ್ ಇಲ್ಲಿದೆ.
06:13 PM (IST) Mar 07
05:40 PM (IST) Mar 07
ಈ ವರ್ಷ ಟಾಲಿವುಡ್ನ ಇಬ್ಬರು ಯುವ ನಾಯಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೌಡಿ ಹೀರೋ ವಿಜಯ್ ದೇವರಕೊಂಡ ಜೊತೆಗೆ ಅಲ್ಲು ಶಿರಿಷ್ ಕೂಡ ತಮ್ಮ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಿದ್ದಾರೆ. ಈ ಸಾಲಿಗೆ ಇದೀಗ ಮತ್ತೊಬ್ಬ ಟಾಲಿವುಡ್ ಯುವ ನಟ ಸೇರಲು ಸಿದ್ಧರಾಗುತ್ತಿದ್ದಾರೆ. ಹಾಗಾದರೆ, ಯಾರು ಆ ನಟ?
05:39 PM (IST) Mar 07
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭಾರತವನ್ನೇ ಫೇವರಿಟ್ ಎಂದು ಕರೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್ಗಳ ಬಲದಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
05:30 PM (IST) Mar 07
ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್, ಗೆಳೆಯರೊಂದಿಗೆ ಪ್ರಿಯಾಂಕ ಚೋಪ್ರಾ ಭೇಟಿಯಾಗಿದ್ದ ನಿಕ್ , ಸೈಲೆಂಟ್ ಆಗಿ ಫ್ರೆಂಚ್ ಕಿಸ್ ಮಾಡಿ ನಟಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದರು.
04:59 PM (IST) Mar 07
2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್ನಲ್ಲಿ ನಡೆಯಲಿದೆ. ಈ ಪಂದ್ಯದ ಗೆಲುವಿನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಮತ್ತು ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ಮಿಶ್ರ ಮಣ್ಣಿನ ಪಿಚ್ ಬಳಸುವ ಸಾಧ್ಯತೆಯಿದೆ.
04:55 PM (IST) Mar 07
ರವಿ ಮೋಹನ್ ಸ್ಟುಡಿಯೋಸ್ ನಿರ್ಮಾಣದಲ್ಲಿ, ನಟ ರವಿ ಮೋಹನ್ ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ 'ಆನ್ ಆರ್ಡಿನರಿ ಮ್ಯಾನ್' ಸಿನಿಮಾದ ಶೂಟಿಂಗ್ ಪೂಜೆಯೊಂದಿಗೆ ಆರಂಭವಾಗಿದೆ.
04:35 PM (IST) Mar 07
04:33 PM (IST) Mar 07
ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ 31 ಕೋಟಿ ರೂಪಾಯಿ ಮೌಲ್ಯದ 4BHK ಮನೆಯನ್ನು ಖರೀದಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್ನಲ್ಲಿರುವ ಈ ಮನೆ, ರಜನಿಕಾಂತ್ ಮತ್ತು ಧನುಷ್ ಅವರ ಮನೆಯ ಪಕ್ಕದಲ್ಲೇ ಇದೆ ಎಂದು ವರದಿಯಾಗಿದೆ.
03:54 PM (IST) Mar 07
ಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್, ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ 3 ವರ್ಷಗಳ ಅವಧಿಗೆ ₹5,750 ಕೋಟಿವರೆಗಿನ ಸಂಭಾವನೆ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತದ ಬಹುಪಾಲು ವೇಯ್ಮೋ ಮತ್ತು ವಿಂಗ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದ್ದು, ಇದು ಅವರ ವೈಯಕ್ತಿಕ ಸಂಪತ್ತಿಗೆ ಮಹತ್ವದ ಸೇರ್ಪಡೆಯಾಗಲಿದೆ.
03:51 PM (IST) Mar 07
ಇರಾನ್ ಪರ ನಿಂತು ಅಮೆರಿಕಾಗೆ ರಹಸ್ಯ ಬೆಂಬಲ ಕೊಟ್ಟ ಪಾಕ್ ಕಂಗಾಲು, ಪೆಟ್ರೋಲ್ ಬೆಲೆ 55 ರೂ ಏರಿಕೆ, ಖಮೇನಿ ಹತ್ಯೆಯಾದಾಗ ಇಸ್ರೇಲ್ ವಿರುದ್ಧ ಗರಂ ಆಗಿದ್ದ ಪಾಕಿಸ್ತಾನ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
02:01 PM (IST) Mar 07
ನಟ ದಳಪತಿ ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ, ಇದೀಗ ವಾಸಕ್ಕೆ ಮನೆ ನೀಡುವಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನ ನೀಲಾಂಕರೈ ಮನೆಯಲ್ಲಿರಲು ವಿಜಯ್ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
01:43 PM (IST) Mar 07
ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರ 'ಕಿಂಗ್ ಮೇಕರ್' ಅವತಾರ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ? ಎಐಎಡಿಎಂಕೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದೇ ಎಂಬ ಕುತೂಹಲ ಹೆಚ್ಚಾಗಿದೆ.
01:27 PM (IST) Mar 07
ಭಾರತೀಯ ಅಂಚೆ ಇಲಾಖೆಯು 38 ಕೋಟಿ ಉಳಿತಾಯ ಖಾತೆಗಳಲ್ಲಿ ₹22 ಲಕ್ಷ ಕೋಟಿ ಸಂಗ್ರಹಿಸಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 3.8 ಕೋಟಿ ಖಾತೆಗಳೊಂದಿಗೆ ಯಶಸ್ವಿಯಾಗಿದ್ದು, ಇಲಾಖೆಯು ಡ್ರೋನ್ ಮತ್ತು RFID ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.
01:26 PM (IST) Mar 07
'ಟಾಕ್ಸಿಕ್' ಚಿತ್ರಕ್ಕಾಗಿ 'ಕೆಜಿಎಫ್' ಖ್ಯಾತಿಯ ಯಶ್ ತಮ್ಮ ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹೊಸ ಲುಕ್ನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
12:55 PM (IST) Mar 07
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಝೀಲೋ ಎಲೆಕ್ಟ್ರಿಕ್ಸ್ ವಿಶೇಷವಾಗಿ ಮಹಿಳೆಯರಿಗಾಗಿ 'ನೈಟ್+ ರಾಣಿ' ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಂಕೇತವಾಗಿ 'ರಾಣಿ' ಎಂಬ ಹೆಸರನ್ನು ಹೊಂದಿದೆ. ಇಲ್ಲಿವೆ ವಿಶೇಷತೆ ಡಿಟೇಲ್ಸ್
12:55 PM (IST) Mar 07
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿದೆ. ಆರಂಭದಲ್ಲಿ ಹಿಂದೇಟು ಹಾಕಿದ್ದ ಟಿಎಂಸಿ ಕೂಡಾ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದೆ.
12:55 PM (IST) Mar 07
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣವು ಮಾರ್ಚ್ 13ರಂದು ಜಮೆಯಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ಇ-ಕೆವೈಸಿ, ಭೂ ಪರಿಶೀಲನೆ ಪೂರ್ಣಗೊಳಿಸದ ಹಾಗೂ ಕೆಲವು ರಾಜ್ಯಗಳಲ್ಲಿ 'ಫಾರ್ಮರ್ ಐಡಿ' ಹೊಂದಿರದ ರೈತರು ವಂಚಿತರಾಗುವ ಸಾಧ್ಯತೆಯಿದೆ.
12:53 PM (IST) Mar 07
12:37 PM (IST) Mar 07
ಟಿ20 ವಿಶ್ವಕಪ್ 2026ರ ಫೈನಲ್ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದರೆ, ಭಾರತ ತಂಡವು ಮೂರು ಅಪರೂಪದ ವಿಶ್ವ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳಲಿದೆ. ಆ ದಾಖಲೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
12:21 PM (IST) Mar 07
ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದ ಬಾಲೇಂದ್ರ ಶಾ, ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್ಎಸ್ಪಿ) ಪೂರ್ಣ ಬಹುಮತ ಪಡೆದಿದೆ.
11:40 AM (IST) Mar 07
2002ರ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖಲಾಸೆಗೊಳಿಸಿದೆ. ಈ ಮೂಲಕ ಸಿಬಿಐ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಲಾಗಿದೆ.
11:37 AM (IST) Mar 07
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ರಿಯಲ್ಮಿ ಕಂಪನಿ ತನ್ನ ಹೊಸ ಮಾಡೆಲ್ ಅನ್ನು ಪರಿಚಯಿಸಿದೆ. ಈ ಹೊಸ ಸ್ಮಾರ್ಟ್ಫೋನ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಉತ್ತಮ ದೈನಂದಿನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.
11:21 AM (IST) Mar 07
10:58 AM (IST) Mar 07
ಭಾನುವಾರ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಐಸಿಸಿ ಅಂಪೈರ್ಗಳ ಪಟ್ಟಿಯನ್ನು ಪ್ರಕಟಿಸಿದೆ. ಫೈನಲ್ ಪಂದ್ಯದ ಮುನ್ನ ರಿಕ್ಕಿ ಮಾರ್ಟಿನ್ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
10:43 AM (IST) Mar 07
ಇಸ್ರೇಲ್ ರಕ್ಷಣಾ ಪಡೆ (IDF) ಇರಾನ್ನ ಹೆಲಿಕಾಪ್ಟರ್ ಅನ್ನು ಧ್ವಂಸಗೊಳಿಸಿದೆ ಎಂದು ಹೇಳಲಾದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಆದರೆ, ಇದು ನಿಜವಾದ ಹೆಲಿಕಾಪ್ಟರ್ ಅಲ್ಲ, ಬದಲಿಗೆ ನೆಲದ ಮೇಲೆ ಬಿಡಿಸಿದ ನಕಲಿ ಚಿತ್ರ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
08:45 AM (IST) Mar 07
08:33 AM (IST) Mar 07
08:23 AM (IST) Mar 07
ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಸ್ಪಷ್ಟಪಡಿಸಿದ್ದಾರೆ. ಭಾರತವು ಚೀನಾದಂತೆ ತಮ್ಮ ಪ್ರತಿಸ್ಪರ್ಧಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
08:12 AM (IST) Mar 07
ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಅಮೆರಿಕ ಸಜ್ಜಾಗುತ್ತಿದ್ದು, ತನ್ನ ಶಕ್ತಿಶಾಲಿ ಸ್ಟೆಲ್ತ್ ಬಾಂಬರ್ಗಳನ್ನು ಬ್ರಿಟಿಷ್ ನೆಲೆಗಳಿಗೆ ರವಾನಿಸಿದೆ. ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ಇರಾನ್ಗೆ ರಷ್ಯಾ ಗುಪ್ತಚರ ಮಾಹಿತಿ ನೀಡುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
07:54 AM (IST) Mar 07
ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುವ ಸಾಧ್ಯತೆಯಿದ್ದು, ಬಿಹಾರದ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಲ್ವರ ಹೆಸರನ್ನು ಪರಿಗಣಿಸುತ್ತಿದೆ. ಮತ್ತೊಂದೆಡೆ, ಜಮ್ಮು ಕಾಶ್ಮೀರ ಕ್ರಿಕೆಟ್ ಮಂಡಳಿಯ ಹಗರಣದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್ಶೀಟ್ ದಾಖಲಿಸಲು ಕೋರ್ಟ್ ಆದೇಶಿಸಿದೆ.