Published : May 06, 2026, 04:54 AM ISTUpdated : May 06, 2026, 09:55 PM IST

India Latest News Live: ಡಾರ್ಲಿಂಗ್ ಪ್ರಭಾಸ್‌ ಆ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ - ಕೊನೆಗೂ ಗಾಸಿಪ್‌ಗೆ ಬ್ರೇಕ್ ಹಾಕಿದ ಚಿತ್ರತಂಡ!

ಸಾರಾಂಶ

ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‌ಗೆ ಹೊರಡಲು ನಿಂತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್‌ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌ ದೊಡ್ಡ ಅನಾಹುತವೊಂದು ತಪ್ಪಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ಅಲ್ಲಿಂದ ತೆರವುಗೊಳಿಸಲಾಯಿತು.

ಪವರ್‌ ಬ್ಯಾಂಕ್‌ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಓವರ್‌ಹೆಡ್‌ಬಿನ್‌ಗಳಲ್ಲಿ ಹೊಗೆ ಕಾಣಿಸಿಕೊಂಡಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.

ಈ ಬಗ್ಗೆ ಇಂಡಿಗೋ ಪ್ರಕಟಣೆ ಹೊರಡಿಸಿದ್ದು, ‘ಹೈದರಾಬಾದ್‌ನಿಂದ ಚಂಡೀಗಢಕ್ಕೆ ಪ್ರಯಾಣಿಸಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್‌ ಬಳಿಕ ಪ್ರಯಾಣಿಕರ ವೈಯಕ್ತಿಕ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಬೆಂಕಿ ಹತ್ತಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು’ ಎಂದಿದೆ.

09:55 PM (IST) May 06

ಡಾರ್ಲಿಂಗ್ ಪ್ರಭಾಸ್‌ ಆ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ - ಕೊನೆಗೂ ಗಾಸಿಪ್‌ಗೆ ಬ್ರೇಕ್ ಹಾಕಿದ ಚಿತ್ರತಂಡ!

ಡಾರ್ಲಿಂಗ್ ಪ್ರಭಾಸ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ 'ಸ್ಪಿರಿಟ್' ಸಿನಿಮಾ ಬಿಡುಗಡೆ ಬಗ್ಗೆ ಹಬ್ಬಿದ್ದ ಎಲ್ಲಾ ಗಾಸಿಪ್‌ಗಳಿಗೆ ಚಿತ್ರತಂಡ ಫುಲ್ ಸ್ಟಾಪ್ ಇಟ್ಟಿದೆ. ಸಿನಿಮಾ ರಿಲೀಸ್ ತಡವಾಗಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Read Full Story

09:27 PM (IST) May 06

'ಆರ್ಟ್ ಆಫ್ ಲಿವಿಂಗ್‌'ನ 45ನೇ ವಾರ್ಷಿಕೋತ್ಸವ - ಪ್ರಧಾನಿ ಮೋದಿ ಭಾಷಣದ ಮೇಲೆ ವಿಶ್ವದ ಕಣ್ಣು!

ಪ್ರಧಾನಿ ನರೇಂದ್ರ ಮೋದಿಯವರು, ‘ದಿ ಆರ್ಟ್  ಆಫ್ ಲಿವಿಂಗ್’ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಅದರ ಸಂಸ್ಥಾಪಕರಾದ ರವಿಶಂಕರ್ ಗುರೂಜಿಯವರ 70 ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ…

Read Full Story

09:19 PM (IST) May 06

ತಮಿಳುನಾಡಿನಲ್ಲಿ ರಾಜಕೀಯ ಸುನಾಮಿ, ಬದ್ಧವೈರಿಗಳಾದ ಡಿಎಂಕೆ-ಎಐಡಿಎಂಕೆ ನಡುವೆ ಮೈತ್ರಿ?

ತಮಿಳುನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ಬೆಳವಣಿಗೆಯನ್ನು ತಡೆಯಲು, ದಶಕಗಳ ಬದ್ಧವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುವ ಸಾಧ್ಯತೆಗಳಿವೆ. ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಎರಡೂ ಪಕ್ಷಗಳು ಗುಪ್ತ ಮಾತುಕತೆ ನಡೆಸುತ್ತಿದೆ.

Read Full Story

09:16 PM (IST) May 06

ತ್ರಿಶಾ ಸಿಎಂ ಆಗ್ತಾರಾ? ದಳಪತಿ 'ಗೆಳತಿ'ಯ ರಾಜಕೀಯ ಎಂಟ್ರಿ ಫಿಕ್ಸ್? ತ್ರಿಶಾಗೆ ತಿರುಚ್ಚಿ ಟಿಕೆಟ್?

ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ, ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ರು. ಅದೀಗ ನಿಜವಾಗುತ್ತಾ?

Read Full Story

08:52 PM (IST) May 06

ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಪ್‌ನಲ್ಲಿ ನಿಂತಿದ್ದ ಕಮಿಷನರ್; ಹತ್ತಿರ ಸುಳಿದ 40 ಪುರುಷರಿಗೆ ಸಿಕ್ಕಿತು ಶಾಕ್!

ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ವೇಷ ಮರೆಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ 40 ಪುರುಷರಿಂದ ಅಸಭ್ಯ ವರ್ತನೆ ಎದುರಿಸಿದ ಅವರು, ಆರೋಪಿಗಳಿಗೆ ಶಿಕ್ಷೆ ಬದಲು ಕೌನ್ಸೆಲಿಂಗ್ ನೀಡಿದ್ದಾರೆ.

Read Full Story

08:21 PM (IST) May 06

ಗೂಗಲ್‌ನಲ್ಲಿ ಭಾರೀ ಹುಡುಕಾಟ.. 'ದಳಪತಿ' ಧರ್ಮ ಯಾವುದು ಎಂಬ ಕನ್‌ಫ್ಯೂಸನ್‌ನಲ್ಲಿ ವಿಜಯ್ ಫ್ಯಾನ್ಸ್!

ಭಾರತದಲ್ಲಿ ಜಾತಿ, ಧರ್ಮ ಅನ್ನೋದು ಮೈಗಂಟಿಕೊಂಡ ಚರ್ಮದಂತೆ. ನಾವು ಬಿಟ್ಟೇನೆಂದರೂ ಜನ ಇದನ್ನ ಬಿಡೋದಿಲ್ಲ. ಸದ್ಯ ವಿಜಯ್​ವಿಚಾರದಲ್ಲೂ ಅದೇ ನಡೀತಾ ಇದೆ. ಆದ್ರೆ ನಿಜವಾಗ್ಲೂ ವಿಜಯ್​ಗೆ ಮತ ಹಾಕಿ ಗೆಲ್ಲಿಸಿದ್ದು ಯಾರು? ಈ ಸ್ಟೋರಿ ನೋಡಿ..

Read Full Story

08:05 PM (IST) May 06

ಕಾರ್ಪೊರೇಟ್ ಲೋಕಕ್ಕೆ 'ಗುಡ್‌ಬೈ' - 11 ವರ್ಷಗಳ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ 35 ವರ್ಷದ ಯುವಕ!

35 ವರ್ಷದ ಕಾರ್ಪೊರೇಟ್ ಉದ್ಯೋಗಿ ಬಿಸ್ವಜಿತ್ ಮೊಹಂತಿ, ತಮ್ಮ 11 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜೀವನದ ಅರ್ಥ ಮತ್ತು ವೈಯಕ್ತಿಕ ತೃಪ್ತಿಗಾಗಿ ಅಧಿಕ ಸಂಬಳದ ಕೆಲಸವನ್ನು ತೊರೆದ ಅವರ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಬೆಂಬಲಕ್ಕೆ ಕಾರಣವಾಗಿದೆ.
Read Full Story

07:31 PM (IST) May 06

ಸಲ್ಮಾನ್ ಖಾನ್ ಸೂಪರ್‌ಹೀರೋ ಸಿನಿಮಾಗೆ ಹಾಲಿವುಡ್ ಟಚ್ - ವಿಶ್ವದ ನಂ.1 VFX ಕಂಪನಿ ಎಂಟ್ರಿ?

ಸಲ್ಮಾನ್ ಖಾನ್ ಅವರ ಮುಂದಿನ ಸೂಪರ್‌ಹೀರೋ ಸಿನಿಮಾ, ಹಿಂದಿ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳಲ್ಲಿ ಒಂದಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ..

Read Full Story

07:04 PM (IST) May 06

'ಬೇಕಾದರೆ ವಜಾ ಮಾಡಲಿ, ನಾನಂತೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೋದಿಲ್ಲ..' ಹಠ ಸಡಿಲಿಸದ ನಿಂತ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ನಂತರ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಐತಿಹಾಸಿಕ ಬಹುಮತ ಗಳಿಸಿದೆ. ಈ ಸೋಲನ್ನು "ಬಲವಂತದ ಸೋಲು" ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡಲು ನಿರಾಕರಿಸಿ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.

Read Full Story

06:47 PM (IST) May 06

Vijay Trisha - ತೆರೆ ಜೋಡಿಯಿಂದ ವೈರಲ್ ವದಂತಿವರೆಗೆ.. ವಿಜಯ್-ತ್ರಿಶಾ ಸಂಬಂಧದ ಅಸಲಿಯತ್ತೇನು?

ಕಾಲಿವುಡ್‌ನ ಅಚ್ಚುಮೆಚ್ಚಿನ ಜೋಡಿ ವಿಜಯ್ ಮತ್ತು ತ್ರಿಶಾ ಅವರ ಸ್ನೇಹ, ಹಲವು ಯಶಸ್ವಿ ಚಿತ್ರಗಳ ನಂತರವೂ ಮುಂದುವರೆದಿದೆ. ವಿಜಯ್ ರಾಜಕೀಯ ಪ್ರವೇಶದ ನಂತರ, ಅವರ ಸಂಬಂಧದ ಕುರಿತ ವದಂತಿಗಳು ಮತ್ತು ಸಾರ್ವಜನಿಕರ ಕುತೂಹಲ ಮತ್ತೆ ಹೆಚ್ಚಾಗಿದೆ.

Read Full Story

06:34 PM (IST) May 06

ದಳಪತಿ ಪಟ್ಟಾಭಿಷೇಕಕ್ಕೆ ಮ್ಯಾಜಿಕ್ ನಂಬರ್ ಅಡ್ಡಿ - ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್‌ಗೆ ರಾಜ್ಯಪಾಲರ ಶಾಕ್!

ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರೂ, ಬಹುಮತಕ್ಕೆ ಕೆಲ ಶಾಸಕರ ಕೊರತೆಯಿಂದಾಗಿ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಯು ಕಾಂಗ್ರೆಸ್, ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ನಡುವೆ ಹೊಸ ಸಮೀಕರಣ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ.
Read Full Story

06:16 PM (IST) May 06

Raaka - ಅಲ್ಲು ಅರ್ಜುನ್ 'ರಾಕಾ' ಸಿನಿಮಾಕ್ಕೂ 'ಪುಷ್ಪ'ಗೂ ಲಿಂಕ್ ಇದ್ಯಾ? ಇಲ್ಲಿದೆ ಅಸಲಿ ಸತ್ಯ!

ಅಲ್ಲು ಅರ್ಜುನ್ ಅವರ ಮುಂಬರುವ ಸಿನಿಮಾ 'ರಾಕಾ' ಬಗ್ಗೆ ಭಾರೀ ಕುತೂಹಲ ಮೂಡಿದೆ. ಇದಕ್ಕೆ 'ಪುಷ್ಪ: ದಿ ರೈಸ್' ಜೊತೆಗಿನ ನಂಟು ಕಾರಣ ಎನ್ನಲಾಗುತ್ತಿದೆ. ಆದರೆ ಇದು ನಿಜವಾದ ಕಥೆಯ ಲಿಂಕ್ ಅಥವಾ ಕೇವಲ ಒಂದು ಸ್ಮಾರ್ಟ್ ಸ್ಟ್ರಾಟೆಜಿನಾ? ವಿವರ ಇಲ್ಲಿದೆ.

Read Full Story

06:12 PM (IST) May 06

ಇಲ್ಲಿದೆ ಐಪಿಎಲ್‌ ಪ್ಲೇಆಫ್‌ ಲೆಕ್ಕಾಚಾರ - ಆರ್‌ಸಿಬಿಗೆ ಹೇಗಿದೆ ಚಾನ್ಸ್‌? ಉಳಿದ ತಂಡಗಳ ಅವಕಾಶ ಎಷ್ಟಿದೆ?

ಐಪಿಎಲ್ 2026ರ ಸೀಸನ್‌ನಲ್ಲಿ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಪ್ಲೇಆಫ್ ರೇಸ್‌ಗೆ ಮರಳಿದೆ. ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ಜೊತೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

Read Full Story

05:56 PM (IST) May 06

ಬಂಗಾಳದಲ್ಲಿ ಬಿಜೆಪಿ ಗೆಲುವು - ಕಾಂಗ್ರೆಸ್​ ಕಾರ್ಯಕರ್ತರ ಭರ್ಜರಿ ಸಂಭ್ರಮ- ಪಾರ್ಟಿ ಆಫೀಸ್​ ಓಪನ್​

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋತು ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವನ್ನು ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು, ಟಿಎಂಸಿ ವಶಪಡಿಸಿಕೊಂಡಿದ್ದ ತಮ್ಮ ಪಕ್ಷದ ಕಚೇರಿಗಳ ಬೀಗ ಒಡೆದು ಮರಳಿ ವಶಕ್ಕೆ ಪಡೆಯುತ್ತಿದ್ದಾರೆ.
Read Full Story

05:42 PM (IST) May 06

ನರಕದಿಂದ ಬಂದ ಕುಟುಂಬದ ಜೊತೆ ಪಾರ್ಟಿ - ಬೆಚ್ಚಿಬೀಳಿಸೋ 'ಈವಿಲ್ ಡೆಡ್ ಬರ್ನ್' ಟ್ರೇಲರ್ ರಿಲೀಸ್

ಬಹುನಿರೀಕ್ಷಿತ 'ಈವಿಲ್ ಡೆಡ್ ಬರ್ನ್' ಸಿನಿಮಾದ ಟ್ರೇಲರ್ ಕೊನೆಗೂ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಮತ್ತೆ ಭಯಾನಕ ಜಗತ್ತಿಗೆ ಕರೆದೊಯ್ದಿದೆ. ಖ್ಯಾತ ಹಾರರ್ ಸರಣಿಯ ಆರನೇ ಸಿನಿಮಾ ಇದಾಗಿದ್ದು, ಸೆಬಾಸ್ಟಿಯನ್ ವಾನಿಸೆಕ್ ಇದರ ನಿರ್ದೇಶನ ಮಾಡಿದ್ದಾರೆ.

Read Full Story

05:22 PM (IST) May 06

Viral Video - ಪಾಪರಾಜಿಗಳ ಮೇಲೆ ರಣಬೀರ್ ಗರಂ! 'ಸ್ವಲ್ಪ ದೂರ ನಿಲ್ಲಿ' ಅಂತ ಕ್ಲಾಸ್ ತಗೊಂಡಿದ್ದು ಯಾಕೆ?

ಮುಂಬೈನಲ್ಲಿ ಫ್ಯಾಮಿಲಿ ಜೊತೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯನ್ನು ಪಾಪರಾಜಿಗಳು ಸುತ್ತುವರಿದರು. ಇದರಿಂದ ತಾಳ್ಮೆ ಕಳೆದುಕೊಂಡ ರಣಬೀರ್, ಫೋಟೋಗ್ರಾಫರ್‌ಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

Read Full Story

05:13 PM (IST) May 06

ತಮಿಳುನಾಡು ಸಿಎಂ ಆಗಲಿರುವ ವಿಜಯ್‌ 10ನೇ ಕ್ಲಾಸ್‌ ಮಾರ್ಕ್ಸ್‌ ಕಾರ್ಡ್‌ ವೈರಲ್‌, ಗಣಿತದಲ್ಲಿ ವೀಕು, ಈ ವಿಷಯದಲ್ಲಿ ಟಾಪ್‌

ನಟ-ರಾಜಕಾರಣಿ ಜೋಸೆಫ್ ವಿಜಯ್ ಚಂದ್ರಶೇಖರ್ ಶಾಲಾ ದಿನಗಳಲ್ಲಿ ಸರಾಸರಿ ವಿದ್ಯಾರ್ಥಿಯಾಗಿದ್ದರು, ಅವರ 10ನೇ ತರಗತಿಯ ಅಂಕಪಟ್ಟಿಯಿಂದ ಇದು ತಿಳಿದುಬಂದಿದೆ. ಗಣಿತದಂತಹ ವಿಷಯಗಳಲ್ಲಿ ಕಡಿಮೆ ಅಂಕ ಗಳಿಸಿದ್ದರೂ, ಅವರು ರಾಜಕೀಯದಲ್ಲಿ ಅದ್ಭುತ ಯಶಸ್ಸು ಸಾಧಿಸಿ, ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
Read Full Story

05:06 PM (IST) May 06

ಜಾರ್ಜ್‌ಕುಟ್ಟಿಯ 'ದೃಶ್ಯಂ 3' ಫಸ್ಟ್ ಶೋ ಕೇರಳದಲ್ಲಲ್ಲ, ಹಾಗಾದ್ರೆ ಎಲ್ಲಿ? ಇಲ್ಲಿದೆ ಅಸಲಿ ಮಾಹಿತಿ

ಮಲಯಾಳಂ ಸಿನಿಮಾರಂಗದ ಸಾರ್ವಕಾಲಿಕ ಹಿಟ್ ಫ್ರಾಂಚೈಸಿಗಳಲ್ಲಿ 'ದೃಶ್ಯಂ' ಕೂಡ ಒಂದು. ಈಗ 'ದೃಶ್ಯಂ 3' ಸಿನಿಮಾ ಮೇ 21ಕ್ಕೆ ಥಿಯೇಟರ್‌ಗೆ ಬರ್ತಿದೆ. ಆದ್ರೆ, ಒಂದು ಹೊಸ ವರದಿ ಪ್ರಕಾರ, ಸಿನಿಮಾದ ಮೊದಲ ಶೋ ಕೇರಳದಲ್ಲಿ ನಡೆಯಲ್ಲ.

Read Full Story

04:52 PM (IST) May 06

Jana Nayagan - ತಮಿಳುನಾಡಲ್ಲಿ ವಿಜಯ್ ಹವಾ, ಈಗ 'ಜನ ನಾಯಗನ್' ಸರದಿ! ಸಿನಿಮಾ ರಿಲೀಸ್‌ಗೆ ಸಿದ್ಧತೆ?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸೀಟುಗಳನ್ನು ಗೆದ್ದು ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಈ ರಾಜಕೀಯ ಸಂಭ್ರಮದ ನಡುವೆಯೇ, ಸೆನ್ಸಾರ್ ವಿವಾದದಿಂದಾಗಿ ನಿಂತುಹೋಗಿದ್ದ ಅವರ 'ಜನ ನಾಯಗನ್' ಸಿನಿಮಾವನ್ನು ಬಿಡುಗಡೆ ಮಾಡಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.

Read Full Story

04:47 PM (IST) May 06

John Arokiasamy - ಸಿಎಂ ಪಟ್ಟಕ್ಕೆ ದಳಪತಿ ವಿಜಯ್; TVK ಐತಿಹಾಸಿಕ ಗೆಲುವಿನ ಹಿಂದಿನ 'ಚಾಣಕ್ಯ' ಇವರೇ ನೋಡಿ!

ಇಂದು ಗೂಗಲ್‌ನಲ್ಲಿ ವಿಜಯ್ ಹೆಸರಿಗಿಂತ ಹೆಚ್ಚಾಗಿ ಜಾನ್ ಆರೋಕಿಯಾಸಾಮಿ ಬಗ್ಗೆ ಜನ ಹುಡುಕಾಡುತ್ತಿದ್ದಾರೆ. ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಒದ್ದೋಡಿಸುತ್ತಿದ್ದ ದಳಪತಿಯನ್ನು, ರಾಜಕೀಯದಲ್ಲಿ ಒಬ್ಬ ರಿಯಲ್ ಹೀರೊ ಆಗಿ ರೂಪಿಸಿದ ಶ್ರೇಯ ಈ 'ಪೊಲಿಟಿಕಲ್ ಮಾಸ್ಟರ್‌ಮೈಂಡ್'ಗೆ ಸಲ್ಲುತ್ತದೆ!

Read Full Story

04:36 PM (IST) May 06

ಸಿನಿಮಾದಲ್ಲೇ ಇತ್ತು 'ಸಿಎಂ' ಸುಳಿವು! ವಿಜಯ್ ಗೆಲುವಿನ ಬೆನ್ನಲ್ಲೇ ವೈರಲ್ ಆಯ್ತು 'GOAT' ಚಿತ್ರದ ಆ ನಂಬರ್ ಪ್ಲೇಟ್ ದೃಶ್ಯ!

ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ರಾಜಕೀಯದಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರ 'GOAT' ಸಿನಿಮಾದ ಕಾರಿನ ನಂಬರ್ ಪ್ಲೇಟ್ ಮತ್ತು ಸಹ-ನಟರು, ಜ್ಯೋತಿಷಿಗಳ ಭವಿಷ್ಯವಾಣಿಗಳು ಈ ಗೆಲುವನ್ನು ಮೊದಲೇ ಊಹಿಸಿದ್ದವು ಎಂಬ ಚರ್ಚೆ ಈಗ ವ್ಯಾಪಕವಾಗಿದೆ.

Read Full Story

04:30 PM (IST) May 06

Met Gala - 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ - ಕ್ಯೂಟ್​ ಫೋಟೋಸ್​ ಇಲ್ಲಿವೆ

ಮೆಟ್ ಗಾಲಾ ಕಾರ್ಯಕ್ರಮದಲ್ಲಿ, ಇಶಾ ಅಂಬಾನಿ ಗೌರವ್ ಗುಪ್ತಾ ವಿನ್ಯಾಸದ ಸೀರೆಯೊಂದಿಗೆ ಕಂಗೊಳಿಸಿದರು.  ಆಭರಣಗಳು ಕೇವಲ ಫ್ಯಾಷನ್ ಆಗಿರದೆ, ಹೈದರಾಬಾದ್ ನಿಜಾಮ ಮತ್ತು ಮೊಘಲ್ ಚಕ್ರವರ್ತಿಗಳಿಗೆ ಸೇರಿದ ಐತಿಹಾಸಿಕ ಮಹತ್ವ ಹೊಂದಿದ್ದವು, ಈ ಮೂಲಕ ಭಾರತದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದರು.

Read Full Story

03:55 PM (IST) May 06

ಸೋತರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಬಹುದು! ಏನು ಹೇಳತ್ತೆ ನಮ್ಮ ಕಾನೂನು? ಇಲ್ಲಿದೆ ಮಾಹಿತಿ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ಇದು ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಈ ಪರಿಸ್ಥಿತಿಯಲ್ಲಿ ಸಂವಿಧಾನದ ನಿಯಮಗಳು ಮತ್ತು ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

03:50 PM (IST) May 06

'ತನ್ನ ಹಣವನ್ನೇ ಸರಿಯಾಗಿ ನಿಭಾಯಿಸದ ವಿಜಯ್‌, ತಮಿಳುನಾಡಿನ ಹಣಕಾಸು ಹೇಗೆ ನಿಭಾಯಿಸ್ತಾರೋ?' ಟ್ರೋಲ್‌ ಆದ ದಳಪತಿ ಇನ್ವೆಸ್ಟ್‌ಮೆಂಟ್‌!

ನಟ ಹಾಗೂ ರಾಜಕಾರಣಿ ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂ. ಆಗಿದ್ದು, ಇದರಲ್ಲಿ 313 ಕೋಟಿ ರೂ.ಗಳನ್ನು ಬ್ಯಾಂಕ್ ಠೇವಣಿಗಳಲ್ಲೇ ಇರಿಸಿದ್ದಾರೆ. ಮ್ಯೂಚುವಲ್ ಫಂಡ್ ಅಥವಾ ಷೇರುಗಳ ಬದಲು ಎಫ್‌ಡಿ ಮೇಲೆ ನಂಬಿಕೆ ಇಟ್ಟಿರುವ ಅವರ ಈ ಹೂಡಿಕೆ ಶೈಲಿಯು ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

03:37 PM (IST) May 06

Salman Khan - 2900 ಕೋಟಿ ಆಸ್ತಿ ಒಡೆಯ ಸಲ್ಮಾನ್ ಖಾನ್; ಬಾಲಿವುಡ್ 'ಬ್ಯಾಡ್‌ ಬಾಯ್' ಸಾಮ್ರಾಜ್ಯದ ಅಸಲಿ ಕಥೆ ಇದು!

ಸಲ್ಮಾನ್ ಖಾನ್ ಪ್ರತಿ ಸಿನಿಮಾಗೆ ಅಂದಾಜು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಅವರು 'ಸಲ್ಮಾನ್ ಖಾನ್ ಫಿಲ್ಮ್ಸ್' ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. 'ಚಿಲ್ಲರ್ ಪಾರ್ಟಿ', 'ಡಾ. ಕ್ಯಾಬಿ' ಮತ್ತು 'ರಾಧೆ' ಅಂತಹ ಸಿನಿಮಾಗಳು ಇವರಿಗೆ ದೊಡ್ಡ ಲಾಭ ತಂದುಕೊಟ್ಟಿವೆ.

Read Full Story

01:11 PM (IST) May 06

ದಳ'ಪತಿ' ವಿನ್​ ಆಗುತ್ತಲೇ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ- ಗೆಲುವಿಗೆ ರಿಯಾಕ್ಷನ್​ ಏನು

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಲಿರುವ ದಳಪತಿ ವಿಜಯ್ ಅವರ ರಾಜಕೀಯ ಗೆಲುವಿನ ನಡುವೆಯೇ, ಅವರ ಪತ್ನಿ ಸಂಗೀತಾ ಜೊತೆಗಿನ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದಿದೆ. ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ಜಂಟಿ ಅರ್ಜಿ ಸಲ್ಲಿಸಿದ್ದು, ಸದ್ಯ ಲಂಡನ್‌ನಲ್ಲಿರುವ ಸಂಗೀತಾ ಅವರ ಅನುಪಸ್ಥಿತಿ ಚರ್ಚೆಗೆ ಗ್ರಾಸವಾಗಿದೆ.
Read Full Story

12:31 PM (IST) May 06

ಮುಸ್ಲಿಂ ಶ್ರೀಮಂತರೇ ಈ ಟೀಚರ್​ ಟಾರ್ಗೆಟ್​ - 9ನೇ ಮದ್ವೆಗೆ ರೆಡಿಯಾಗಿ ಸಿಕ್ಕಿಬಿದ್ದ ಸುಂದ್ರಿಯ ರೋಚಕ ಸ್ಟೋರಿ

ನಾಗ್ಪುರದಲ್ಲಿ ಶಿಕ್ಷಕಿಯೊಬ್ಬಳು 8 ಮಂದಿಯನ್ನು ಮದುವೆಯಾಗಿ, ಲಕ್ಷಾಂತರ ರೂಪಾಯಿ ವಂಚಿಸಿ 9ನೇ ಮದುವೆಗೆ ಸಿದ್ಧಳಾಗಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈವಾಹಿಕ ಜಾಲತಾಣಗಳ ಮೂಲಕ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು, ತನ್ನ ಕಣ್ಣೀರಿನ ಕಥೆ ಹೇಳಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು.
Read Full Story

11:40 AM (IST) May 06

ದಳಪತಿ ವಿಜಯ್-ತ್ರಿಶಾ ಕೃಷ್ಣನ್ ನಡುವಿನ ವಯಸ್ಸಿನ ಅಂತರ ಎಷ್ಟು? ಈಗ್ಯಾಕೆ ಈ ಮ್ಯಾಟರ್ ಸುತ್ತಾಡ್ತಿದೆ?

2004ರಲ್ಲಿ ಬಂದ 'ಗಿಲ್ಲಿ' ಸಿನಿಮಾ ನೆನಪಿದೆಯೇ? ಆ ಚಿತ್ರದ 'ಅಪ್ಪಾಡಿ ಪೋಡು' ಹಾಡಿಗೆ ಇಡೀ ಸೌತ್ ಇಂಡಿಯಾ ಸ್ಟೆಪ್ ಹಾಕಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಕ್ರೇಜ್ 'ತಿರುಪಾಚಿ', 'ಆದಿ' ಮತ್ತು 'ಕುರುವಿ' ಸಿನಿಮಾಗಳ ಮೂಲಕ ಮುಂದುವರಿಯಿತು. ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ಮತ್ತೆ ಒಂದಾದ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.

Read Full Story

11:09 AM (IST) May 06

ಶಾಸಕರ ಕೊರತೆ, ಅಧಿಕಾರಕ್ಕೆ ವಿಜಯ್‌ ಮಹಾ ಪ್ಲ್ಯಾನ್‌! MGR ಹಾದಿಯಲ್ಲಿ ದಳಪತಿ? 108 ಅಲ್ಲ 107!

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ದಳಪತಿ ವಿಜಯ್ ಅವರ ಟಿವಿಕ್ ಪಕ್ಷಕ್ಕೆ ಸರ್ಕಾರ ರಚಿಸಲು ಇನ್ನೂ 11 ಶಾಸಕರ ಬೆಂಬಲ ಬೇಕಾಗಿದೆ. ಎಐಎಡಿಎಂಕೆ ಮೈತ್ರಿಯಿಂದ ಹಿಡಿದು ವಿಶ್ವಾಸಮತ ಯಾಚನೆವರೆಗಿನ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.
Read Full Story

08:17 AM (IST) May 06

ಅಮೆರಿಕದ ಹಾರುವ ಗ್ಯಾಸ್‌ ಸ್ಟೇಷನ್‌ ನಾಪತ್ತೆ ; ಎಮರ್ಜೆನ್ಸಿ ಸಂದೇಶ ರವಾನಿಸಿ ಕಾಣೆ

ಪರ್ಷಿಯನ್‌ ಕೊಲ್ಲಿಯ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಸೇನಾ ಇಂಧನ ಪೂರೈಕೆ ವಿಮಾನ ಬೋಯಿಂಗ್‌ ಕೆಸಿ- 135 ಸ್ಟ್ರಾಟೋಟ್ಯಾಂಕರ್ ನಾಪತ್ತೆಯಾಗಿದೆ. ಇರಾನ್‌ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುತ್ತಿದ್ದ ಈ ವಿಮಾನ, ಕಣ್ಮರೆಯಾಗುವ ಮುನ್ನ ತುರ್ತು ಸಂದೇಶ ರವಾನಿಸಿತ್ತು

Read Full Story

07:41 AM (IST) May 06

ಕರ್ನಾಟಕ PU ಪಠ್ಯದ ಭಾಗವಾದ ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ ಬಾಬರ್‌, ಇದೀಗ ಶಾಸಕ!

ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತರಾದ ಬಾಬರ್ ಅಲಿ, ತಮ್ಮ 9ನೇ ವಯಸ್ಸಿನಲ್ಲಿಯೇ ಅನಾಥ ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದರು. ಇದೀಗ ಪಶ್ಚಿಮ ಬಂಗಾಳದ ಜಲಂಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಇವರ 'ಆನಂದ್ ಶಿಕ್ಷಾ ನಿಕೇತನ್' ಶಾಲೆಯು 2000ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿದೆ.
Read Full Story

07:27 AM (IST) May 06

ಫ್ಯಾಷನ್‌ ಶೋನಲ್ಲಿ ₹142 ಕೋಟಿ ನೆಕ್ಲೇಸ್‌ ಧರಿಸಿದ ಉದ್ಯಮಿ ಸುಧಾ ರೆಡ್ಡಿ!

ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

Read Full Story

06:38 AM (IST) May 06

4 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಶಾಸಕರದ್ದೇ ಭಾರೀ ಬಲ ಅಚ್ಚರಿ; ಅಭ್ಯರ್ಥಿಗಳ ಗೆಲುವಿನ ದರ ಶೇ.80

ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ, ಕಾಂಗ್ರೆಸ್‌ನಿಂದ ಗೆದ್ದ ಹೆಚ್ಚಿನ ಅಭ್ಯರ್ಥಿಗಳು ಮುಸ್ಲಿಮರಾಗಿದ್ದಾರೆ, ವಿಶೇಷವಾಗಿ ಅಸ್ಸಾಂನಲ್ಲಿ 19 ವಿಜೇತರಲ್ಲಿ 18 ಮಂದಿ ಮುಸ್ಲಿಮರಾಗಿದ್ದಾರೆ. ಇದಲ್ಲದೆ, ಕೇರಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದ್ದು, ಬಂಗಾಳದ ಮುಸ್ಲಿಂ ಬಾಹುಳ್ಯದ ಜಿಲ್ಲೆಗಳಲ್ಲಿಯೂ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
Read Full Story

05:03 AM (IST) May 06

West Bengal - ಸಿಎಂ ಸ್ಥಾನ ಬಿಡಲ್ಲ ಎಂದು ಮಮತಾ ಬ್ಯಾನರ್ಜಿ ಹಠ; ಮುಂದೇನು ಮಾಡಬಹುದು?

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಈ ಫಲಿತಾಂಶವನ್ನು 'ಜನಾದೇಶವಲ್ಲ, ಪಿತೂರಿ' ಎಂದು ಕರೆದಿರುವ ಅವರು, ಬೀದಿಗಿಳಿದು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಸಂವಿಧಾನದ ಪ್ರಕಾರ, ಅವರ ಅವಧಿ ಮುಗಿದ ನಂತರ ರಾಜ್ಯಪಾಲರು ಅವರನ್ನು ವಜಾಗೊಳಿಸಬಹುದು.
Read Full Story

More Trending News