LIVE NOW
Published : Jun 04, 2026, 06:51 AM ISTUpdated : Jun 04, 2026, 09:07 AM IST

India Latest News Live: ಸೂರ್ಯಕುಮಾರ್ ಯಾದವ್ ಭಾರತ ಟಿ20 ನಾಯಕತ್ವದಿಂದ ಔಟ್! ಕ್ಯಾಪ್ಟನ್‌ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಜತೆ ಮತ್ತೊಬ್ಬ ಎಂಟ್ರಿ, ಪಾಟೀದಾರ್‌ಗಿಲ್ಲ ಸ್ಥಾನ!

ಸಾರಾಂಶ

 

ನವದೆಹಲಿ: ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸುದ್ದು ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ 3 ವಕ್ತಾರರನ್ನು ನೇಮಕ ಮಾಡಿದೆ. ತನಿಖಾ ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ, ರಾಜಕೀಯ ಸಂಶೋಧಕಿ ಮತ್ತು ಚಲನಚಿತ್ರ ನಿರ್ಮಾಪಕಿ ವಿಜೇತಾ ದಹಿಯಾ ಮತ್ತು ಮಾಜಿ ನಿರ್ವಹಣಾ ಸಲಹೆಗಾರ ಅಶುತೋಷ್ ರಾಂಕಾ ಅವರೂ ವಕ್ತಾರರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಂಜೆ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ನೀಟ್‌, ಸಿಬಿಎಸ್ಇ ಪರೀಕ್ಷೆ ವೈಫಲ್ಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

09:07 AM (IST) Jun 04

ಸೂರ್ಯಕುಮಾರ್ ಯಾದವ್ ಭಾರತ ಟಿ20 ನಾಯಕತ್ವದಿಂದ ಔಟ್! ಕ್ಯಾಪ್ಟನ್‌ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಜತೆ ಮತ್ತೊಬ್ಬ ಎಂಟ್ರಿ, ಪಾಟೀದಾರ್‌ಗಿಲ್ಲ ಸ್ಥಾನ!

ಮುಲ್ಲಾನ್‌ಪುರ: 2026ರ ಐಪಿಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹರಿದಿದೆ. ಹೀಗಿರುವಾಗಲೇ ಭಾರತ ಟಿ20 ನಾಯಕತ್ವದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತಾದ ಹೊಸ ಅಪ್ಡೇಟ್ಸ್‌ ಇಲ್ಲಿದೆ ನೋಡಿ.

Read Full Story

07:55 AM (IST) Jun 04

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾರತ ಮೂಲದ 4 ಆಟಗಾರರು..! 20 ವರ್ಷ ಬಳಿಕ ಭಾರತ ಮೂಲದ ಆಟಗಾರರು ಸ್ಪರ್ಧೆ

ಈ ಬಾರಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಭಾರತ ತಂಡವಿಲ್ಲದಿದ್ದರೂ, ಭಾರತೀಯ ಮೂಲದ ನಾಲ್ವರು ಆಟಗಾರರು ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸಲಿದ್ದಾರೆ. ಸರ್ಪ್ರೀತ್‌ ಸಿಂಗ್, ತಹ್ಸಿನ್‌ ಮೊಹಮ್ಮದ್, ನಿಶಾನ್‌ ವೇಲುಪಿಳ್ಳೈ ಮತ್ತು ಸ್ಯಾಮುಯೆಲ್‌ ಮುತ್ತುಸ್ವಾಮಿ ತಮ್ಮ ಆಟದ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಹೆಗ್ಗುರುತು ಮೂಡಿಸಲಿದ್ದಾರೆ.

Read Full Story

07:33 AM (IST) Jun 04

French Open 2026 - ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು

ಫ್ರೆಂಚ್ ಓಪನ್ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು ಕಂಡಿದ್ದಾರೆ. ಗೆಲುವಿನ ಸನಿಹದಲ್ಲಿದ್ದ ಸಬಲೆಂಕಾ, ರಷ್ಯಾದ ಡಿಯಾನ ಶ್ನೈಡೆರ್‌ ವಿರುದ್ಧ 3-6, 7-5, 6-0 ಸೆಟ್‌ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು. ಈ ಮೂಲಕ ಶ್ನೈಡೆರ್‌ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
Read Full Story

More Trending News