Published : Jun 04, 2026, 06:51 AM ISTUpdated : Jun 04, 2026, 11:06 PM IST

India Latest News Live: ಗಂಡ ನಿಧನರಾದ ಸುದ್ದಿ ತಿಳಿದರೂ ನಟಿಸುತ್ತಲೇ ಇದ್ದ ಆ ನಟಿಯನ್ನು ನೋಡಿ ನಿರ್ದೇಶಕರೇ ತಬ್ಬಿಬ್ಬು!

ಸಾರಾಂಶ

 

ನವದೆಹಲಿ: ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸುದ್ದು ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ 3 ವಕ್ತಾರರನ್ನು ನೇಮಕ ಮಾಡಿದೆ. ತನಿಖಾ ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ, ರಾಜಕೀಯ ಸಂಶೋಧಕಿ ಮತ್ತು ಚಲನಚಿತ್ರ ನಿರ್ಮಾಪಕಿ ವಿಜೇತಾ ದಹಿಯಾ ಮತ್ತು ಮಾಜಿ ನಿರ್ವಹಣಾ ಸಲಹೆಗಾರ ಅಶುತೋಷ್ ರಾಂಕಾ ಅವರೂ ವಕ್ತಾರರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಂಜೆ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ನೀಟ್‌, ಸಿಬಿಎಸ್ಇ ಪರೀಕ್ಷೆ ವೈಫಲ್ಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

11:06 PM (IST) Jun 04

ಗಂಡ ನಿಧನರಾದ ಸುದ್ದಿ ತಿಳಿದರೂ ನಟಿಸುತ್ತಲೇ ಇದ್ದ ಆ ನಟಿಯನ್ನು ನೋಡಿ ನಿರ್ದೇಶಕರೇ ತಬ್ಬಿಬ್ಬು!

ಶೂಟಿಂಗ್ ಜೋರಾಗಿ ನಡೆಯುತ್ತಿದ್ದಾಗ ನಿರ್ದೇಶಕ ಪಿ. ವಾಸು ಅವರಿಗೆ ಒಂದು ಆಘಾತಕಾರಿ ವಿಷಯ ತಿಳಿಯಿತು. ಅದೇನೆಂದರೆ, ಮನೋರಮಾ ಅವರ ಪತಿ ಅದೇ ದಿನ ಮಧ್ಯಾಹ್ನ ನಿಧನರಾಗಿದ್ದರು! ಈ ಸುದ್ದಿ ತಿಳಿದ ಪಿ. ವಾಸು ಅವರು ದಂಗಾಗಿ ಹೋದರು.

Read Full Story

08:54 PM (IST) Jun 04

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ - ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'!

ಜಾನ್ಸನ್ & ಜಾನ್ಸನ್ ಸಂಸ್ಥೆಯು 'ಏಟ್ರಿಯಲ್ ಫಿಬ್ರಿಲೇಷನ್' ಎಂಬ ಹೃದಯ ಸಂಬಂಧಿ ಕಾಯಿಲೆಗೆ 'ವೇರಿಪಲ್ಸ್ ಪ್ಲಾಟ್‌ಫಾರ್ಮ್' ಎಂಬ ಅತ್ಯಾಧುನಿಕ ಚಿಕಿತ್ಸಾ ತಂತ್ರಜ್ಞಾನವನ್ನು ಭಾರತದಲ್ಲಿ ಪರಿಚಯಿಸಿದೆ. PFA  ಮತ್ತು 3D ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸುವ ಈ ವ್ಯವಸ್ಥೆಯು, ಹೃದಯ ರೋಗಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ನಿಖರವಾದ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದೆ.

Read Full Story

08:35 PM (IST) Jun 04

ಇನ್ಮುಂದೆ ಪೆಟ್ರೋಲ್ ಅಷ್ಟೇ ಅಲ್ಲ, ಎಥೆನಾಲ್‌ನಲ್ಲೂ ಓಡಲಿವೆ ಸ್ಪ್ಲೆಂಡರ್, ಹೆಚ್‌ಎಫ್ ಡಿಲಕ್ಸ್‌ ಬೈಕ್‌

ಹೀರೋ ಮೊಟೊಕಾರ್ಪ್, 'ಸ್ಪ್ಲೆಂಡರ್ ಪ್ಲಸ್' ಮತ್ತು 'ಹೆಚ್‌ಎಫ್ ಡೀಲಕ್ಸ್' ಬೈಕ್‌ಗಳ ಫ್ಲೆಕ್ಸ್ ಫ್ಯುಯೆಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಚಲಿಸುವ ಈ ಬೈಕ್‌ಗಳು ಇಂಧನ ವೆಚ್ಚವನ್ನು ಕಡಿಮೆ ಮಾಡಲಿದೆ.

Read Full Story

08:34 PM (IST) Jun 04

ಇಂಡಿಯಾ ಒಕ್ಕೂಟದಲ್ಲಿ ಮಹಾ ಬಿರುಕು - ಜೂನ್ 8 ರ ದೆಹಲಿ ಸಭೆ ಬಹಿಷ್ಕರಿಸಲು ಡಿಎಂಕೆ ನಿರ್ಧಾರ!

'ಇಂಡಿಯಾ' ಮೈತ್ರಿಕೂಟದ ಸಭೆಯನ್ನು ಡಿಎಂಕೆ ಬಹಿಷ್ಕರಿಸಿದೆ. ತಮಿಳುನಾಡು ಚುನಾವಣಾ ಸೋಲಿನ ನಂತರ ಕಾಂಗ್ರೆಸ್ 11 ವರ್ಷಗಳ ಮೈತ್ರಿ ಮುರಿದುಕೊಂಡಿದ್ದರಿಂದ, ಕಾರ್ಯಕರ್ತರ ಭಾವನೆಗೆ ಗೌರವ ನೀಡಿ ಡಿಎಂಕೆ ಈ ನಿರ್ಧಾರ ತೆಗೆದುಕೊಂಡಿದೆ. ಆದರೂ, ನೀಟ್, ಸಿಎಎ ಮುಂತಾದ ರಾಷ್ಟ್ರೀಯ ವಿಷಯಗಳ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಪಕ್ಷ ಸ್ಪಷ್ಟಪಡಿಸಿದೆ.
Read Full Story

08:16 PM (IST) Jun 04

ಪೆದ್ದಿ ಪ್ರಚಾರದಲ್ಲಿ ಜಾನ್ವಿ ಕಪೂರ್ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ - ಏನಿದರ ವಿಶೇಷತೆ?

ನಟಿ ಜಾನ್ವಿ ಕಪೂರ್ ತಮ್ಮ 'ಪೆದ್ದಿ' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಚಾಕೊಲೇಟ್ ಕಂದು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಈ ಸೀರೆಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

08:02 PM (IST) Jun 04

ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹೀರೋ; ಹೀಗೂ ಇರಬಹುದಾ ಸ್ಟಾರ್ ಮಗ?

ದಳಪತಿ ವಿಜಯ್ ನಟನೆಯಲ್ಲಿ ಸಾಮ್ರಾಜ್ಯ ಕಟ್ಟಿದರೆ, ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಕ್ಷಣಗಣನೆ ಶುರುವಾಗಿದೆ!

Read Full Story

07:57 PM (IST) Jun 04

ದಾಖಲೆಗಳ ದೋಷ - 17 ವರ್ಷಗಳ ಬಳಿಕ ಡೆನ್ಮಾರ್ಕ್‌ನಿಂದ ಭಾರತಕ್ಕೆ ಹಾರಿದ್ದ SAS ವಿಮಾನ ಅರ್ಧದಾರಿಯಲ್ಲೇ ವಾಪಸ್!

17 ವರ್ಷಗಳ ನಂತರ ಭಾರತಕ್ಕೆ ಮರಳಲು ಯತ್ನಿಸಿದ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್‌ನ ಮೊದಲ ವಿಮಾನ, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಅರ್ಧದಾರಿಯಲ್ಲೇ ಕೋಪನ್‌ಹ್ಯಾಗನ್‌ಗೆ ಮರಳಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದು, ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
Read Full Story

07:52 PM (IST) Jun 04

ಹೆಚ್ಚಾಗಲಿದೆ ಚಿಕನ್‌,ಮೊಟ್ಟೆ ರೇಟ್‌ - ತಕ್ಷಣದಿಂದಲೇ ಕೋಳಿ ಉತ್ಪಾದನೆ ಕಡಿಮೆ ಮಾಡಿ ಎಂದ ಪೌಲ್ಟ್ರಿ ಅಸೋಸಿಯೇಷನ್‌, ಕಾರಣವೇನು?

ಗಗನಕ್ಕೇರುತ್ತಿರುವ ಕೋಳಿ ಆಹಾರದ ವೆಚ್ಚ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಕುಸಿತದ ನಿರೀಕ್ಷೆಯಿಂದ, ಭಾರತೀಯ ಕೋಳಿ ಉದ್ಯಮವು ಉತ್ಪಾದನೆಯನ್ನು ಶೇ. 25 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಸೋಯಾಬೀನ್ ಬೆಲೆ ಏರಿಕೆಗೆ ಕೃತಕ ಅಭಾವವೇ ಕಾರಣ ಎಂದು ಉದ್ಯಮ ಆರೋಪಿಸಿದೆ.

Read Full Story

07:30 PM (IST) Jun 04

Peddi Movie Review - ರಾಮ್ ಚರಣ್ ಅದ್ಭುತ ನಟನೆ, ಶಿವಣ್ಣ ಪವರ್‌ಫುಲ್ ಪಾತ್ರ - ಭಾವನಾತ್ಮಕ ಕಥೆ ಗೆದ್ದಿದೆಯೇ?

ರಾಮ್ ಚರಣ್, ಶಿವಣ್ಣ ಮತ್ತು ಜಾನ್ವಿ ಕಪೂರ್ ಜೋಡಿಯಾಗಿ ನಟಿಸಿರುವ 'ಪೆದ್ದಿ' ಚಿತ್ರವನ್ನು ಬುಚ್ಚಿಬಾಬು ಸಾನಾ ನಿರ್ದೇಶಿಸಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಹೇಗಿದೆ? ಸಂಪೂರ್ಣ ವಿಮರ್ಶೆ ಇಲ್ಲಿದೆ.

Read Full Story

07:12 PM (IST) Jun 04

ರಾಜೇಶ್‌ ಎಕ್ಸ್‌ಪೋರ್ಟ್‌ ಆದಾಯ ವಂಚನೆ ಹಗರಣ - ಎಲ್‌ಐಸಿ, ಕೆನರಾ ಬ್ಯಾಂಕ್‌ ಹಣ ಗೋತಾ

ಚಿನ್ನ ಸಂಸ್ಕರಣಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ವಿರುದ್ಧ ಸೆಬಿ ಕಠಿಣ ಕ್ರಮ ಕೈಗೊಂಡಿದ್ದು, ಕಂಪನಿಯು ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಇದರಿಂದ ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಎಲ್‌ಐಸಿಗೆ ₹290 ಕೋಟಿ ನಷ್ಟವಾಗಿದೆ.

Read Full Story

06:50 PM (IST) Jun 04

Rajesh Exports Scam - 15.15 ಲಕ್ಷ ಕೋಟಿ ರೂಪಾಯಿ ಆದಾಯವೇ ನಕಲಿ, ಬೆಂಗಳೂರು ಮೂಲದ ಕಂಪನಿಯ ಭಾರೀ ಹಗರಣ

ಬೆಂಗಳೂರು ಮೂಲದ ಚಿನ್ನದ ದೈತ್ಯ 'ರಾಜೇಶ್ ಎಕ್ಸ್‌ಪೋರ್ಟ್ಸ್' ₹15.15 ಲಕ್ಷ ಕೋಟಿ ಮೊತ್ತದ ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ 'ಸೆಬಿ' ತನಿಖೆಗೆ ಒಳಗಾಗಿದೆ. ಬೃಹತ್ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ, ಸೆಬಿಯು ಕಂಪನಿ ಮತ್ತು ಅದರ ಪ್ರವರ್ತಕ ರಾಜೇಶ್ ಮೆಹ್ತಾ ಅವರನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಿದೆ.

Read Full Story

06:36 PM (IST) Jun 04

ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಭಾರತೀಯ ರೈಲ್ವೆ ಸಾರ್ವಕಾಲಿಕ ದಾಖಲೆ, IRCTC 3 ಕೋಟಿ ಐಡಿಗಳು ಏಕಾಏಕಿ ಮಾಯ!

ಐಆರ್‌ಸಿಟಿಸಿ, ಟಿಕೆಟ್ ದುರುಪಯೋಗ ಮತ್ತು ಸೈಬರ್ ವಂಚನೆ ತಡೆಯಲು 3.03 ಕೋಟಿ ಅನುಮಾನಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. ಇದಲ್ಲದೆ, ಅಡುಗೆಮನೆಗಳಲ್ಲಿ ನೈರ್ಮಲ್ಯಕ್ಕಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಿದೆ.

Read Full Story

06:35 PM (IST) Jun 04

Lalit Modi - ನನ್ನ ಪಾತ್ರಕ್ಕೆ ರಣವೀರ್ ಸಿಂಗ್ ಸೂಕ್ತ, ದಾವೂದ್‌ನಿಂದಲೇ ಕ್ರಿಕೆಟ್‌ಗೆ ಗುಡ್‌ಬೈ ಎಂದ ಮೋದಿ!

ಲಲಿತ್ ಮೋದಿ ತಮ್ಮ ಜೀವನದ ಕುರಿತ ಬಯೋಪಿಕ್ ಒಂದನ್ನು ಸಿದ್ಧಪಡಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.

Read Full Story

05:18 PM (IST) Jun 04

ಐಷಾರಾಮಿ ರೈಲು 'ಗೋಲ್ಡನ್ ಚಾರಿಯಟ್‌'ನಲ್ಲಿ ಕರ್ನಾಟಕ ದರ್ಶನ - ಶೇ. 20ರಷ್ಟು ರೇಟ್​ ಕಡಿತ

ಗೋಲ್ಡನ್ ಚಾರಿಯಟ್‌ ಐಷಾರಾಮಿ ರೈಲು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತದೆ.  ಈ ರೈಲು, ಇದೀಗ 'ಪ್ರೈಡ್ ಆಫ್ ಕರ್ನಾಟಕ' ಮತ್ತು 'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗಳ ಮೇಲೆ ಶೇಕಡಾ 20ರಷ್ಟು ದರ ಇಳಿಕೆ ಮಾಡಿದೆ.

Read Full Story

05:14 PM (IST) Jun 04

ರೇಷ್ಮೆ ಸೀರೆಯುಟ್ಟು ಬರಿಗಾಲಿನಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ಜಾನ್ವಿ - ಕಾರಣ ತಿಳಿದ್ರೆ ಅಚ್ಚರಿ ಆಗ್ತೀರಾ!

ನಟಿ ಜಾನ್ವಿ ಕಪೂರ್ ತಮ್ಮ ಹೊಸ ಸಿನಿಮಾ 'ಪೆದ್ದಿ' ಬಿಡುಗಡೆಯ ಪ್ರಯುಕ್ತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಆಧ್ಯಾತ್ಮಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಪ್ರಸಿದ್ಧ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮುನ್ನ..

Read Full Story

05:13 PM (IST) Jun 04

ಐಪಿಎಲ್‌ 2026 ಅಲ್ಲಿ ಭರ್ಜರಿ ರನ್‌ ಹರಿದರೂ, ಈ ಐದು ದಾಖಲೆಯನ್ನ ಮುರಿಯೋಕೆ ಸಾಧ್ಯ ಆಗ್ಲಿಲ್ಲ

ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದರೂ, ಐದು ಪ್ರಮುಖ ದಾಖಲೆಗಳು ಇಂದಿಗೂ ಅಬಾಧಿತವಾಗಿವೆ. ಕ್ರಿಸ್ ಗೇಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು ಅತಿ ವೇಗದ ಶತಕ, ವಿರಾಟ್ ಕೊಹ್ಲಿಯ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ದಾಖಲೆಗಳು ಇದರಲ್ಲಿ ಸೇರಿವೆ.

Read Full Story

04:55 PM (IST) Jun 04

ಮಹಿಳೆಯ ದೇಹದ ಈ ನೈಸರ್ಗಿಕ ರಹಸ್ಯ ತಿಳಿದರೆ ಅಚ್ಚರಿ ಪಡುತ್ತೀರಿ - ತಾಪ್ಸಿ ಪನ್ನು ಹೇಳೋದೇನು?

ನಾನು ಈ ಮೊದಲು ಅತ್ಯಂತ ಫಿಟ್‌ ಆಗಿದ್ದೆ. ಆದರೂ ಕೆಳಹೊಟ್ಟೆ ಬೊಜ್ಜು ಹೆಚ್ಚಾಗಿತ್ತು. ನಾನು ಎಷ್ಟೇ ಫಿಟ್‌ ಆಗಿದ್ದರೂ ಹೊಟ್ಟೆಬೊಜ್ಜು ಕರಗುತ್ತಿಲ್ಲ ಎನ್ನುವ ಚಿಂತೆ ಶುರುವಾಯಿತು ಎಂದು ನಟಿ ತಾಪ್ಸಿ ಪನ್ನು ಹೇಳಿದರು.

Read Full Story

04:54 PM (IST) Jun 04

ಭಾರತೀಯ ಪ್ರವಾಸೋದ್ಯಮ ಮಾರುಕಟ್ಟೆಗೆ ಮಾಲ್ಡೀವ್ಸ್‌ ಎಂಟ್ರಿ, ನಮ್ಮ ಪ್ರವಾಸಿ ತಾಣ ಟಾರ್ಗೆಟ್ ಯಾಕೆ?

ಮಾಲ್ಡೀವ್ಸ್‌ನ ಪ್ರಸಿದ್ಧ ಹೋಟೆಲ್ ಸಮೂಹ 'ಅಟ್ಮಾಸ್ಫಿಯರ್ ಕೋರ್' ಭಾರತದಲ್ಲಿ 30 ಹೊಸ ಹೋಟೆಲ್‌ಗಳನ್ನು ತೆರೆಯಲು ಯೋಜಿಸಿದೆ. ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಐಷಾರಾಮಿ ಹೋಟೆಲ್‌ಗಳ ಕೊರತೆಯನ್ನು ನೀಗಿಸಿ, ಹೆಚ್ಚುತ್ತಿರುವ ದೇಶೀಯ ಪ್ರವಾಸೋದ್ಯಮದ ಬೇಡಿಕೆಯನ್ನು ಪೂರೈಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

04:48 PM (IST) Jun 04

ಐವಿಎಫ್‌ ಮೂಲಕ ಗರ್ಭ ಧರಿಸಲು 8 ಬಾರಿ ವಿಫಲ, 45ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ಸೀರಿಯಲ್‌ ನಟಿ

ಖ್ಯಾತ ನಟಿ ಸಂಭಾವನಾ ಸೇಠ್ ಮತ್ತು ಅವರ ಪತಿ ಅವಿನಾಶ್ ದ್ವಿವೇದಿ, 10 ವರ್ಷಗಳ ಕಾಯುವಿಕೆ ಮತ್ತು ಹಲವು ಐವಿಎಫ್ ವೈಫಲ್ಯಗಳ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ದಂಪತಿಗಳು ತಮ್ಮ ಮನೆಗೆ 'ಲಕ್ಷ್ಮಿ-ಗಣೇಶ' ಬಂದಿದ್ದಾರೆಂದು ಹೇಳಿದ್ದಾರೆ.

Read Full Story

04:42 PM (IST) Jun 04

ಯೋಗ್ಯತೆ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ - ಕಂಗನಾ ರಾಣಾವತ್‌ ಮಾತಿನ ಮರ್ಮವೇನು?

ಬ್ಯಾನ್‌ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್‌ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ ಎಂದು ನಟಿಬ ಕಂಗನಾ ರಾಣಾವತ್‌ ಹೇಳಿದ್ದಾರೆ.

Read Full Story

04:13 PM (IST) Jun 04

ದೇಶದ ಇನ್ನೊಂದು ಪ್ರಸಿದ್ಧ ಐಟಿ ಕಂಪನಿ ವಿರುದ್ಧ ಬಲವಂತದ ಮತಾಂತರ ಆರೋಪ!

ವಿಪ್ರೋ ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಹೋದ್ಯೋಗಿಯಿಂದ ಧಾರ್ಮಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳದೆ, ತನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಅವರು ದೂರಿದ್ದಾರೆ.

Read Full Story

04:04 PM (IST) Jun 04

India Post Franchise Scheme - ಜೇಬಲ್ಲಿ 5 ಸಾವಿರ ಇದ್ರೆ ಸಾಕು, ನೀವೇ ನಿಮ್ಮ ಬ್ಯುಸಿನೆಸ್‌ಗೆ ಬಾಸ್!

ಭಾರತೀಯ ಅಂಚೆ ಇಲಾಖೆ ಕೇವಲ ಉಳಿತಾಯ ಯೋಜನೆಗಳನ್ನು ಮಾತ್ರವಲ್ಲ, ಸ್ವಯಂ ಉದ್ಯೋಗದ ಅವಕಾಶಗಳನ್ನೂ ನೀಡುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಸ್ವಂತ ಬ್ಯುಸಿನೆಸ್ ಆರಂಭಿಸಲು ಬಯಸುವವರಿಗೆ ಇಂಡಿಯಾ ಪೋಸ್ಟ್ ಫ್ರಾಂಚೈಸಿ ಸ್ಕೀಮ್ 2.0 ಒಂದು ಉತ್ತಮ ಅವಕಾಶವಾಗಿದೆ.
Read Full Story

03:11 PM (IST) Jun 04

BJP ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ IPS ಅಧಿಕಾರಿ ಅಣ್ಣಾಮಲೈ ಸಂಪತ್ತು ಇಷ್ಟೊಂದಾ? ADR ರಿಪೋರ್ಟ್‌ನಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು: ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಕುಪ್ಪುಸ್ವಾಮಿ ಅಣ್ಣಾಮಲೈ, ತಮಿಳುನಾಡಿನ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಇದೀಗ ಕೆ ಅಣ್ಣಾಮಲೈ ಅವರ ಸಂಪತ್ತು ಎಷ್ಟು ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

02:21 PM (IST) Jun 04

ಕೊನೆಗೂ ಅಧಿಕೃತವಾಗಿ ಕೇರಳ ಪ್ರವೇಶಿಸಿದ ಮಾನ್ಸೂನ್, 4 ದಿನ ತಡವಾಗಿ ಬಂದು ಆತಂಕದ ಕಾರ್ಮೋಡ, ಕರ್ನಾಟಕಕ್ಕೂ ವಾರ್ನಿಂಗ್!

ನೈಋತ್ಯ ಮಾನ್ಸೂನ್ ಅಧಿಕೃತವಾಗಿ ಕೇರಳವನ್ನು ಪ್ರವೇಶಿಸಿದ್ದು, ಕರ್ನಾಟಕದತ್ತ ಮುನ್ನಡೆಯುತ್ತಿದೆ. ಆದರೆ, ಜಾಗತಿಕ 'ಎಲ್ ನಿನೋ' ವಿದ್ಯಮಾನದ ಪ್ರಭಾವದಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಆತಂಕ ಎದುರಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Read Full Story

01:30 PM (IST) Jun 04

ಪಿಣರಾಯಿ ವಿಜಯನ್ ಮನೆ ಮುಂದೆ ಇಡಿ ಅಧಿಕಾರಿಗಳ ಮೇಲೆಯೇ ದಾಳಿ, ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಹೈಕೋರ್ಟ್ ಹೇಳಿದ್ದೇನು?

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮುಂದೆ ಇಡಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೀಡಿದ ಸೂಚನೆ ಏನು?

Read Full Story

01:20 PM (IST) Jun 04

ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಎಂಟ್ರ ಕೊಡ್ತಾರಾ? ಇಂಟ್ರೆಸ್ಟಿಂಗ್ ಮಾಹಿತಿ ಕೊಟ್ಟ ಭಾರತದ ಮಾಜಿ ಕ್ರಿಕೆಟರ್

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು 2026ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ಭುವನೇಶ್ವರ್ ಕುಮಾರ್ ಅವರ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಶ್ಲಾಘಿಸಿದ್ದು, ಅವರನ್ನು ಭಾರತ ತಂಡಕ್ಕೆ ಮರಳಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Read Full Story

12:12 PM (IST) Jun 04

ಭಾರತೀಯ ಬಾಂಡ್‌ಗಳ ಮೇಲಿನ ಬಂಡವಾಳ ಲಾಭ ತೆರಿಗೆ ರದ್ದು - ವಿದೇಶಿ ಹೂಡಿಕೆ ಆಕರ್ಷಿಸಲು ಕೇಂದ್ರದ ಮಾಸ್ಟರ್ ಪ್ಲಾನ್

ವಿದೇಶಿ ಹೂಡಿಕೆಯನ್ನು ಆಕರ್ಷಿಸಲು, ಭಾರತ ಸರ್ಕಾರವು ಸರ್ಕಾರಿ ಬಾಂಡ್‌ಗಳ ಮೇಲಿನ ಬಂಡವಾಳ ಲಾಭ ತೆರಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಈ ಕ್ರಮವು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಮತ್ತು ಇರಾನ್ ಸಂಘರ್ಷ ಹಾಗೂ ತೈಲ ಬೆಲೆ ಏರಿಕೆಯಂತಹ ಆರ್ಥಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
Read Full Story

11:49 AM (IST) Jun 04

ವಿರಾಟ್ ಕೊಹ್ಲಿ ಫ್ಯಾನ್ಸ್‌ಗಿದು ಬ್ಯಾಡ್‌ ನ್ಯೂಸ್; ಕಿಂಗ್ ಕೊಹ್ಲಿ ಟೀಂ ಇಂಡಿಯಾದಿಂದ ಔಟ್..!

ಬೆಂಗಳೂರು: ಇತ್ತೀಚೆಗಷ್ಟೇ ನಡೆದ 19ನೇ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಗೆ ಸಜ್ಜಾಗಿದ್ದರು. ಹೀಗಿರುವಾಗಲೇ ಕಿಂಗ್ ಕೊಹ್ಲಿ ಫ್ಯಾನ್ಸ್‌ ಪಾಲಿಗೆ ಒಂದು ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

10:29 AM (IST) Jun 04

ಸೂರ್ಯಕುಮಾರ್ ಯಾದವ್ ಬಳಿಕ ಭಾರತದ ಟಿ20 ಕ್ಯಾಪ್ಟನ್ ಯಾರು? ಶುರುವಾಯ್ತು ಹೊಸ ಚರ್ಚೆ

ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎನಿಸಿದೆ. ಇದರ ಬೆನ್ನಲ್ಲೇ ಭಾರತದ ಮುಂದಿನ ಕ್ಯಾಪ್ಟನ್ ಯಾರು ಎನ್ನುವ ಚರ್ಚೆ ಜೋರಾಗಿದೆ.

 

Read Full Story

10:19 AM (IST) Jun 04

ಟಿಎಂಸಿ ಲೀಡರ್‌ಗಳಿಗೆ ಡವಡವ - ಅಭಿಷೇಕ್ ಬ್ಯಾನರ್ಜಿಗೆ ನೋಟಿಸ್ ಬೆನ್ನಲ್ಲೇ ಮತ್ತೊಬ್ಬ ನಾಯಕನ ಮನೆ ಮೇಲೆ NIA ದಾಳಿ!

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಗೆ ತನಿಖಾ ಏಜೆನ್ಸಿಗಳ ಬಿಸಿ ಮುಟ್ಟಿದೆ. ಚುನಾವಣೆ ವೇಳೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಎಂಸಿಯ ಮಾಜಿ ಶಾಸಕ ಶೌಕತ್ ಮೊಲ್ಲಾ ಅವರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದೆ.
Read Full Story

09:33 AM (IST) Jun 04

ಮದ್ವೆಯಾದ್ರೆ ಮಾತ್ರ ನರಕದಿಂದ ಮುಕ್ತಿ; ನಾಲ್ವರಿಂದ ಯುವತಿ ಮೇಲೆ 10 ತಿಂಗಳು ಗ್ಯಾಂಗ್‌ ರೇ*

ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ, ಆಕೆಯ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರು ಸೇರಿ 10 ತಿಂಗಳ ಕಾಲ ಯುವತಿಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಅಂತಿಮವಾಗಿ ಯುವತಿ ಪೊಲೀಸರಿಗೆ ದೂರು ನೀಡಿದ ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Read Full Story

09:07 AM (IST) Jun 04

ಸೂರ್ಯಕುಮಾರ್ ಯಾದವ್ ಭಾರತ ಟಿ20 ನಾಯಕತ್ವದಿಂದ ಔಟ್! ಕ್ಯಾಪ್ಟನ್‌ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಜತೆ ಮತ್ತೊಬ್ಬ ಎಂಟ್ರಿ, ಪಾಟೀದಾರ್‌ಗಿಲ್ಲ ಸ್ಥಾನ!

ಮುಲ್ಲಾನ್‌ಪುರ: 2026ರ ಐಪಿಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹರಿದಿದೆ. ಹೀಗಿರುವಾಗಲೇ ಭಾರತ ಟಿ20 ನಾಯಕತ್ವದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತಾದ ಹೊಸ ಅಪ್ಡೇಟ್ಸ್‌ ಇಲ್ಲಿದೆ ನೋಡಿ.

Read Full Story

07:55 AM (IST) Jun 04

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾರತ ಮೂಲದ 4 ಆಟಗಾರರು..! 20 ವರ್ಷ ಬಳಿಕ ಭಾರತ ಮೂಲದ ಆಟಗಾರರು ಸ್ಪರ್ಧೆ

ಈ ಬಾರಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಭಾರತ ತಂಡವಿಲ್ಲದಿದ್ದರೂ, ಭಾರತೀಯ ಮೂಲದ ನಾಲ್ವರು ಆಟಗಾರರು ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸಲಿದ್ದಾರೆ. ಸರ್ಪ್ರೀತ್‌ ಸಿಂಗ್, ತಹ್ಸಿನ್‌ ಮೊಹಮ್ಮದ್, ನಿಶಾನ್‌ ವೇಲುಪಿಳ್ಳೈ ಮತ್ತು ಸ್ಯಾಮುಯೆಲ್‌ ಮುತ್ತುಸ್ವಾಮಿ ತಮ್ಮ ಆಟದ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಹೆಗ್ಗುರುತು ಮೂಡಿಸಲಿದ್ದಾರೆ.

Read Full Story

07:33 AM (IST) Jun 04

French Open 2026 - ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು

ಫ್ರೆಂಚ್ ಓಪನ್ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು ಕಂಡಿದ್ದಾರೆ. ಗೆಲುವಿನ ಸನಿಹದಲ್ಲಿದ್ದ ಸಬಲೆಂಕಾ, ರಷ್ಯಾದ ಡಿಯಾನ ಶ್ನೈಡೆರ್‌ ವಿರುದ್ಧ 3-6, 7-5, 6-0 ಸೆಟ್‌ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು. ಈ ಮೂಲಕ ಶ್ನೈಡೆರ್‌ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
Read Full Story

More Trending News