ನವದೆಹಲಿ: 2020ರ ದೆಹಲಿ ಗಲಭೆಯ ಆರೋಪಿ ಉಮರ್ ಖಾಲಿದ್ನನ್ನು ನ್ಯಾಯಪರವಾಗಿ ವಿಚಾರಣೆ ನಡೆಸುವಂತೆ ಭಾರತ ಸರ್ಕಾರಕ್ಕೆ ಅಮೆರಿಕದ 8 ಸಂಸದರು ಪತ್ರ ಬರೆದು ಆಗ್ರಹಿಸಿದ್ದಾರೆ. ಇವರಲ್ಲಿ ಒಬ್ಬರಾದ ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತ ವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, 2024ರಲ್ಲಿ ರಾಹುಲ್ ಹಾಗೂ ಅಮೆರಿಕದ ಇಬ್ಬರು ಸಂಸದರಾದ ಶಾಕೋವ್ಸ್ಕಿ ಮತ್ತು ಇಲ್ಹಾನ್ ಒಮರ್ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್ ಮಾಡಿ, ‘ಪ್ರತಿ ಬಾರಿ ಭಾರತ ವಿರೋಧಿ ವಿಚಾರ ವಿದೇಶಗಳಲ್ಲಿ ಹರಡಿದಾಗಲೂ ಒಂದು ಹೆಸರು (ರಾಹುಲ್ ಗಾಂಧಿ) ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಭಾರತವನ್ನು ದುರ್ಬಲಗೊಳಿಸಲು, ಅದರ ಸರ್ಕಾರದ ಹೆಸರು ಕೆಡಿಸಲು ಮತ್ತು ಅದರ ಉಗ್ರವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ಆತನ ಸುತ್ತ ಸೇರಿಕೊಳ್ಳುತ್ತಾರೆ’ ಎಂದು ಕಿಡಿ ಕಾರಿದ್ದಾರೆ.
09:33 PM (IST) Jan 03
ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್, ಆಲ್ಟರ್ ಮಾಡಿದ ಕಾರಿನ ಮೇಲೆ ನಿಂತು ಕುಣಿದಾಡಿದ್ದಾರೆ. ಬ್ಯೂಸಿ ರಸ್ತೆಯಲ್ಲಿ ಪುಂಡಾಟ ಮಾಡಿ ಟ್ರಾಫಿಕ್ ಜಾಮ್ ಮಾಡಿದ್ದಾರೆ.
08:30 PM (IST) Jan 03
ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್ಗೆ ಮರಳಿ ಸಿಗುತ್ತಾ?, ಐಪಿಎಲ್ ಟೂರ್ನಿಯ ನಿಮಯವೇನು? ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಾಗ ಪಾಲಿಸಬೇಕಾದ ನಿಯವೇನು?
07:46 PM (IST) Jan 03
ನಡೆದುಕೊಂಡು ಹೋಗುತ್ತಿರುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ, ಘಟನೆ ಕುರಿತು ಸ್ವತಃ ಆಶಿಷ್ ವಿದ್ಯಾರ್ಥಿ ಅಪ್ಡೇಟ್ ನೀಡಿದ್ದಾರೆ. ನಡೆದುಕೊಂಡು ಹೋಗುತ್ತಿರುವಾಗ ವಾಹನ ಡ್ಕಿಕಿಯಾಗಿದೆ.
06:24 PM (IST) Jan 03
ದಕ್ಷಿಣ ಆಫ್ರಿಕಾ ಎ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ, ಭಾರತ ಎ ತಂಡವು ಕಳಪೆ ಆರಂಭದ ಹೊರತಾಗಿಯೂ 300 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಹರ್ವಾನ್ಶ್ ಪಂಗಾಲಿಯಾ (93) ಮತ್ತು ಆರ್ ಎಸ್ ಅಂಬ್ರಿಶ್ (65) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಸಿಕೊಂಡಿತು.
06:01 PM (IST) Jan 03
ಮಲಯಾಳಂ ನಟ ಸಿದ್ಧಾರ್ಥ್ ಪ್ರಭು ಅವರ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ ಥಂಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಟನ ಮೇಲೆ ಇದೀಗ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
05:50 PM (IST) Jan 03
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಮಿನಿ ಹರಾಜು ಕೂಡಾ ಮುಕ್ತಾಯವಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದಲ್ಲಿರುವ 4 ಬಲಿಷ್ಠ ವಿದೇಶಿ ಆಟಗಾರರು ಎನ್ನುವುದುನ್ನು ನೋಡೋಣ ಬನ್ನಿ.
05:42 PM (IST) Jan 03
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ, ಹಿರಿಯ ವಿದ್ಯಾರ್ಥಿನಿಯರು ಮತ್ತು ಪ್ರೊಫೆಸರ್ನಿಂದ ನಡೆದಿದೆ ಎನ್ನಲಾದ ರಾಗಿಂಗ್ ಹಾಗೂ ಲೈಂಗಿಕ ಕಿರುಕುಳದಿಂದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ತೀವ್ರ ಆಘಾತದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
05:38 PM (IST) Jan 03
Controversy Erupts Over Nushratt Bharuccha Visit to Mahakal Temple ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಈ ನಾಯಕಿ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಈಗ ಈ ಸುಂದರ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
05:16 PM (IST) Jan 03
ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಶುಭ್ಮನ್ ಗಿಲ್, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಮತ್ತು ವರ್ಷಗಳ ಬಳಿಕ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ.
04:17 PM (IST) Jan 03
ದೇಶದ ಅತ್ಯಂತ ಶ್ರೀಮಂತ ತಿರುಪತಿ ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನು ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದಾನೆ.
04:12 PM (IST) Jan 03
ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಮೇಲರಗಿ, ಆಕೆಯನ್ನು ಮಹಡಿಗಳ ಮೇಲಿಂದ ಕೆಳಕ್ಕೆ ಎಸೆದ ದುರುಳರಿಗೆ ತಕ್ಕ ಶಾಸ್ತಿ ಮಾಡಲಾಗಿದೆ.
03:46 PM (IST) Jan 03
ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ ಸೃಷ್ಟಿಸಿದ್ದಾರೆ. ಸಚಿವೆ ಪತಿಯ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ವಿವಾದವಾಗುತ್ತಿದ್ದಂತೆ ನಾಯಕ ಹೇಳಿದ್ದೇನು?
03:35 PM (IST) Jan 03
ಬುದ್ಧಿವಂತ ಪ್ರಾಣಿ ಎನಿಸಿರುವ ಆನೆಗೆ ಸುತ್ತಲಿನ ಪರಿಸರದ ಬಗ್ಗೆ ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಜಾಗೃತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
03:30 PM (IST) Jan 03
03:20 PM (IST) Jan 03
03:09 PM (IST) Jan 03
ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?, ಇಂಡಿಗೋ ವಿಮಾನಾನ ಸಂಸ್ಥೆ ಮಹತ್ವದ ಘೋಷಣೆ. ಯಾರಿಗೆಲ್ಲಾ 10,000 ರೂಪಾಯಿ ಪರಿಹಾರ ವೋಚರ್ ಯಾರಿಗೆಲ್ಲಾ ಸಿಗಲಿದೆ?
03:08 PM (IST) Jan 03
ಅಮೆರಿಕವು ವೆನುಜುವೇಲದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ನಾಲ್ಕು ನಗರಗಳ ಮೇಲೆ ಭಾರೀ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ನಿಕೋಲಸ್ ಮಡುರೊ, ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
01:48 PM (IST) Jan 03
ಐಪಿಎಲ್ನಲ್ಲಿ ಬಾಂಗ್ಲಾದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದಕ್ಕಾಗಿ ನಟ ಶಾರುಖ್ ಖಾನ್ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ಮೀನಾ ರಾಥೋಡ್ ಅವರು ಶಾರುಖ್ ನಾಲಿಗೆ ಕತ್ತರಿಸಿ ತಂದವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
01:13 PM (IST) Jan 03
01:12 PM (IST) Jan 03
PIB ಫ್ಯಾಕ್ಟ್ ಚೆಕ್: ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟು ಅಮಾನ್ಯೀಕರಣಕ್ಕೆ ಸಿದ್ಧವಾಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
01:12 PM (IST) Jan 03
ವಿಷಾಹಾರ ಸೇವನೆಯಿಂದಾಗಿ ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ ಖರ್ಗೊನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಬದ್ವಾ ಪ್ರದೇಶದ ನದಿ ದಂಡೆಯಲ್ಲಿ ಗಿಳಿಗಳು ಶವವಾಗಿ ಪತ್ತೆಯಾಗಿವೆ.
12:56 PM (IST) Jan 03
ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಚೀನಾ ಸರ್ಕಾರವು ಕಾಂಡೋಮ್ಗಳು ಮತ್ತು ಗರ್ಭನಿರೋಧಕಗಳ ಮೇಲಿನ ಮೂರು ದಶಕಗಳ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿ, ಶೇ.13ರಷ್ಟು ತೆರಿಗೆ ವಿಧಿಸಿದೆ.
12:31 PM (IST) Jan 03
12:21 PM (IST) Jan 03
ಲ್ಲೊಂದು ಕಡೆ ಶಾಲೆ ಬಿಟ್ಟು ಅಕ್ಕಪಕ್ಕದ ಮನೆಯವರ ಮೊಬೈಲ್ ಕಳ್ಳತನ ಮಾಡುತ್ತಾ ಕೆಟ್ಟ ದಾರಿ ಹಿಡಿದಿದ್ದ ಮಗನಿಗೆ ಬುದ್ಧಿ ಕಲಿಸಲು ಪೋಷಕರು ನೀಡಿದ ಶಿಕ್ಷೆ ಈಗ ಪೋಷಕರನ್ನೇ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಹಾಗಿದ್ರೆ ಪೋಷಕರು ಮಾಡಿದ್ದೇನು?
12:00 PM (IST) Jan 03
ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಲಿದೆ. ಇದು ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
11:27 AM (IST) Jan 03
BCCI Directs KKR to Release Mustafizur Rahman Over Bangladesh Row IPL 2026: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ರಿಲೀಸ್ ಮಾಡುವಂತೆ ಬಿಸಿಸಿಐ ಫ್ರಾಂಚೈಸಿಗೆ ಸೂಚನೆ ನೀಡಿದೆ. ಇತ್ತೀಚಿನ ಬೆಳವಣಿಗೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
10:55 AM (IST) Jan 03
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಕೆಎಸ್ಸಿಎ ಬದ್ಧವಾಗಿದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
10:24 AM (IST) Jan 03
ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆರೆಯ ಚೀನಾವೂ ಭಾರತದ ವಿರುದ್ಧ ಆ ಎರಡು ದೇಶಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಗೊತ್ತಿದೆ. ಈ ನಡುವೆ ಪಾಕಿಸ್ತಾನದ ನೆಲದಿಂದ ಭಾರತವನ್ನು ಬೆಂಬಲಿಸಿ ಬಹಿರಂಗ ಪತ್ರವೊಂದು ಬಂದಿದೆ.
09:45 AM (IST) Jan 03