LIVE NOW
Published : Feb 03, 2026, 07:01 AM ISTUpdated : Feb 03, 2026, 09:51 AM IST

India Latest News Live: ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ - ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ

ಸಾರಾಂಶ

ನವದೆಹಲಿ: ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆಗೆ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆ ಉಟ್ಟು ಬರುತ್ತಾರೆ ಎಂದು ಶಿವಸೇನೆ (ಉದ್ಧವ್‌) ಬಣದ ಸಂಸದೆ ಪ್ರಿಯಾಂಕಾ ಚರ್ತುರ್ವೇದಿ ನುಡಿದ ಭವಿಷ್ಯ ನಿಜವಾಗಿದೆ. ಈ ಕುರಿತು ಅವರು ‘ನಾನು ಊಹಿಸಿದಂತೆಯೇ ಆಗಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಜೆಟ್‌ ಹಿಂದಿನ ದಿನ ಮಾಧ್ಯಮವೊಂದರೆ ಜತೆ ಮಾತನಾಡಿದ್ದ ಪ್ರಿಯಾಂಕಾ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಅವರು ಬಜೆಟ್‌ ಮಂಡನೆ ವೇಳೆ ತಮಿಳುನಾಡಿನ ಸೀರೆಯುಟ್ಟು, ಬಂಗಾಳದ ಪದಗಳನ್ನು ಬಳಸಲಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಬಜೆಟ್ ಮಂಡನೆಗೆ ನಿರ್ಮಲಾ ಅವರು ಕಾಂಜೀವರಂ ಸೀರೆಯುಟ್ಟು ಬಂದಿದ್ದರು.

09:51 AM (IST) Feb 03

ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ - ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ

ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಆತ ಹಲ್ಲೆ ನಡೆಸಿದ್ದಾನೆ.

Read Full Story

09:07 AM (IST) Feb 03

ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ! ಆಮೇಲೆ ಆಗಿದ್ದೇನು? ನೀವೇ ನೋಡಿ

ಪತಿ ತೀರಿಕೊಂಡ ನಂತರ ಖಿನ್ನತೆಯಿಂದ ಮನೆ ಕಳೆದುಕೊಂಡ 55 ವರ್ಷದ ರಿಯಾ ಹೋಮ್ಸ್, ಸುಮಾರು 8 ತಿಂಗಳು ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದರು. ಪೊಲೀಸ್ ಅಧಿಕಾರಿ ಜಾಮಿ ಅವರ ಸಹಾಯ ಮತ್ತು ದೇಣಿಗೆ ಸಂಗ್ರಹ ಅಭಿಯಾನದಿಂದಾಗಿ, ರಿಯಾ ಮತ್ತೆ ಹೊಸ ಸುಸಜ್ಜಿತ ಮನೆಯನ್ನು ಪಡೆದು ಹೊಸ ಜೀವನ ಆರಂಭಿಸಿದರು.

Read Full Story

08:35 AM (IST) Feb 03

ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ? ಅಷ್ಟಕ್ಕೂ ಪಾಕ್‌ ಹೇಳಿದಂತೆ ಐಸಿಸಿ ಏಕೆ ಕೇಳಬೇಕು?

ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಪಾಕಿಸ್ತಾನವು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ. ಪಾಕ್ ಸರ್ಕಾರದ ಹಸ್ತಕ್ಷೇಪವೇ ಇದಕ್ಕೆ ಕಾರಣವಾಗಿದ್ದು, ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿ ಪಾಕಿಸ್ತಾನವನ್ನು ಕ್ರಿಕೆಟ್‌ನಿಂದಲೇ ಅಮಾನತುಗೊಳಿಸಲು ಬಿಸಿಸಿಐಗೆ ಪ್ರಬಲ ಅವಕಾಶ ಲಭಿಸಿದೆ.
Read Full Story

More Trending News