LIVE NOW
Asianet News   | PTI
Published : Jun 27, 2026, 07:14 AM ISTUpdated : Jun 27, 2026, 11:36 AM IST

India Latest News Live: ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ - ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

ಸಾರಾಂಶ

ಶಾಂತಿ ಒಪ್ಪಂದ ಮುರಿದ ಬೆನ್ನಲ್ಲೇ ಇರಾನ್ ವಿರುದ್ಧ ಕೆರಳಿರುವ ಅಮೆರಿಕ ಭೀಕರ ದಾಳಿ ನಡೆಸಿದೆ. ಹೊರ್ಮುಜ್‌ನಲ್ಲಿ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಇದೀಗ ಮಿಲಿಟರಿ ದಾಳಿ ಆರಂಭಿಸಿದೆ. ಪರಿಣಾಮ ಮತ್ತೆ ಹೊರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಶುರುವಾಗಿದೆ. ಈಗಷ್ಟೇ ಭಾರತದಲ್ಲಿ ಗ್ಯಾಸ್ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು. ಇತ್ತ ತೈಲ ಪೂರೈಕೆ ಪುನರ್ ಆರಂಭಗೊಳ್ಳುವಷ್ಟರಲ್ಲೇ ಕೊರತೆ ಆತಂಕ ಎದುರಾಗಿದೆ. ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣ ಸೇರಿದಂತೆ ದೇಶ ವಿದೇಶಗಳ ಇಂದಿನ ಲೈವ್ ನ್ಯೂಸ್ ಅಪ್‌ಡೇಟ್ ಇಲ್ಲಿದೆ.

KS Eshwarappa

11:36 AM (IST) Jun 27

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ - ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಲೂಟಿ ಪ್ರಕರಣದ ಬಗ್ಗೆ ಉಗ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿಗೆ ಬಂದ ಶಾಸಕರು ಪಕ್ಷ ಕಟ್ಟಲು ಬಂದವರಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯದಲ್ಲಿನ ಕುದುರೆ ವ್ಯಾಪಾರವನ್ನು ಟೀಕಿಸಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಜೊತೆಗೆ, ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ಹೆಸರಿನ ಬಗ್ಗೆಯೂ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
Read Full Story

11:20 AM (IST) Jun 27

Indian Railway - ಓಣಂ ವಿಶೇಷ, Bharat Gaurav ರೈಲಿನಲ್ಲಿ ಇಡೀ ದೇಶ ಸುತ್ತುವ ಸುವರ್ಣಾವಕಾಶ, ಶೇ.33 ರಿಯಾಯಿತಿ

ಮುಂಬರುವ ಓಣಂ ಹಬ್ಬದ ರಜೆಗಾಗಿ ಭಾರತೀಯ ರೈಲ್ವೆಯು 'ಭಾರತ್ ಗೌರವ್ ರೈಲು' ಯೋಜನೆಯಡಿ 11 ದಿನಗಳ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. ಸೌತ್ ಸ್ಟಾರ್ ರೈಲ್ ಸಹಯೋಗದ ಈ ಪ್ರವಾಸವು ದೆಹಲಿ, ಆಗ್ರಾ, ಏಕತಾ ಪ್ರತಿಮೆ ಮತ್ತು ಗೋವಾದಂತಹ ಪ್ರಮುಖ ತಾಣಗಳನ್ನು ಒಳಗೊಂಡಿದ್ದು, ಶೇ. 33ರಷ್ಟು ಭಾರಿ ಸಬ್ಸಿಡಿ ಸೌಲಭ್ಯವನ್ನು ಹೊಂದಿದೆ.
Read Full Story

11:01 AM (IST) Jun 27

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ - ಸಿಯಾಗೆ ಪ್ರಚೋದನೆ ನೀಡಿದ್ದೇ ಪ್ರಿಯಕರ ಚೇತನ್? ತನಿಖೆಯಲ್ಲಿ ಹೊಸ ವಿಚಾರ ಬಹಿರಂಗ

ಪುಣೆಯ ಲೋಹಗಡ ಕೋಟೆಯಿಂದ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಪ್ರಪಾತಕ್ಕೆ ತಳ್ಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಯಾಳ ಪ್ರಿಯಕರ ಚೇತನ್ ಪ್ರಚೋದನೆ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಕೇತನ್‌ ವಿಗ್‌ ಧರಿಸುತ್ತಿದ್ದ ಕಾರಣಕ್ಕೆ ಮದುವೆ ಇಷ್ಟವಿರಲಿಲ್ಲ, ಹಾಗಾಗಿ ಕೊಲೆ ಮಾಡಿದ್ದಾಗಿ ಸಿಯಾ ಒಪ್ಪಿಕೊಂಡಿದ್ದಾಳೆ. ಈ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ಅಭಿಯೋಜಕರನ್ನು ನೇಮಿಸಲು ಸರ್ಕಾರ ಒಪ್ಪಿದೆ.
Read Full Story

10:15 AM (IST) Jun 27

Negative Thoughts - ನಮ್ಮ ಮೆದುಳು ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?

How does stress affect memory Psychology: ಹತ್ತು ಜನ ನಮ್ಮನ್ನು ಹೊಗಳಿ, ಒಬ್ಬರು ಮಾತ್ರ ಟೀಕಿಸಿದರೆ, ಆ ಟೀಕೆಯೇ ಮನಸ್ಸಲ್ಲಿ ಉಳಿದುಬಿಡುತ್ತದೆ. ನಮ್ಮ ಮೆದುಳು ಅದನ್ನೇ ಪದೇ ಪದೇ ಯೋಚಿಸುತ್ತದೆ. ನಮ್ಮ ಬ್ರೇನ್ ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?

Read Full Story

10:00 AM (IST) Jun 27

ಕರ್ನಾಟಕದ ನಿರ್ಮಾಪಕ ಕೆವಿಎನ್ ತಮಿಳುನಾಡು ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ, ಭಾರಿ ವಿರೋಧ

ತಮಿಳುನಾಡು ಸಿಎಂ ಜೊಸೆಫ್ ವಿಜಯ್ ನಿರ್ಧಾರ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕದ ಖ್ಯಾತ ನಿರ್ಮಾಪಕ ಕಿವಿಎನ್ ಪ್ರೊಡಕ್ಷನ್ ಮಾಲೀಕರನ್ನು ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.

Read Full Story

09:23 AM (IST) Jun 27

ಸಿಯಾ ಗೊಯೆಲ್ ಚೇತನ್ ನಡುವಿನ ಪ್ರೀತಿಯಲ್ಲಿದೆ ಕ್ರಿಕೆಟ್ ಲಿಂಕ್, ಕೇತನ್ ಹತ್ಯೆ ತನಿಖೆ ಸ್ಫೋಟಕ ಮಾಹಿತಿ

ಕೇತನ್ ಅಗರ್ವಾಲ್ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಂದ ಭಾವಿ ಪತ್ನಿ ಸಿಯಾ ಗೊಯೆಲ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಯಾ ಹಾಗೂ ಪ್ರಿಯತಮ ಚೇತನ್ ಪ್ರೀತಿಗೆ ಕ್ರಿಕೆಟ್ ಕನೆಕ್ಷನ್ ಇದೆ. ಇವರಿಬ್ಬರ ನಡುವೆ ಕ್ರಿಕೆಟ್ ಪಾತ್ರವೇನು?

Read Full Story

08:52 AM (IST) Jun 27

FIFA World Cup 2026 - ನಾಲ್ಕು ಬಾರಿಯ ಚಾಂಪಿಯನ್ ಬಲಿಷ್ಠ ಜರ್ಮನಿಯ ಕೆಡವಿ ಈಕ್ವೆಡಾರ್‌ ನಾಕೌಟ್‌ಗೆ!

ಫಿಫಾ ವಿಶ್ವಕಪ್‌ನ ಪಂದ್ಯದಲ್ಲಿ, ಈಕ್ವೆಡಾರ್ ತಂಡವು 4 ಬಾರಿಯ ಚಾಂಪಿಯನ್ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿ 2006ರ ಬಳಿಕ ಮೊದಲ ಬಾರಿಗೆ ನಾಕೌಟ್‌ ಹಂತ ಪ್ರವೇಶಿಸಿದೆ. ಈ ಐತಿಹಾಸಿಕ ಗೆಲುವಿಗಾಗಿ ಈಕ್ವೆಡಾರ್‌ನಲ್ಲಿ ರಾಷ್ಟ್ರೀಯ ರಜೆ ಘೋಷಿಸಲಾಯಿತು. ಇನ್ನೊಂದೆಡೆ, ನೆದರ್‌ಲೆಂಡ್ಸ್‌ ಕೂಡ ಟ್ಯುನೀಶಿಯಾ ವಿರುದ್ಧ ಗೆದ್ದು ನಾಕೌಟ್‌ಗೆ ಲಗ್ಗೆಯಿಟ್ಟಿದೆ.
Read Full Story

08:19 AM (IST) Jun 27

ಭಾವಿ ಪತ್ನಿ ಸಿಯಾಳಿಂದ ಕೇತನ್ ಹತ್ಯೆ ಪ್ರಕರಣ, ವಿಶೇಷ ಅಭಿಯೋಜಕರಾಗಿ ಕಸಬ್ ಗಲ್ಲಿಗೇರಿಸಿದ ಉಜ್ವಲ್ ನಿಕಂ

ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್ ಗಲ್ಲಿಗೇರಿಸಿದ ವಕೀಲ ಉಜ್ವಲ್ ನಿಕಂ ಇದೀಗ ಕೇತನ್ ಹತ್ಯೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

Read Full Story

07:31 AM (IST) Jun 27

NCERT 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ಕೆ SIR ಸೇರ್ಪಡೆ!

ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(SIR) ವಿಷಯದ ಇದೀಗ ಎನ್‌ಸಿಇಆರ್‌ಟಿ(NCERT)ಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.

 

Read Full Story

07:16 AM (IST) Jun 27

ಕದನ ವಿರಾಮ ಉಲ್ಲಂಘಿಸಿದ ಇರಾನ್ ಮೇಲೆ ದಾಳಿ

ಜೂನ್ 25ರಂದು ಸಿಂಗಾಪೂರ ಮೂಲದ ಹಡಗಿನ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಮೂಲಕ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ನೇರವಾಗಿ ಇರಾನ್ ಮಿಲಿಟರಿ ತಾಣದ ಮೇಲೆ ದಾಳಿ ಮಾಡಿದೆ. ಈ ದಾಳಿಯಿಂದ ಹೊರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತವಾರಣವಿದ್ದು, ಹಡಗಳ ಪ್ರಯಾಣ ಮತ್ತೆ ಸ್ಥಗಿತಗೊಂಡಿದೆ.


More Trending News