ಶಾಂತಿ ಒಪ್ಪಂದ ಮುರಿದ ಬೆನ್ನಲ್ಲೇ ಇರಾನ್ ವಿರುದ್ಧ ಕೆರಳಿರುವ ಅಮೆರಿಕ ಭೀಕರ ದಾಳಿ ನಡೆಸಿದೆ. ಹೊರ್ಮುಜ್ನಲ್ಲಿ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಇದೀಗ ಮಿಲಿಟರಿ ದಾಳಿ ಆರಂಭಿಸಿದೆ. ಪರಿಣಾಮ ಮತ್ತೆ ಹೊರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಶುರುವಾಗಿದೆ. ಈಗಷ್ಟೇ ಭಾರತದಲ್ಲಿ ಗ್ಯಾಸ್ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು. ಇತ್ತ ತೈಲ ಪೂರೈಕೆ ಪುನರ್ ಆರಂಭಗೊಳ್ಳುವಷ್ಟರಲ್ಲೇ ಕೊರತೆ ಆತಂಕ ಎದುರಾಗಿದೆ. ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣ ಸೇರಿದಂತೆ ದೇಶ ವಿದೇಶಗಳ ಇಂದಿನ ಲೈವ್ ನ್ಯೂಸ್ ಅಪ್ಡೇಟ್ ಇಲ್ಲಿದೆ.

11:36 AM (IST) Jun 27
11:20 AM (IST) Jun 27
11:01 AM (IST) Jun 27
10:15 AM (IST) Jun 27
How does stress affect memory Psychology: ಹತ್ತು ಜನ ನಮ್ಮನ್ನು ಹೊಗಳಿ, ಒಬ್ಬರು ಮಾತ್ರ ಟೀಕಿಸಿದರೆ, ಆ ಟೀಕೆಯೇ ಮನಸ್ಸಲ್ಲಿ ಉಳಿದುಬಿಡುತ್ತದೆ. ನಮ್ಮ ಮೆದುಳು ಅದನ್ನೇ ಪದೇ ಪದೇ ಯೋಚಿಸುತ್ತದೆ. ನಮ್ಮ ಬ್ರೇನ್ ನೆಗೆಟಿವ್ ವಿಷಯಗಳನ್ನೇ ಯಾಕೆ ಹೆಚ್ಚು ನೆನಪಿಟ್ಟುಕೊಳ್ಳುತ್ತೆ?
10:00 AM (IST) Jun 27
ತಮಿಳುನಾಡು ಸಿಎಂ ಜೊಸೆಫ್ ವಿಜಯ್ ನಿರ್ಧಾರ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕದ ಖ್ಯಾತ ನಿರ್ಮಾಪಕ ಕಿವಿಎನ್ ಪ್ರೊಡಕ್ಷನ್ ಮಾಲೀಕರನ್ನು ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.
09:23 AM (IST) Jun 27
ಕೇತನ್ ಅಗರ್ವಾಲ್ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಂದ ಭಾವಿ ಪತ್ನಿ ಸಿಯಾ ಗೊಯೆಲ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಯಾ ಹಾಗೂ ಪ್ರಿಯತಮ ಚೇತನ್ ಪ್ರೀತಿಗೆ ಕ್ರಿಕೆಟ್ ಕನೆಕ್ಷನ್ ಇದೆ. ಇವರಿಬ್ಬರ ನಡುವೆ ಕ್ರಿಕೆಟ್ ಪಾತ್ರವೇನು?
08:52 AM (IST) Jun 27
08:19 AM (IST) Jun 27
ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್ ಗಲ್ಲಿಗೇರಿಸಿದ ವಕೀಲ ಉಜ್ವಲ್ ನಿಕಂ ಇದೀಗ ಕೇತನ್ ಹತ್ಯೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
07:31 AM (IST) Jun 27
ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ(SIR) ವಿಷಯದ ಇದೀಗ ಎನ್ಸಿಇಆರ್ಟಿ(NCERT)ಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.
07:16 AM (IST) Jun 27
ಜೂನ್ 25ರಂದು ಸಿಂಗಾಪೂರ ಮೂಲದ ಹಡಗಿನ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಮೂಲಕ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ನೇರವಾಗಿ ಇರಾನ್ ಮಿಲಿಟರಿ ತಾಣದ ಮೇಲೆ ದಾಳಿ ಮಾಡಿದೆ. ಈ ದಾಳಿಯಿಂದ ಹೊರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತವಾರಣವಿದ್ದು, ಹಡಗಳ ಪ್ರಯಾಣ ಮತ್ತೆ ಸ್ಥಗಿತಗೊಂಡಿದೆ.