Published : Apr 26, 2026, 05:07 AM ISTUpdated : Apr 26, 2026, 10:51 PM IST

India Latest News Live: ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ

ಸಾರಾಂಶ

ಕೋಲ್ಕತಾ: ‘ಪಶ್ಚಿಮ ಬಂಗಾಳದ ಜನರು ಗುಂಡಿಗೆ ಮತಗಳ ಮೂಲಕ ಉತ್ತರ ನೀಡುತ್ತಾರೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ, ಇಂತಹ ಹಿಂಸಾತ್ಮಹ ಹೇಳಿಕೆ ನೀಡಿದ ಶಾ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

‘ಟಿಎಂಸಿಯ ಗೂಂಡಾಗಳು ಸ್ಫೋಟಗಳ ಮೂಲಕ ರಾಜ್ಯದಲ್ಲಿನ್ನು ಭಯ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಕಾರಣ, ಬಾಂಬ್‌ಗೆ ಜನ ಬ್ಯಾಲೆಟ್‌ (ಮತ) ಮೂಲಕ ಹಾಗೂ ಭಯಕ್ಕೆ ನಂಬಿಕೆಯ ಮೂಲಕ ಉತ್ತರ ನೀಡುತ್ತಾರೆ’ ಎಂದು ಶಾ ಹೇಳಿದ್ದರು. ಇದಕ್ಕೆ ಹೂಗ್ಲಿಯಲ್ಲಿ ಸಭೆಯನ್ನುದ್ದೇಶಿಸಿ ಪ್ರತಿಕ್ರಿಯಿಸಿದ ಮಮತಾ, ‘ಗೃಹ ಸಚಿವರಾಗಿ ಅವರು ಅಂತಹ ಭಾಷೆಯನ್ನು ಬಳಸಬಾರದು. ನಾವು ಶಾ ವಿರುದ್ಧ ಕೇಸ್‌ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

10:51 PM (IST) Apr 26

ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ

ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ, ಎಲಾನ್ ಮಸ್ಕ್ ಮಾಲೀಕತ್ವದ ಎಐ ಚಾಟ್‌ಬಾಟ್ Grok ಕುಟುಂಬ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣಕ್ಕೆ ಮಣೆ ಹಾಕಿದೆ.

 

Read Full Story

09:51 PM (IST) Apr 26

ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ

ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ, ಹಳದಿಘಾಟ್‌ನಲ್ಲಿ ನಡೆದ ಯುದ್ದದಲ್ಲಿ ನಾನು ಸೋತೆ. ಅಮೆರ್ ಕೋಟೆ ನಿರ್ಮಿಸಿದ್ದೇನೆ. ಅಲ್ಲಿ ನಿಧಿ ಬಚ್ಚಿಟ್ಟ ಜಾಗದ ಸ್ಥಳವನ್ನೂ ಹೇಳಿದ್ದಾನೆ.

Read Full Story

09:34 PM (IST) Apr 26

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ತಾರೆ ರಾಹುಲ್​ ದ್ರಾವಿಡ್​ ಅಮ್ಮನ ಕೈಚಳಕ - ಈ ರೋಚಕ ಸ್ಟೋರಿ ಕೇಳಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಕನ್ನಡಿಗ ಕ್ರಿಕೆಟಿಗರ ಭಿತ್ತಿಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಸುಂದರ ಕಲಾಕೃತಿಗಳನ್ನು ರಚಿಸಿದ್ದು ಬೇರಾರೂ ಅಲ್ಲ, ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ, ಲಲಿತ ಕಲೆಯಲ್ಲಿ ಪಿಎಚ್‌ಡಿ ಪಡೆದ ಡಾ. ಪುಷ್ಪಾ ದ್ರಾವಿಡ್. 2008ರಲ್ಲಿ ರಚಿಸಲಾದ ಈ ಚಿತ್ರಗಳು ಇಂದಿಗೂ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿವೆ.
Read Full Story

09:07 PM (IST) Apr 26

Mangli Remuneration - ಸ್ಟಾರ್ ಗಾಯಕರನ್ನೂ ಮೀರಿಸ್ತಾರೆ - ಒಂದು ಹಾಡಿಗೆ ಮಂಗ್ಲಿ ಪಡೆಯೋ ಸಂಭಾವನೆ ಎಷ್ಟು?

ಗಾಯಕಿ ಮಂಗ್ಲಿ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅವರು ವಂಚನೆ ಮಾಡಿದ್ದಾರೆ ಎಂದು ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.

Read Full Story

09:00 PM (IST) Apr 26

Shocking News - 7 ತಿಂಗಳ ಗರ್ಭಿಣಿ ಕಿಯಾರಾಗೆ ಹೀಗ್ ಮಾಡ್ಬಿಟ್ಟ ಆ ಮಹಾ ಪಾಪಿ; ಈ ರಹಸ್ಯ ಹೇಳಿದ ಬಾಡಿಗಾರ್ಡ್!

ಘಟನೆ ನಡೆದಿದ್ದು ಒಂದು ಬ್ರಾಂಡ್ ಶೂಟಿಂಗ್ ಸೆಟ್‌ನಲ್ಲಿ. ಅಂದು ಕಿಯಾರಾ ಅಡ್ವಾಣಿ ಏಳು ತಿಂಗಳ ಗರ್ಭಿಣಿ. ಹೊಟ್ಟೆಯಲ್ಲಿ ಮಗುವನ್ನು ಹೊತ್ತು ಅವರು ಕೆಲಸಕ್ಕೆ ಹಾಜರಾಗಿದ್ದರು. ಶೂಟಿಂಗ್ ಮುಗಿಸಿ ತಮ್ಮ ವ್ಯಾನಿಟಿ ವ್ಯಾನ್‌ನಿಂದ ಕೆಳಗಿಳಿಯುತ್ತಿದ್ದಾಗ ಅನಿರೀಕ್ಷಿತ ತಿರುವು ಸಂಭವಿಸಿತು.

Read Full Story

08:36 PM (IST) Apr 26

ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ

ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ, ರೋಡ್‌ಶೋ ಆರಂಭಕ್ಕೂ ಮೊದಲೇ ಮೋದಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಟಿಂಎಂಸಿ ಗಲಿಬಿಲಿಗೊಂಡಿದ್ದು ಹೇಗೆ?

Read Full Story

08:25 PM (IST) Apr 26

Viral Video - ಗಂಡನಿಗೆ ಜಾಮೀನು ಕೊಡಿಸೋಕೆ ಬಂದು ಜಗಳವಾಡಿದ ಹೆಂಡತಿಯರು; ಗಂಡ ಹೊರಗೆ, ಆ ಇಬ್ಬರೂ ಒಳಗೆ!

ಮೀರತ್ ಕೋರ್ಟ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪಕ್ಕದ ಮನೆಯವರ ಜೊತೆ ಜಗಳವಾಡಿದ್ದಕ್ಕೆ ಅರೆಸ್ಟ್ ಆಗಿದ್ದ ಗಂಡನಿಗೆ ಜಾಮೀನು ಕೊಡಿಸಲು ಬಂದಿದ್ದ ಇಬ್ಬರು ಹೆಂಡತಿಯರು ಕೋರ್ಟ್ ಆವರಣದಲ್ಲೇ ಅದೇನೋ ಮಾಡಿಬಿಟ್ಟಿದ್ದಾರೆ. ಕೊನೆಗೆ ಗಂಡನಿಗೆ ಜಾಮೀನುಕೊಟ್ಟ, ಗಲಾಟೆ ಮಾಡಿದ ಹೆಂಡತಿಯರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ಆ ಹೆಂಗಸರು ಮಾಡಿದ್ದೇನು ಗೊತ್ತಾ?

Read Full Story

07:51 PM (IST) Apr 26

ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ - ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ

ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಆಶು ರೆಡ್ಡಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಲಂಡನ್​ ಮೂಲದ ಸಾಫ್ಟ್‌ವೇರ್ ಎಂಜಿನಿಯರ್​ಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

Read Full Story

07:14 PM (IST) Apr 26

ಮಸಾಜ್ ವಿಡಿಯೋ ವೈರಲ್; ಬರೀ ಮೈ ತಿಕ್ಕಿಸಿಕೊಳ್ಳಲು ಈ ನಟಿ ಅಷ್ಟೊಂದು ಹಣ ಖರ್ಚು ಮಾಡ್ತಾರಾ?

ಈ ನಟಿ ರಜೆ ಕಳೆಯಲು ಇಂಡೋನೇಷ್ಯಾದ ಸುಂದರ ಪ್ರವಾಸಿ ತಾಣ 'ಬಾಲಿ'ಗೆ ಹಾರಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದ ಅಂಜು, ಅಲ್ಲಿನ ಒಂದು ಐಷಾರಾಮಿ ಸ್ಪಾದಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಹಲ್‌ಚಲ್ ಸೃಷ್ಟಿಸಿದೆ.

Read Full Story

07:12 PM (IST) Apr 26

ಆ ಒಂದು ಕಿಸ್‌ ಸೀನ್‌ಗೆ ಐಶ್ವರ್ಯಾ ರೈಗೆ ಲೀಗಲ್ ನೋಟಿಸ್ ಬಂದಿತ್ತು - ಹಳೆಯ ವಿಚಾರ ವೈರಲ್

ಐಶ್ವರ್ಯಾ ರೈ ಅವರ 2012ರ ಸಂದರ್ಶನವೊಂದು ಆಗಾಗ ಚರ್ಚೆಗೆ ಬರುತ್ತದೆ. ಡೈಲಿ ಮೇಲ್‌ಗೆ ನೀಡಿದ್ದ ಈ ಸಂದರ್ಶನದಲ್ಲಿ, ಅವರು ತಮ್ಮ ವೃತ್ತಿಜೀವನದ ಅತ್ಯಂತ ವಿವಾದಾತ್ಮಕ ಕಿಸ್ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

Read Full Story

07:12 PM (IST) Apr 26

Khalnayak Returns ಬೆನ್ನಲ್ಲೇ ಸಂಜಯ್​ ದತ್​ ಬೆನ್ನೇರಿತು ಕಾಗೆ - ಸಿಎಂ ಸಿದ್ದು ನೆನಪಿಸಿದ ಕನ್ನಡಿಗರು! Video Viral

'ಖಳನಾಯಕ್ ರಿಟರ್ನ್ಸ್' ಚಿತ್ರದ ಮೂಲಕ ಮರಳುತ್ತಿರುವ ನಟ ಸಂಜಯ್ ದತ್ ಅವರ ಕಾರಿನ ಮೇಲೆ ಕಾಗೆ ಕುಳಿತ ಘಟನೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕುಳಿತು ವಿವಾದ ಸೃಷ್ಟಿಸಿದ್ದ 2016ರ ಪ್ರಸಂಗವನ್ನು ನೆನಪಿಸಿದೆ.
Read Full Story

07:07 PM (IST) Apr 26

ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ

ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ, ಮತ್ತೆ ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಈ ಬಾರಿ ರಕ್ಷಣಾ ಸಚಿವನನ್ನೇ ಬಲಿ ಪಡೆದ ಘಟನೆ ನಡೆದಿದೆ.

Read Full Story

06:29 PM (IST) Apr 26

ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ನಿಮಗೆ ತಿಳಿದಿರಲಿ!

ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.

Read Full Story

05:51 PM (IST) Apr 26

ಬಿಜೆಪಿಯನ್ನೂ ತೊರೆದ್ರಾ ರಾಘವ್​ ಚಡ್ಡಾ? ಜಾಲತಾಣದಲ್ಲಿ ವೈರಲ್​ ಆಗ್ತಿದೆ ಈ ವಿಡಿಯೋ- ಏನಿದರ ಅಸಲಿಯತ್ತು?

ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ತೊರೆದು ಹೊಸ ಪಕ್ಷ ಸೇರುತ್ತಿರುವ ವಿಡಿಯೋ ವೈರಲ್ ಆಗಿದೆ.  ಇದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್​ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ.  ಏನಿದರ ಅಸಲಿಯತ್ತು?

Read Full Story

05:35 PM (IST) Apr 26

ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ

ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ, ಕಠಿಣ ನಿಯಮ, ನಗರದ ದುಬಾರಿ ಖರ್ಚು ವೆಚ್ಚದಲ್ಲಿ ಮನೆ ಕೆಲಸ ಮಾಡುವವರ ಪಾಡನ್ನು ಇನ್‌ಫ್ಲುಯೆನ್ಸರ್ ಬಯಲು ಮಾಡಿದ್ದಾರೆ.

 

Read Full Story

05:35 PM (IST) Apr 26

ಮಗಳು ನೈಸಾ ಹೊಸ ಫೋನ್ ಒಡೆದುಹಾಕಿದ್ದೆ, 3 ವರ್ಷ ಮಾತಾಡಿರಲಿಲ್ಲ - ಕಾಜೋಲ್ ಶಾಕಿಂಗ್ ಮಾತು

1999ರಲ್ಲಿ ಮದುವೆಯಾದ ಬಾಲಿವುಡ್‌ನ ಜನಪ್ರಿಯ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. ಆದರೆ, ಈಗ ನಟಿ ಕಾಜೋಲ್ ತಮ್ಮ ಮಗಳು ನೈಸಾ ಜೊತೆಗಿನ ಸಂಬಂಧದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

Read Full Story

05:21 PM (IST) Apr 26

ಕೇರಳದಲ್ಲಿ 'ಮೈಸಾ' ಶೂಟಿಂಗ್ - ಹಿಂದೆಂದೂ ಮಾಡದ ಬೋಲ್ಡ್ ಪಾತ್ರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ 'ಮೈಸಾ'. ಈ ಚಿತ್ರದ ಶೂಟಿಂಗ್ ಸದ್ಯ ಕೇರಳದಲ್ಲಿ ನಡೆಯುತ್ತಿದ್ದು, ರಶ್ಮಿಕಾ ಹಿಂದೆಂದೂ ಮಾಡದಂತಹ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

05:02 PM (IST) Apr 26

ಮೀನಾ 'ನೋ ಎಂದಿದ್ದಕ್ಕೆ ಸೌಂದರ್ಯ 'ಯೆಸ್' ಅಂದ್ರು.. ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದವರು ಮೀನಾ ಮತ್ತು ಸೌಂದರ್ಯ. ಇಬ್ಬರೂ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಮೀನಾ ನೋ ಎಂದಿದ್ದಕ್ಕೆ ಸೌಂದರ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಸಿಕ್ಕಿದ್ದು ನಿಮಗೆ ಗೊತ್ತಾ?

Read Full Story

04:38 PM (IST) Apr 26

ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ ಟಾಪ್-3 ಬ್ಯಾಟರ್‌ಗಳಿವರು! ಮೊದಲು ಬಾರಿಸಿದ್ದು ಯಾರು?

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಎಲೈಟ್ ಕ್ಲಬ್ ಸೇರಿದ ಟಾಪ್-3 ಆಟಗಾರರಿವರು.

 

Read Full Story

04:33 PM (IST) Apr 26

'ನೀವು ಟಿವಿ ನೋಡೋದು, ಸಿಗರೇಟ್ ಸೇದೋದು ಮಾಡ್ತಿದ್ದೀರಿ, ನಿಮ್ಮ ಗಮನ ಕಥೆ ಮೇಲೆ ಇಲ್ಲ' ಎಂದು ಸ್ಟಾರ್‌ಗೆ ಹೇಳಿದ ನಿರ್ದೇಶಕ!

ಆ ನಟ  ಟೆನ್ಶನ್ ಆಗಿ ಸಿಗರೇಟ್ ಸೇದಲು ಶುರುಮಾಡಿದ್ದಾರೆ. ಇದರಿಂದ ಆ ಡೈರೆಕ್ಟರ್ ಗಮನ ಬೇರೆಡೆ ಹೋಯಿತು. ಆಗ ಅವರು ‘ಕ್ಷಮಿಸಿ ಸರ್, ನೀವು ಟಿವಿ ನೋಡುವುದು ಮತ್ತು ಸಿಗರೇಟ್ ಸೇದುತ್ತಿರುವುದರಿಂದ ನಿಮ್ಮ ಗಮನ ಕಥೆಯ ಮೇಲೆ ಇಲ್ಲ’ ಎಂದಿದ್ದಾರೆ. ಇದನ್ನು ಕೇಳಿದ ಆ ಸ್ಟಾರ್, ‘ಯಾರನ್ನು ನೋಡಿ ಏನು ಮಾತನಾಡುತ್ತಿದ್ದೀಯಾ’ ಎಂಬಂತೆ ರಿಯಾಕ್ಟ್ ಮಾಡಿದ್ದಾರೆ. ಮುಂದೆ..?

Read Full Story

04:22 PM (IST) Apr 26

ಟ್ರಂಪ್ ಹತ್ಯೆಗೆ ಯತ್ನಿಸಿದ ಶೂಟರ್ ಸಾಮಾನ್ಯನಲ್ಲ - ನಾಸಾ ಫೆಲೋ, ಇಂಜಿನಿಯರ್ ಹಾಗೂ ಗೇಮ್ ಡೆವಲಪರ್ ಈ ಅಲೆನ್

ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾಗಿಯಾಗಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ಥಾಮಸ್ ಅಲೆನ್ ಅವರನ್ನು ಬಂಧಿಸಲಾಗಿದ್ದು, ಆತ ಯಾರು ಏನು ಮಾಡ್ತಿದ್ದ. ಎಂಬ ಬಗ್ಗೆ ಡಿಟೇಲ್ ಇಲ್ಲಿದೆ.

Read Full Story

04:19 PM (IST) Apr 26

ಮೋಹನ್‌ಲಾಲ್, ಮಮ್ಮುಟ್ಟಿ ಲೆಜೆಂಡ್ಸ್ ಆಗಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಮಿಲನ ನಟಿ ಪಾರ್ವತಿ

ಮಲಯಾಳಂನ ದಿಗ್ಗಜ ನಟರಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರನ್ನು ಯಾಕೆ 'ಲೆಜೆಂಡ್ಸ್' ಎಂದು ಕರೆಯುತ್ತಾರೆ ಎಂಬುದರ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Read Full Story

04:08 PM (IST) Apr 26

ಬೆನ್ ಸ್ಟೋಕ್ಸ್‌ಗೆ ಸ್ಕ್ರೂಗಳನ್ನು ಬಳಸಿ ಕಾಂಪ್ಲೆಕ್ಸ್ ಸರ್ಜರಿ - ಗುರುತೇ ಸಿಗದಷ್ಟು ಬದಲಾದ ಇಂಗ್ಲೆಂಡ್ ಕ್ಯಾಪ್ಟನ್! ಅಷ್ಟಕ್ಕೂ ಆಗಿದ್ದೇನು?

ಇಂಗ್ಲೆಂಡ್ ಕ್ರಿಕೆಟ್ ನಾಯಕ ಬೆನ್ ಸ್ಟೋಕ್ಸ್ ಅವರ ಹೊಸ ಲುಕ್ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಭ್ಯಾಸದ ವೇಳೆ ಮುಖಕ್ಕೆ ಗಾಯವಾದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಮುಖದ ರಚನೆ ಹಾಗೂ ದೇಹದಲ್ಲಿ ಬದಲಾವಣೆಗಳಾಗಿದ್ದು, ಇದೀಗ ಅವರು ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ.
Read Full Story

04:05 PM (IST) Apr 26

'ಮದುವೆ ಬೇಡ, ಆದ್ರೆ ಮಗು ಬೇಕು' ಎಂದ ದಿವ್ಯಾ ಸತ್ಯರಾಜ್; ಏನಿದು 'ಕಟ್ಟಪ್ಪ' ಮಗಳ ಶಾಕಿಂಗ್ ಸಮಾಚಾರ!?

‘ಮದುವೆ ಎಲ್ಲರಿಗೂ ಅವಶ್ಯಕ ಎಂದು ನಾನು ಭಾವಿಸುವುದಿಲ್ಲ. ತಾಳಿ ಕಟ್ಟುವುದು, ಉಂಗುರ ಬದಲಾಯಿಸುವುದು ಮುಂತಾದ ಸಾಂಪ್ರದಾಯಿಕ ಆಚರಣೆಗಳಲ್ಲಿ ನನಗೆ ನಂಬಿಕೆಯಿಲ್ಲ. ಗಂಡು-ಹೆಣ್ಣು ಇಬ್ಬರಿಗೂ ಒಬ್ಬರನ್ನೊಬ್ಬರು ಇಷ್ಟಪಟ್ಟರೆ, ಅವರು ಒಟ್ಟಿಗೆ ಬದುಕಬಹುದು. ಅದಕ್ಕಾಗಿ ಮದುವೆಯಾಗಲೇಬೇಕೆಂದೇನೂ ಇಲ್ಲ’ ಎಂದಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇದೆ.. ಈ ಸ್ಟೋರಿ ನೋಡಿ..

Read Full Story

03:29 PM (IST) Apr 26

ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ

ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ, ಶೆಹಝಾದ್ ಈಗ ಶಂಕರ್ ಹಾಗೂ ಆತನ ಪತ್ನಿ ಸಾವಿತ್ರಿಯಾಗಿ ಹೆಸರು ಬದಲಾಯಿಸಿದ್ದಾರೆ. ಇವರ ಮೂವರು ಮಕ್ಕಳೂ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.

Read Full Story

01:52 PM (IST) Apr 26

ಮಂತ್ರಾಲಯಕ್ಕೆ ಹೋಗುವವರಿಗೆ ಭರ್ಜರಿ ಗುಡ್​ನ್ಯೂಸ್​ - ವಿಶೇಷ ನೇರ ರೈಲು- ಇಲ್ಲಿದೆ ಡಿಟೇಲ್ಸ್​

ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಕಾಕಿನಾಡ-ಮೈಸೂರು ಎಕ್ಸ್‌ಪ್ರೆಸ್ ಎಂಬ ಹೊಸ ರೈಲನ್ನು ಆರಂಭಿಸಿದೆ. ಈ ರೈಲು ಮೈಸೂರು, ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲ ಕಲ್ಪಿಸಲಿದ್ದು, ಮೇ 1 ರಿಂದ ಸಂಚಾರ ಆರಂಭಿಸಲಿದೆ. ಇದು ಉತ್ತರ ಕರ್ನಾಟಕದ ಪ್ರಯಾಣಿಕರಿಗೂ ಸಹಕಾರಿಯಾಗಿದೆ.
Read Full Story

01:28 PM (IST) Apr 26

Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್

ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ತಮ್ಮ ಸ್ನೇಹಕ್ಕೆ ಹೆಸರುವಾಸಿ. ಒಮ್ಮೆ ತೀವ್ರ ತಲೆನೋವಿನಿಂದ ಬಳಲುತ್ತಿದ್ದಾಗ,  ಬೇಡ ಬೇಡ ಅಂದ್ರೂ ಶಾರುಖ್ ಕೊಟ್ಟ ಮಾತ್ರೆಯಿಂದ ಬಳಿಕ ಆಗಿದ್ದೇನು ಎನ್ನುವುದನ್ನು ನಟಿ ಕಾಜೋಲ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

Read Full Story

01:26 PM (IST) Apr 26

ಒಂದೇ ದಿನ ನಾಲ್ಕು ಜನರ ಮುಡಿಗೇರಿದ ಆರೆಂಜ್ ಕ್ಯಾಪ್! ಈಗ ಯಾರ ಬಳಿಯಿದೆ ಆ ಕ್ಯಾಪ್?

ನಿನ್ನೆ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರೆಂಜ್ ಕ್ಯಾಪ್ ಒಂದೇ ದಿನದಲ್ಲಿ ನಾಲ್ಕು ಆಟಗಾರರ ನಡುವೆ ಕೈ ಬದಲಾಯಿಸಿತು. ವಿರಾಟ್ ಕೊಹ್ಲಿಯಿಂದ ಆರಂಭವಾಗಿ, ಕೆ.ಎಲ್. ರಾಹುಲ್ ಮತ್ತು ವೈಭವ್ ಸೂರ್ಯವಂಶಿ ಮೂಲಕ ಅಂತಿಮವಾಗಿ ಅಭಿಷೇಕ್ ಶರ್ಮಾ ಅವರ ಪಾಲಾಯಿತು. ಈ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
Read Full Story

01:23 PM (IST) Apr 26

ದೆಹಲಿಯಲ್ಲಿ ಟೇಕಾಫ್ ವೇಳೆ ವಿಮಾನದಲ್ಲಿ ಬೆಂಕಿ - ಆರು ಪ್ರಯಾಣಿಕರಿಗೆ ಗಾಯ

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಝ್ಯುರಿಚ್‌ಗೆ ಹೊರಟಿದ್ದ ಸ್ವಿಸ್ ವಿಮಾನದ ಎಂಜಿನ್‌ನಲ್ಲಿ ಟೇಕಾಫ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

12:39 PM (IST) Apr 26

IPL 2026 ತನ್ನ ಹೊಸ ಫೇವರೇಟ್ ಆಟಗಾರನ ಹೆಸರಿಸಿದ ಪ್ಯಾಟ್ ಕಮಿನ್ಸ್!

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ, ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಅವರ ಬ್ಯಾಟಿಂಗ್‌ಗೆ ಮನಸೋತ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ವೈಭವ್ ತನ್ನ ಹೊಸ ಫೇವರಿಟ್ ಆಟಗಾರ ಎಂದು ಶ್ಲಾಘಿಸಿದ್ದಾರೆ. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
Read Full Story

12:12 PM (IST) Apr 26

ಮೆಟ್ರೋ ನಿಲ್ದಾಣದಲ್ಲಿ ದುರ್ವಾಸನೆ - ಲಾಕ್ ಆಗಿದ್ದ ಮಹಿಳಾ ಶೌಚಾಲಯದ ಬಾಗಿಲು ಒಡೆದ ಪೊಲೀಸರಿಗೆ ಶಾಕ್

ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಮುರಿದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರ ಗುರುತು ಪತ್ತೆ ನಡೆಯುತ್ತಿದೆ.

Read Full Story

11:55 AM (IST) Apr 26

ಶೂಟಿಂಗ್ ಮುಗಿದ ಮೇಲೆ ನಟನಟಿಯರ ದುಬಾರಿ ಬಟ್ಟೆಗಳನ್ನು ಕಸದ ಬುಟ್ಟಿಗೆ ಹಾಕ್ತಾರಾ? ಇಲ್ಲಿದೆ ನೋಡಿ ಸೀಕ್ರೆಟ್!

ನಾವು ಬೆಳ್ಳಿ ಪರದೆಯ ಮೇಲೆ ನಮ್ಮ ನೆಚ್ಚಿನ ನಟ-ನಟಿಯರನ್ನು ನೋಡಿದಾಗ ಅವರ ನಟನೆಗಿಂತ ಹೆಚ್ಚಾಗಿ ನಮ್ಮ ಕಣ್ಣು ಸೆಳೆಯುವುದು ಅವರು ಧರಿಸುವ ಕಲರ್ ಫುಲ್ ಮತ್ತು ಕಾಸ್ಟ್ಲಿ ಬಟ್ಟೆಗಳು! ಒಂದು ಹಾಡಿಗೆ ಅಥವಾ ಒಂದು ಸೀನ್ ಫೈಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಿ ಡಿಸೈನ್ ಮಾಡಿದ ಆ ಬಟ್ಟೆಗಳು ಸಿನಿಮಾ ಮುಗಿದ ಮೇಲೆ ಏನಾಗುತ್ತವೆ?

Read Full Story

10:55 AM (IST) Apr 26

ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಮಾತು - ಬಲಪಂಥೀಯ ವಾಗ್ಮಿ ಗೌತಮ್ ಬಂಧನ

ಗೋವಾದ ಸಂತ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಲಪಂಥೀಯ ವಾಗ್ಮಿ ಗೌತಮ್ ಕಟ್ಟರ್ ಅವರನ್ನು ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ. ಗೋವಾ ಪೊಲೀಸರ ಹುಡುಕಾಟದ ನಂತರ, ಕ್ರೈಂ ಬ್ರಾಂಚ್ ಅವರನ್ನು ವಶಕ್ಕೆ ಪಡೆದಿದೆ.

Read Full Story

10:42 AM (IST) Apr 26

ಪೋಸ್ಟಿಂಗ್ ಜೀರೋ - ಜೆನ್‌ ಝೀಗಳ ಕೋಣೆಯಲ್ಲಿನ ಲೈಟ್ ಆಫ್‌ , ಎಲ್ಲವೂ ಗುಪ್ತ್ ಗುಪ್ತ್

ಜೆನ್‌ ಝೀ ತಲೆಮಾರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೂ, ತಮ್ಮ ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಈ 'ಪೋಸ್ಟಿಂಗ್ ಜೀರೋ' ಟ್ರೆಂಡ್ ಮೂಲಕ ಅವರು ಕೃತಕ ಜಗತ್ತಿನಿಂದ ದೂರ ಸರಿದು, ಖಾಸಗಿತನ ಮತ್ತು ನೈಜ ಅನುಭವಗಳಿಗೆ ಹೆಚ್ಚು ಮೌಲ್ಯ ನೀಡುತ್ತಿದ್ದಾರೆ.

Read Full Story

10:36 AM (IST) Apr 26

ಬಿಳಿ ಬೆಕ್ಕು ದಾರಿಗೆ ಅಡ್ಡ ಬಂದ್ರೆ ಏನಾಗುತ್ತೆ? ಅದೃಷ್ಟವೋ, ದುರದೃಷ್ಟವೋ?

ಬೆಕ್ಕು ದಾರಿಗೆ ಅಡ್ಡ ಬಂದರೆ ಕೆಟ್ಟ ಶಕುನ ಅಂತಾರೆ. ಹಾಗಾದ್ರೆ ಬಿಳಿ ಬೆಕ್ಕು ಎದುರಾದ್ರೆ ಏನಾಗುತ್ತೆ? ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ. ಇದರ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Read Full Story

09:51 AM (IST) Apr 26

ವರ್ಷದೊಳಗೆ 3ನೇ ಬಾರಿ ಟ್ರಂಪ್ ಹತ್ಯೆ ಯತ್ನ - ಶಂಕಿತನ ಫೋಟೋ ಬಿಡುಗಡೆ ಮಾಡಿದ ಟ್ರಂಪ್

ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ಕೇವಲ ಒಂದು ವರ್ಷದೊಳಗೆ ನಡೆದ ಮೂರನೇ ಹತ್ಯಾ ಯತ್ನವಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ದಾಳಿಗಳಿಂದಲೂ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

Read Full Story

09:43 AM (IST) Apr 26

ಡೆಲ್ಲಿಯ ಹೆವಿ ಟ್ರಾಫಿಕ್ ನಡುವೆಯೂ 11 ನಿಮಿಷಕ್ಕೆ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆ ಸೇರಿದ ಕ್ರಿಕೆಟಿಗ ಲುಂಗಿ ಎಂಗಿಡಿ! ವಿಡಿಯೋ ವೈರಲ್

ಐಪಿಎಲ್ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಹೋಗಿ ತಲೆಗೆ ಪೆಟ್ಟು ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಆಸ್ಪತ್ರೆಗೆ ಸಾಗಿಸಲು ದೆಹಲಿ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸಿ ಮಾನವೀಯತೆ ಮೆರೆದಿದ್ದಾರೆ. ದೆಹಲಿಯ ಭಾರಿ ಟ್ರಾಫಿಕ್ ನಡುವೆಯೂ, ಆಂಬ್ಯುಲೆನ್ಸ್ ಕೇವಲ 11 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದ್ದು, ಸದ್ಯ ಎನ್‌ಗಿಡಿ ಅವರ ಆರೋಗ್ಯ ಸ್ಥಿರವಾಗಿದೆ.
Read Full Story

08:20 AM (IST) Apr 26

ಮದ್ವೆ ಆಗ್ತೀನಿ ಅಂತ ನಂಬಿಸಿ ಅತ್ಯಾ*ಚಾರ, ಗರ್ಭಿಣಿ ಅಂತ ಗೊತ್ತಾಗ್ತಿದ್ದಂತೆ ಕೈಕೊಟ್ಟ 19 ವರ್ಷದ ಇಂಜಿನಿಯರಿಂಗ್ ಸ್ಟೂಡೆಂಟ್ ಅರೆಸ್ಟ್!

ಕೋಯಿಕ್ಕೋಡ್: ಮಕ್ಕಳು ಕಾಲೇಜಿನಲ್ಲಿ ಓದಿ ಬದುಕು ಕಟ್ಟಿಕೊಳ್ಳಲಿ ಎಂದು ಪೋಷಕರು ಬಯಸಿದರೆ, ಮಕ್ಕಳು ಮಾತ್ರ ಬೇರೆಯದ್ದೇ ದಾರಿ ಹಿಡಿಯುತ್ತಿದ್ದಾರೆ. 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಹಲವು ಬಾರಿ ಬಳಸಿಕೊಂಡು ಕೈಕೊಟ್ಟಿದ್ದಾನೆ.

 

Read Full Story

07:53 AM (IST) Apr 26

ಮೋದಿ, ಮಮತಾ ಇಬ್ಬರೂ ಬಡವರ ವಿರೋಧಿಗಳು, ದೀದಿ ವಿರುದ್ಧ ED ಕೇಸ್ ಯಾಕಿಲ್ಲ - ರಾಹುಲ್ ಗಾಂಧಿ

ಪಶ್ಚಿಮ ಬಂಗಾಳದ ಶ್ರೀರಾಂಪುರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಇಬ್ಬರೂ ಶ್ರೀಮಂತರಿಗೆ ಸಹಾಯ ಮಾಡುತ್ತಿದ್ದಾರೆ, ಬಡವರಿಗಲ್ಲ ಎಂದು ಆರೋಪಿಸಿದ್ದಾರೆ. 

Read Full Story

07:31 AM (IST) Apr 26

2 ವರ್ಷ ಹಿಂದೆ ಓಡಿಹೋಗಿದ್ದ ಪತ್ನಿ ಮತದಾನ ವೇಳೆ ಸಿಕ್ಕಿಬಿದ್ಲು - ಹೆಂಡ್ತಿ ಹಿಡಿಯಲು ನೆರವಾದ SIR!

ಎರಡು ವರ್ಷಗಳ ಹಿಂದೆ ಓಡಿಹೋಗಿದ್ದ ಪತ್ನಿಯನ್ನು, ಪತಿಯೊಬ್ಬ ಸಿಲಿಗುರಿಯ ಮತಗಟ್ಟೆಯ ಬಳಿ ಐದು ಗಂಟೆಗಳ ಕಾಲ ಕಾದು ಹಿಡಿದಿದ್ದಾನೆ. ಮತ ಚಲಾಯಿಸಲು ಬಂದ ಪತ್ನಿ ಸಿಕ್ಕ ಕೂಡಲೇ ಆಕೆಯ ಮೇಲೆ ಹಲ್ಲೆಗೆ ಮುಂದಾದ ಪತಿಯನ್ನು ಭದ್ರತಾ ಸಿಬ್ಬಂದಿ ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ.
Read Full Story

More Trending News