Published : Mar 21, 2026, 07:18 AM ISTUpdated : Mar 21, 2026, 10:56 PM IST

India Latest News Live: 'ಜಸ್ಟ್‌ ಒಂದೇ ಒಂದು ದಿನ ನನ್ನ ಜೊತೆ ಮಲಗು..' ರೇಪ್‌ ಸಂತ್ರಸ್ಥೆಯಿಂದ ಸುಖ ಕೋರಿದ ಪೊಲೀಸ್‌ ಸಸ್ಪೆಂಡ್‌!

ಸಾರಾಂಶ

ಏರ್ ಇಂಡಿಯಾ ವಿಮಾನ ಮತ್ತೊಂದು ಎಡವಟ್ಟು ಮಾಡಿ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ದೆಹಲಿ ಕೆನಡಾ ಏರ್ ಇಂಡಿಯಾ ವಿಮಾನ ಬರೋಬ್ಬರಿ 5 ಗಂಟೆ ಹಾರಾಟದ ಬಳಿಕ ಅಧಿಕಾರಿಗಳಿಗೆ ತಾವು ಕೆನಡಾಗೆ ಕಳುಹಿಸಿದ ವಿಮಾನಕ್ಕೆ ವಿದೇಶದಲ್ಲಿ ಲ್ಯಾಂಡ್ ಆಗಲು ಅನುಮತಿ ಇಲ್ಲ ಅನ್ನೋದು ಜ್ಞಾನೋದಯವಾಗಿದೆ. ತಕ್ಷಣವೇ ಏರ್ ಇಂಡಿಯಾ ವಿಮಾನ ಯೂ ಟೂರ್ನ್ ಪಡೆದು ಮರಳಿ ದೆಹಲಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದಾಗ ವಿಮಾನ ಚೀನಾ ಗಡಿ ದಾಟಿತ್ತು. ಪಂಚ ರಾಜ್ಯ ಚುನಾವಣೆ ಅಪ್‌ಡೇಟ್, ಮದ್ಯಪ್ರಾಚ್ಯ ಯುದ್ಧ, ತೈಲ ಹಾಗೂ ಗ್ಯಾಸ್ ಕೊರತೆ ಸೇರಿದಂತೆ ಇಂದಿನ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

 

10:56 PM (IST) Mar 21

'ಜಸ್ಟ್‌ ಒಂದೇ ಒಂದು ದಿನ ನನ್ನ ಜೊತೆ ಮಲಗು..' ರೇಪ್‌ ಸಂತ್ರಸ್ಥೆಯಿಂದ ಸುಖ ಕೋರಿದ ಪೊಲೀಸ್‌ ಸಸ್ಪೆಂಡ್‌!

ಉತ್ತರ ಪ್ರದೇಶದಲ್ಲಿ, ಅ*ತ್ಯಾಚಾ*ರ ಸಂತ್ರಸ್ತೆಯೊಬ್ಬರ ದೂರು ದಾಖಲಿಸಲು ಕಾನ್‌ಸ್ಟೆಬಲ್ ಒಬ್ಬರು ಲೈಂಗಿಕ ಸುಖಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆ ನೀಡಿದ ಫೋನ್ ಸಂಭಾಷಣೆಯ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ, ಆರೋಪಿ ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ.

Read Full Story

09:48 PM (IST) Mar 21

ಮುಂಬೈ ಬೀಚ್‌ನಲ್ಲಿ ಬಾಡಿಗೆಗೆ ಸಿಕ್ತಾರೆ 'ದುಃಖ' ಕೇಳೋ ವ್ಯಕ್ತಿ; ನೋವು ತೋಡಿಕೊಳ್ಳಲು ₹250, ಜೊತೆಗೇ ಅಳಲು ₹1,000!

ಮುಂಬೈನ ಪೃಥ್ವಿರಾಜ್ ಬೋಹ್ರಾ ಎಂಬುವವರು ಜುಹು ಬೀಚ್‌ನಲ್ಲಿ 'ಆಲಿಸುವ ಸೇವೆ'ಯನ್ನು ಆರಂಭಿಸಿದ್ದಾರೆ. ಜನರ ದುಃಖ, ಚಿಂತೆಗಳನ್ನು ಕೇಳಲು ಅವರು ನಿಗದಿತ ಶುಲ್ಕವನ್ನು ವಿಧಿಸುತ್ತಾರೆ. ನಗರ ಜೀವನದಲ್ಲಿನ ಒಂಟಿತನ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

09:07 PM (IST) Mar 21

ಶೇ.60ರಷ್ಟು ಸೀಟು ಉಚಿತ ಆಯ್ಕೆಯೆಂದ ಕೇಂದ್ರದ ನಿಯಮಕ್ಕೆ ವಿಮಾನಯಾನ ಸಂಸ್ಥೆಗಳ ಆಕ್ಷೇಪ, ಟಿಕೆಟ್ ದರ ಏರಿಕೆ ಎಚ್ಚರಿಕೆ

ಕೇಂದ್ರ ಸರ್ಕಾರವು ವಿಮಾನಗಳಲ್ಲಿ ಕನಿಷ್ಠ 60% ಸೀಟುಗಳನ್ನು ಉಚಿತ ಆಯ್ಕೆಗೆ ನೀಡಬೇಕೆಂದು ಹೊಸ ನಿರ್ದೇಶನ ಹೊರಡಿಸಿದೆ. ಈ ಕ್ರಮಕ್ಕೆ ವಿಮಾನಯಾನ ಸಂಸ್ಥೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಆದಾಯಕ್ಕೆ ಹೊಡೆತ ನೀಡುವುದರಿಂದ ಅಂತಿಮವಾಗಿ ವಿಮಾನ ದರಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಎಚ್ಚರಿಸಿದೆ. ಈ ನಿರ್ದೇಶನವು ಪ್ರಯಾಣಿಕರ ಮೇಲೆ ದೀರ್ಘಾವಧಿಯಲ್ಲಿ ಹೊರೆಯಾಗಬಹುದು ಎಂದು ಸಂಸ್ಥೆಗಳು ವಾದಿಸಿವೆ.
Read Full Story

08:08 PM (IST) Mar 21

ಭಾಗ್ಯರಾಜ್‌ಗೆ ಕಂಪೋಸ್ ಮಾಡಿದ ಹಾಡನ್ನು ರಜನಿಕಾಂತ್‌ ಚಿತ್ರಕ್ಕೆ ಕೊಟ್ಟ ಇಳಯರಾಜಾ! ಅದು ಈ ಹಿಟ್ ಹಾಡಾ?

ಸಂಗೀತ ನಿರ್ದೇಶಕ ಇಳಯರಾಜಾ ಅವರು ಭಾಗ್ಯರಾಜ್ ಚಿತ್ರಕ್ಕಾಗಿ ಕಂಪೋಸ್ ಮಾಡಿದ್ದ ಎರಡು ಹಾಡುಗಳನ್ನು ಸೂಪರ್‌ಸ್ಟಾರ್ ರಜನಿಕಾಂತ್‌ ಅವರ ಚಿತ್ರಕ್ಕೆ ನೀಡಿದ್ದರು. ಆ ಕುತೂಹಲಕಾರಿ ಕಥೆಯನ್ನು ಇಲ್ಲಿ ನೋಡೋಣ.

Read Full Story

07:58 PM (IST) Mar 21

'ಲಂಡನ್‌ ಬೀದಿಯಲ್ಲಿ ಆಟೋರಿಕ್ಷಾ..' ಕೊನೆಗೂ ಇಂಗ್ಲೆಂಡ್ ಮೇಲೆ ನಮ್ಮ ರಾಜ್ಯಭಾರ ಶುರು ಎಂದ ನೆಟ್ಟಿಗರು!

ಲಂಡನ್‌ನ ಬ್ಯುಸಿ ರಸ್ತೆಯೊಂದರಲ್ಲಿ ಭಾರತೀಯ ಆಟೋ ರಿಕ್ಷಾ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವು ವಿದೇಶದಲ್ಲಿರುವ ಭಾರತೀಯರಲ್ಲಿ ತಾಯ್ನಾಡಿನ ಬಗ್ಗೆ ಹೆಮ್ಮೆ ಮತ್ತು ನಾಸ್ಟಾಲ್ಜಿಯಾವನ್ನು ಮೂಡಿಸಿದ್ದು, ಇದು ಸಾಂಸ್ಕೃತಿಕ ಕೊಂಡಿಯಾಗಿ ಗಮನ ಸೆಳೆದಿದೆ.
Read Full Story

07:38 PM (IST) Mar 21

ಹಿಮಾಚಲದಲ್ಲಿ ಆರ್ಥಿಕ ಬಿಕ್ಕಟ್ಟು - 6 ತಿಂಗಳು ವೇತನ ಖಡಿತ ಘೋಷಿಸಿದ ಸಿಎಂ ಸುಖ್ವಿಂದರ್ ಸಿಂಗ್!

ಹಿಮಾಚಲ ಪ್ರದೇಶವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳ ವೇತನವನ್ನು ಆರು ತಿಂಗಳ ಕಾಲ ಮುಂದೂಡುವ ಕಠಿಣ ನಿರ್ಧಾರವನ್ನು ಘೋಷಿಸಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಸುಧಾರಿಸಲು 2026-27ರ ಬಜೆಟ್ ಗಾತ್ರವನ್ನು ಕಡಿತಗೊಳಿಸಿ, ವೆಚ್ಚ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
Read Full Story

07:25 PM (IST) Mar 21

ಧುರಂಧರ್ 2 ನಂತರ ಅರ್ಜುನ್‌ಗೆ ಮತ್ತೊಂದು ದೊಡ್ಡ ಅವಕಾಶ - ರಿಷಬ್ ಶೆಟ್ಟಿ ಚಿತ್ರದಲ್ಲಿ ಖತರ್ನಾಕ್ ವಿಲನ್!

'ಧುರಂಧರ್ 2' ಚಿತ್ರದಲ್ಲಿ ಖತರ್ನಾಕ್ ವಿಲನ್ ಆಗಿ ಮಿಂಚಿದ ನಟ ಅರ್ಜುನ್ ರಾಂಪಾಲ್ ಶೀಘ್ರದಲ್ಲೇ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Read Full Story

07:17 PM (IST) Mar 21

ಈದ್‌ ಪ್ರಾರ್ಥನೆ ಬಳಿಕ 'ಧುರಂದರ್‌' ದಾಳಿಗೆ ಮರ್ಕಜ್ ತೈಬಾ ಮಸೀದಿಯಲ್ಲೇ ಪ್ರಾಣಬಿಟ್ಟ ಲಷ್ಕರ್‌ ಕಮಾಂಡರ್‌ ಬಿಲಾಲ್‌ ಆರಿಫ್‌ ಸಲಾಫಿ?

ಪಾಕಿಸ್ತಾನದ ಮುರಿದ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಕೇಂದ್ರದೊಳಗೆ, ಅಪರಿಚಿತ ದುಷ್ಕರ್ಮಿಗಳು ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 

Read Full Story

07:06 PM (IST) Mar 21

Pushpa 2 ಸಿನಿಮಾದಲ್ಲಿ ನಟಿಸಿ ಯಾಕೆ ಪಶ್ಚಾತ್ತಾಪ ಪಡ್ತಿದ್ದಾರೆ ಈ ನಟಿ? ಅಷ್ಟಕ್ಕೂ ಆಗಿದ್ದೇನು?

20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನಾನು ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೆ ಆಘಾತವಾಯಿತುವ ಎಂದರು ನಟಿ ದಿವಿ ವಡತ್ಯಾ.

Read Full Story

07:00 PM (IST) Mar 21

ಡಾ.ರಾಜ್​ ಚಿತ್ರದ ಹಾಡನ್ನು ಶೇರ್​ ಮಾಡಿದ ಪಿಎಂ ಮೋದಿ - ಕನ್ನಡಿಗರಿಂದ ಧನ್ಯವಾದಗಳ ಮಹಾಪೂರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಅಭಿನಯದ 'ಶ್ರೀ ಕೃಷ್ಣದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಗೀತೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಶ್ಲಾಘಿಸಿರುವ ಅವರ ಈ ಪೋಸ್ಟ್‌ಗೆ ಕರುನಾಡಿನ ಜನರಿಂದ ಮತ್ತು ಅಣ್ಣಾವ್ರ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

06:43 PM (IST) Mar 21

Honeymoon Photo - ಖಾಸಗಿ ವಿಲ್ಲಾದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ! ಫೋಟೋ ಸಖತ್ ವೈರಲ್

ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹನಿಮೂನ್ ಫೋಟೋವೊಂದು ಹೊರಬಿದ್ದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Read Full Story

06:31 PM (IST) Mar 21

ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸಿದ್ದ ವೈದ್ಯೆ ವಂದನಾ ಹತ್ಯೆ, 27 ಬಾರಿ ಇರಿದ ಅಪರಾಧಿ ಶಿಕ್ಷಕನಿಗೆ ಜೀವಾವಧಿ

ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಡಾ. ವಂದನಾ ದಾಸ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಶಾಲಾ ಶಿಕ್ಷಕ ಜಿ ಸಂದೀಪ್‌ಗೆ ಕೇರಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯ ಜೊತೆಗೆ, ಇತರ ಅಪರಾಧಗಳಿಗಾಗಿ ಹೆಚ್ಚುವರಿ 30 ವರ್ಷಗಳ ಜೈಲು ಶಿಕ್ಷೆಯನ್ನೂ ನ್ಯಾಯಾಲಯವು ಘೋಷಿಸಿದ್ದು, ಇದು ಪೂರ್ಣಗೊಂಡ ನಂತರವೇ ಜೀವಾವಧಿ ಶಿಕ್ಷೆ ಆರಂಭವಾಗಲಿದೆ.
Read Full Story

06:30 PM (IST) Mar 21

ಕೆಕೆಆರ್‌ಗೆ ಮತ್ತೊಂದು ಶಾಕ್ - ಹರ್ಷಿತ್ ರಾಣಾ ಬಳಿಕ ಮತ್ತೋರ್ವ ಪ್ರಮುಖ ವೇಗಿ ಐಪಿಎಲ್ ಸೀಸನ್‌ನಿಂದಲೇ ಔಟ್?

ಐಪಿಎಲ್ ಆರಂಭಕ್ಕೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಪ್ರಮುಖ ವೇಗದ ಬೌಲರ್ ಆಕಾಶ್ ದೀಪ್ ಗಾಯದಿಂದಾಗಿ ಈ ಸೀಸನ್‌ನಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಇದು ಈಗಾಗಲೇ ಬೌಲರ್‌ಗಳ ಕೊರತೆ ಎದುರಿಸುತ್ತಿರುವ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಅವರ ಸ್ಥಾನಕ್ಕೆ ಕೆಕೆಆರ್ ಮ್ಯಾನೇಜ್‌ಮೆಂಟ್ ಬದಲಿ ಆಟಗಾರರ ಹುಡುಕಾಟದಲ್ಲಿದೆ.
Read Full Story

06:15 PM (IST) Mar 21

ಹಿಂದೂ ಮಹಾಸಾಗರದ ಯುಎಸ್‌-ಯುಕೆ ನೆಲೆ ಮೇಲೆ ಇರಾನ್‌ ದಾಳಿ, ಕ್ಷಿಪಣಿ ಪ್ರಯಾಣಿಸಿದ ದೂರ ನೋಡಿ ಬೆಚ್ಚಿಬಿದ್ದ ಅಮೆರಿಕ!

ಅಮೆರಿಕ-ಇರಾನ್ ಸಂಘರ್ಷವು ಹಿಂದೂ ಮಹಾಸಾಗರಕ್ಕೆ ವಿಸ್ತರಿಸಿದ್ದು, ಇರಾನ್ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಸೇನಾ ನೆಲೆಯ ಮೇಲೆ ವಿಫಲ ಕ್ಷಿಪಣಿ ದಾಳಿ ನಡೆಸಿದೆ. ಈ ಮಿಸೈಲ್‌ ಪ್ರಯಾಣ ಮಾಡಿರುವ ದೂರ ನೋಡಿ ಅಮೆರಿಕ ಕಂಗಾಲಾಗಿದೆ.

Read Full Story

05:51 PM (IST) Mar 21

ಅವರ ಸಾವು, ನನಗೆ ಹುಟ್ಟು - ಅವರ ಹೃದಯ, ನನ್ನಲ್ಲಿ ಬಡಿತ - ಹೃದಯ ಕಸಿ ಮಾಡಿದ ಆತಂಕದ ದಿನ ನೆನೆದ ರೀನಾ

ರಾಜ್ಯದ ಮೊದಲ ಮಹಿಳಾ ಹೃದಯ ಕಸಿ ಸ್ವೀಕರಿಸಿದ ಕನ್ನಡತಿ ರೀನಾ ರಾಜು, 2009ರಲ್ಲಿಹೃದಯ ಕಸಿ ಮಾಡಿಸಿಕೊಂಡಿದ್ದಾರೆ. ಅವರು 'ಲೈಟ್ ಎ ಲೈಫ್' ಫೌಂಡೇಶನ್ ಮೂಲಕ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕಸಿ ನಂತರವೂ ಸಕ್ರಿಯ ಜೀವನ ನಡೆಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದ್ದಾರೆ.

Read Full Story

05:38 PM (IST) Mar 21

ಪಾನಿಪುರಿ ಗಾಡಿಯ ಮೇಲೆ ಎರಡು ದಿನದ ಹಸುಗೂಸನ್ನು ಬಿಟ್ಟು ಹೋದ ಇಬ್ಬರು ಯುವತಿಯರು!

ಅಹಮದಾಬಾದ್‌ನಲ್ಲಿ ಇಬ್ಬರು ಯುವತಿಯರು ಎರಡು ದಿನದ ನವಜಾತ ಶಿಶುವನ್ನು ಪಾನಿಪುರಿ ಗಾಡಿಯ ಮೇಲೆ ತ್ಯಜಿಸಿ ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

05:28 PM (IST) Mar 21

'ಧುರಂಧರ್ 2' ಬ್ಯಾನ್ ಮಾಡಿ! ಕೋಟಿ ಕೋಟಿ ಬಾಚುತ್ತಿರುವ ಸಿನಿಮಾ ವಿರುದ್ಧ ಎದ್ದಿದ್ಯಾಕೆ ಈ ಕೂಗು?

'ಧುರಂಧರ್ 2' ಸಿನಿಮಾ ಬಗ್ಗೆ ವಿವಾದ ಜೋರಾಗುತ್ತಿದೆ. ಈಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ವಕ್ತಾರ ವಾರಿಸ್ ಪಠಾಣ್ ಈ ಸಿನಿಮಾವನ್ನು 'ಪ್ರಾಪಗಾಂಡ' ಎಂದು ನೇರವಾಗಿ ಕರೆದಿದ್ದಾರೆ.

Read Full Story

05:12 PM (IST) Mar 21

ಪೋ*ರ್ನ್ ವಿಡಿಯೋಶೂಟ್​ ಮಾಡೋದು ಹೀಗಂತೆ! ನಂಬಲಸಾಧ್ಯ ಶಾಕಿಂಗ್​ ವಿಷ್ಯ ವೈದ್ಯೆಯಿಂದ ರಿವೀಲ್​

ಪೋ*ರ್ನ್ ವಿಡಿಯೋಗಳಲ್ಲಿ ಗಂಟೆಗಟ್ಟಲೆ ನಡೆಯುವ ಕ್ರಿಯೆಯನ್ನು ನೋಡಿ ಅನೇಕರು ತಮ್ಮ ಲೈಂ*ಗಿಕ ಜೀವನದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಆದರೆ, ಖ್ಯಾತ ವೈದ್ಯೆ ಡಾ.ದುರ್ಗಶ್ರೀ ಶೆಟ್ಟಿ ಅವರು, ಈ ವಿಡಿಯೋ ಶೂಟಿಂಗ್‌ನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಮಧ್ಯೆ ಬ್ರೇಕ್‌ಗಳು, ಹಾಸಿಗೆ ಹೇಗೆ ಅಲ್ಲಾಡತ್ತೆ, ಮಹಿಳೆಯರು ಏನು ಮಾಡ್ತಾರೆ ಸೇರಿದಂತೆ ಅಲ್ಲಿ ನಡೆಯುವುದೆಲ್ಲವನ್ನೂ ತಿಳಿಸಿದ್ದಾರೆ.

Read Full Story

04:54 PM (IST) Mar 21

ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈದ್ ಸಂಭ್ರಮಕ್ಕೆ ತೆರೆಯದ ಅಲ್‌ ಅಕ್ಸಾ ಮಸೀದಿ ಬಾಗಿಲು!

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಈ ಬಾರಿಯ ಈದ್ ಹಬ್ಬದ ಸಂಭ್ರಮ ಕಳೆಗುಂದಿದೆ. ಐತಿಹಾಸಿಕ ಅಲ್-ಅಕ್ಸಾ ಮಸೀದಿಯನ್ನು 1967ರ ನಂತರ ಮೊದಲ ಬಾರಿಗೆ ಮುಚ್ಚಲಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ. 

Read Full Story

04:04 PM (IST) Mar 21

ಜ್ಯೋತಿಷಿ ಅಶೋಕ್ ಖರಾತ್ ಹಗರಣ - 250ಕ್ಕೂ ಅಧಿಕ ಅಶ್ಲೀಲ ವಿಡಿಯೋ, 'ಯೋನಿ ಪೂಜೆ' ಹೆಸರಲ್ಲಿ ಹೆಣ್ಣುಮಕ್ಕಳ ಶೋಷಣೆ!

ಅ*ತ್ಯಾಚಾ*ರ ಆರೋಪದ ಮೇಲೆ ಜ್ಯೋತಿಷಿ ಅಶೋಕ್ ಖರಾತ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ ರಾಜಕಾರಣಿಗಳು ಸೇರಿದಂತೆ 250ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿವೆ ಎಂದು 'ಗುಲಾಬಿ ಗ್ಯಾಂಗ್' ಅಧ್ಯಕ್ಷೆ ಸಂಗೀತಾ ತಿವಾರಿ ಆರೋಪಿಸಿದ್ದಾರೆ. 

Read Full Story

03:35 PM (IST) Mar 21

ಉದ್ಯಮಿ ಗೌತಮ್ ಸಿಂಘಾನಿಯ ಜತೆಗಿದ್ದು, ಮಾಲ್ಡೀವ್ಸ್ ಬೋಟ್‌ ದುರಂತದಲ್ಲಿ ನಾಪತ್ತೆಯಾಗಿರುವ ದಂತಕಥೆ ಹರಿ ಸಿಂಗ್‌ ಯಾರು?

ಭಾರತದ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಅವರು ಮಾಲ್ಡೀವ್ಸ್‌ನಲ್ಲಿ ನಡೆದ ಸ್ಪೀಡ್‌ಬೋಟ್ ಅಪಘಾತದ ನಂತರ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಉದ್ಯಮಿ ಗೌತಮ್ ಸಿಂಘಾನಿಯಾ ಅವರನ್ನು ರಕ್ಷಿಸಲಾಗಿದ್ದು, ಹರಿ ಸಿಂಗ್ ಮತ್ತು ಇನ್ನೊಬ್ಬರಿಗಾಗಿ ಮಾಲ್ಡೀವ್ಸ್ ರಕ್ಷಣಾ ಪಡೆ ತೀವ್ರ ಶೋಧ ನಡೆಸುತ್ತಿದೆ. 

Read Full Story

03:14 PM (IST) Mar 21

ನಟನೆ ಟ್ರೋಲ್ ಮಾಡಿವರಿಗೆ ಶ್ರೀವಲ್ಲಿ ಟಾಂಗ್ - ‘ನಾನು ತೆಲುಗು ಸೊಸೆ’ ಎಂದ ರಶ್ಮಿಕಾ ಮಂದಣ್ಣ!

ತೆಲಂಗಾಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇದಿಕೆಯಲ್ಲೇ ತಮ್ಮ ನಟನೆಯನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ ಅವರು, ತೆಲುಗು ಚಿತ್ರರಂಗಕ್ಕೆ ಬಂದಾಗ ಮಗಳಂತೆ ನೋಡಿಕೊಂಡರು ಎಂದಿದ್ದಾರೆ.

Read Full Story

02:49 PM (IST) Mar 21

ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ, ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ

ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ, ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ, ಈ ಪೈಕಿ 2 ವರ್ಷದ ಮಗು ಹೆಣ್ಣುಮುಗು ಸೇರಿದಂತೆ. ತಮ್ಮ ಮನೆ ಬಾಡಿಗೆ ನೀಡಿ ತೆರಳಿದ್ದ ಈ ಕುಟುಂಬ, ಬೇರೊಂದು ಬಾಡಿಗೆ ಮನೆಯಲ್ಲಿ ದುರಂತ ನಡೆದಿದೆ.

 

Read Full Story

02:31 PM (IST) Mar 21

BJP Candidate List - ಕಾಂಗ್ರೆಸ್ ತೊರೆದ ಇಬ್ಬರು ನಾಯಕರಿಗೆ ಬಿಜೆಪಿ ಟಿಕೆಟ್!

ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿದ್ದು, ಕಾಂಗ್ರೆಸ್ ತೊರೆದು ಬಂದಿದ್ದ ಬಿ.ಎಸ್. ಅನೂಪ್, ಆರ್.ಎಸ್. ಅರುಣ್ ರಾಜ್‌ಗೂ ಟಿಕೆಟ್ ಸಿಕ್ಕಿದೆ.  ಬಿಜೆಪಿ ಒಟ್ಟು 97 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ.

Read Full Story

01:38 PM (IST) Mar 21

ಮೈಸೂರು- ತಾಳಗುಪ್ಪ ಸೇರಿ 19 ರೈಲುಗಳ ಸಂಚಾರ ವರ್ಷಪೂರ್ತಿ ಹೆಚ್ಚಳ - ಫುಲ್​ ಡಿಟೇಲ್ಸ್​ ಇಲ್ಲಿದೆ

ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆಯು 19 ಹೊಸ ರೈಲು ಸೇವೆಗಳನ್ನು ಆರಂಭಿಸಿದೆ. ಇದರಲ್ಲಿ ಮೈಸೂರು-ತಾಳಗುಪ್ಪ, ಬೆಂಗಳೂರು-ಕಲಬುರಗಿ ಸೇರಿದಂತೆ ಹಲವು ಎಕ್ಸ್‌ಪ್ರೆಸ್, ಮೆಮು ಮತ್ತು ಡೆಮು ರೈಲುಗಳು ಸೇರಿದ್ದು, ಅವುಗಳ ಸಂಚಾರ ಮಾರ್ಗ ಮತ್ತು ವೇಳಾಪಟ್ಟಿಯ ವಿವರಗಳನ್ನು ನೀಡಲಾಗಿದೆ.
Read Full Story

01:32 PM (IST) Mar 21

ಕಪ್ಪಾದ ಚಿನ್ನದ ಒಡವೆಗಳು ನಿಮಿಷಗಳಲ್ಲಿ ಹೊಳೆಯಬೇಕೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ!

ನಿಮ್ಮ ಚಿನ್ನದ ಆಭರಣಗಳು ಹೊಳಪು ಕಳೆದುಕೊಂಡಿವೆಯೇ? ಅಂಗಡಿಗೆ ಹೋಗುವ ಕೆಲಸವಿಲ್ಲದೆ, ನಿಮ್ಮ ಅಡುಗೆಮನೆಯಲ್ಲಿರುವ ಟೂತ್‌ಪೇಸ್ಟ್‌ನಿಂದಲೇ ಮ್ಯಾಜಿಕ್ ಮಾಡಬಹುದು. ಹಳೆಯ ಒಡವೆಗಳು ಮತ್ತೆ ಶೋರೂಂನಿಂದ ತಂದಷ್ಟೇ ಹೊಸದಾಗಿ ಹೊಳೆಯುತ್ತವೆ.
Read Full Story

01:21 PM (IST) Mar 21

ಇಬ್ರು ಗೆಳತಿಯರ ಜೊತೆ ಮನೆಯಲ್ಲಿದ್ದೆ, ಮೈಕ್ ಆನ್ ಮರೆತು ಖುಲ್ಲಂ ಖುಲ್ಲಾ ಮಾತಾಡಿದ ಬ್ರಾವೋ

ಇಬ್ರು ಗೆಳತಿಯರ ಜೊತೆ ಮನೆಯಲ್ಲಿದ್ದೆ, ಮೈಕ್ ಆನ್ ಮರೆತು ಖುಲ್ಲಂ ಖುಲ್ಲಾ ಮಾತಾಡಿದ ಬ್ರಾವೋ, ಕೆಕೆಆರ್ ಸುದ್ದಿಗೋಷ್ಠಿಯಲ್ಲಿ ಬ್ರಾವೋ ಮಾತು ಇದೀಗ ಭಾರಿ ವೈರಲ್ ಆಗಿದೆ. ಅಜಿಂಕ್ಯ ರಹಾನೆ ಸೂಚನೆ ನೀಡುತ್ತಿದ್ದಂತೆ ಅಯ್ಯೋ ಎಂದು ಬ್ರಾವೋ ಮಾತು ನಿಲ್ಲಿಸಿದ್ದಾರೆ.

 

Read Full Story

12:37 PM (IST) Mar 21

ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಶನಿವಾರ ಒಂದೇ ದಿನ 2,940 ರುಪಾಯಿ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಇಳಿಕೆ ಮುಂದುವರೆದಿದೆ. ಇದೀಗ ಮಾರ್ಚ್ 21ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಇಂದಿನ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.

Read Full Story

12:28 PM (IST) Mar 21

ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ

ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ, ಮಾಲ್ಡೀವ್ಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಹರಿ ಸಿಂಗ್ ಜೊತೆ ಮತ್ತಿಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.

Read Full Story

12:13 PM (IST) Mar 21

ದಯವಿಟ್ಟು ಕಾಪಾಡಿ - ಮದ್ವೆಯಾದ ವಾರದಲ್ಲೇ ಲೈವ್​ಗೆ ಬಂದು ಕುಂಭಮೇಳ ಮೊನಾಲಿಸಾ ಕಣ್ಣೀರು- ಆಗಿದ್ದೇನು?

ಕುಂಭಮೇಳದಲ್ಲಿ 'ರುದ್ರಾಕ್ಷಿ ಲೇಡಿ' ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು 'ಲವ್ ಜಿಹಾದ್' ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ.

Read Full Story

11:33 AM (IST) Mar 21

ಪಾಟ್ನಾದ ಈದ್ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ನಿತೀಶ್ ಕುಮಾರ್ ಗೈರು, ಆದರೆ ಮಗ ನಿಶಾಂತ್ ಎಂಟ್ರಿ!

ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಈದ್ ಪ್ರಾರ್ಥನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊದಲ ಬಾರಿಗೆ ಗೈರಾಗಿದ್ದರು. ಅವರ ಬದಲಿಗೆ ಪುತ್ರ ನಿಶಾಂತ್ ಕುಮಾರ್ ಭಾಗವಹಿಸಿದ್ದು, ಬಿಹಾರ ರಾಜಕೀಯದಲ್ಲಿ ಉತ್ತರಾಧಿಕಾರದ ಚರ್ಚೆಗೆ ಕಾರಣವಾಗಿದೆ. .

Read Full Story

11:01 AM (IST) Mar 21

'ನೀವು ಯಾವ ರೀತಿ ಮುಸ್ಲಿಂ?' - ಕಾಬೂಲ್‌ನಲ್ಲಿ 400 ಜನರನ್ನ ಕೊಂದ ಪಾಕಿಸ್ತಾನದ ವಿರುದ್ಧ ಓವೈಸಿ ವಾಗ್ದಾಳಿ!

ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಮಾತನಾಡಿದ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನವನ್ನು 'ಇಸ್ರೇಲ್‌ನ ಕಿರಿಯ ಸಹೋದರ' ಎಂದು ಕರೆದು ತೀವ್ರ ವಾಗ್ದಾಳಿ. ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಅಮಾಯಕರು ಸಾವನ್ನಪ್ಪಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು. 

Read Full Story

10:17 AM (IST) Mar 21

ಸೆರಗು ಸರ್ಸಿದ್ದಕ್ಕೆ ಕ್ಷಮೆ ಯಾಚಿಸಿದ ಪ್ರೇಮ್..! ಹೊಸ ರೂಪದಲ್ಲಿ ಬರುತ್ತಂತೆ ಕೆಡಿ ಸರ್ಸೆ ಸಾಂಗ್!

'ಕೆಡಿ' ಸಿನಿಮಾದ 'ಸರ್ಸೆ ಸರ್ಸೆ' ಹಾಡು ದೊಡ್ಡ ವಿವಾದ ಸೃಷ್ಟಿಸಿದೆ. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನೋರಾ ಫತೇಹಿ, ತನಗೆ ಸಾಹಿತ್ಯದ ಅರ್ಥವೇ ತಿಳಿದಿರಲಿಲ್ಲ ಎಂದು ಹೇಳುವ ಮೂಲಕ ನಿರ್ದೇಶಕ ಪ್ರೇಮ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದಕ್ಕೆ ಪ್ರೇಮ್ ತಿರುಗೇಟು ನೀಡಿದ್ದಾರೆ.

Read Full Story

09:52 AM (IST) Mar 21

ಗೆಳತಿ ಮಹಿಳಾಗೆ ಕೋಟ್ಯಾಂತರ ಮೌಲ್ಯದ ಫೆರಾರಿ ಕಾರು ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ! ಬೆಲೆ ಕೇಳಿ ಫ್ಯಾನ್ಸ್ ಶಾಕ್, ಏನಿದರ ಸ್ಪೆಷಾಲಿಟಿ?

ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಪಾರ್ಟ್ನರ್ ಮಹಿಕಾ ಶರ್ಮಾಗೆ 10 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಕಾರಿಗೆ ಮಹಿಕಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಲೇಖನವು ಕಾರಿನ ವಿಶೇಷತೆಗಳೇನು ನೋಡೋಣ ಬನ್ನಿ.

Read Full Story

09:21 AM (IST) Mar 21

ಗುರೂಜಿ ರಾಸಲೀಲೆ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ

ಗುರೂಜಿ ರಾಸಲೀಲೆ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ, 35ರ ಮಹಿಳೆಯನ್ನು3 ವರ್ಷದಿಂದ ಬಳಸಿಕೊಂಡ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಗುರೂಜಿ ಪ್ರಕರಣ ಇದೀಗ ಕೆಲ ಟ್ವಿಸ್ಟ್ ಪಡೆದುಕೊಂಡಿದೆ.

 

Read Full Story

08:39 AM (IST) Mar 21

Dhurandhar - 'ಧುರಂಧರ್' ಸಿನಿಮಾ ನೋಡುವವರು ಬಿಜೆಪಿಗೆ ವೋಟ್ ಹಾಕ್ತಾರೆ, ಬಿರುಗಾಳಿ ಎಬ್ಬಿಸಿದ ಅಸ್ಸಾಂ ಸಿಎಂ ಹೇಳಿಕೆ!

‘ಧುರಂಧರ್’ ಚಿತ್ರದ ಯಶಸ್ಸು ಬಿಜೆಪಿಗೆ ಸಿಕ್ಕ ಬೆಂಬಲವನ್ನು ಸೂಚಿಸುತ್ತದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಇದು ದ್ವೇಷ ಹರಡಲು ಮತ್ತು ಬಿಜೆಪಿಯ ವಿಭಜಕ ಅಜೆಂಡಾಕ್ಕಾಗಿ ಮಾಡಿದ ಪ್ರಚಾರದ ಸಿನಿಮಾ ಎಂದು ಟೀಕಿಸಿದೆ.
Read Full Story

08:24 AM (IST) Mar 21

ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಗಳಿಗೆ ಆಘಾತಕಾರಿ ಸುದ್ದಿ! ಹಲವು ತಂಡಗಳಿಗೆ ಗಾಯದ ಟೆನ್ಶನ್‌!

ಐಪಿಎಲ್ 2024 ಆರಂಭಕ್ಕೆ ಮುನ್ನವೇ ಹಲವು ಫ್ರಾಂಚೈಸಿಗಳು ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿವೆ. ಜೋಶ್ ಹೇಜಲ್‌ವುಡ್‌, ಪ್ಯಾಟ್‌ ಕಮಿನ್ಸ್‌ರಂತಹ ಪ್ರಮುಖರು ಆರಂಭಿಕ ಪಂದ್ಯಗಳಿಗೆ ಗೈರಾದರೆ, ಸ್ಯಾಮ್ ಕರನ್, ನೇಥನ್ ಎಲ್ಲಿಸ್‌ರಂತಹ ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.  

Read Full Story

08:22 AM (IST) Mar 21

Dhruv Rathee - 'ಧುರಂಧರ್ 2' ಕಳಪೆ ಪ್ರೊಪಗಾಂಡ ಸಿನಿಮಾ, ಆದಿತ್ಯ ಧರ್ ಬಿಜೆಪಿಯ ಪ್ರಚಾರಕ; ಧ್ರುವ್ ರಾಠಿ ಕಿಡಿ

ಯೂಟ್ಯೂಬರ್ ಧ್ರುವ್ ರಾಥಿ ಅವರು 'ಧುರಂಧರ್ 2' ಚಿತ್ರವನ್ನು ಕಳಪೆ 'ಪ್ರೊಪಗಾಂಡ' ಎಂದು ಟೀಕಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರನ್ನು 'ಬಿಜೆಪಿ ಪ್ರಚಾರಕ' ಎಂದು ಕರೆದಿದ್ದು, ಈ ಚಿತ್ರದ ಮೂಲಕ ಅದು ಎಲ್ಲರಿಗೂ ತಿಳಿಯಲಿದೆ ಎಂದಿದ್ದಾರೆ.

Read Full Story

08:12 AM (IST) Mar 21

Iran War - ಅಬ್ಬಾ ಕೊನೆಗೂ ಯುದ್ಧ ಮುಗೀತಾ? ವಾರ್ ನಿಲ್ಲಿಸುವ ಸುಳಿವು ಕೊಟ್ಟ ಟ್ರಂಪ್! ಹೇಳಿದ್ದೇನು?

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗಳು ಬಹುತೇಕ ಗುರಿ ತಲುಪಿವೆ ಮತ್ತು ಅಲ್ಲಿನ ಸರ್ಕಾರವನ್ನು ಬದಲಿಸುವ ಪ್ರಯತ್ನ ಯಶಸ್ವಿಯಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಹಾರ್ಮುಜ್ ವಿಚಾರದಲ್ಲಿ ನ್ಯಾಟೋವನ್ನು ಟೀಕಿಸಿದ್ದಾರೆ.

Read Full Story

07:18 AM (IST) Mar 21

ಕೆನಡಾ ಪ್ರವೇಶಕ್ಕೆ ಅನುಮತಿ ಇಲ್ಲದ ವಿಮಾನ

ಅಧಿಕಾರಿಗಳು ಬೋಯಿಂಗ್ 77-300 ER ವಿಮಾನದ ಬದಲು ಬೋಯಿಂಗ್ 777 ವಿಮಾನ AI185ವನ್ನು ಕೆನಡಾಗೆ ರೂಟ್ ಮಾಡಿದ್ದಾರೆ. ಪ್ರಯಾಣಿಕರ ಹೊತ್ತು ವಿಮಾನ ಚೀನಾ ಗಡಿ ದಾಟಿ ಸಾಗುತ್ತಿದ್ದಂತೆ ಅಧಿಕಾರಿಗಳಿಗೆ ತಪ್ಪಿನ ಅರಿವಾಗಿದೆ. ಬೋಯಿಂಗ್ 777 ವಿಮಾನಕ್ಕೆ ಕೆನಾಡ ಪ್ರವೇಶಿಸುವ ಅನುಮತಿ ಇರಲಿಲ್ಲ.


More Trending News