LIVE NOW
Published : Sep 16, 2026, 07:31 AM ISTUpdated : Sep 16, 2026, 11:31 AM IST

India Latest News Live: ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ಫೇವರೇಟ್ ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ ಕನ್ನಡಿನ ಮಾತು

ಸಾರಾಂಶ

ನವದೆಹಲಿ: ಐಐಆರ್‌ಸಿ ಇಂಡಿಯಾ (ವಿಶ್ವವಿದ್ಯಾಲಯ) ಶ್ರೇಯಾಂಕ-2026 ಬಿಡುಗಡೆಯಾಗಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ ಬೆಂಗಳೂರು) ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) 2ನೇ ಸ್ಥಾನವನ್ನು ಗಳಿಸಿದೆ.

ಐಐಆರ್‌ಸಿ ಇಂಡಿಯಾ ಪ್ರತಿ ವರ್ಷ ಶ್ರೇಯಾಂಕ ಬಿಡುಗಡೆ ಮಾಡುತ್ತದೆ. ಇದಕ್ಕೆ ಸಾಂಸ್ಥಿಕ ಬಲ, ಶೈಕ್ಷಣಿಕ ಸಾಮರ್ಥ್ಯ, ಆಡಳಿತ ಮತ್ತು ಆಡಳಿತ ಎಂಬ 3 ಮುಖ್ಯ ವಿಭಾಗಗಳನ್ನು ಪರಿಗಣಿಸಲಾಗುತ್ತದೆ. ಈ ವರ್ಷದ ಶ್ರೇಯಾಂಕದಲ್ಲಿ, ಐಎಸ್‌ಸಿ ಬೆಂಗಳೂರು 84.53 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. 72.66 ಅಂಕಗಳೊಂದಿಗೆ ಮಾಹೆ 2ನೇ ಮತ್ತು 70.38 ಅಂಕಗಳೊಂದಿಗೆ ದೆಹಲಿಯ ಜೆಎನ್‌ಯು 3ನೇ ಸ್ಥಾನ ಪಡೆದುಕೊಂಡಿವೆ.

ಮಾಹೆ ನಂ.1 ಡೀಮ್ಡ್-ಟು-ಬಿ ವಿವಿ

ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾಹೆ, ಐಐಆರ್‌ಸಿ ಇಂಡಿಯಾ (ವಿಶ್ವವಿದ್ಯಾಲಯ) ಶ್ರೇಯಾಂಕ 2026ರಲ್ಲಿ ದೇಶದ ನಂ.1 ಖಾಸಗಿ ‘ಡೀಮ್ಡ್-ಟು-ಬಿ’ ವಿವಿಯಾಗಿ ಹೊರಹೊಮ್ಮಿದೆ.

11:31 AM (IST) Sep 16

ಸಿಂಪಲ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರ ಫೇವರೇಟ್ ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ ಕನ್ನಡಿನ ಮಾತು

ಬೆಂಗಳೂರು: ಭಾರತ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್, ತಮ್ಮ ಸಿಂಪ್ಲಿಸಿಟಿ ಮೂಲಕವೇ ಆಗಾಗ ಸುದ್ದಿಯಾಗುವ ಜಾವಗಲ್ ಶ್ರೀನಾಥ್ ತಮ್ಮ ನೆಚ್ಚಿನ ಕ್ಯಾಪ್ಟನ್ ಯಾರು ಎನ್ನುವ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ್ದಾರೆ.

Read Full Story

10:25 AM (IST) Sep 16

Mahindra Thar Facelift - ಥಾರ್‌ ರಾಕ್ಸ್‌ ಲುಕ್‌ನಲ್ಲಿ ಹೊಸ ಥಾರ್‌; ಬರಲಿವೆ ಭರ್ಜರಿ ಫೀಚರ್ಸ್‌!

ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಥಾರ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಹೊಸ ಕಾರು ಥಾರ್ ರಾಕ್ಸ್‌ನಂತೆಯೇ ಆಕರ್ಷಕ ಮುಂಭಾಗದ ವಿನ್ಯಾಸ, ಅತ್ಯಾಧುನಿಕ ಸುರಕ್ಷತಾ ಫೀಚರ್‌ಗಳು ಮತ್ತು ಪ್ರೀಮಿಯಂ ಇಂಟೀರಿಯರ್ ಹೊಂದಿರಲಿದೆ. ಹಳೆಯ ಎಂಜಿನ್ ಆಯ್ಕೆಗಳನ್ನೇ ಮುಂದುವರಿಸಲಾಗಿದ್ದು, ಆಫ್-ರೋಡ್ ಪ್ರಿಯರಿಗೆ ಇದು ಹೊಸ ಅನುಭವ ನೀಡಲಿದೆ.
Read Full Story

10:10 AM (IST) Sep 16

ಟ್ರಂಪ್ ಪುತ್ರನ ಅದ್ಧೂರಿ ಮದುವೆಗೆ ರಷ್ಯಾ ತೈಲ ಉದ್ಯಮಿಗಳ ಹಣ! ಭಾರತ ತೈಲ ಖರೀದಿಗೆ ಕಿಡಿಕಾರುತ್ತಿದ್ದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರನ ವಿವಾಹದ ಸಂಭ್ರಮಾಚರಣೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತ ಉದ್ಯಮಿ ಉಮರ್ ಕ್ರೆಮ್ಲೆವ್ ಧನಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಟ್ರಂಪ್ ಜೂನಿಯರ್ ಪತ್ನಿ ಬೆಟ್ಟಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.
Read Full Story

09:38 AM (IST) Sep 16

ಪೂಜೆ ಫಲ ಸಿಗಲಿಲ್ಲವೆಂದು ಪೂಜಾರಿ ಕಿಡ್ನಾಪ್‌ - ₹1 ಲಕ್ಷಕ್ಕೆ ದುಡ್ಡಿಗೆ ಧಮ್ಕಿ, ಪುತ್ರನಿಂದ ಉಳಿಯಿತು ಜೀವ!

ನೋಯ್ಡಾದಲ್ಲಿ ತಾವು ಮಾಡಿಸಿದ್ದ ಪೂಜೆಯಿಂದ ಇಷ್ಟಾರ್ಥ ಈಡೇರಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನು ಅಪಹರಿಸಿದ್ದಾರೆ. ಪೂಜೆಯ ನೆಪದಲ್ಲಿ ಜೌನ್‌ಪುರಕ್ಕೆ ಕರೆಸಿಕೊಂಡು 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕಿದ್ದರು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಅರ್ಚಕರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

09:31 AM (IST) Sep 16

ಯುಎಸ್ ಓಪನ್ ಟೆನಿಸ್ - ಅಲೆಕ್ಸಾಂಡರ್ ಜ್ವೆರೆವ್ ಚಾಂಪಿಯನ್; 23ರ ಶೆಲ್ಟನ್‌ ಕನಸು ಭಗ್ನ

ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಮಣಿಸಿ ಚೊಚ್ಚಲ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 2003ರ ಬಳಿಕ ಕಪ್ ಗೆಲ್ಲುವ ಅಮೆರಿಕದ 23 ವರ್ಷಗಳ ಕನಸು ಭಗ್ನಗೊಂಡಿದೆ. ಜ್ವೆರೆವ್ ಅವರಿಗೆ ₹52.58 ಕೋಟಿ ಪ್ರಶಸ್ತಿ ಮೊತ್ತ ಲಭಿಸಿದೆ.
Read Full Story

More Trending News