LIVE NOW
Published : Jun 16, 2026, 05:10 AM ISTUpdated : Jun 16, 2026, 08:17 AM IST

India Latest News Live: ಮೂರು ಹಣಕಾಸು ಸಂಸ್ಥೆಗಳಿಗೆ ದಂಡ, ಒಂದು ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ ಆರ್‌ಬಿಐ

ಸಾರಾಂಶ

ಲಾತೂರು: ‘ಸಂಸದನಾಗಿ ಆಯ್ಕೆಯಾದ ಬಳಿಕ ವೈದ್ಯಕೀಯ ವೃತ್ತಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ನನಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ’ ಎಂದು ಮೂಲತಃ ವೈದ್ಯರಾಗಿರುವ ಮಹಾರಾಷ್ಟ್ರದ ಲಾತೂರಿನ ಕಾಂಗ್ರೆಸ್‌ ಸಂಸದ ಡಾ. ಶಿವಾಜಿ ಕಲ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘2023-24ನೇ ಸಾಲಿನಲ್ಲಿ ನಾನು ಸುಮಾರು 36 ಲಕ್ಷ ರು. ಆದಾಯ ತೆರಿಗೆ ಕಟ್ಟಿದ್ದೆ. ಆದರೆ 2024-25ನೇ ಸಾಲಿನಲ್ಲಿ ನನ್ನ ಆದಾಯ ಗಣನೀಯವಾಗಿ ಕಡಿಮೆಯಾಗಿ ಕೇವಲ 8.75 ಲಕ್ಷ ರು. ಮಾತ್ರ ತೆರಿಗೆ ಕಟ್ಟಿದ್ದೇನೆ. ಸಂಸದನಾದ ನಂತರ ರೋಗಿಗಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಪೂರ್ಣ ಸಮಯ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವಾಗುತ್ತಿದೆ’ ಎಂದರು.

08:17 AM (IST) Jun 16

ಮೂರು ಹಣಕಾಸು ಸಂಸ್ಥೆಗಳಿಗೆ ದಂಡ, ಒಂದು ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ ಆರ್‌ಬಿಐ

Reserve Bank of india Penalty ನಿಯಮ ಉಲ್ಲಂಘಿಸಿದ ಮೂರು ಹಣಕಾಸು ಸಂಸ್ಥೆಗಳ ಮೇಲೆ ಆರ್‌ಬಿಐ ದಂಡ ವಿಧಿಸಿದೆ. ಜೊತೆಗೆ, ಒಂದು ಸಹಕಾರಿ ಬ್ಯಾಂಕ್ ಮೇಲೆ ಆರು ತಿಂಗಳ ಕಾಲ ನಿರ್ಬಂಧಗಳನ್ನು ಹೇರಿದೆ.

Read Full Story

07:54 AM (IST) Jun 16

ಈ ಕಾರಣದಿಂದ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ಶ್ರೇಯಾಂಕಾ ಪಾಟೀಲ್! ಕೊನೆಗೆ ಮನಸ್ಸು ಬದಲಿಸಿದ್ದು ಹೇಗೆ?

ಬರ್ಮಿಂಗ್‌ಹ್ಯಾಮ್‌: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್ ಎದುರಿನ ಪಂದ್ಯದ ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ್, ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ.

Read Full Story

07:48 AM (IST) Jun 16

ಎಲ್‌ ನಿನೋ ಪರಿಣಾಮ - ದೇಶದಲ್ಲಿ ಶೇ.28ರಷ್ಟು ಮಳೆ ಕೊರತೆ, ಜಲಾಶಯಗಳಲ್ಲಿ ಶೇ.23ರಷ್ಟು ನೀರು

ಭಾರತದಲ್ಲಿ ಮುಂಗಾರು ಪ್ರವೇಶಿಸಿದರೂ ಎಲ್‌ ನಿನೋ ಪರಿಣಾಮದಿಂದಾಗಿ ವಾಡಿಕೆಗಿಂತ ಶೇ.28ರಷ್ಟು ಮಳೆ ಕೊರತೆಯಾಗಿದೆ. ಕರ್ನಾಟಕದ ಕಾವೇರಿ ಕಣಿವೆ ಹಾಗೂ ಕರಾವಳಿ ಭಾಗಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ರಾಜ್ಯದ ಜಲಾಶಯಗಳಲ್ಲಿ ಕೇವಲ ಶೇ.23ರಷ್ಟು ನೀರು ಮಾತ್ರ ಸಂಗ್ರಹವಾಗಿದೆ.
Read Full Story

07:34 AM (IST) Jun 16

ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದದ ಕರಡು ಪ್ರತಿ ಬಹಿರಂಗ; 14 ಷರತ್ತುಗಳು ಇಲ್ಲಿವೆ ನೋಡಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದೆ. ತಮ್ಮ ಭದ್ರತೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವುದಾಗಿ ಮತ್ತು ಆಕ್ರಮಿತ ಗಾಜಾ, ಸಿರಿಯಾ, ಲೆಬನಾನ್ ಪ್ರದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
Read Full Story

07:25 AM (IST) Jun 16

B-52 Stratofortress - ಟೇಕಾಫ್‌ ಆಗ್ತಿದ್ದಂತೆಯೇ ಪತನಗೊಂಡ ಅಮೆರಿಕ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ - 8 ಸಾವು

ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕ ವಾಯುಪಡೆಯ B-52 ಬಾಂಬರ್ ವಿಮಾನ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಎಂಟು ಮಂದಿ ಸಾವನ್ನಪ್ಪಿದ್ದು, ಅಪಘಾತದ ಕಾರಣ ತಿಳಿಯಲು ವಾಯುಸೇನೆ ತನಿಖೆ ಆರಂಭಿಸಿದೆ.
Read Full Story

07:18 AM (IST) Jun 16

FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ - ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?

ಫಿಫಾ ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ, ನೆದರ್‌ಲೆಂಡ್ಸ್‌ ಮತ್ತು ಜಪಾನ್‌ 2-2 ಗೋಲುಗಳಿಂದ ಡ್ರಾ ಸಾಧಿಸಿದವು. ಎರಡು ಬಾರಿ ಮುನ್ನಡೆ ಪಡೆದಿದ್ದ ಡಚ್‌ ಪಡೆಯ ಗೆಲುವಿನ ಆಸೆಗೆ ಜಪಾನ್‌ ಕೊನೆಯ ನಿಮಿಷದಲ್ಲಿ ಗೋಲು ಬಾರಿಸಿ ತಣ್ಣೀರೆರಚಿತು. ಪಂದ್ಯದ ನಂತರ ಜಪಾನ್ ಅಭಿಮಾನಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
Read Full Story

06:56 AM (IST) Jun 16

FIFA World Cup 2026 - ಸ್ಪೇನ್‌ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!

ಫಿಫಾ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಕೇಪ್ ವರ್ಡೆ, ಮಾಜಿ ಚಾಂಪಿಯನ್ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ, ಐವರಿ ಕೋಸ್ಟ್ ತಂಡ ಈಕ್ವೆಡಾರ್ ವಿರುದ್ಧ ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿ ಗೆದ್ದರೆ, ಸ್ವೀಡನ್ ತಂಡ ಟ್ಯುನೀಶಿಯಾ ವಿರುದ್ಧ 5-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
Read Full Story

06:18 AM (IST) Jun 16

ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳು; ITR ಫೈಲ್‌ ಮಾಡುವಾಗ ನೆನಪಿರಲಿ

ಈ ಲೇಖನವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳನ್ನು ವಿವರಿಸುತ್ತದೆ. ಐಟಿಆರ್‌ ಫೈಲ್‌ ಮಾಡುವ ಈ ಸಂದರ್ಭದಲ್ಲಿ ಯಾವುದೆಲ್ಲಾ ತೆರಿಗೆ ಮುಕ್ತ ಆದಾಯ ಎಂಬುದನ್ನು ತಿಳಿಯುವುದು ಒಳ್ಳೆಯದು.

Read Full Story

05:54 AM (IST) Jun 16

75 ರೂಪಾಯಿ ಠೇವಣಿ ಇದ್ದ ಪಕ್ಷ ಈಗ ಬಂಗಾಳದ ದೊಡ್ಡ ಪಾರ್ಟಿ! ಪುಟ್ಟ ಪಕ್ಷ ಎನ್‌ಪಿಸಿಐಗೆ ಭೀಮಬಲ

ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 20 ಬಂಡಾಯ ಸಂಸದರು, ಕೇವಲ 75 ರೂಪಾಯಿ ಠೇವಣಿ ಹೊಂದಿದ್ದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎನ್‌ಸಿಪಿಐ ಸಂಸತ್ತಿನ 5ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಂಡಾಯ ಬಣಕ್ಕೆ ಮಾನ್ಯತೆ ನೀಡುವ ಕುರಿತು ಲೋಕಸಭಾ ಸ್ಪೀಕರ್ ಕಾನೂನು ಸಲಹೆ ಪಡೆಯುತ್ತಿದ್ದಾರೆ.

Read Full Story

More Trending News