ಲಾತೂರು: ‘ಸಂಸದನಾಗಿ ಆಯ್ಕೆಯಾದ ಬಳಿಕ ವೈದ್ಯಕೀಯ ವೃತ್ತಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ನನಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ’ ಎಂದು ಮೂಲತಃ ವೈದ್ಯರಾಗಿರುವ ಮಹಾರಾಷ್ಟ್ರದ ಲಾತೂರಿನ ಕಾಂಗ್ರೆಸ್ ಸಂಸದ ಡಾ. ಶಿವಾಜಿ ಕಲ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘2023-24ನೇ ಸಾಲಿನಲ್ಲಿ ನಾನು ಸುಮಾರು 36 ಲಕ್ಷ ರು. ಆದಾಯ ತೆರಿಗೆ ಕಟ್ಟಿದ್ದೆ. ಆದರೆ 2024-25ನೇ ಸಾಲಿನಲ್ಲಿ ನನ್ನ ಆದಾಯ ಗಣನೀಯವಾಗಿ ಕಡಿಮೆಯಾಗಿ ಕೇವಲ 8.75 ಲಕ್ಷ ರು. ಮಾತ್ರ ತೆರಿಗೆ ಕಟ್ಟಿದ್ದೇನೆ. ಸಂಸದನಾದ ನಂತರ ರೋಗಿಗಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಪೂರ್ಣ ಸಮಯ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವಾಗುತ್ತಿದೆ’ ಎಂದರು.
11:06 PM (IST) Jun 16
09:28 PM (IST) Jun 16
ತೆಲಂಗಾಣ ಸರ್ಕಾರ ಹೈದರಾಬಾದ್ನಲ್ಲಿ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವನ್ಯೂ ರಸ್ತೆ ಎಂದು ನಾಮಕರಣ ಮಾಡಿದೆ. ಇದರ ಬೆನ್ನಲ್ಲೇ ವಿವಾದಗಳು ಶುರುವಾಗಿದೆ. ಅಮೆರಿಕ ಮುಂದೆ ಶರಣಾಗಿದ್ದು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.
09:13 PM (IST) Jun 16
NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ ಮಾಡಿದ್ರು.
08:47 PM (IST) Jun 16
ಮುಂಗಾರು ವಿಳಂಬವಾಗಿ ಕೇರಳಕ್ಕೆ ಅಪ್ಪಳಿಸಿದರೂ ದೇಶದ ಹಲವು ಭಾಗಕ್ಕೆ ಇನ್ನೂ ತಲುಪಿಲ್ಲ. ಇದೀಗ ಸ್ಯಾಟಲೈಟ್ ಚಿತ್ರ ಹಾಗೂ ವರದಿ ಗಂಡಾಂತರದ ಸೂಚನೆ ನೀಡಿದೆ. ಭಾರಿ ಮಳೆಗಾಲದಲ್ಲೂ ಭಾರತದಲ್ಲೆಡೆ ಬಿಸಿಲು ತೀವ್ರಗೊಂಡಿದೆ.
08:14 PM (IST) Jun 16
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. 16 ತಿಂಗಳ ಬಳಿಕ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಹ್ಯಾಂಡ್ಶೇಕ್ ಮಾಡಿ ಇಬ್ಬರು ಮಾತನಾಡಿದ್ದಾರೆ. ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
08:05 PM (IST) Jun 16
Tollywood ಲೇಡಿ ಆ್ಯಂಕರ್ಗಳ ಪೈಕಿ ರಶ್ಮಿ ಗೌತಮ್ ಮತ್ತು ಶ್ರೀಮುಖಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. 30 ವರ್ಷ ದಾಟಿದರೂ ಇವರು ಮದುವೆಯಾಗಿಲ್ಲ. ರಶ್ಮಿ ಗೌತಮ್ ಮದುವೆ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಶ್ರೀಮುಖಿ ಮಾತ್ರ ಇತ್ತೀಚೆಗೆ ತಮ್ಮ ಮದುವೆ ಯಾವಾಗ ಎಂಬುದನ್ನು ಬಹಿರಂಗಪಡಿಸಿದ್ದಾರೆ.
07:46 PM (IST) Jun 16
Akshay Kumar 'ತೀಸ್ ಮಾರ್ ಖಾನ್' ಸಿನಿಮಾ ಶೂಟಿಂಗ್ಗೆ ಪ್ರತಿದಿನ ಹೆಲಿಕಾಪ್ಟರ್ನಲ್ಲಿ ಹೋಗಿಬರುತ್ತಿದ್ದರು! ಈ ಬಗ್ಗೆ ನಿರ್ದೇಶಕಿ ಫರಾ ಖಾನ್ ತಮಾಷೆಯಾಗಿ ಮಾತನಾಡಿದ್ದು, 'ನನ್ನ ದುಡ್ಡು ತಿಂದ' ಎಂದು ಕಾಲೆಳೆದಿದ್ದಾರೆ.
07:05 PM (IST) Jun 16
Rashmika Mandanna: ವೇದಿಕೆ ಮೇಲೆಯೇ ಪತಿ ವಿಜಯ್ ದೇವರಕೊಂಡ ಅವರ ಮುಖದ ಬೆವರನ್ನ ಪ್ರೀತಿಯಿಂದ ಒರೆಸಿ, ಅವರ ಮೀಸೆಯನ್ನ ಸರಿಪಡಿಸುತ್ತಿರುವ ರಶ್ಮಿಕಾ ಅವರ ವಿಡಿಯೋ ಅಭಿಮಾನಿಗಳ ಹೃದಯ ಗೆಲ್ತಾ ಇದೆ.
06:38 PM (IST) Jun 16
Thalapathy Vijay ತಮಿಳುನಾಡು ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಿ ಸಿಎಂ ಆಗಿದ್ದಾರೆ. ಆದ್ರೆ ವೈಯಕ್ತಿಕ ಬದುಕು ಮಾತ್ರ ಹಳಿ ತಪ್ಪಿದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರೋ ವಿಷ್ಯ ಗೊತ್ತೇ ಇದೆ.
06:11 PM (IST) Jun 16
Govinda wife: 40 ವರ್ಷಗಳ ದಾಂಪತ್ಯದ ನಂತರ ಸುನಿತಾ, ಗೋವಿಂದ ಒಬ್ಬ ಅತ್ಯುತ್ತಮ ಮಗ ಮತ್ತು ಸಹೋದರ, ಆದರೆ ಗಂಡನಾಗಿ ಅವರಿಂದ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು ಎಂದು ಅವರು ಹೇಳಿದ್ದಾರೆ.
05:13 PM (IST) Jun 16
Marriage Secrets: ಮದುವೆಯಲ್ಲಿ ವಧು ಯಾವಾಗಲೂ ವರನ ಎಡಭಾಗದಲ್ಲಿ ಕೂರುವುದನ್ನು ನಾವು ನೋಡುತ್ತೇವೆ. ಆದರೆ, ಬಲಭಾಗದಲ್ಲಿ ಏಕೆ ಕೂರುವುದಿಲ್ಲ? ಎಡಭಾಗದಲ್ಲಿ ಕೂರುವುದರ ಹಿಂದಿನ ರಹಸ್ಯಗಳು, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
05:10 PM (IST) Jun 16
Bollywood ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಮಂಜು ವಾರಿಯರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿದ್ದಾರೆ.
04:48 PM (IST) Jun 16
Kalki 2898 AD ಸೀಕ್ವೆಲ್ನ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ, ಆಲಿಯಾ ಭಟ್ ಈ ಚಿತ್ರತಂಡ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಹತ್ವದ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.
04:32 PM (IST) Jun 16
Amrita Singh: ಸೈಫ್ ಅಲಿ ಖಾನ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಸಿಂಗ್ ಯಾಕೆ ಮತ್ತೆ ಮದುವೆಯಾಗಲಿಲ್ಲ? ಅವರ ಹಳೆಯ ಸಂದರ್ಶನವೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ ಅವರು ಹೇಳಿದ್ದೇನು?
04:25 PM (IST) Jun 16
ಭಾರತ ಡ್ರಗ್ಸ್ ರೂಲ್ಸ್ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ನೇರವಾಗಿ ಮೆಡಿಕಲ್ಗೆ ಹೋಗಿ ಶೀತ ಕೆಮ್ಮು ಸಿರಪ್ ಖರೀದಿಸಲು ಸಾಧ್ಯವಿಲ್ಲ. ಹೊಸ ನಿಯಮದಲ್ಲಿ ಏನಿದೆ? ಔಷಧಿ ಖರೀದಿಸುವ ವಿಧಾನ ಹೇಗೆ?
04:23 PM (IST) Jun 16
ಪಶ್ಚಿಮ ಬಂಗಾಳದ ಟಿಎಂಸಿಯಲ್ಲಿ ಬಂಡಾಯ ತೀವ್ರ 65 ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿರುವ ಬಂಡಾಯ ಬಣ, ಈಗ ನಗರಸಭೆ ಮತ್ತು ಜಿಲ್ಲಾ ಪರಿಷತ್ಗಳಂತಹ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.
04:08 PM (IST) Jun 16
ನಟ ಧನುಷ್ ಅವರ ಹಿರಿಯ ಮಗ ಯಾತ್ರಾ, ಇದೀಗ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನು ಸ್ವತಃ ಧನುಷ್ ಅವರೇ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ.
03:20 PM (IST) Jun 16
03:17 PM (IST) Jun 16
ನಾಗ್ಪುರದಲ್ಲಿ ವಾಯುಪಡೆ ಅಧಿಕಾರಿಯ ಪತ್ನಿಯನ್ನು ಆಕೆಯ ಶಾಲಾ ಸ್ನೇಹಿತ ಆಯಾಜ್ ತಾಜ್ ಮದಾರೆ ಎಂಬಾತ ವಂಚಿಸಿ, ಅ*ತ್ಯಾಚಾರ ಎಸಗಿದ್ದಾನೆ. ನಂತರ ಬ್ಲಾಕ್ಮೇಲ್ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ನಿಕಾಹ್ ಮಾಡಿಕೊಂಡಿದ್ದಾನೆ.
02:38 PM (IST) Jun 16
ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್ಬುಕ್ನ ಮಾರ್ಕ್ ಜುಕರ್ಬರ್ಗ್ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಅನೇಕ ಗಣ್ಯರು ನೀಮ್ ಕರೋಲಿ ಬಾಬಾರ ಕೈಂಚಿ ಧಾಮ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ? ಕೈಂಚಿ ಧಾಮ್ನ ರಹಸ್ಯ, ವಿಶೇಷತೆಗಳು, ಅಲ್ಲಿಗೆ ತಲುಪುವುದು ಹೇಗೆ?
02:26 PM (IST) Jun 16
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ 'ಅಖಲ್ ತಖ್ತ್' 'ಗುರು ದ್ರೋಹಿ' ಎಂದು ಘೋಷಿಸಿದೆ. ವಿವಾದಾತ್ಮಕ ವಿಡಿಯೋವೊಂದರ ಕುರಿತು ಸುಳ್ಳು ಹೇಳಿದ ಆರೋಪದ ಮೇಲೆ ಈ ಕಠಿಣ ನಿಲುವು ತಳೆಯಲಾಗಿದೆ.
01:22 PM (IST) Jun 16
12:47 PM (IST) Jun 16
ನೀಟ್ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳನ್ನು ಅಣ್ಣಾಮಲೈ ಟೀಕಿಸಿದ್ದಾರೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಯನ್ನು ಬಗೆಹರಿಸುವ ಬದಲು ಹೊಸ ತೊಂದರೆಗಳನ್ನು ತಂದೊಡ್ಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
12:38 PM (IST) Jun 16
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ತಿಂಗಳು ಕಳೆದಿದೆ. ಹೀಗಿದ್ದೂ ಐಪಿಎಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಮತ್ತೆ ಸದ್ದು ಮಾಡುತ್ತಿವೆ. ಇದೀಗ ಆರ್ಸಿಬಿ ಕಪ್ ಗೆಲ್ಲುವುದರಲ್ಲಿ ಮಾತ್ರವಲ್ಲ ಮೈದಾನದಾಚೆಗೂ ಹೊಸ ಇತಿಹಾಸ ನಿರ್ಮಿಸಿದೆ.
12:29 PM (IST) Jun 16
Mukesh Ambani Sister In Law Radhika Merchant: ಮುಖೇಶ್ ಅಂಬಾನಿ ಅವರಿಗೆ ಹೇಗೆ ಪರಿಚಯದ ಅಗತ್ಯವಿಲ್ಲವೋ, ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ಗೂ ಈಗ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗೆ ಅವರು ಆಡಿದ ಮಾತುಗಳು ಸದ್ಯ ವೈರಲ್ ಆಗುತ್ತಿವೆ. ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಉದ್ಯಮಿ.
11:41 AM (IST) Jun 16
Vaibhav Suryavanshi: ತ್ರಿಕೋನ ಸರಣಿಯ ಭಾಗವಾಗಿ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಸೂಪರ್ ಓವರ್ನಲ್ಲಿ ಸೋತಿದೆ. ಪಂದ್ಯದ ನಂತರ ಭಾರತ, ಲಂಕಾ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆದಿದೆ. ಆಟಗಾರರು ಯಾಕೆ ಜಗಳವಾಡಿದರು? ಅಸಲಿಗೆ ಆಗಿದ್ದೇನು? ಈಗ ಬ್ಯಾನ್ ಆಗ್ತಾರಾ?
11:04 AM (IST) Jun 16
ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ಭಾರತದಲ್ಲಿ ಟೆಲಿಗ್ರಾಂ ಬಳಕೆಯ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರ ಭಾಗವಾಗಿ, ಮೆಸೇಜ್ ಎಡಿಟ್ ಫೀಚರ್ ಅನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ.
10:48 AM (IST) Jun 16
Actor Shahid Kapoor Diet Plan: ನಟ ಶಾಹಿದ್ ಕಪೂರ್ ತಮ್ಮ ಫಿಟ್ ಆದ ದೇಹದಿಂದ ಸದಾ ಗಮನ ಸೆಳೆಯುತ್ತಾರೆ. ಅವರ ಹೊಸ ಸಿನಿಮಾ 'ಕಾಕ್ಟೇಲ್ 2' ಲುಕ್ ಕೂಡಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಅವರ ಈ ಫಿಟ್ನೆಸ್ ಹಿಂದಿರುವುದು ಸರಳ ಆಹಾರ, ಸಮತೋಲಿತ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳು.
10:07 AM (IST) Jun 16
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಿದ್ದಾಗ, ಸುಮಾರು 100-200 ವಿದ್ಯಾರ್ಥಿಗಳು ಸಭಾಂಗಣದಿಂದ ಹೊರನಡೆದು ಪ್ರತಿಭಟಿಸಿದರು.
08:17 AM (IST) Jun 16
Reserve Bank of india Penalty ನಿಯಮ ಉಲ್ಲಂಘಿಸಿದ ಮೂರು ಹಣಕಾಸು ಸಂಸ್ಥೆಗಳ ಮೇಲೆ ಆರ್ಬಿಐ ದಂಡ ವಿಧಿಸಿದೆ. ಜೊತೆಗೆ, ಒಂದು ಸಹಕಾರಿ ಬ್ಯಾಂಕ್ ಮೇಲೆ ಆರು ತಿಂಗಳ ಕಾಲ ನಿರ್ಬಂಧಗಳನ್ನು ಹೇರಿದೆ.
07:54 AM (IST) Jun 16
ಬರ್ಮಿಂಗ್ಹ್ಯಾಮ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್ ಎದುರಿನ ಪಂದ್ಯದ ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ್, ಕ್ರಿಕೆಟ್ಗೆ ಗುಡ್ ಬೈ ಹೇಳಲು ಮುಂದಾಗಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ.
07:48 AM (IST) Jun 16
07:34 AM (IST) Jun 16
07:25 AM (IST) Jun 16
07:18 AM (IST) Jun 16
06:56 AM (IST) Jun 16
06:18 AM (IST) Jun 16
ಈ ಲೇಖನವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದ 5 ಪ್ರಮುಖ ಆದಾಯ ಮೂಲಗಳನ್ನು ವಿವರಿಸುತ್ತದೆ. ಐಟಿಆರ್ ಫೈಲ್ ಮಾಡುವ ಈ ಸಂದರ್ಭದಲ್ಲಿ ಯಾವುದೆಲ್ಲಾ ತೆರಿಗೆ ಮುಕ್ತ ಆದಾಯ ಎಂಬುದನ್ನು ತಿಳಿಯುವುದು ಒಳ್ಳೆಯದು.
05:54 AM (IST) Jun 16
ತೃಣಮೂಲ ಕಾಂಗ್ರೆಸ್ನ (ಟಿಎಂಸಿ) 20 ಬಂಡಾಯ ಸಂಸದರು, ಕೇವಲ 75 ರೂಪಾಯಿ ಠೇವಣಿ ಹೊಂದಿದ್ದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಸೇರಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎನ್ಸಿಪಿಐ ಸಂಸತ್ತಿನ 5ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಂಡಾಯ ಬಣಕ್ಕೆ ಮಾನ್ಯತೆ ನೀಡುವ ಕುರಿತು ಲೋಕಸಭಾ ಸ್ಪೀಕರ್ ಕಾನೂನು ಸಲಹೆ ಪಡೆಯುತ್ತಿದ್ದಾರೆ.