2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ನಂತರ ಬಾಂಗ್ಲಾ-ಪಾಕ್ ಸಂಬಂಧ ಸುಧಾರಿಸಿತ್ತು. ಪಾಕಿಸ್ತಾನದ ಯುದ್ಧನೌಕೆ ಪಿಎನ್‌ಎಸ್ ಅಸ್ಲಾತ್ ಚಿತ್ತಗಾಂಗ್‌ಗೆ ಭೇಟಿ ನೀಡುವ ಭರವಸೆ ನೀಡಿತ್ತು. ಆದರೆ, ಅಸ್ಲಾತ್ ಬಾಂಗ್ಲಾದೇಶಕ್ಕೆ ಹೋಗದೆ ಇಂಡೋನೇಷ್ಯಾಕ್ಕೆ ಹೋಯಿತು. ಇದು ಬಾಂಗ್ಲಾದೇಶದ ಮೂಲಭೂತವಾದಿ ವಿಭಾಗಕ್ಕೆ ನಿರಾಶೆ ಮೂಡಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ಮತ್ತು ಮುಹಮ್ಮದ್ ಯೂನಸ್ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯ ಬಗ್ಗೆ ಚರ್ಚೆ ನಡೆಯಿತು.

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಆಗಸ್ಟ್ 2024 ರಲ್ಲಿ ಪತನವಾಯಿತು. ಇದಾದ ನಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸ್ನೇಹ ಸಂಬಂಧ ಹತ್ತಿರವಾಗಿತ್ತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಮಿಲಿಟರಿ ಸಹಕಾರ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನವು ಮೋಸ ಮಾಡುವ ಮತ್ತು ಭರವಸೆಗಳನ್ನು ಈಡೇರಿಸದಿರುವ ತನ್ನ ಅಭ್ಯಾಸವನ್ನು ಮುಂದುವರೆಸಿಕೊಂಡು ಬಂದಿದೆ. ಈಗ ಬಾಂಗ್ಲಾ ಬೆನ್ನಿಗೆ ಚೂರಿ ಹಾಕಿದ್ದು ನಡು ನೀರಿನಲ್ಲಿ ಕೈಬಿಟ್ಟಿದೆ.

Add Asianetnews Kannada as a Preferred SourcegooglePreferred

ಪಾಕಿಸ್ತಾನ ನೌಕಾಪಡೆಯ ಯುದ್ಧನೌಕೆ ಪಿಎನ್‌ಎಸ್ ಅಸ್ಲಾತ್‌ನ ವಿಷಯದಲ್ಲೂ ಹೀಗೆಯೇ ಆದಂತೆ ಕಾಣುತ್ತಿದೆ. ಪಿಎನ್‌ಎಸ್ ಅಸ್ಲಾಟ್ 3 ಸಾವಿರ ಟನ್ ತೂಕದ ಮಾರ್ಗದರ್ಶಿ ಕ್ಷಿಪಣಿ ಯುದ್ಧ ನೌಕೆಯಾಗಿದೆ. ಇದು ಸುಮಾರು ಒಂದು ದಶಕದ ಹಿಂದೆ ಸೇವೆಗೆ ಬಂದಿತ್ತು. ಹೊಸ ಸ್ನೇಹದ ಭಾಗವಾಗಿ ಅಸ್ಲತ್ ಬಾಂಗ್ಲಾದೇಶದ ಬಂದರಿಗೆ ಹೋಗುವುದಾಗಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಭರವಸೆ ನೀಡಿತ್ತು. ಹಾಗೆಯೇ ಮಾರ್ಚ್ 2025 ರಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್ ತಲುಪಲಿದ್ದಾರೆ ಎನ್ನಲಾಗಿತ್ತು. ಒಂದು ದಶಕದಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ನೌಕಾಪಡೆಯ ಯುದ್ಧನೌಕೆ ಪಾಕಿಸ್ತಾನ ನೌಕಾಪಡೆಯ ಸಮರಾಭ್ಯಾಸದಲ್ಲಿ ಭಾಗವಹಿಸಿದಾಗ ಇದು ಸಂಭವಿಸಿತು.

20 ವರ್ಷಗಳ ನಂತರ ಪಾಕಿಸ್ತಾನದ ಯುದ್ಧನೌಕೆ ಬಾಂಗ್ಲಾದೇಶಕ್ಕೆ ಹೋಗುವ ಹಂತದಲ್ಲಿತ್ತು. ಅಸ್ಲತ್ ಅವರ ಬಾಂಗ್ಲಾದೇಶ ಭೇಟಿ ಮಹತ್ವದ್ದಾಗಿತ್ತು. ಸುಮಾರು 20 ವರ್ಷಗಳ ನಂತರ ಪಾಕಿಸ್ತಾನದ ಯುದ್ಧನೌಕೆ ಇಲ್ಲಿಗೆ ಬರುವುದರಲ್ಲಿತ್ತು, ಆದರೆ ಅಸ್ಲಾತ್ ಬಾಂಗ್ಲಾದೇಶವನ್ನು ಈವರೆಗೆ ತಲುಪಲೇ ಇಲ್ಲ. ಅಸ್ಲತ್ ಇಂಡೋನೇಷ್ಯಾಕ್ಕೆ ಹೋಗಿದೆ. ಕರಾಚಿಗೆ ಹಿಂದಿರುಗುವಾಗ ಚಿತ್ತಗಾಂಗ್‌ಗೆ ಭೇಟಿ ನೀಡಬೇಕಿತ್ತು ಆದರೆ ಆ ಘಟನೆ ಸಂಭವಿಸಲೇ ಇಲ್ಲ. ಇದಕ್ಕೆ ಪಾಕ್‌ ಕಡೆಯಿಂದ ಯಾವುದೇ ವಿವರಣೆಯಿಲ್ಲ. ಹಡಗು ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಕೂಡ ಎದುರಿಸಲಿಲ್ಲ.

ಅಸ್ಲತ್ ಇಂಡೋನೇಷ್ಯಾಕ್ಕೆ ಹೋಗುವಾಗ ಕೊಲಂಬೊಗೆ ಹೋಯಿತು. ಇಲ್ಲಿ ಮೂರು ದಿನಗಳ ಕಾಲ ಉಳಿದು ಫೆಬ್ರವರಿ 4 ರಂದು ಮುಂದುವರೆದು ಪ್ರಯಾಣ ಬೆಳೆಸಿದೆ. ಹಿಂದಿರುಗಿ ಬರುವಾಗ ಅದು ಚಿತ್ತಗಾಂಗ್ ಬದಲಿಗೆ ಶ್ರೀಲಂಕಾಕ್ಕೆ ಹೋಯಿತು. ಅಲ್ಲಿ ಮಾರ್ಚ್ 5 ರಂದು ಒಂದು ದಿನದ ವಾಸ್ತವ್ಯಕ್ಕಾಗಿ ಹೋಗಿತ್ತು. ಇದಾದ ನಂತರ ಅದು ಮಾಲ್ಡೀವ್ಸ್‌ನ ಮಾಲೆಗೆ ಹೋಗಿ ನಂತರ ಪಾಕಿಸ್ತಾನಕ್ಕೆ ಹೊರಟಿತು. ಈ ಯುದ್ಧನೌಕೆ ಹಲವಾರು ಬಂದರುಗಳಲ್ಲಿ ನಿಂತಿತು, ಆದರೆ ಬಾಂಗ್ಲಾದೇಶ ಕಡೆ ತಿರುಗಿಯೂ ನೋಡಲಿಲ್ಲ.

ಅಸ್ಲತ್ ಬಾಂಗ್ಲಾದೇಶಕ್ಕೆ ಹೋಗದಿರುವುದು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಬಲಪಡಿಸಲು ಬಯಸುವ ಬಾಂಗ್ಲಾದೇಶದ ತೀವ್ರಗಾಮಿ ವಿಭಾಗವನ್ನು ಖಂಡಿತವಾಗಿಯೂ ನಿರಾಶೆಗೊಳಿಸಿದೆ. ಪ್ರಸ್ತುತ ಬಾಂಗ್ಲಾದೇಶದ ಅಧಿಕಾರವು ಮೂಲಭೂತವಾದಿ ವರ್ಗದ ಕೈಯಲ್ಲಿದೆ. 1971 ರಲ್ಲಿ ಪಾಕಿಸ್ತಾನಿ ಸೈನ್ಯವು ಲಕ್ಷಾಂತರ ಬಾಂಗ್ಲಾದೇಶಿಗಳನ್ನು ಕೊಂದ ಘಟನೆಯನ್ನು ಅದು ಮರೆತಿದೆ.

ಬ್ಯಾಂಕಾಕ್‌ನಲ್ಲಿ ನರೇಂದ್ರ ಮೋದಿ ಮತ್ತು ಮುಹಮ್ಮದ್ ಯೂನಸ್ ನಡುವೆ ಸಭೆ
ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನಡುವೆ ಬ್ಯಾಂಕಾಕ್‌ನಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯ ವಿಷಯದ ಬಗ್ಗೆ ಚರ್ಚಿಸಲಾಯ್ತು. ಇದರ ಹೊರತಾಗಿಯೂ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಲೆಗಳು ಎದ್ದಿವೆ.