ಆಫ್ಘನ್ನಲ್ಲಿ ಕನ್ನಡಿಗರು ಅತಂತ್ರ: ಕರುನಾಡಿಗೆ ಬರಲು ಪರದಾಟ
* ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಅತಂತ್ರರಾದ ಕನ್ನಡಿಗರು
* ಏರ್ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಹಲವು ಕನ್ನಡಿಗರು
* ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹ
ಬೆಂಗಳೂರು(ಆ.20): ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಒಂದೆಡೆಯಾದರೆ ಅಲ್ಲಿ ಸಿಲುಕಿರುವ ಕನ್ನಡಿರ ಸ್ಥಿತಿ ಅತಂತ್ರವಾಗಿದೆ. ಹೌದು ಆಫ್ಘಾನಿಸ್ತಾನದಲ್ಲಿ ಆರು ಜನ ಕನ್ನಡಿಗರು ಸಿಲುಕಿದ್ದಾರೆ.
"
ಇದೀಗ ಅವರನ್ನ ವಾಪಸ್ ಭಾರತಕ್ಕೆ ಕರೆತರೋದು ಬಹುದೊಡ್ಡ ಸವಾಲಾಗಿದೆ. ತೀರ್ಥಹಳ್ಳಿಯ ಫಾದರ್ ರಾಬರ್ಟ್, ಬೆಂಗಳೂರಿನ ಅಶ್ವತಿ, ಮಂಗಳೂರಿನ ವೆನ್ಸೆಂಟ್, ಮಾರ್ಥಹಳ್ಳಿಯ ದೇವನಾಥ್, ಸಂಡೂರಿನ ತನ್ವೀರ್ ಇವರೆಲ್ಲರನ್ನ ರಕ್ಷಿಸೋದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಉಗ್ರರ ರಣಕೇಕೆ: ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿದ ಆಫ್ಘನ್ ಜನ
ಇವರೆಲ್ಲರೂ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಅತಂತ್ರವಾಗಿದ್ದಾರೆ. ಆಫ್ಘನ್ನಲ್ಲಿ ಸಿಲುಕಿ ಕರುನಾಡಿಗೆ ಬರಲು ಪಡಬಾರದ ಸಂಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ಏರ್ಪೋರ್ಟ್ನಲ್ಲಿ ಹಲವು ಕನ್ನಡಿಗರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
"
ಇವರೆಲ್ಲರೂ ಕಳೆದ ಮೂರು ದಿನಗಳಿಂದ ಏರ್ಪೋರ್ಟ್ನ ಹೊರಗಡೆ ಇದ್ದಾರೆ. ಇದೀಗ ಕಾಬೂಲ್ ಏರ್ಪೋರ್ಟ್ಗೆ ಹೋಗೋದಕ್ಕೆ ಪರದಾಡುತ್ತಿದ್ದಾರೆ. ಯಾರನ್ನ ಸಂಪರ್ಕಿಸಬೇಕು ಅನ್ನೋದೆ ಇವರಿಗೆ ಗೊತ್ತಾಗುತ್ತಿಲ್ಲ. ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹ ಪಡುತ್ತಿದೆ.