Asianet Suvarna News Asianet Suvarna News

ವೋಕಲ್ ಫಾರ್ ಲೋಕಲ್: ವಿ-ಪೇ ಆ್ಯಪ್ ಹಾಗೂ ವಿ-ಕಾರ್ಡ್ ಲಾಂಚ್!

  • ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ  ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿ
  • ನೂತನ ಆ್ಯಪ್ ಮೂಲಕ ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್,  ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ
  • ಹತ್ತು ಹಲವು ವಿಶೇಷತೆಗಳ ಹೊಚ್ಚ ಹೊಸ ಆ್ಯಪ್
Vocal for local v pay app and v card launched in Bengaluru
Author
Bengaluru, First Published Sep 17, 2020, 6:38 PM IST

ಬೆಂಗಳೂರು(ಸೆ.17) : ಬೆಂಗಳೂರಿನ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆ ಗೆಳೆಯ ವಿ-ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಖ್ಯಾತ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ರವಿ ಹಾಗೂ ಕವಿ ಹಾಗೂ ಸಾಹಿತಿ ದುಂಡಿರಾಜು ಬಿಡುಗಡೆಗೊಳಿಸಿದರು.

ವಾಟ್ಸಾಪ್‌ನಲ್ಲಿ ಡಿಲೀಟ್‌ ಆದ ಮೆಸೇಜ್‌ ರಿಕವರಿ‌ ಮಾಡಿಕೊಳ್ಳೋದು ಹೇಗೆ?

ಈ ವೇಳೆ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ. ನಾವು ನಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ಅದು ನಮ್ಮನ್ನು ಮೀರಿ ಬೆಳೆಯುತ್ತಾ ಹೋಗುತ್ತೆ. ಇಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ವಿ-ಪೇ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಆಗಾಗಿ ನಾವು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಆಪ್ ನ ಮೂಲ ಭಾಷೆ ಕೂಡ ಕನ್ನಡವಾಗಿರಬೇಕು ಎಂದು ಸಲಹೆ ನೀಡಿದರು. ನಾನು, ನನ್ನದು ಎಂದು ಹೆಮ್ಮೆಯಿಂದ ಬಂದಾಗ ನನ್ನತನ ಉಳಿಯುತ್ತೆ. ಅದರ ಮುಖಾಂತರ ನಾವು ಇಡೀ ಪ್ರಚಂಚಕ್ಕೆ ಒಂದು ಮಾದರಿ ಇಡಬಹುದು. ನಮ್ಮ ಬಗ್ಗೆ ನಾವು ಹೆಮ್ಮೆ ಪಡೆದುಕೊಂಡಾಗ ಮಾತ್ರ ಪ್ರಪಂಚಕ್ಕೆ ಮಾದರಿ ಆಗಬಹುದು.

Vocal for local v pay app and v card launched in Bengaluru

ಇಂದು ಬಿಡುಗಡೆ ಆಗಿರುವ ಆಪ್ ಇಡಿ ಭಾರತಕ್ಕೆ ಕೊಡುಗೆ ಆಗಬೇಕು. ನೀವು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಇವತ್ತು ತಂತ್ರಾಂಶಗಳಲ್ಲಿ ಗಣಕತಂತ್ರಗಳಲ್ಲಿ ಕನ್ನಡವನ್ನು ಬಹಳ ಚೆನ್ನಾಗಿ ಬಳಸುತ್ತಿದ್ದೇವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆಪ್ ಗಳು ರೆಡಿಯಾಗಿವೆ. ಯಾರಿಗೂ ಕೀಳರಿಮೆ ಬೇಡ, ಕನ್ನಡದಲ್ಲಿ ಎಲ್ಲವೂ ಆಗುತ್ತೆ.  ನವೆಂಬರ್ ಒಂದರಿಂದ ಯುಆರ್ ಎಲ್ ಕೂಡ ಕನ್ನಡದಲ್ಲೇ ಬರಲಿದೆ ಎಂದು ಇದೇ ವೇಳೆ ತಿಳಿಸಿದರು. 

ಸ್ಪರ್ಧೆ ಇಲ್ಲದ ಬದುಕಿಲ್ಲ. ಇಂತಹ ಸನ್ನಿವೇಶವನ್ನು ಒಂದು ಸವಾಲಾಗಿ ಸ್ವೀಕರಿಸಬೇಕು. ಆ ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಬೇಕು, ಅಂತಹ ಅದ್ಭುತ ಅವಕಾಶ ನಿಮ್ಮೆಲ್ಲರಿಗೂ ಸಿಕ್ಕಿದೆ,  ಅದನ್ನು ಬಳಸಿಕೊಂಡು ವಿಶ್ವಾಸ್ ವಿ-ಪೇ ರೈತರ ಮನೆಮನದಲ್ಲೂ ಮಾತಾದರೇ ತಾನೇತಾನಾಗಿ ಇಡೀ ಭಾರತಕ್ಕೆ ಮಾದರಿ ಆಗುತ್ತದೆ. ಅಂತಹ ಕೆಲಸ ನಿಮ್ಮದಾಗಲಿ ಎಂದು ಆಶಿಸಿದರು.   

ಇನ್ನು ಈ ವಿ-ಪೇ ಸಂಸ್ಥೆಯ ಪ್ರತಿಯೊಬ್ಬ ಪ್ರತಿನಿಧಿ ಕೂಡ ನಿಮ್ಮ ನಿಮ್ಮ ರೈತರನ್ನ, ಕನ್ನಡಮನಸ್ಸುಗಳನ್ನು ಒಟ್ಟುಗೂಡಿಸಿದರೇ ವಿಶ್ವಾಸ್ ವಿ-ಪೇ ಪ್ರತಿಯೊಂದು ಮನೆಯನ್ನು ತಲುಪುತ್ತೆ, ಅದರ ಮುಖಾಂತರ ಅದು ನಿಜವಾದ ಭಾರತೀಯತೆಯನ್ನು ಹೇಳುತ್ತಾ ಹೋಗುತ್ತೆ. ಭಾರತೀಯತೆ ಅಂದ್ರೆ ಪ್ರತಿವೊಂದು ರಾಜ್ಯವೂ ತನ್ನತನವನ್ನ ಹೇಳಿದಾಗ ಅದು ಭಾರತೀಯತೆಯೇ ಆಗಿರುತ್ತೆ. ಎಲ್ಲ ಸಂಸ್ಕೃತಿಗಳ ಆಗರ ಭಾರತ. ಭಾರತೀಯ ಪರಂಪರೆ ನಮಗೆ ತಿಳಿಸಿರುವಂತಹ ಗುರು ಕಾಣಿಕೆ ಏನಿದೆ, ಅದನ್ನ ನಾವೀಗ ಸಲ್ಲಿಸುತ್ತಿದ್ದೇವೆ. ಗುರು ಕಾಣಿಕೆ ಸಲ್ಲಿಸೋಕೆ ಇದೊಂದು ವೇದಿಕೆ ಸಜ್ಜಾಗಿದೆ. ವಿ-ಪೇ ಅನ್ನೋದು ವಿ ಅರ್ನ್ ಅನ್ನುವಾಗೇ ಆಗಲಿ, ವಿ-ಪೇ ಭಾರತಕ್ಕೆ ಮಾದರಿ ಆಗಲಿ ಎಂದು ಆಶಿಸಿದರು.   

ಮುಖ್ಯವಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿಪಡಿಸಲಾಗಿದೆ.  ವಿ ಪೇ- ಆಪ್ ಮುಖಾಂತರ ಹಣ ವರ್ಗಾವಣೆ, ಎಲ್ಲಾ ರೀತಿಯ ಮೊಬೈಲ್ ರಿಚಾರ್ಜ್,  ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ ಮಾಡಬಹುದಾಗಿದೆ. 
ಇನ್ನು ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗಡೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೇ ರೈತ ವ್ಯವಸಾಯಕ್ಕೆ ಬಳಸುವ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೂ ವಿ ಪೇ ಆಪ್ ಮತ್ತು ವಿ-ಕಾರ್ಡ್ ಉಪಯೋಗವಾಗಲಿದೆ.  ವಿ ಪೇ ಆಪ್ ಮತ್ತು ವಿ-ಕಾರ್ಡ್ ಮೂಲಕ ಖರೀದಿ ಮಾಡಿದಾಗ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. 
ಪ್ರತಿ ತಾಲೂಕಿನಲ್ಲಿ  ವಿ ಪೇ ಆಪ್ ಮತ್ತು ವಿ-ಕಾರ್ಡ್ ಫ್ರಾಂಚೈಸಿಗಳನ್ನು ಹೊಂದಿದೆ. ಈ ಫ್ರಾಂಚೈಸಿಗಳ ಮೂಲಕ ಗ್ರಾಹಕರು ವಿ ಪೇ ಆಪ್ ಮತ್ತು ವಿ-ಕಾರ್ಡ್ ಬಳಕೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. 

Follow Us:
Download App:
  • android
  • ios