ಮೂಕಾಂಬಿಕಾ ಸನ್ನಿಧಾನಕ್ಕೂ ಕಾಲಿಟ್ಟ ಧರ್ಮ ದಂಗಲ್, ಸಲಾಂ ಆರತಿ ರಹಸ್ಯ ಬಿಚ್ಚಿಟ್ಟ ಅರ್ಚಕರು!

ಮುಸ್ಲೀಂ ಹೆಣ್ಣುಮಕ್ಕಳ ಹಿಜಬ್ ವಿವಾದ (Hijab Row) ಇದೀಗ ಕೊಲ್ಲೂರಿನ (Kolluru) ತಾಯಿ ಮೂಕಾಂಬಿಕಾ ಸನ್ನಿದಾನದವರೆಗೂ ತಲುಪಿದೆ. ಕ್ಷೇತ್ರದಲ್ಲಿ ಸಲಾಂ ಬೇಡ ಮಂಗಳಾರತಿ ಸಾಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ ಬೆನ್ನಲ್ಲೇ, ವಿವಾದ ಹೊಸ ತಿರುವು ಪಡೆದಿದೆ. 
 

Share this Video
  • FB
  • Linkdin
  • Whatsapp

ಮುಸ್ಲೀಂ ಹೆಣ್ಣುಮಕ್ಕಳ ಹಿಜಬ್ ವಿವಾದ (Hijab Row) ಇದೀಗ ಕೊಲ್ಲೂರಿನ (Kolluru) ತಾಯಿ ಮೂಕಾಂಬಿಕಾ ಸನ್ನಿದಾನದವರೆಗೂ ತಲುಪಿದೆ. ಕ್ಷೇತ್ರದಲ್ಲಿ ಸಲಾಂ ಬೇಡ ಮಂಗಳಾರತಿ ಸಾಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ ಬೆನ್ನಲ್ಲೇ, ವಿವಾದ ಹೊಸ ತಿರುವು ಪಡೆದಿದೆ. 

ಹಿಜಾಬ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ!

ನಾಡಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್‌ ಹೆಸರಿನಲ್ಲಿ ರಾತ್ರಿ ನಡೆಯುವ ಸಲಾಂ ಮಂಗಳಾರತಿ ಪೂಜೆಯ ಹೆಸರನ್ನು ಬದಲಾಯಿಸಬೇಕು ಎಂಬ ಹಿಂದೂ ಸಂಘಟನೆಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ದೇವಾಲಯದ ಅರ್ಚಕರಲ್ಲೊಬ್ಬರಾದ ಕೆ.ವಿ. ಶ್ರೀಧರ ಅಡಿಗ, ದೇವಾಲಯದಲ್ಲಿ ಸಲಾಂ ಮಂಗಳಾರತಿ ಹೆಸರಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Video