Asianet Suvarna News Asianet Suvarna News

ಭಾರೀ ಮಳೆಗೆ ಗುರುಪುರದಲ್ಲಿ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದಾರೆ ಇಬ್ಬರು ಮಕ್ಕಳು

ಭಾರೀ ಮಳೆಗೆ ಮಂಗಳೂರಿನ ಗುರುಪುರದಲ್ಲಿ ಗುಡ್ಡ ಕುಸಿದಿದ್ದು 4 ಮನೆಗಳು ನೆಲಸಮವಾಗಿದೆ. ಮಣ್ಣಿನಡಿ ಇಬ್ಬರು ಬಾಲಕರು ಸಿಲುಕಿದ್ದಾರೆ. ಸ್ಥಳೀಯರು, ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.  ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ಸುವರ್ಣ ನ್ಯೂಸ್ ಕಳಕಳಿ. ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ರಕ್ಷಣಾ ಕಾರ್ಯದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 

ಬೆಂಗಳೂರು (ಜು. 05): ಭಾರೀ ಮಳೆಗೆ ಮಂಗಳೂರಿನ ಗುರುಪುರದಲ್ಲಿ ಗುಡ್ಡ ಕುಸಿದಿದ್ದು 4 ಮನೆಗಳು ನೆಲಸಮವಾಗಿದೆ. ಮಣ್ಣಿನಡಿ ಇಬ್ಬರು ಬಾಲಕರು ಸಿಲುಕಿದ್ದಾರೆ. ಸ್ಥಳೀಯರು, ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.  ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ಸುವರ್ಣ ನ್ಯೂಸ್ ಕಳಕಳಿ. ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ರಕ್ಷಣಾ ಕಾರ್ಯದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ತುಂಬಿ ಹರಿಯುತ್ತಿವೆ ನದಿಗಳು: ಉಡುಪಿಯಲ್ಲಿ ಪ್ರವಾಹ ಭೀತಿ