Asianet Suvarna News Asianet Suvarna News

ಹಾನಗಲ್ ಉಳಿಸಿಕೊಳ್ಳಲು ಬಿಜೆಪಿ ಜಾತಿ ಲೆಕ್ಕಾಚಾರ, ಓಲೈಕೆ ಪಾಲಿಟಿಕ್ಸ್‌!

ಹಾನಗಲ್ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ರಣತಂತ್ರ ರೂಪಿಸಿದೆ. ಹಾನಗಲ್ ಕ್ಷೇತ್ರದಲ್ಲಿ 85 ಸಾವಿರ ಲಿಂಗಾಯತ ಮತದಾರರಿದ್ದಾರೆ. ಇವರಲ್ಲಿ 55 ಸಾವಿರ ಪಂಚಮಸಾಲಿ ಮತದಾರರಿದ್ದಾರೆ. ಇವರ ಓಲೈಕೆ ಜವಾಬ್ದಾರಿಯನ್ನು ನಿರಾಣಿಗೆ ವಹಿಸಲಾಗಿದೆ. 

ಬೆಂಗಳೂರು (ಅ. 09): ಹಾನಗಲ್ ಕ್ಷೇತ್ರ ಉಳಿಸಿಕೊಳ್ಳಲು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ರಣತಂತ್ರ ರೂಪಿಸಿದೆ. ಹಾನಗಲ್ ಕ್ಷೇತ್ರದಲ್ಲಿ 85 ಸಾವಿರ ಲಿಂಗಾಯತ ಮತದಾರರಿದ್ದಾರೆ. ಇವರಲ್ಲಿ 55 ಸಾವಿರ ಪಂಚಮಸಾಲಿ ಮತದಾರರಿದ್ದಾರೆ.

ಸಿಂದಗಿ ಗೆಲುವಿಗೆ ಬಿಜೆಪಿ 'ಸಪ್ತ' ತಂಡ, ವರ್ಕೌಟ್ ಆಗುತ್ತಾ ಸವದಿ ಲೆಕ್ಕಾಚಾರ.?

ಇವರ ಓಲೈಕೆ ಜವಾಬ್ದಾರಿಯನ್ನು ನಿರಾಣಿಗೆ ವಹಿಸಲಾಗಿದೆ. ಉಪಜಾತಿ ನೊಣಬರನ್ನು ಓಲೈಸಲು ಮಾಧುಸ್ವಾಮಿಗೆ ಟಾಸ್ಕ್ ಕೊಡಲಾಗಿದೆ. ಯುವ ಸಮೂಹವನ್ನು ಸೆಳೆಯಲು ವಿಜಯೇಂದ್ರ ಅಖಾಡಕ್ಕಿಳಿಯರಿದ್ದಾರೆ. ಸಾದರ ಲಿಂಗಾಯತರ ಓಲೈಕೆಗೆ ಖುದ್ದು ಬೊಮ್ಮಾಯಿಯವರೇ ಅಖಾಡಕ್ಕಿಳಿಯರಿದ್ದಾರೆ. ಹಾನಗಲ್‌ನಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದೆ.