ಕಲವೇ ಕ್ಷಣಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪಂದನಾ ಪಾರ್ಥೀವ ಶರೀರ!

ಬೆಂಗಳೂರಿನತ್ತ ನಟ ವಿಜಯ ರಾಘವೇಂದ್ರ ಪತ್ನಿ ಮೃತದೇಹ, ಸೂಪರ್ ಕಾಪ್ ಅಪ್ಪನ ಮುದ್ದಿನ ಮಗಳು ಸ್ಪಂದನಾ ಬಾರದ ಲೋಕಕ್ಕೆ, ರಾಜ್ಯಪಾಲರ ಅಂಗಳಕ್ಕೆ ಕಾಂಗ್ರೆಸ್ ಸರ್ಕಾರದ ಕಮಿಷನ್ ಕಿಚ್ಚು, ಚೆಲುವರಾಯಸ್ವಾಮಿ ವಿರುದ್ಧದ ಪತ್ರ ಅಸಲಿಯೇ? ನಕಲಿಯೇ? ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Aug 8, 2023, 11:15 PM IST | Last Updated Aug 8, 2023, 11:15 PM IST

ಬ್ಯಾಂಕಾಕ್‌ನಲ್ಲಿ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ ಮೃತದೇಹ ಕೆಲವೇ ಕ್ಷಣಗಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಕಾನೂನು ಪ್ರಕ್ರಿಯೆ ಮುಗಿಸಿ ಪಾರ್ಥೀವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಿದೆ. ಥಾಯ್ ಏರ್ವೇಸ್ ಮೂಲಕ ಬೆಂಗಳೂರಿಗೆ ಹೊರಟ ವಿಮಾನ ಲ್ಯಾಂಡ್ ಆಗಲಿದೆ. ಬಳಿಕ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪರಿಶೀಲನೆ ಕಾರ್ಯ ನಡೆಯಲಿದೆ. ಸುಮಾರು 30 ರಿಂದ 45 ನಿಮಿಷ ನಡೆಯಲಿರುವ ಪರಿಶೀಲನೆ ಬಳಿಕ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಈಗಾಗಲೇ ಆ್ಯಂಬಲೆನ್ಸ್ ನಿಲ್ದಾಣ ತಲುಪಿದೆ. ಕುಟುಂಬಸ್ಥರು ತೀವ್ರ ನೋವಿನಿಂದ ಸ್ಪಂದನಾ ಪಾರ್ಥೀವ ಶರೀರಾಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಸ್ಪಂದನಾ ಮೃತದೇಹ ತರಲು ಥಾಯ್ಲೆಂಡ್‌ನಲ್ಲಿನ ಪ್ರಕ್ರಿಯೆ, ನಾಳೆ ಅಂತ್ಯಸಂಸ್ಕಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.