Asianet Suvarna News Asianet Suvarna News

'ನಟ ಭಯಂಕರ' ಸಿನಿಮಾಗಾಗಿ ಪ್ರಥಮ್ ವಿಭಿನ್ನ ಪ್ರಚಾರ

ನಟ ಭಯಂಕರ ಸಿನಿಮಾದ ಪ್ರಚಾರದಲ್ಲಿ ಪ್ರಥಮ್ ನಿರತರಾಗಿದ್ದು, ಸಿದ್ದರಾಮಯ್ಯ ಅವರು ಆಶೀರ್ವಾದವನ್ನು ಪಡೆದಿದ್ದಾರೆ.
 

ಪ್ರಥಮ್‌ ಸಾರಥ್ಯದಲ್ಲಿ ನಟ ಭಯಂಕರ ಚಿತ್ರ ನಿರ್ಮಾಣವಾಗುತ್ತಿದೆ. ಈ ಕುರಿತು ಶಂಕರ್‌ ಅಶ್ವತ್‌ ಮಾತನಾಡಿದ್ದು, ಎಲ್ಲರು ಹೇಳುವ ಹಾಗೆ ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ ಎಂದರು. ತುಂಬಾ ಚೆನ್ನಾಗಿ ಮಾಡಿದ್ದೇವೆ, ನೋಡಲೇ ಬೇಕು ಎಂದು ಹೇಳುವ ಹಾಗೆ ಹೇಳಲ್ಲ. ಪ್ರಥಮ್ ಚೇಷ್ಟೆ ಮಾಡಿಕೊಂಡು ಏನೇನೋ ಮಾತಾಡುತ್ತಾ ಇರುತ್ತಾರೆ ಅನಿಸಿದರೂ, ತೀರ ಸಮೀಪದಲ್ಲಿ ನೋಡಿದಾಗ ಅವರಲ್ಲಿ ಇಷ್ಟೆಲ್ಲಾ ವಿಷಯಗಳು ಇದ್ಯಾ ಎಂದು ಅನಿಸುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ತುಂಬಾ ಹಗುರವಾಗಿ ಅವರು ಮಾತನಾಡುತ್ತಾರೆ ಎಂದು ಅನಿಸುತ್ತದೆ ಎಂದು ಶಂಕರ್‌ ಅಶ್ವತ್‌ ಹೇಳಿದರು.

ಕೋಲಾರ ಕ್ಷೇತ್ರದಲ್ಲಿ ನಟ ಪ್ರಥಮ್‌ ರೌಂಡ್ಸ್: ಹೇಗಿದೆ ಜಿದ್ದಾಜಿದ್ದಿನ ಅಖಾಡದ ಚಿತ್ರಣ?