ಕನ್ನಡ ಬೆಳ್ಳಿತೆರೆಯಲ್ಲಿ ಸಿನಿಮಾ ಹಂಗಾಮ: ಮೂರು ಸಿನಿಮಾಗಳಲ್ಲಿದೆ ಮನರಂಜನೆ ಮಹಾಪೂರ!

ಕೆಜಿಎಫ್-2 ಸಿನಿಮಾ ಬಂದ ಮೇಲೆ ಆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮತ್ತೊಂದು ಮನರಂಜನೆಯ ಸಿನಿಮಾ ನೋಡೋದಕ್ಕೆ ಕಾಯ್ತಿದ್ರು. ಆ ಕಾಯುವಿಕೆಗೆ ಈಗ ಕನ್ನಡ ಬೆಳ್ಳಿತೆರೆ ಮೇಲೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಇರೋ ಮೂರು ಸಿನಿಮಾಗಳು ಒಂದೇ ದಿನ ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ.

First Published May 28, 2022, 7:31 PM IST | Last Updated May 28, 2022, 7:31 PM IST

ಕೆಜಿಎಫ್-2 ಸಿನಿಮಾ ಬಂದ ಮೇಲೆ ಆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮತ್ತೊಂದು ಮನರಂಜನೆಯ ಸಿನಿಮಾ ನೋಡೋದಕ್ಕೆ ಕಾಯ್ತಿದ್ರು. ಆ ಕಾಯುವಿಕೆಗೆ ಈಗ ಕನ್ನಡ ಬೆಳ್ಳಿತೆರೆ ಮೇಲೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಇರೋ ಮೂರು ಸಿನಿಮಾಗಳು ಒಂದೇ ದಿನ ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ. ಆ ಮೂರು ಚಿತ್ರಗಳಲ್ಲೊಂದು ಕಾಣೆಯಾದವರ ಬಗ್ಗೆ ಪ್ರಕಟಣೆ. ವಿಭಿನ್ನ ಟೈಟಲ್ನಿಂದಲೇ ಕುತೂಹಲ ಹುಟ್ಟಿಸಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ಈಗ ಸಿನಿ ಪ್ರೇಕ್ಷಕರಿಗೂ ಮನರಂಜನೆಯ ಬಾಡೂಟ ಬಡಿಸಿದೆ. 

ಅನೀಲ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಟ ರಂಗಾಯಣ ರಘು, ರವಿಶಂಕರ್‌, ತಬಲಾ ನಾಣಿ, ಹಾಗು ಚಿಕ್ಕಣ್ಣ ನಗುತ್ತಾ, ನಗಿಸುತ್ತಾ, ಅಳಿಸುವ ಹಾಗೆ ಅಭಿನಯಿಸಿದ್ದು, ಜನ ಮನ ಗೆದ್ದಿದ್ದಾರೆ. ಕಳೆದ 15 ವರ್ಷಗಳಿಂದ ಸಹ ನಿರ್ದೇಶಕ, ಸಂಭಾಷಣೆಗಾರನಾಗಿ ಕೆಲಸ ಮಾಡಿರುವವರು ಜಿ. ನಟರಾಜ್ ನಿರ್ದೇಶನದ ವ್ಹೀಲ್ ಚೇರ್ ರೋಮಿಯೋ ಸಿನಿಮಾ ಕೂಡ ಇದೇ ವಾರ ತೆರೆ ಕಂಡಿದೆ. ಒಬ್ಬ ಅಂಗವಿಕಲ ಹುಡುಗನ ಸುತ್ತ ಹೆಣೆದಿರೋ ಈ ಸಿನಿಮಾ ನೋಡಿದ ಪ್ರೇಕ್ಷಕರು ಮನರಂಜನೆಯಲ್ಲೇ ಮುಳುಗಿದ್ದಾರೆ. ರಾಮ್‌ಚೇತನ್ ನಾಯಕ ನಟನಾಗಿ ನಟಿಸಿರೋ ಈ ಸಿನಿಮಾದಲ್ಲಿ ನಾಯಕಿಯಾಗಿ ಮಯೂರಿ ಬಣ್ಣ ಹಚ್ಚಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ನಟಿ ಮಾನ್ಯಾ ಡ್ಯಾನ್ಸ್‌ ವಿಡಿಯೋ ವೈರಲ್; ಕಮ್‌ಬ್ಯಾಕ್‌ ಪ್ರಶ್ನಿಸಿದ ನೆಟ್ಟಿಗರು!

ತಿಮ್ಮಪ್ಪ ವೆಂಕಟಚಲಯ್ಯ ಬಂಡವಾಳ ಹೂಡಿರೋ ಈ ಸಿನಿಮಾದ ಕಂಟೆಂಟ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿದೆ. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರೋ ಕಿರಿಕ್ ಶಂಕರ್ ಸಿನಿಮಾ ಕೂಡ ಈ ವಾರ ಬಿಡುಗಡೆ ಆಗಿದೆ. ಎಂ.ಎನ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ಅದ್ವಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ನಟ ಯೋಗಿಯ ವಿಶಿಷ್ಟ ಮ್ಯಾನರಿಸಂ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದಾರೆ. ಆರ್ ಅನಂತರಾಜು ನಿರ್ದೇಶನದ ಕಿರಿಕ್ ಶಂಕರ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಟ್ನಲ್ಲಿ ಈ ವಾರ ರಿಲೀಸ್ ಆಗಿರೋ ಮೂರು ಸಿನಿಮಾಗಳೂ ಜನರ ಮನಸ್ಸು ಗೆಲ್ಲುತ್ತಿವೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories