2023 Karnataka Assembly election: ಜೆಡಿಎಸ್ ಭದ್ರಕೋಟೆಯಲ್ಲಿ ಹಳೇ ದೋಸ್ತಿಗಳ ಜಿದ್ದಾಜಿದ್ದಿ: ಪಂಚರತ್ನ ಯಾತ್ರೆಗೆ ಕಾಂಗ್ರೆಸ್
ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಫುಲ್ ಆಕ್ಟೀವ್ ಆಗಿದೆ. ಜೆಡಿಎಸ್ ಪಕ್ಷಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ.
ಮಂಡ್ಯದಲ್ಲಿ ಪಂಚರತ್ನ ರಥಯಾತ್ರೆಗೆ ರ್ಯಾಲಿ ಮೂಲಕ ಕೌಂಟರ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ಮಂಡ್ಯದಲ್ಲಿ ರಥಯಾತ್ರೆ ಎಂಟ್ರಿ ಆಗ್ತಿದ್ದಂತೆ ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆ ನೆಪದಲ್ಲಿ ನಡೆಸಿದೆ. ಮಳವಳ್ಳಿಯಲ್ಲಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಎಂಟ್ರಿ, ಅತ್ತ ಶ್ರೀರಂಗಪಟ್ಟಣದಲ್ಲಿ ಚೆಲುವರಾಯಸ್ವಾಮಿ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಜೆಡಿಎಸ್'ನಿಂದ ಮಂಡ್ಯ ಅಭಿವೃದ್ದಿ ಶೂನ್ಯ ಎಂದು ಕಾಂಗ್ರೆಸ್ ಹೇಳಿದೆ. ಜೆಡಿಎಸ್ ಕೊಟ್ಟ ಯಾವುದೇ ಆಶ್ವಾಸನೆಯನ್ನು ನೆರೆವೇರಿಸಿಲ್ಲ ಎಂದು ಚೆಲುವರಾಯಸ್ವಾಮಿ ಕಿಡಿಕಾರಿದ್ದಾರೆ.