Asianet Suvarna News Asianet Suvarna News

ಮಾಜಿ ಸಚಿವಗೆ ಊರಿನವರಿಂದ ಫುಲ್ ಕ್ಲಾಸ್

ಮಾಜಿ ಸಚಿವರೋರ್ವರಿಗೆ ಗ್ರಾಮಸ್ಥರು ಫುಲ್ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. 

ಚಿಕ್ಕಮಗಳೂರು (ಡಿ.06):  ಮಾಜಿ ಸಚಿವರೋರ್ವರಿಗೆ ಗ್ರಾಮಸ್ಥರು ಫುಲ್ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ  ಗ್ರಾ. ಪಂ ಚುನಾವಣೆ ಹಿನ್ನೆಲೆ ಸಭೆ ಮಾಡಲು ತೆರಳಿದ್ದ ಮಾಜಿ ಸಚಿವ ಜೀವರಾಜ್‌ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.  

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ ಆ ಸಿಸಿಟಿವಿ ದೃಶ್ಯ ! ..

ಮಲೆನಾಡಿಗರ ಮೇಲೆ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆಯ ತೂಗುಗತ್ತಿ ಆಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಜನರು ಬಹಿಷ್ಕರಿಸಿದ್ದಾರೆ.  ಬಹಿಷ್ಕಾರದ ಮಧ್ಯೆಯೂ ಸಭೆ ಮಾಡಲು ತೆರಳಿದ್ದ ಮಾಜಿ ಸಚಿವಗೆ ತರಾಟೆ ತೆಗೆದುಕೊಂಡಿದ್ದಾರೆ.
 

Video Top Stories