ಹೆಚ್ಡಿ ಕೋಟೆಯ ಕಲ್ಲು ಆಯೋಧ್ಯೆ ರಾಮ ಮಂದಿರದ ಬಾಲರಾಮನಾಗಿದ್ದು ಹೇಗೆ?
ಹೆಚ್ಡಿ ಕೋಟೆಯ ಖಾಸಗಿ ವ್ಯಕ್ತಿಯ ಜಮೀನಿನಲ್ಲಿದ್ದ ಕಲ್ಲೊಂದು ಇದೀಗ ಭಗವಾನ್ ಶ್ರೀರಾಮನಾಗಿ ಆಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ರಾಮಾಯಣಕಾಲದಿಂದಲೂ ಆಯೋಧ್ಯೆ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಇದೀಗ ಶ್ರೀರಾಮ ಮಂದಿರ ನಿರ್ಮಾಣದಲ್ಲೂ ಕರ್ನಾಟಕ ನಂಟು ಮತ್ತಷ್ಟು ಹೆಚ್ಚಾಗಿದೆ.
ಆಯೋಧ್ಯೆ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಬಾಲರಾಮನ ವಿಗ್ರಹ ಅಂತಿಮಗೊಂಡಿದೆ. ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ಮೂರ್ತಿಯನ್ನು ಜನ್ಮಭೂಮಿ ಟ್ರಸ್ಟ್ ಆಯ್ಕೆ ಮಾಡಿದೆ. ಕನ್ನಡಿಗರ ಸಂಭ್ರಮ ಡಬಲ್ ಆಗಿದೆ. ಹೆಚ್ಡಿಕೋಟೆಯ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿದ್ದ ಈ ಕಲ್ಲು ಆಯೋಧ್ಯೆ ರಾಮ ಮಂದಿರದ ರಾಮ ಲಲ್ಲಾ ಆಗಿದ್ದು ಹೇಗೆ? ಇದರ ಹಿಂದಿದೆ ರೋಚಕ ಸ್ಟೋರಿ