ಆಗಸ್ಟ್ನಲ್ಲಿ 3 ನೇ ಅಲೆ, ಕೋವಿಡ್ನಿಂದ ಗುಣಮುಖರಾದವರಲ್ಲಿ ಮೂಳೆಯ ಅಂಗಾಂಶಗಳ ಸಾವು!
- ಆಗಸ್ಟ್ನಲ್ಲಿಯೇ 3 ನೇ ಅಲೆ ಸಾಧ್ಯತೆ
- ಕೋವಿಡ್ನಿಂದ ಗುಣಮುಖ ಬಳಿಕ ಮೂಳೆಯ ಅಂಗಾಂಶಗಳ ಸಾವು!
- ಕೊರೋನಾ ಗುಣಮುಖರಾದವರಲ್ಲಿ ಹೃದಯಾಘಾತ ಭೀತಿ
ಬೆಂಗಳೂರು (ಜು. 07): ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದ್ದು, ದೇಶಾದ್ಯಂತ ಅನ್ಲಾಕ್ ಮಾಡಲಾಗಿದೆ. ಆಗಸ್ಟ್ನಲ್ಲಿಯೇ 3 ನೇ ಅಲೆ ಅಪ್ಪಳಿಸುತ್ತದೆಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನೊಂದು ಕಡೆ ಬ್ಲಾಕ್ ಫಂಗಸ್ ಹಾಗೂ ಗುದನಾಳ ರಕ್ತಸ್ರಾವದ ಬಳಿಕ ಕೋವಿಡ್ನಿಂದ ಗುಣಮುಖ ಆದವರಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ.
ಕೊರೋನಾ ಲಸಿಕೆ ಜಾದೂ: ಪೂರ್ಣ ದೃಷ್ಟಿ ಕಳೆದುಕೊಂಡಿದ್ದ ಮಹಿಳೆಗೆ ಮತ್ತೆ ದೃಷ್ಟಿ!
ಕೆಲವು ಗುಣಮುಖರಲ್ಲಿ ಮೂಳೆಯ ಅಂಗಾಂಶಗಳು ಸತ್ತುಹೋಗುವ ಭೀತಿ ಸೃಷ್ಟಿಯಾಗಿದ್ದು, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ ಆಗಿವೆ. ಜೊತೆಗೆ ಕೊರೋನಾದಿಂದ ಗುಣಮುಖರಾದವರಲ್ಲಿ ಹೃದಯಾಘಾತದ ಸಂಭವವೂ ಹೆಚ್ಚಾಗಿದೆಯಂತೆ.