Asianet Suvarna News Asianet Suvarna News

ದೆಹಲಿ ಹಿಂಸಾಚಾರ, ಪ್ರತಿಭಟನಾಕಾರರಿಂದ ಹಲ್ಲೆ, 83 ಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ದೆಹಲಿ ಹಿಂಸಾಚಾರದಲ್ಲಿ 83 ಕ್ಕೂ ಪೊಲೀಸರಿಗೆ ಗಾಯಗಳಾಗಿದೆ. ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಟ್ರಾಕ್ಟರ್ ಹತ್ತಿಸಲು ಮುಂದಾಗಿದ್ದಾರೆ. ಅವರಿಂದ ಪೊಲೀಸರು ತಪ್ಪಿಸಿಕೊಂಡು ಹೋಗಲು ಕಂದಕಕ್ಕೆ ಹಾರಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿ ಅಕ್ಷರಶಃ ರಣಾಂಗಣವಾಗಿತ್ತು. 

ನವದೆಹಲಿ (ಜ. 27): ಗಣರಾಜ್ಯೋತ್ಸವ ದಿನ ದೇಶಭಕ್ತಿ, ಏಕತೆ, ಸಾಂಸ್ಕೃತಿಕ ಸಂಗಮಗಳಿಗೆ ಸಾಕ್ಷಿಯಾಗುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ, ರಣಾಂಗಣವಾಗಿ ಮಾರ್ಪಟ್ಟಿದೆ. ಪ್ರತಿಭಟನಾಕಾರರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ಸಿಕ್ಕ ಸಿಕ್ಕ ರಸ್ತೆಗಳಲ್ಲಿ ನುಗ್ಗಿದ್ದಾರೆ. ದಾರಿಯುದ್ಧಕ್ಕೂ ಪೊಲೀಸರ ಜೊತೆ ಘರ್ಷಣೆ ನಡೆದಿದೆ. ಕೊನೆಗೆ ಕೆಂಪುಕೋಟೆಗೂ ಮುತ್ತಿಗೆ ಹಾಕಿದ ಉದ್ರಿಕ್ತರು ರಾಷ್ಟ್ರಧ್ವಜ ಹಾರಿಸಬೇಕಾದ ಧ್ವಜಸ್ತಂಭ ಏರಿ ಸಿಖ್ ಮತ್ತು ಇತರ ಧ್ವಜಗಳನ್ನು ಹಾರಿಸಿದರು. 

ದೆಹಲಿ ದಂಗೆ ಪುನಾರಾವರ್ತನೆ ತಡೆಯಲು ಇಂದು ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಗಳು ಬಂದ್

ಈ ಘಟನೆಯಲ್ಲಿ 83 ಕ್ಕೂ ಪೊಲೀಸರಿಗೆ ಗಾಯಗಳಾಗಿದೆ. ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಟ್ರಾಕ್ಟರ್ ಹತ್ತಿಸಲು ಮುಂದಾಗಿದ್ದಾರೆ. ಅವರಿಂದ ಪೊಲೀಸರು ತಪ್ಪಿಸಿಕೊಂಡು ಹೋಗಲು ಕಂದಕಕ್ಕೆ ಹಾರಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿ ಅಕ್ಷರಶಃ ರಣಾಂಗಣವಾಗಿತ್ತು. ಅಲ್ಲಿನ ದೃಶ್ಯಗಳನ್ನು ನೋಡಿದ್ರೆ ಪರಿಸ್ಥಿತಿ ತೀವ್ರತೆ ಅರ್ಥವಾಗುತ್ತದೆ. 
 

Video Top Stories