Asianet Suvarna News Asianet Suvarna News

ಪ್ರೀತಿಸಿದವಳನ್ನೇ ಕತ್ತುಹಿಸುಕಿ ಕೊಂದ ಪ್ರೇಮಿ; ಸೌಮ್ಯ ಕೊಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಶಿವಮೊಗ್ಗ ಎಸ್‌ಪಿ

ಕೊಪ್ಪ ಮೂಲದ ಸೌಮ್ಯ ಕೊಲೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಸಾಗರ ಮೂಲದ ಪ್ರೇಮಿ ತನ್ನ ಪ್ರಿಯತಮೆಯನ್ನು ಹೇಗೆ ಹತ್ಯೆ ಮಾಡಿದ ಎನ್ನುವ ಸಂಗತಿ ಬಯಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

First Published Jul 26, 2024, 2:50 PM IST | Last Updated Jul 26, 2024, 2:56 PM IST

ಶಿವಮೊಗ್ಗ: ಅವಳು ಬಡವರ ಮನೆಯ ಹುಡುಗಿ. ಚಿಕ್ಕ ವಯಸಿನಲ್ಲೇ ಅಪ್ಪನನ್ನ ಕಳೆದುಕೊಂಡಿದ್ದಳು. ಹೀಗಾಗಿ ಪಿಯುಸಿಗೆ ಓದನ್ನು  ಮುಗಿಸಿ ಕಂಪ್ಯೂಟರ್​ ಕಲಿತು ಕೆಲಸಕ್ಕೆ ಹೋಗ್ತಿದ್ದಳು. ಇತ್ತಿಚೆಗಷ್ಟೇ ನರ್ಸ್​ ಟ್ರೈನಿಂಗ್‌ಗೂ ಸೇರಿಕೊಂಡಿದ್ದಳು. ಆದ್ರೆ ಆವತ್ತು ಟ್ರೈನಿಂಗ್‌ಗೆ ಅಂತ ಹೋದವಳು ಕಾಣೆಯಾಗಿದ್ಲು. ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ನಂತರ ಪೊಲೀಸ್​​ ಕಂಪ್ಲೆಂಟ್​​ ಕೂಡ ಕೊಟ್ರು. ಆದ್ರೆ ದೂರು ದಾಖಲಾಗಿ 21 ದಿನಗಳ ನಂತರ ಅವಳು ಸಿಕ್ಕಳು. ಆದ್ರೆ ಜೀವಂತವಾಗಿಯಲ್ಲ, ಬದಲಾಗಿ ಹೆಣವಾಗಿ.

ಯಸ್​​. ಅವಳನ್ನ ಹಂತಕನ್ನೊಬ್ಬ ಕೊಂದು ಹೂತುಹಾಕಿಬಿಟ್ಟಿದ್ದ. ಹಾಗಾದ್ರೆ ಅವಳನ್ನ ಕೊಂದಿದ್ಯಾರು..? ಒಬ್ಬ ಬಡಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯನ್ನು ಶಿವಮೊಗ್ಗ ಎಸ್‌ಪಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
 

Video Top Stories