Asianet Suvarna News Asianet Suvarna News

'ಕಾರಿಗೆ ಬೆಂಕಿ ಹಚ್ಚಿದವರು ಪಾತ್ರಧಾರಿಗಳು, ಸೂತ್ರಧಾರ ಬೇರೆಯೇ ಇದ್ದಾನೆ!'

* ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟ ಪ್ರಕರಣ
* ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
* ಬಂಧಿತರ ಹಿಂದೆ ಇರುವ ಸೂತ್ರಧಾರಿ ಯಾರು?
* ಬಂಧಿತರು ಕೇವಲ ಪಾತ್ರಧಾರಿಗಳು!

ಬೆಂಗಳೂರು, (ಆ.14):  ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.  ಬಂಧಿತರು ಕೇವಲ ಪಾತ್ರಧಾರಿಗಳು ಇವರ ಹಿಂದೆ ಒಬ್ಬ ಸೂತ್ರಧಾರಿ ಇದ್ದಾನೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟವರ ಕತೆ

ಬೆಂಗಳೂರಿನ ಶ್ರೀಧರ್ ಗೌಡ ಮತ್ತು ನವೀನ್ ಕಾಳಪ್ಪ ಹಾಗೂ ಕೇರಳ ಮೂಲದ ಸಾಗರ್ ಥಾಪರನ್ನು ಪೊಲೀಸರು ಬಂಧಿಸಿದ್ದರು.  ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನ ನೋಡಿ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡವರಿಗೆ ಬುದ್ಧಿ ಕಲಿಸಲು ಬೆಂಕಿ ಇಟ್ಟಿದ್ದೇವೆ ಎಂದಿದ್ದರು. ಆದರೆ ಸತೀಶ್ ರೆಡ್ಡಿ ಈ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು ಇವರ ಹಿಂದಿನ ಸೂತ್ರಧಾರಿಯ ಪಾತ್ರ ಬಹಿರಂಗವಾಗಬೇಕು ಎಂದಿದ್ದಾರೆ.