ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟವರ ಕಳ್ಳ ಹೆಜ್ಜೆ! ಇಂಚಿಂಚು ಮಾಹಿತಿ
* ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟ ಪ್ರಕರಣ
* ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
* ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿ ಇಲ್ಲ
* ಅಷ್ಟಕ್ಕೂ ಕಿರಾತಕರ ಪ್ಲಾನ್ ಹೇಗಿತ್ತು?
ಬೆಂಗಳೂರು, (ಆ.14): ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಆರೋಪಿಗಳು ಯಾವ ರೀತಿ ರಾತ್ರಿ ದಾಳಿ ಮಾಡಿದರು? ಅವರು ಬಂದಿದ್ದು ಹೇಗೆ?
ಫುಲ್ ನೈಟ್ ಐದು ಸಾವಿರ..ತಾಸಿಗೆ ಆದರೆ ಇಷ್ಟು. ಬೆಂಗಳೂರಿನ ನಶೆ ರಾಣಿಯರು
ಬೆಂಗಳೂರಿನ ಶ್ರೀಧರ್ ಗೌಡ ಮತ್ತು ನವೀನ್ ಕಾಳಪ್ಪ ಹಾಗೂ ಕೇರಳ ಮೂಲದ ಸಾಗರ್ ಥಾಪರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನ ನೋಡಿ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡವರಿಗೆ ಬುದ್ಧಿ ಕಲಿಸಲು ಬೆಂಕಿ ಇಟ್ಟಿದ್ದೇವೆ ಎಂದಿದ್ದರು. ತನಿಖೆ ನಡೆಯುತ್ತಿದ್ದು ನೈಜ ಕಾರಣ ಹೊರಗೆ ಬರಬೇಕಿದೆ.