ಇಸ್ಪೀಟ್ ಆಟದಿಂದ ಒಡಹುಟ್ಟಿದವರ ನಡುವೆ ಶುರುವಾದ ದ್ವೇಷ! 7 ವರ್ಷದ ನಂತರ ಕೊಲೆಯಲ್ಲಿ ಅಂತ್ಯ..!
ಮಂಡ್ಯದಲ್ಲಿ ಕಳೆದ 7 ವರ್ಷಗಳ ಹಿಂದೆ ಯುಗಾದಿ ಹಬ್ಬದ ವೇಳೆ ಇಸ್ಪೀಟ್ ಆಟದಲ್ಲಿ ಜಗಳ ಮಾಡಿದ್ದಕ್ಕೆ ಈಗ ಸ್ವಂತ ಅಣ್ಣನೇ ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಬೆಂಗಳೂರು (ಏ.02): ಮಂಡ್ಯದಲ್ಲಿ ಕಳೆದ 7 ವರ್ಷಗಳ ಹಿಂದೆ ಯುಗಾದಿ ಹಬ್ಬದ ವೇಳೆ ಇಸ್ಪೀಟ್ ಆಟದಲ್ಲಿ ಜಗಳ ಮಾಡಿದ್ದಕ್ಕೆ ಈಗ ಸ್ವಂತ ಅಣ್ಣನೇ ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.
ಚಿಕ್ಕಪ್ಪನನ್ನು ಕೊಲ್ಲಲು ಅಪ್ಪನಿಗೆ ಸಾಥ್ ಕೊಟ್ಟ ಮಕ್ಕಳು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಸಂಭ್ರಮ ಎಲ್ಲರ ಮನೆಯಲ್ಲೂ ಮಾಡಿತ್ತು. ಹೊಸತೊಡಕು ಮಾರನೇ ದಿನ ಮಾ.24ರಂದು ಭೀಕರ ಕೊಲೆ ನಡೆದಿತ್ತು. ಕೃಷ್ಣೇಗೌಡ ಕೂಡ ಊರಿನಲ್ಲಿ ಒಳ್ಳೆಯ ಮನುಷ್ಯ ಎನಿಸಿಕೊಂಡಿದ್ದ. ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ಮಾಡಿಕೊಂಡಿದ್ದನು. ಆದರೆ, ಮಾ.24ರ ಮಧ್ಯಾಹ್ನ ತಲೆನೋವು ಎಂದು ಮನೆಯಿಂದ ಹೊರಗೆ ಹೋದವನು ಮರಳಿ ಬಾರಲೇ ಇಲ್ಲ.
ಇನ್ನು ಮಧ್ಯಾಹ್ನ ಹೋದ ಕೃಷ್ಣೇಗೌಡ ಸಂಜೆ ಏಳು ಗಂಟೆಯ ವೇಳೆಗೆ ಬರ್ಬರವಾಗಿ ಕೊಲೆಯಾಗಿ ಬಿದ್ದಿರುವ ಬಗ್ಗೆ ಮನೆಗೆ ಮಾಹಿತಿ ಬಂದಿದೆ. ಇನ್ನು ಕೊಲೆಯಾಗಿದ್ದಾದರೂ ಏನಕ್ಕೆ ಎಂದು ಕೇಳಿದರೆ, ಕಳೆದ 7 ವರ್ಷದ ಹಿಂದೆ ನಡೆದಿದ್ದ ಇಸ್ಪೀಟ್ ಆಟದ ಗಲಾಟೆಗೋಸ್ಕರ ಸೇಡನ್ನು ಸಾಧಿಸಿ ಈಗ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಷ್ಟಕ್ಕೂ ಕೊಲೆ ಮಾಡಿದ್ದು ಬೇರ್ಯಾರೂ ಅಲ್ಲ ಅವರ ಸ್ವಂತ ಅಣ್ಣ ಹಾಗೂ ಅಣ್ಣನ ಮಕ್ಕಳು ಸೇರಿಕೊಂಡು ಕೊಲೆ ಮಾಡಿದ್ದಾರೆ.