Asianet Suvarna News Asianet Suvarna News

ಯಶ್ ಬಗ್ಗೆ ಅಲ್ಲು ಅರವಿಂದ್ ಹೇಳಿದ್ದೇನು ? ಹೊಸ ವಿವಾದ ಹುಟ್ಟು ಹಾಕಿದ್ರಾ ಅಲ್ಲು ಅರ್ಜುನ್ ಅಪ್ಪ ?

ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಅವರ 19ನೇ ಸಿನಿಮಾ ಯಾವಾಗ ಶುರುವಾಗುತ್ತೆ ಅಂತಾ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯ್ತಿರೊವಾಗ್ಲೇ ಯಶ್ ಆಗಲೇ ಪ್ಯಾನ್ ವರ್ಲ್ಡ್ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಯಶ್ ಅವರ ರೇಂಜ್ ಚೇಂಜ್ ಆಗಿದೆ. ರೀಚ್ ದೊಡ್ಡದಾಗಿದೆ. ಎಲ್ಲದಕ್ಕೂ ಕಾರಣ ಕೆಜಿಎಫ್ ಚಾಪ್ಟರ್ 1 & 2 ಸಿನಿಮಾ ಅನ್ನೋದು ರಹಸ್ಯವೇನಲ್ಲ.
 

ಇದೀಗ ಯಶ್ ಅವರ ಬಗ್ಗೆ ತೆಲುಗು ಸ್ಟಾರ್ ನಿರ್ಮಾಪಕ, ಅಲ್ಲು ಅರ್ಜುನ್ ಅವರ ತಂದೆಯಾಗಿರೋ ಅಲ್ಲು ಅರವಿಂದ್(Allu Aravind) ಹೇಳಿರೋ ಮಾತು ಈಗ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಅಲ್ಲು ಅರವಿಂದ್ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ(Hyderbad) ಮಾತನಾಡ್ತಾ ಕೆಜಿಎಫ್ ಬರೋಕೆ ಮುಂಚೆ ಯಶ್(Yash) ಅಷ್ಟು ದೊಡ್ಡ ಮಟ್ಟದ ಹೀರೋ ಆಗಿರಲಿಲ್ಲ ಎಂಬರ್ಥದ ಮಾತನಾಡಿದ್ದು ವಿವಾದ ಸೃಷ್ಟಿಸಿದೆ. ಅಲ್ಲು ಅರವಿಂದ್ ಹೇಳಿರೋದು ಇದು. ಇದರಲ್ಲಿ ಅಭಿಮಾನಿಗಳು ವಿವಾದ ಹುಡುಕ್ತಾ ಇದ್ದಾರೆ. ಆದರೆ ನಿಜಕ್ಕೂ ಹಾಗೆ ಹೇಳಿದ್ರಾ ಅಲ್ಲು ಅರವಿಂದ್..? ಯಾಕಂದ್ರೆ ಹೀರೋಗಳ ಬಗ್ಗೆ ಅಲ್ಲು ಅರವಿಂದ್ ಮಾತನಾಡಿದ್ದಾರೆ ಅಂದ್ರೆ ಅದು ದೊಡ್ಡ ಮಟ್ಟದ  ಸುದ್ದಿ ಆಗುತ್ತೆ. ಅದರಲ್ಲೂ ಯಶ್ ಬಗ್ಗೆ ಮಾತನಾಡಿದ್ದಾರೆ ಅಂದ್ರೆ ಅದು ಇನ್ನೂ ದೊಡ್ಡದಾಗುತ್ತೆ. ಯಶ್ ಅವರ ಕೆಜಿಎಫ್ (KGF) ಚಾಪ್ಟರ್ 2 ತೆಲುಗಿನಲ್ಲೂ ಭರ್ಜರಿ ಸದ್ದು ಮಾಡಿತ್ತು. ತೆಲುಗು ಬಾಕ್ಸಾಫೀಸ್ನ್ನೂ ಕೊಳ್ಳೆ ಹೊಡೆದಿತ್ತು. ತೆಲುಗಿನಲ್ಲಿ ಯಶ್ ಅವರ ಮಾರ್ಕೆಟ್ ದೊಡ್ಡದಾಗಿಯೇ ಓಪನ್ ಆಗಿತ್ತು. ಅದಕ್ಕೆಲ್ಲ ಕಾರಣವಾಗಿದ್ದು ಕೆಜಿಎಫ್. ಅಲ್ಲು ಅರವಿಂದ್ ಅವರು ಈ ಮಾತು ಹೇಳಿರೋದು ಯಶ್ ಬಗ್ಗೆ. ಹಾಗಂತ ಯಶ್ ಸಣ್ಣ ನಟರೇನೂ ಆಗಿರಲಿಲ್ಲ. ಕೆಜಿಎಫ್ ಬರೋಕೆ ಮುಂಚೆನೂ ಯಶ್ ದೊಡ್ಡ ಸ್ಟಾರ್ ಆಗಿದ್ದರು. ಡ್ರಾಮಾ, ಮಿಸ್ಟರ್ & ಮಿಸೆಸ್ ರಾಮಾಚಾರಿ, ಕಿರಾತಕ, ರಾಜಾಹುಲಿ, ಮಾಸ್ಟರ್ ಪೀಸ್ ಅಂತಹ ಸೂಪರ್ ಹಿಟ್ ಕೊಟ್ಟಿದ್ದರು. ರಾಕಿಂಗ್ ಸ್ಟಾರ್ ಅನ್ನೊ ಬಿರುದು ಮೊದ್ಲಿಂದಾನೇ ಇತ್ತು. ಹೀಗಿದ್ದ ಯಶ್ ಇಡೀ ಇಂಡಿಯಾಗೆ ಗೊತ್ತಾಗುವಂತೆ ಮಾಡಿದ್ದು ಕೆಜಿಎಫ್ ಅನ್ನೋದ್ರಲ್ಲಿ ನೋ ಡೌಟ್. ವಿಷ್ಯ ಏನಪ್ಪಾಂದ್ರೆ ಅಲ್ಲು ಅರವಿಂದ್ ತಮ್ಮ ಮಾತುಕತೆಯಲ್ಲಿ ಯಶ್ ಅವರ ಬಗ್ಗೆ ನೆಗೆಟಿವ್ ಆಗೇನೂ ಮಾತನಾಡಿಲ್ಲ. ಬದಲಿಗೆ ದೊಡ್ಡ ದೊಡ್ಡ ಚಿತ್ರಗಳ ಬಗ್ಗೆ ಮಾತನಾಡ್ತಾ ಇರೋವಾಗ ಯಶ್ ಹೆಸರನ್ನ ತೆಗೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೊಬೈಲ್..ಲ್ಯಾಪ್‌ಟಾಪ್‌ಗಳೇ ಈ ಅಪರಾಧಿಗಳ ಅಸ್ತ್ರ..! ಡೀಪ್ ಫೇಕ್ ಗರ್ಭದಿಂದ ಹೊರಬಂದಿವೆ ಲಕ್ಷಾಂತರ ವಿಡಿಯೋ..!

Video Top Stories