ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಪ್ರಕಾರ, ಐಷಾರಾಮಿ ಕಾರು ಮತ್ತು ಆಸ್ತಿ ಹೊಂದುವ ಯೋಗವು ನಾವು ವಾಸಿಸುವ ಮನೆಯ ವಿನ್ಯಾಸದ ಮೇಲೆ ಅವಲಂಬಿತವಾಗಿದೆ. ಮನೆಯ ಈ ಭಾಗದಲ್ಲಿ ಖಾಲಿ ಜಾಗ ಬಿಡುವುದರಿಂದ ಕ್ರಮವಾಗಿ ವಾಹನ ಯೋಗ ಮತ್ತು ಆಸ್ತಿ ಯೋಗ ಪ್ರಾಪ್ತಿಯಾಗುತ್ತದೆ ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ವಂತ ಮನೆ, ಒಂದು ಐಷಾರಾಮಿ ಕಾರು ಮತ್ತು ಸಾಕಷ್ಟು ಆಸ್ತಿ ಮಾಡಬೇಕು ಎಂಬ ಹಂಬಲ ಇರುತ್ತದೆ. ಆದರೆ, ಎಷ್ಟೋ ಜನ ಕಷ್ಟಪಟ್ಟು ದುಡಿದರೂ ಈ ಕನಸುಗಳು ನನಸಾಗುವುದಿಲ್ಲ. ಇದಕ್ಕೆ ಸಂಖ್ಯಾಶಾಸ್ತ್ರದ ಪ್ರಕಾರ ನಾವು ವಾಸಿಸುವ ಮನೆಯ ವಾಸ್ತು ಹಾಗೂ ಭೂಮಿಯ ವಿನ್ಯಾಸವೂ ಕಾರಣ ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞ ಹಾಗೂ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರು ಖರೀದಿಗೂ ಗ್ರಹಗಳಿಗೂ ಇದೆ ಸಂಬಂಧ:

ಬೆಂಜ್ (Benz), ರೇಂಜ್ ರೋವರ್ (Range Rover) ನಂತಹ ದೊಡ್ಡ ಕಾರುಗಳನ್ನು ಖರೀದಿಸುವ ಆಸೆ ನಿಮಗಿದ್ದರೆ, ನಿಮ್ಮ ಜಾತಕ ಅಥವಾ ಸಂಖ್ಯಾಶಾಸ್ತ್ರದಲ್ಲಿ 4ನೇ ಮನೆ ಬಲವಾಗಿರಬೇಕು. ಸಂಖ್ಯಾಶಾಸ್ತ್ರದ ಪ್ರಕಾರ, 4ನೇ ಮನೆ ಹೊಂದಿರುವವರು ವಾಹನಗಳಿಗೆ ಅಧಿದೇವತೆಗಳಾಗುತ್ತಾರೆ. ಐಷಾರಾಮಿ ಜೀವನಕ್ಕೆ ಶುಕ್ರ ಹಾಗೂ ಶನೇಶ್ವರ ಗ್ರಹಗಳ ಆರಾಧನೆ ಬಹಳ ಮುಖ್ಯ. ಯಾರೆಲ್ಲಾ ಒಳ್ಳೆಯ ಕಾರು ತೆಗೆದುಕೊಳ್ಳಬೇಕೋ ಅವರು ಶನೇಶ್ವರನನ್ನು ಶ್ರದ್ಧೆಯಿಂದ ಆರಾಧಿಸುವುದರಿಂದ ಸಕಾರಾತ್ಮಕ (Positive) ಪರಿಣಾಮಗಳು ಕಂಡುಬರುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.

ಮನೆ ಮುಂದೆ ಜಾಗ ಬಿಟ್ಟರೆ 'ಕಾರು' ಯೋಗ:

ಇತ್ತೀಚಿನ ದಿನಗಳಲ್ಲಿ ಜನರು ಸೈಟ್ ಸಿಕ್ಕರೆ ಸಾಕು, ಇಂಚೂ ಜಾಗ ಬಿಡದೆ ಪೂರ್ತಿ ಮನೆ ಕಟ್ಟಿಸುತ್ತಾರೆ. ಆದರೆ, ಇದು ತಪ್ಪು ಎನ್ನುತ್ತಾರೆ ಗುರೂಜಿ. ನಿಮ್ಮ ಮನೆ ಮುಂದೆ ಎಷ್ಟು ಜಾಗ ಖಾಲಿ ಇರುತ್ತದೆಯೋ, ಅಷ್ಟು ಹೊಸ ಕಾರುಗಳು ಅಥವಾ ವಾಹನಗಳನ್ನು ಖರೀದಿಸುವ ಯೋಗ ನಿಮಗಿರುತ್ತದೆ. 'ಹಿಂದಿನ ಕಾಲದಲ್ಲಿ ಜನರು ಮನೆ ಮುಂದೆ ಜಾಗ ಬಿಡುತ್ತಿದ್ದರು, ಅಲ್ಲಿ ಎತ್ತಿನ ಗಾಡಿಗಳನ್ನು ಕಟ್ಟುತ್ತಿದ್ದರು. ಇಂದಿನ ಕಾಲದಲ್ಲಿ ಅದೇ ಜಾಗದಲ್ಲಿ ಐಷಾರಾಮಿ ಕಾರುಗಳು ಬಂದು ನಿಲ್ಲುತ್ತವೆ' ಎಂದು ಅವರು ವಿವರಿಸಿದ್ದಾರೆ.

ಮನೆ ಹಿಂದೆ ಜಾಗ ಬಿಟ್ಟರೆ 'ಆಸ್ತಿ' ಯೋಗ:

ಕೇವಲ ಮನೆ ಮುಂದೆ ಮಾತ್ರವಲ್ಲ, ಮನೆಯ ಹಿಂಭಾಗದಲ್ಲಿಯೂ ಸ್ವಲ್ಪ ಖಾಲಿ ಜಾಗ ಬಿಡುವುದು ಅತ್ಯಂತ ಶ್ರೇಯಸ್ಕರ. ಯಾವ ಮನೆಯ ಹಿಂಭಾಗದಲ್ಲಿ ಜಾಗ ಖಾಲಿ ಇರುತ್ತದೆಯೋ, ಅಂಥವರು ಜೀವನದಲ್ಲಿ ಹೆಚ್ಚಿನ ಆಸ್ತಿಯನ್ನು (Property) ಖರೀದಿ ಮಾಡುತ್ತಾರೆ ಅಥವಾ ಹೆಚ್ಚಿನ ಹಣವನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುತ್ತಾರೆ.

ಒಟ್ಟಾರೆಯಾಗಿ, ನಾವು ನಿರ್ಮಿಸುವ ಮನೆಯ ವಿನ್ಯಾಸವು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಸೈಟ್ ತುಂಬಾ ಮನೆ ಕಟ್ಟಿಸಿ ದಿವಾಳಿಯಾಗುವ ಬದಲು, ಶಾಸ್ತ್ರೋಕ್ತವಾಗಿ ಒಂದಷ್ಟು ಜಾಗವನ್ನು ಖಾಲಿ ಬಿಡುವುದರಿಂದ ಜೀವನದಲ್ಲಿ ಐಶ್ವರ್ಯ ಮತ್ತು ವಾಹನ ಯೋಗ ಲಭಿಸುತ್ತದೆ ಎಂದು ಗುರೂಜಿ ಕಿವಿಮಾತು ಹೇಳಿದ್ದಾರೆ.

View post on Instagram